AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷಿ ಕಾಯ್ದೆ ವಿರೋಧಿ ಹೋರಾಟಕ್ಕೆ ಒಂದು ವರ್ಷ; 35 ಕೃಷಿ ತಳಿ ಸೇರಿ ಮೋದಿ ಸರ್ಕಾರ ರೈತರಿಗೆ ಕೊಟ್ಟ ಕೊಡುಗೆಗಳೇನು? ಇಲ್ಲಿದೆ ಒಂದು ಅವಲೋಕನ

ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯ ಉದ್ದೇಶವೇನು? ರೈತರ ಬಗ್ಗೆ ಕೇಂದ್ರ ಸರ್ಕಾರದ ಅಜೆಂಡಾ ಏನು? ಮತ್ತು ರೈತರ ಹೆಸರಿನಲ್ಲಿ ಚಳವಳಿಗಾರರು ನಡೆಸುತ್ತಿರುವ ಪ್ರತಿಭಟನೆಯ ಉದ್ದೇಶವೇನು? ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ.

ಕೃಷಿ ಕಾಯ್ದೆ ವಿರೋಧಿ ಹೋರಾಟಕ್ಕೆ ಒಂದು ವರ್ಷ; 35 ಕೃಷಿ ತಳಿ ಸೇರಿ ಮೋದಿ ಸರ್ಕಾರ ರೈತರಿಗೆ ಕೊಟ್ಟ ಕೊಡುಗೆಗಳೇನು? ಇಲ್ಲಿದೆ ಒಂದು ಅವಲೋಕನ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Sep 29, 2021 | 1:57 PM

Share

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟಕ್ಕೆ ಒಂದು ವರ್ಷ. ಈ ಒಂದು ವರ್ಷಗಳ ಕಾಲದಿಂದ ರೈತರು ದೆಹಲಿ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಈ ಹೋರಾಟಕ್ಕೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ಸೋಮವಾರ ಭಾರತ್ ಬಂದ್​ ಕೂಡ ನಡೆಸಲಾಯಿತು. ಆದರೆ, ಈ ಹೊಸ ಕಾನೂನಿನ ವಿರೋಧಿ ಹೋರಾಟದ ನಡುವೆಯೂ ಕೇಂದ್ರ ಸರ್ಕಾರ ಏನೆಲ್ಲ ಮಾಡಿದೆ? ಈ ಪ್ರತಿಭಟನೆಯ ಹಿಂದಿನ ಅಜೆಂಡಾ ಏನು? ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯಿಂದ ನಿಜಕ್ಕೂ ರೈತರಿಗೆ ತೊಂದರೆಯಾಗುತ್ತಿದೆಯೇ? ಎಂಬ ಚರ್ಚೆಗಳು ಇಂದಿಗೂ ನಡೆಯುತ್ತಿವೆ. ಇದರ ನಡುವೆ ಎಮ್ಎಸ್​ಪಿ ಆಧಾರದಲ್ಲಿ ಕೇಂದ್ರ ಸರ್ಕಾರ ರೈತರಿಂದ ದಾಖಲೆಯ ಪ್ರಮಾಣದ ಭತ್ತ, ಗೋಧಿ ಖರೀದಿ ಮಾಡಿದೆ. ಜೊತೆಗೆ ಮಂಗಳವಾರವಷ್ಟೆ ಪ್ರಧಾನಿ ನರೇಂದ್ರ ಮೋದಿ ಅಪೌಷ್ಠಿಕತೆ ಮತ್ತು ಹವಾಮಾನ ವೈಪರೀತ್ಯಗಳ ಸವಾಲುಗಳನ್ನು ಎದುರಿಸುವ ಗುಣಲಕ್ಷಣಗಳನ್ನು ಹೊಂದಿರುವ ಭತ್ತ ಮತ್ತು ಇತರೆ 35 ತಳಿಗಳನ್ನು ಬಿಡುಗಡೆ ಮಾಡಿದ್ದಾರೆ.

ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯ ಉದ್ದೇಶವೇನು? ರೈತರ ಬಗ್ಗೆ ಕೇಂದ್ರ ಸರ್ಕಾರದ ಅಜೆಂಡಾ ಏನು? ಮತ್ತು ರೈತರ ಹೆಸರಿನಲ್ಲಿ ಚಳವಳಿಗಾರರು ನಡೆಸುತ್ತಿರುವ ಪ್ರತಿಭಟನೆಯ ಉದ್ದೇಶವೇನು? ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ಈ ಪ್ರತಿಭಟನೆಯ ಉದ್ದೇಶ ರೈತರು ಸ್ವಾವಲಂಬಿ ಹಾಗೂ ಶ್ರೀಮಂತರಾಗುವಂತೆ ಮಾಡುವುದಾ? ಅಥವಾ ತಮ್ಮ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳುವುದಾ? ಅಥವಾ ರೈತರ ಹೆಸರಿನಲ್ಲಿ ಆಂದೋಲನ ಮಾಡುವ ಜನರ ಉದ್ದೇಶ ದೇಶಕ್ಕೆ ಆರ್ಥಿಕ ನಷ್ಟ ಉಂಟು ಮಾಡುವುದಾ? ಈ ಬಗ್ಗೆ ಒಂದು ಅವಲೋಕನ ಇಲ್ಲಿದೆ.

ನಿನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ 35 ಹೊಸ ತಳಿಯ ಬೀಜಗಳನ್ನು ದೇಶಕ್ಕೆ ಅರ್ಪಿಸಿದ್ದಾರೆ. ಈ ಬೀಜಗಳು ರೂಪಾಂತರಗೊಳ್ಳುವ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುತ್ತವೆ. ಇವುಗಳಲ್ಲಿ ಭತ್ತ, ರಾಗಿ, ಗೋಧಿ, ಕಡಲೆ, ಮೆಕ್ಕೆಜೋಳ, ಜೋಳ, ಹುರುಳಿ, ಸೋಯಾಬಿನ್ ಮುಂತಾದ ತಳಿಗಳು ಕೂಡ ಸೇರಿವೆ. ಈ ವೇಳೆ ಸರ್ಕಾರ ರೈತರಿಗೆ ನೀಡಿರುವ ಕೊಡುಗೆಯನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ರೋಗಗಳಿಂದ ಬೆಳೆಗಳನ್ನು ರಕ್ಷಿಸಲು ಮತ್ತು ಹೆಚ್ಚಿನ ಇಳುವರಿ ಪಡೆಯಲು ರೈತರಿಗೆ ಹೊಸ ತಳಿಯ ಬೀಜಗಳನ್ನು ನೀಡಲಾಗಿದೆ. ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವುದರ ಜೊತೆಗೆ, ಖರೀದಿ ಪ್ರಕ್ರಿಯೆಯನ್ನು ಸುಧಾರಿಸಲಾಗಿದೆ. ಇದರಿಂದ ಹೆಚ್ಚು ಹೆಚ್ಚು ರೈತರು ಲಾಭ ಪಡೆಯಬಹುದು. ಈ ವರ್ಷ ರೈತರಿಂದ 430 ಲಕ್ಷಕ್ಕೂ ಹೆಚ್ಚು ಮೆಟ್ರಿಕ್ ಟನ್‌ಗಳಷ್ಟು ಗೋಧಿಯನ್ನು ಖರೀದಿಸಲಾಗಿದೆ. ಹಾಗೇ, ರೈತರಿಗೆ 85 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಪಾವತಿಸಲಾಗಿದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿಯೂ ಈ ಬಾರಿ ಗೋಧಿ ಖರೀದಿ ಕೇಂದ್ರಗಳನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ ಎಂದಿದ್ದಾರೆ.

ಕೃಷಿ ತಿದ್ದುಪಡಿ ಕಾಯ್ದೆಯ ವಿರುದ್ಧ ರೈತರ ಭಾರೀ ಪ್ರತಿಭಟನೆಯ ನಡುವೆಯೂ ಅದೇ ಕಾಯ್ದೆಯಡಿ ಈ ವರ್ಷ ದಾಖಲೆಯ ಪ್ರಮಾಣದ ಗೋಧಿಯನ್ನು ರೈತರಿಂದ ಖರೀದಿಸಿರುವ ಸರ್ಕಾರ ಇದೀಗ 35 ಹೊಸ ತಳಿಯ ಬೀಜಗಳನ್ನು ದೇಶಕ್ಕೆ ನೀಡಿದೆ. ಕಡಲೆ, ಬೇಗನೆ ಪಕ್ವಗೊಳ್ಳುವ ವಿವಿಧ ಸೋಯಾಬಿನ್, ರೋಗ ನಿರೋಧಕ ತಳಿಯ ಭತ್ತ, ಜೈವಿಕ ಬಲವರ್ಧಿತ ಗೋಧಿ, ಮುತ್ತಿನ ನವಣೆ, ಮೆಕ್ಕೆಜೋಳ, ಮಿಲ್ಟ್, ಕ್ರಿಮಿನಾಶಕ ಮೊಸಾಯಿಕ್ ನಿರೋಧಕ ಪಾರಿವಾಳ ಬಟಾಣಿ, ಕ್ವಿನೋವಾ, ಬಕ್ ವೀಟ್, ರೆಕ್ಕೆಯ ಬೀನ್, ಸಾಸಿವೆ, ಫವಾ ಬೀನ್ ಮುಂತಾದ 35 ತಳಿಯ ಬೀಜಗಳನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ.

ಇದು ದೇಶದ ರೈತರಿಗೆ ನಿಜಕ್ಕೂ ಉತ್ತಮ ಸುದ್ದಿಯಾಗಿದೆ. ಏಕೆಂದರೆ ಸರ್ಕಾರವು ಬೆಳೆಗಳ ಪೋಷಣೆಯ ಬಗ್ಗೆ ಕಾಳಜಿ ಹೊಂದಿದೆ ಜೊತೆಗೆ ಬೆಳೆಗಳ ಬೆಲೆಯ ಬಗ್ಗೆ ಕೂಡ ಕಾಳಜಿ ವಹಿಸುತ್ತಿದೆ. ಇದರ ಹೊರತಾಗಿಯೂ ಕೆಲವರು ರೈತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕೃಷಿ ಕಾನೂನಿನ ವಿರೋಧಿ ಪ್ರತಿಭಟನೆಯ ಹೆಸರಿನಲ್ಲಿ ದೇಶಕ್ಕೆ ಹಾನಿ ಮಾಡುತ್ತಿದ್ದಾರೆ. 55 ವರ್ಷಗಳ ಹಿಂದೆ ಆಗಿನ ಕಾಂಗ್ರೆಸ್ ಸರ್ಕಾರವು ಗೋಧಿಯ ಬೀಜಗಳನ್ನು ಅಮೆರಿಕದಿಂದ ಆಮದು ಮಾಡಿಕೊಂಡಿತ್ತು.

ಅದಾದ ನಂತರ ಭಾರತದಲ್ಲಿ ಗೋಧಿಯೊಂದಿಗೆ ಕಾಡು ಹುಲ್ಲಿನ ಬೀಜಗಳು ಬಂದವು. ಇದನ್ನು ಕ್ಯಾರೆಟ್ ಹುಲ್ಲು ಅಥವಾ ಕಾಂಗ್ರೆಸ್ ಹುಲ್ಲು ಎಂದು ಕರೆಯಲಾಗುತ್ತದೆ. ಈ ಹುಲ್ಲಿನ ಒಂದು ಸಸ್ಯವು 50 ಸಾವಿರ ಬೀಜಗಳನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗುತ್ತದೆ. ಈ ಹುಲ್ಲಿನ ಒಂದು ಸಸ್ಯವು 50 ಸಾವಿರ ಬೀಜಗಳನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗಿದೆ. ಇದರಿಂದ ಜಾನುವಾರುಗಳು ಸಾವನ್ನಪ್ಪಿದ ನಿದರ್ಶನಗಳೂ ಇವೆ.

ಒಮ್ಮೆ ಚಳವಳಿಯ ಹೆಸರಿನಲ್ಲಿ ನಗರಗಳನ್ನು ಒತ್ತೆಯಾಳು ಮಾಡಿಕೊಳ್ಳುವುದು, ಇನ್ನೊಮ್ಮೆ ಪ್ರತಿಭಟನೆಯ ಹೆಸರಿನಲ್ಲಿ ಗಲಭೆ ಸೃಷ್ಟಿಸುವುದು ನಡೆದೇ ಇದೆ. ಹಾಗಾದರೆ, ಈ ರೈತರು ಯಾರು? ಚಳುವಳಿಯ ಹೆಸರಿನಲ್ಲಿ ಸಮಾಜದಲ್ಲಿ ಉಂಟಾಗುತ್ತಿರುವ ಅವ್ಯವಸ್ಥೆಗೆ ಬೆಂಬಲವಾಗಿ ನಿಂತು, ತಮ್ಮ ಹಿತಾಸಕ್ತಿಗಾಗಿ ನೀರೆರೆಯುತ್ತಿರುವವವರು ಯಾರು? ದೇಶದ ಪ್ರಧಾನಿ ಹಾಗೂ ಸರ್ಕಾರದ ನಾಯಕರು ಪ್ರತಿ ಬಾರಿ ರೈತರೊಂದಿಗೆ ಮಾತುಕತೆ ನಡೆಸುವಾಗಲೂ ಈ ನೂತನ ಕೃಷಿ ತಿದ್ದುಪಡಿ ಕಾಯ್ದೆಯಿಂದ ರೈತರ ಬಲ ಹೆಚ್ಚಾಗುತ್ತದೆ. ಇದು ರೈತರು ಬೆಳೆದ ಬೆಳೆಗೆ ಖಾತರಿಯ ಹಣವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಹೇಳುತ್ತಲೇ ಇದ್ದಾರೆ. ಹಾಗಾದರೆ ರೈತರು ಕೃಷಿ ಕಾನೂನನ್ನು ಏಕೆ ವಿರೋಧಿಸುತ್ತಿದ್ದಾರೆ? ಮತ್ತು ಅದರ ವಿರುದ್ಧ 17 ತಿಂಗಳಿಂದ ಪ್ರತಿಭಟನೆ, ಹೋರಾಟ ನಡೆಸುತ್ತಿರುವುದೇಕೆ?

ವಾಸ್ತವವಾಗಿ, ಹೊಸ ಕೃಷಿ ಕಾನೂನಿಗೆ ಸಂಬಂಧಿಸಿದಂತೆ ರೈತರ ಮೂರು ದೊಡ್ಡ ಅಂಶಗಳಿವೆ. ಮೊದಲನೆಯ ಅಂಶ ಈ ಕಾನೂನಿನ ಅನುಷ್ಠಾನದಿಂದಾಗಿ ಮಂಡಿಗಳನ್ನು ಮುಚ್ಚಲಾಗುವುದು ಎಂದು ರೈತರು ಹೆದರುತ್ತಿದ್ದಾರೆ. ಎರಡನೆಯ ಅಂಶ ಈ ಕಾನೂನಿನಿಂದ ಸಣ್ಣ ರೈತರ ಭೂಮಿ ಹೋಗುತ್ತದೆ ಎಂದು ಹೆದರಿಸಲಾಗಿದೆ. ಮೂರನೆಯ ಅಂಶ ರೈತರಿಗೆ ಎಂಎಸ್‌ಪಿಯಲ್ಲಿ ಖಾತರಿಯ ಅಗತ್ಯವಿದೆ. ಆದರೆ, ಈಗಾಗಲೇ ಎಂಎಸ್‌ಪಿಯಲ್ಲಿ ಹೆಚ್ಚಳವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯೇ ಹೇಳಿದ್ದಾರೆ. ಅದಕ್ಕೆ ಉದಾಹರಣೆಯಾಗಿ ಈ ವರ್ಷ ದಾಖಲೆಯ ಪ್ರಮಾಣದ ಗೋಧಿಯನ್ನು ರೈತರಿಂದ ಖರೀದಿಸಿ, ರೈತರ ಖಾತೆಗಳಿಗೆ ಹಣ ಜಮಾ ಮಾಡಲಾಗಿದೆ.

ಗೋಧಿ ಎಂಎಸ್‌ಪಿ ಕಳೆದ ವರ್ಷಕ್ಕಿಂತ 40 ರೂ, ಭತ್ತದ ಎಂಎಸ್‌ಪಿಯಲ್ಲಿ 72 ರೂ, ಚನ್ನಾ ಎಂಎಸ್‌ಪಿಯಲ್ಲಿ 130 ರೂ, ಬಾರ್ಲಿಯ ಎಂಎಸ್​ಪಿಯಲ್ಲಿ 35 ರೂ, ಮಸೂರ್ ದಾಲ್‌ನ ಎಮ್‌ಎಸ್‌ಪಿಯಲ್ಲಿ 400 ರೂ, ಸೂರ್ಯಕಾಂತಿ ಎಂಎಸ್‌ಪಿಯಲ್ಲಿ 114 ರೂ ಮತ್ತು ಸಾಸಿವೆಯ ಎಮ್‌ಎಸ್‌ಪಿಯನ್ನು 400 ರೂ. ಹೆಚ್ಚಿಸಲಾಗಿದೆ. ಇದಲ್ಲದೇ, ಎಳ್ಳು, ಹತ್ತಿ, ಇತರ ದ್ವಿದಳ ಧಾನ್ಯಗಳು ಮತ್ತು ಕಬ್ಬಿನ ಎಮ್‌ಎಸ್‌ಪಿಯನ್ನು ಹೆಚ್ಚಿಸಲಾಗಿದೆ.

ಹಾಗಾದರೆ, ರೈತರಿಗೆ ಈ ಕೃಷಿ ಕಾಯ್ದೆ ಬಗ್ಗೆ ಆತಂಕ ಹೆಚ್ಚಾಗಲು ಕಾರಣವೇನು? ಎಂಬುದನ್ನು ನೋಡುವುದಾದರೆ ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಕಾಯ್ದೆ ಬಗ್ಗೆ ರೈತರಲ್ಲಿ ಗೊಂದಲ ಉಂಟಾಗಲು ಕಾರಣರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಾಯ್ದೆಯ ಬಗ್ಗೆ ಸರ್ಕಾರದ ನಾಯಕರು ಯಾರೂ ರೈತರಿಗೆ ಸೂಕ್ತ ಮಾಹಿತಿ ನೀಡುವ ಪ್ರಯತ್ನವನ್ನೇ ಮಾಡಲಿಲ್ಲ. ಹೀಗಾಗಿ, ರೈತರು ಮಾಧ್ಯಮಗಳಲ್ಲಿ ಬಂದಿದ್ದನ್ನು, ಇನ್ಯಾರೋ ಹೇಳಿದ್ದನ್ನು, ಪ್ರತಿಭಟನೆಗೆ ಕರೆ ನೀಡಿದವರ ಮಾತನ್ನು ನಂಬಿದರು. ಪ್ರತಿಭಟನೆ ಶುರುವಾದ ಳಿಕ ರೈತ ಮತ್ತು ಸರ್ಕಾರದ ನಡುವೆ ಒಟ್ಟು 11 ಸುತ್ತಿನ ಮಾತುಕತೆ ನಡೆಯಿತು. ಇದರಲ್ಲಿ ಕೃಷಿ ಸಚಿವರಲ್ಲದೆ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಕೂಡ ಭಾಗವಹಿಸಿದ್ದರು. ಆರನೇ ಸುತ್ತಿನ ಮಾತುಕತೆಯಲ್ಲಿ ಸರ್ಕಾರವು ರೈತರ ಎರಡು ಬೇಡಿಕೆಗಳನ್ನು ಒಪ್ಪಿಕೊಂಡಿತು. ವಿದ್ಯುತ್ ತಿದ್ದುಪಡಿ ವಿಧೇಯಕ 2020 ಮತ್ತು ವಾಯು ಗುಣಮಟ್ಟ ನಿರ್ವಹಣಾ ಆಯೋಗದ ಸುಗ್ರೀವಾಜ್ಞೆಯನ್ನು ದೆಹಲಿ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಹಿಂತೆಗೆದುಕೊಳ್ಳುವಂತೆ ಸರ್ಕಾರ ಕೇಳಿದೆ.

ಇದರ ಹೊರತಾಗಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಕೃಷಿ ಕಾನೂನನ್ನು ರೈತರ ಅಗತ್ಯವೆಂದು ಅನೇಕ ಬಾರಿ ಹೇಳಿದ್ದರು. ಹಾಗೇ, ರೈತರ ಪ್ರತಿಭಟನೆಯನ್ನು ಪರಿಹರಿಸಲು ಅವರು 18 ತಿಂಗಳ ಕಾಲ ಕೃಷಿ ಕಾನೂನುಗಳನ್ನು ಸ್ಥಗಿತಗೊಳಿಸಲು ಮುಂದಾದರು. ಅದು ಕೂಡ ಜನವರಿ 26ರ ಹಿಂಸಾಚಾರದ ನಂತರವೇ ಅವರು ಈ ನಿರ್ಧಾರಕ್ಕೆ ಬಂದರು. ಸರ್ಕಾರ ಇಂದಿಗೂ ರೈತರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಲೇ ಇದೆ. ಅಲ್ಲದೆ, ಇಂದಿಗೂ ರೈತರ ಜೊತೆ ಮಾತುಕತೆ ನಡೆಸಲು ಸಿದ್ಧವಿದೆ. ಆದರೆ, ಇನ್ನೊಂದೆಡೆ ಪ್ರತಿಭಟನಾಕಾರರ ವರ್ತನೆಯಿಂದ ಕೋಟ್ಯಂತರ ಜನರು ತೊಂದರೆ ಅನುಭವಿಸುವಂತಾಗಿದೆ. ಇದರಿಂದ ಪೊಲೀಸರು, ದೇಶವೇ ತೊಂದರೆ ಅನುಭವಿಸುತ್ತಿದೆ. ಇನ್ನಾದರೂ ರೈತರ ಗೊಂದಲಗಳಿಗೆ ಉತ್ತರ ಸಿಗಬೇಕಾಗಿದೆ.

ಇದನ್ನೂ ಓದಿ: Bharat Bandh: ಕೇಂದ್ರದ ಕೃಷಿ ಕಾನೂನು ವಿರುದ್ಧ ಭಾರತ್ ಬಂದ್; ರೈತರ ಪ್ರತಿಭಟನೆಯ ಫೋಟೊಗಳು ಇಲ್ಲಿವೆ

Bharat Bandh Today LIVE: ಕೇಂದ್ರದ ಹೊಸ ಕೃಷಿ ಕಾಯ್ದೆ ವಿರೋಧಿಸಿ ಇಂದು ಭಾರತ್ ಬಂದ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್