AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳೆದೆರಡು ದಿನಗಳಿಂದ ಭಾರತದಲ್ಲಿ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ 2ಲಕ್ಷಕ್ಕಿಂತ ಕಡಿಮೆ: ಆರೋಗ್ಯ ಇಲಾಖೆ

ಕಳೆದ 24 ಗಂಟೆಗಳಲ್ಲಿ ಒಟ್ಟು 1,14, 428ರಷ್ಟು ಪ್ರಕರಣಗಳು ತಗ್ಗಿವೆ ಮತ್ತ ದೇಶದಲ್ಲಿ ಈಗ ಸಕ್ರಿಯ ಪ್ರಕರಣಗಳು ಶೇಕಡಾ 8.04 ಮಾತ್ರ ಇವೆ ಎಂದು ಇಲಾಖೆಯ ಪ್ರಕಟಣೆ ತಿಳಿಸುತ್ತದೆ.

ಕಳೆದೆರಡು ದಿನಗಳಿಂದ ಭಾರತದಲ್ಲಿ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ 2ಲಕ್ಷಕ್ಕಿಂತ ಕಡಿಮೆ: ಆರೋಗ್ಯ ಇಲಾಖೆ
ಭಾರತದಲ್ಲಿ ಕೊವಿಡ್ ಟೆಸ್ಟಿಂಗ್
ಅರುಣ್​ ಕುಮಾರ್​ ಬೆಳ್ಳಿ
| Updated By: ರಾಜೇಶ್ ದುಗ್ಗುಮನೆ|

Updated on: May 29, 2021 | 8:54 PM

Share

ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರದಂದು ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ ಕೊವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ ಮೇ 10 ರಂದು ಗರಿಷ್ಠ ಪ್ರಮಾಣ ತಲುಪಿದ ನಂತರ ಈಗ 22,28,724ಕ್ಕೆ ತಗ್ಗಿದೆ. ಕಳೆದ 24 ಗಂಟೆಗಳಲ್ಲಿ 1,73,790 ಹೊಸ ಪ್ರಕರಣಗಳು ಪತ್ತೆಯಾಗಿವೆ ಮತ್ತು ಇದೇ ಅವಧಿಯಲ್ಲಿ 3,617 ಜನ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಇದುವರೆಗೆ 2,77,29,247 ಸೋಂಕಿನ ಪ್ರಕರಣಗಳು ವರದಿಯಾಗಿವೆ ಎಂದು ಅರೋಗ್ಯ ಸಚಿವಾಲಯ ಹೇಳಿದೆ.

ಭಾರತದ ಕೊವಿಡ್​ ಪ್ರಕರಣಗಳನ್ನು ಕುರಿತಂತೆ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಹೀಗಿದೆ:

1. ಸತತವಾಗಿ 13ನೇ ದಿನ ಭಾರತಲ್ಲಿ 3 ಲಕ್ಷಕ್ಕಿಂತ ಕಡಿಮೆ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಕಳೆದೆರಡು ದಿನಗಳಿಂದ 200,000 ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಕೊರೋನಾ ವೈರಸ್ ರೋಗದ ಪ್ರಕರಣಗಳು ದಾಖಲಾಗಿವೆ ಎಂದು ಅರೋಗ್ಯ ಇಲಾಖೆ ಹೇಳಿದೆ.

2. ಕಳೆದ 24 ಗಂಟೆಗಳಲ್ಲಿ ಒಟ್ಟು 1,14, 428ರಷ್ಟು ಪ್ರಕರಣಗಳು ತಗ್ಗಿವೆ ಮತ್ತ ದೇಶದಲ್ಲಿ ಈಗ ಸಕ್ರಿಯ ಪ್ರಕರಣಗಳು ಶೇಕಡಾ 8.04 ಮಾತ್ರ ಇವೆ ಎಂದು ಇಲಾಖೆಯ ಪ್ರಕಟಣೆ ತಿಳಿಸುತ್ತದೆ.

3. ಕಳೆದ 24 ಗಂಟೆಗಳಲ್ಲಿ ಸಂಭವಿಸಿರುವ 3,617 ಸಾವುಗಳ ಪೈಕಿ 873 ಮಹಾರಾಷ್ಟ್ರದಲ್ಲಿ, 486 ತಮಿಳುನಾಡು, 401 ಕರ್ನಾಟಕ, 194 ಕೇರಳ, 176 ಪಂಜಾಬ್, 154 ಉತ್ತರ ಪ್ರದೇಶ, 145 ಪಶ್ಚಿಮ ಬಂಗಾಳ, 139 ದೆಹಲಿ ಮತ್ತು 103 ಆಂಧ್ರ ಪ್ರದೇಶದಲ್ಲಿ ವರದಿಯಾಗಿವೆ.

4. ಇಲಾಖೆಯ ಡ್ಯಾಶ್​ಬೋರ್ಡ್​ ಮಾಹಿತಿಯ ಪ್ರಕಾರ ಮಹಾರಾಷ್ಟ್ರದಲ್ಲಿ ಇದುವರೆಗೆ 93,198, ಕರ್ನಾಟಕದಲ್ಲಿ 27,806, ದೆಹಲಿಯಲ್ಲಿ 23,951, ತಮಿಳುನಾಡಿನಲ್ಲಿ 22,775, ಉತ್ತರ ಪ್ರದೇಶದಲ್ಲಿ 20,053, ಪಶ್ಚಿಮ ಬಂಗಾಳದಲ್ಲಿ 15,120, ಪಂಜಾಬ್​ನಲ್ಲಿ 14,180 ಮತ್ತು ಛತ್ತೀಸ್​ಗಡ್​ನಲ್ಲಿ 12,915 ಜನ ಸೋಂಕಿನಿಂದಾಗಿ ಮರಣವನ್ನಪ್ಪಿದ್ದಾರೆ.

5 .ಸತತವಾಗಿ 16 ನೇ ದಿನ ಭಾರತದಲ್ಲಿ ಹೊಸ ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆ ಜಾಸ್ತಿಯಿದೆ. ಇಲಾಖೆ ನೀಡಿರುವ ಮಾಹಿತಿಯನ್ವಯ, ಕಳೆದ 24 ಗಂಟೆಗಳಲ್ಲಿ 2,84,601 ಜನ ಸೋಕಿನಿಂದ ಚೇತರಿಸಿಕೊಂಡಿದ್ದಾರೆ ಮತ್ತು ದಿನವಹಿ ಗುಣಹೊಂದಿದವರ ಹಿನ್ನೆಲೆಯಿಂದ ನೋಡಿದರೆ ಕಳೆದ 24 ಗಂಟೆಗಳಲ್ಲಿ 1,10,811 ಹೆಚ್ಚುವರಿ ಜನ ಗುಣಮುಖರಾಗಿದ್ದಾರೆ.

6. ದೇಶದಲ್ಲಿ ಪಿಡುಗು ಆರಂಭಗೊಂಡ ನಂತರ ಇದುವರೆಗೆ 2,51,78,011 ಜನ ಕೋವಿಡ್-19 ರೋಗದಿಂದ ಗುಣಮುಖರಾಗಿದ್ದಾರೆ. ಗುಣ ಹೊಂದಿರುವವರು ಒಟ್ಟಾರೆ ಶೇಕಡಾ 90.80 ರಷ್ಟಿದ್ದಾರೆ ಎಂದು ಇಲಾಖೆ ತಿಳಿಸಿದೆ.

7. ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ 20,80,048 ಕೋವಿಡ್​ ಟೆಸ್ಟ್​ಗಳನ್ನು ಮಾಡಲಾಗಿದೆ. ಭಾರತದಲ್ಲಿ ಇದುವರಗೆ 34.11 ಕೋಟಿ ಟೆಸ್ಟ್​ಗಳನ್ನು ಮಾಡಲಾಗಿದೆಯೆಂದು ಇಲಾಖೆ ಹೇಳಿದೆ.

8. ವಾರಾವಹಿ ಪಾಸಿಟಿವಿಟಿ ಪ್ರಮಾಣ ಸಹ ಕಡಿಮೆಯಾಗುತ್ತಿದೆ ಎಂದು ಇಲಾಖೆ ಹೇಳಿದೆ. ಪ್ರಸಕ್ತ ಸಾಪ್ತಾಹಿಕ ಪಾಸಿಟಿವಿಟಿ ಪ್ರಮಾಣ ಶೇಕಡಾ 9.84 ರಷ್ಟಿದ್ದು ಶನಿವಾರದಂದು ಅದು ಶೇಕಡಾ 8.36 ಕ್ಕಿಳಿದಿದೆ. ಕಳೆದ 5 ದಿನಗಳಿಂದ ಅದು ಶೇಕಡಾ 10ಕ್ಕಿಂತ ಕಮ್ಮಿಯಿದೆ.

9. ಶನಿವಾರದವರೆಗೆ ದೇಶದಲ್ಲಿ ಕೊವಿಡ್​ ಲಸಿಕೆಯ 20.89 ಕೋಟಿ ಡೋಸ್​ಗಳನ್ನು ನೀಡಲಾಗಿದೆ. ಅಮೇರಿಕ ನಂತರ 20 ಕೋಟಿಗಿಂತ ಹೆಚ್ಚು ಲಸಿಕಾ ಡೋಸ್​ಗಳನ್ನು ನೀಡಿರುವ ಎರಡನೇ ರಾಷ್ಟ್ರ ಭಾರತವಾಗಿದೆ ಎಂದ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

10. ಶನಿವಾರ ಬೆಳಗ್ಗೆ 7 ಗಂಟೆಯವರೆಗೆ 29,72,971 ಸೆಷನ್​ಗಳಲ್ಲಿ 20,89,02,445 ಡೋಸುಗಳನ್ನು ನೀಡಲಾಗಿದೆ ಎಂದು ಅರೋಗ್ಯ ಸಚಿವಾಲಯ ಶನಿವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Covid Warriors: ಕೊವಿಡ್ ಸೇನಾನಿಗಳಿಗೆ ಪ್ರೋತ್ಸಾಹ ಧನ 6 ತಿಂಗಳವರೆಗೂ ವಿಸ್ತರಣೆ ಮಾಡುವಂತೆ ಆದೇಶ

ಸಾಂಪ್ರದಾಯಿಕ ಡ್ರೆಸ್ ತೊಟ್ಟು ಓಣಂ ಹಬ್ಬದೂಟ ಮಾಡಿದ ಮುದ್ದು ನಾಯಿ
ಸಾಂಪ್ರದಾಯಿಕ ಡ್ರೆಸ್ ತೊಟ್ಟು ಓಣಂ ಹಬ್ಬದೂಟ ಮಾಡಿದ ಮುದ್ದು ನಾಯಿ
ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ
ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ
ದರ್ಶನ್ ಆ ರೀತಿ ವ್ಯಕ್ತಿ ಅಲ್ಲ, ಯಾಕೆ ಹೀಗಾಯ್ತೋ ಗೊತ್ತಿಲ್ಲ: ಎಂಡಿ ಶ್ರೀಧರ್
ದರ್ಶನ್ ಆ ರೀತಿ ವ್ಯಕ್ತಿ ಅಲ್ಲ, ಯಾಕೆ ಹೀಗಾಯ್ತೋ ಗೊತ್ತಿಲ್ಲ: ಎಂಡಿ ಶ್ರೀಧರ್
ಗಣೇಶ ವಿಸರ್ಜನೆ ವೇಳೆ DJ ಬಂದ್ ಮಾಡಿಸಿದ ಪೊಲೀಸರು, ಗ್ರಾಮಸ್ಥರು ಮಾಡಿದ್ದೇನು
ಗಣೇಶ ವಿಸರ್ಜನೆ ವೇಳೆ DJ ಬಂದ್ ಮಾಡಿಸಿದ ಪೊಲೀಸರು, ಗ್ರಾಮಸ್ಥರು ಮಾಡಿದ್ದೇನು
ಅಭಿಮಾನ್ ಸ್ಟುಡಿಯೋ ಜಾಗ ಮಾರಾಟ, ರಾಜಕಾರಣಿಗೂ ಲಾಭ: ಗೀತಾ ಬಾಲಿ
ಅಭಿಮಾನ್ ಸ್ಟುಡಿಯೋ ಜಾಗ ಮಾರಾಟ, ರಾಜಕಾರಣಿಗೂ ಲಾಭ: ಗೀತಾ ಬಾಲಿ
ಅಭಿಮಾನ್ ಸ್ಟುಡಿಯೋ 10 ಎಕರೆ ಮಾರಾಟ ಆಗಿದ್ದರಲ್ಲಿ ಸರ್ಕಾರದ್ದೇ ಕೈವಾಡ: ಗೀತಾ
ಅಭಿಮಾನ್ ಸ್ಟುಡಿಯೋ 10 ಎಕರೆ ಮಾರಾಟ ಆಗಿದ್ದರಲ್ಲಿ ಸರ್ಕಾರದ್ದೇ ಕೈವಾಡ: ಗೀತಾ
EVM ಬದಲಿಗೆ ಬ್ಯಾಲೆಟ್ ಪೇಪರ್: ಚುನಾವಣಾ ಆಯುಕ್ತರು ಹೇಳಿದ್ದೇನು?
EVM ಬದಲಿಗೆ ಬ್ಯಾಲೆಟ್ ಪೇಪರ್: ಚುನಾವಣಾ ಆಯುಕ್ತರು ಹೇಳಿದ್ದೇನು?
ರಾಜಕೀಯ ನಿವೃತ್ತಿ ಬಗ್ಗೆ ವಿ ಸೋಮಣ್ಣ ಮತ್ತೆ ಸ್ಪಷ್ಟನೆ: ಹೇಳಿದ್ದೇನು ನೋಡಿ
ರಾಜಕೀಯ ನಿವೃತ್ತಿ ಬಗ್ಗೆ ವಿ ಸೋಮಣ್ಣ ಮತ್ತೆ ಸ್ಪಷ್ಟನೆ: ಹೇಳಿದ್ದೇನು ನೋಡಿ
ಉಚಿತವಾಗಿ ಊಟ ವಿತರಿಸುವಾಗ ದುಡ್ಡು ಕೊಟ್ಟು ಊಟ ಪಡೆದ ಸ್ವಾಭಿಮಾನಿ ಬಾಲಕ
ಉಚಿತವಾಗಿ ಊಟ ವಿತರಿಸುವಾಗ ದುಡ್ಡು ಕೊಟ್ಟು ಊಟ ಪಡೆದ ಸ್ವಾಭಿಮಾನಿ ಬಾಲಕ
ಪ್ರಿಯತಮನಿಗೋಸ್ಕರ ಮನೆ ಬಿಟ್ಟು ಓಡಿಹೋದ ಮೂರು ಮಕ್ಕಳ ತಾಯಿ: ಗೋಳಾಡಿದ ಪತಿ
ಪ್ರಿಯತಮನಿಗೋಸ್ಕರ ಮನೆ ಬಿಟ್ಟು ಓಡಿಹೋದ ಮೂರು ಮಕ್ಕಳ ತಾಯಿ: ಗೋಳಾಡಿದ ಪತಿ