Galwan clashes ಗಾಲ್ವಾನ್ ಸಂಘರ್ಷದಲ್ಲಿ ಹುತಾತ್ಮ ಕರ್ನಲ್ ಸಂತೋಷ್ ಬಾಬುಗೆ ಮರಣೋತ್ತರ ಮಹಾವೀರ ಚಕ್ರ, ಐವರಿಗೆ ವೀರ ಚಕ್ರ

ಜೂನ್ 15, 2020 ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಹೋರಾಡಿದ ಯೋಧರಿಗೆ ಐದು ವೀರ ಚಕ್ರಗಳನ್ನು ನೀಡಲಾಯಿತು. ಅವುಗಳಲ್ಲಿ ನಾಲ್ಕು ಮರಣೋತ್ತರ ಪ್ರಶಸ್ತಿ ಆಗಿದೆ. ಈ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ಮುನ್ನಾದಿನದಂದು ಘೋಷಿಸಲಾಯಿತು.

Galwan clashes ಗಾಲ್ವಾನ್ ಸಂಘರ್ಷದಲ್ಲಿ ಹುತಾತ್ಮ ಕರ್ನಲ್ ಸಂತೋಷ್ ಬಾಬುಗೆ ಮರಣೋತ್ತರ ಮಹಾವೀರ ಚಕ್ರ, ಐವರಿಗೆ ವೀರ ಚಕ್ರ
ಸಂತೋಷ್ ಬಾಬು
Follow us
| Updated By: ರಶ್ಮಿ ಕಲ್ಲಕಟ್ಟ

Updated on:Nov 23, 2021 | 5:07 PM

ದೆಹಲಿ: ಗಾಲ್ವಾನ್ ಸಂಘರ್ಷದ (Galwan clashes)ವೇಳೆ  ತನ್ನ ಕೊನೆಯ ಉಸಿರು ಇರುವವರೆಗೂ ಚೀನಾ ಸೈನಿಕರ ವಿರುದ್ಧ ಹೋರಾಡಿದ ಕರ್ನಲ್ ಬಿಕುಮಲ್ಲ ಸಂತೋಷ್ ಬಾಬು(Col Santosh Babu) ಅವರಿಗೆ ದೇಶದ ಎರಡನೇ ಅತ್ಯುನ್ನತ ಸೇನಾ ಶೌರ್ಯ ಗೌರವವಾದ ಮಹಾವೀರ ಚಕ್ರ (ಮರಣೋತ್ತರ) (Maha Vir Chakra) ಮಂಗಳವಾರ ನೀಡಲಾಯಿತು. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind) ಅವರಿಂದ ಕರ್ನಲ್ ಬಾಬು ಅವರ ತಾಯಿ ಮತ್ತು ಪತ್ನಿ ಪ್ರಶಸ್ತಿ ಸ್ವೀಕರಿಸಿದರು. ಜೂನ್ 15, 2020 ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಹೋರಾಡಿದ ಯೋಧರಿಗೆ ಐದು ವೀರ ಚಕ್ರಗಳನ್ನು ನೀಡಲಾಯಿತು. ಅವುಗಳಲ್ಲಿ ನಾಲ್ಕು ಮರಣೋತ್ತರ ಪ್ರಶಸ್ತಿ ಆಗಿದೆ. ಈ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ಮುನ್ನಾದಿನದಂದು ಘೋಷಿಸಲಾಯಿತು.  ಕರ್ನಲ್ ಬಾಬು ಅವರು 16 ಬಿಹಾರ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಆಗಿದ್ದರು. ಅವರನ್ನು ಆಪರೇಷನ್ ಸ್ನೋ ಲೆಪರ್ಡ್​​ಗಾಗಿ (Operation Snow Leopard) ಗಾಲ್ವಾನ್ ಕಣಿವೆಯಲ್ಲಿ ನಿಯೋಜಿಸಲಾಗಿತ್ತು. ಕಳೆದ ವರ್ಷ ಮೇ ಆರಂಭದಿಂದ ಭಾರತ ಮತ್ತು ಚೀನಾ ಮಿಲಿಟರಿ ಬಿಕ್ಕಟ್ಟಿನಲ್ಲಿ ತೊಡಗಿದ್ದವು ಮತ್ತು ಎರಡೂ ಕಡೆಯವರು ಸಂಘರ್ಷದ ಬಗ್ಗೆ ಚರ್ಚಿಸುತ್ತಿದ್ದರು. ಇದೇ ಅವಧಿಯಲ್ಲಿ ಎರಡೂ ಕಡೆಯ ಪಡೆಗಳು ಜೂನ್ 15 ರಂದು ಗಸ್ತು ಕೇಂದ್ರ (ಪಿಪಿ) 14 ರ ಸಮೀಪವಿರುವ ಗಾಲ್ವಾನ್ ಕಣಿವೆಯಲ್ಲಿ ಮುಖಾಮುಖಿಯಾದವು. ಇದರ ಪರಿಣಾಮವಾಗಿ ಬಾಬು ಸೇರಿದಂತೆ 20 ಭಾರತೀಯ ಸೈನಿಕರು ಹುತಾತ್ಮಗಿದ್ದು, ಕನಿಷ್ಠ ನಾಲ್ಕು ಚೀನೀ ಯೋಧರು ಹತ್ಯೆಯಾದರು.

ಬಾಬು ಅವರು ತಮ್ಮ ಘಟಕದ ಸಿಒ (ಕಮಾಂಡಿಂಗ್ ಆಫೀಸರ್) ಆಗಿ, ಶತ್ರುಗಳ ಮುಂದೆ ವೀಕ್ಷಣಾ ಪೋಸ್ಟ್ (Observation Post )ಅನ್ನು ಸ್ಥಾಪಿಸುವ ಕಾರ್ಯವನ್ನು ಅವರು ಯಶಸ್ವಿಯಾಗಿ ಮಾಡಿದರು ಎಂದು ಉಲ್ಲೇಖಿಸಲಾಗಿದೆ. “ಅವರ ತಂಡವು ಎದುರಾಳಿಯಿಂದ ತೀವ್ರ ಪ್ರತಿರೋಧವನ್ನು ಎದುರಿಸಿತು, ಅವರು ಮಾರಣಾಂತಿಕ ಮತ್ತು ಹರಿತವಾದ ಆಯುಧಗಳನ್ನು ಬಳಸಿಕೊಂಡು ಭಾರೀ ಕಲ್ಲು ತೂರಾಟ ನಡೆಸಿದರು. ಶತ್ರು ಸೈನಿಕರ ಅಗಾಧ ಶಕ್ತಿಯಿಂದ ಹಿಂಸಾತ್ಮಕ ಮತ್ತು ಆಕ್ರಮಣಕಾರಿ ಕ್ರಮದಿಂದ ಬೆದರದೆ ಅವರು ಭಾರತೀಯ ಪಡೆಗಳನ್ನು ಹಿಮ್ಮೆಟ್ಟಿಸುವ ಶತ್ರುಗಳ ಪ್ರಯತ್ನವನ್ನು ವಿರೋಧಿಸುವುದನ್ನು ಮುಂದುವರೆಸಿದರು ಎಂದು ಬಾಬು ಅವರ ಬಗ್ಗೆ  ಹೇಳಲಾಗಿದೆ.

ಬಾಬು ಅವರು ಗಂಭೀರ ಗಾಯಗೊಂಡರೂ “ತನ್ನ ಸ್ಥಾನದಲ್ಲಿ ಕೆಟ್ಟ ಶತ್ರುಗಳ ದಾಳಿಯನ್ನು ತಡೆಯಲು ಪ್ರತಿಕೂಲ ಪರಿಸ್ಥಿತಿಗಳ ಹೊರತಾಗಿಯೂ ಸಂಪೂರ್ಣ ಆಜ್ಞೆ ಮತ್ತು ನಿಯಂತ್ರಣದೊಂದಿಗೆ ಮುನ್ನಡೆದರು” ಎಂದು ಉಲ್ಲೇಖಿಸಲಾಗಿದೆ. “ಶತ್ರು ಸೈನಿಕರೊಂದಿಗಿನ ಮುಖಾಮುಖಿಯಲ್ಲಿ ಅವರು ತನ್ನ ಕೊನೆಯ ಉಸಿರಿನವರೆಗೂ ಶತ್ರುಗಳ ದಾಳಿಯನ್ನು ಧೈರ್ಯದಿಂದ ವಿರೋಧಿಸಿದ್ದು, ತನ್ನ ಸೈನ್ಯ ಬಲಿಷ್ಠವಾಗಿಯೇ ನೆಲೆ ನಿಲ್ಲುವಂತೆ ನೋಡಿಕೊಂಡರು.  “ಶತ್ರುಗಳ ವಿರುದ್ಧ ಹೋರಾಟ , ಅನುಕರಣೀಯ ನಾಯಕತ್ವ, ಚಾಣಾಕ್ಷ ವೃತ್ತಿಪರತೆ ಮತ್ತು ಕರ್ತವ್ಯದ ಸಾಲಿನಲ್ಲಿ ಅತ್ಯುನ್ನತ ತ್ಯಾಗಕ್ಕಾಗಿ ಶೌರ್ಯಕ್ಕಾಗಿ” ಮರಣಾನಂತರ ಅವರಿಗೆ ಎರಡನೇ ಅತ್ಯುನ್ನತ ಮಿಲಿಟರಿ ಪ್ರಶಸ್ತಿಯನ್ನು ನೀಡಲಾಗಿದೆ.

ಸಂಘರ್ಷದ ಸಮಯದಲ್ಲಿ ಹತರಾದ ನಾಲ್ವರು ಸೈನಿಕರಿಗೆ ವೀರ ಚಕ್ರ (ಮರಣೋತ್ತರ) ಸಹ ನೀಡಲಾಗಿದೆ. ಇವರಲ್ಲಿ ನಾಯಬ್ ಸುಬೇದಾರ್ ನುದುರಾಮ್ ಸೊರೆನ್ ಸೇರಿದ್ದಾರೆ, ಅವರು “ತನ್ನ ತಂಡವನ್ನು ಶೌರ್ಯದಿಂದ ಮುನ್ನಡೆಸಿದರು ಮತ್ತು ವೀಕ್ಷಣಾ ಪೋಸ್ಟ್ ಅನ್ನು ಸ್ಥಾಪಿಸುವ ಭಾರತೀಯ ಸೈನಿಕರನ್ನು ಹಿಂದಕ್ಕೆ ತಳ್ಳುವ ಶತ್ರುಗಳ ಪ್ರಯತ್ನವನ್ನು ವಿರೋಧಿಸಿದರು”. ಸೋರೆನ್ ಅವರು “ವಿರೋಧಿಯನ್ನು ಬಲವಂತವಾಗಿ ಎದುರಿಸಿದರು ಮತ್ತು ಭಾರತೀಯ ಪಡೆಗಳನ್ನು ಹಿಂದಕ್ಕೆ ತಳ್ಳುವ ಪ್ರಯತ್ನದಲ್ಲಿ ಅವರನ್ನು ತಡೆದರು” ಮತ್ತು ಯುದ್ಧದ ಸಮಯದಲ್ಲಿ ಶತ್ರು ಸೈನಿಕರು ಮಾರಣಾಂತಿಕ ಮತ್ತು ಚೂಪಾದ ಆಯುಧಗಳಿಗೆ ಗುರಿಯಾದರು ಎಂದು ಅವರ ಶೌರ್ಯದ ಬಗ್ಗೆ ಹೇಳಲಾಗಿದೆ.

ತೀವ್ರವಾಗಿ ಗಾಯಗೊಂಡ ಅವರಲ್ಲಿ ಹಿಂತಿರುಗಲು ಕೇಳಿದಾಗ ಅವರು ನಿರಾಕರಿಸಿದರು. ನಿಜವಾದ ನಾಯಕರಾಗಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಶತ್ರುಗಳ ವಿರುದ್ಧ ಹೋರಾಡಿದರು.

ಹವಾಲ್ದಾರ್ (ಗನ್ನರ್) ಕೆ.ಪಳನಿ ಸಹ ಯುದ್ಧದಲ್ಲಿ “ಶೌರ್ಯದಿಂದ” ಹೋರಾಡಿದರು ಮತ್ತು “ಶತ್ರು ಸೈನಿಕರ ಆಕ್ರಮಣಕಾರಿ ಕ್ರಮದಿಂದ ತನ್ನ ಅಧೀನ ಅಧಿಕಾರಿಗಳನ್ನು ರಕ್ಷಿಸಿದರು”. “ವಿರೋಧಿಗಳು ಅವರನ್ನು ಮೀರಿಸಿ ಅವರನ್ನು ಸುತ್ತುವರೆದರು”. ಅವರು “ಧೈರ್ಯದಿಂದ ನಿಂತು ತಮ್ಮ ಸಹಚರರನ್ನು ರಕ್ಷಿಸಲು ಪ್ರಯತ್ನಿಸಿದರು” ಶತ್ರುಗಳು ಆತನ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದರು.

ನಾಯಕ್ ದೀಪಕ್ ಸಿಂಗ್ ಅವರು ಆ ಸಮಯದಲ್ಲಿ ಬೆಟಾಲಿಯನ್ ನರ್ಸಿಂಗ್ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಮತ್ತು ಹೋರಾಟದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತಿದ್ದರು. “ಯುದ್ಧದ ಸ್ಥಿತಿಯನ್ನು ನಿರ್ಣಯಿಸಿದ ನಂತರ, ಅವರು ತಕ್ಷಣದ ವೈದ್ಯಕೀಯ ಬೆಂಬಲಕ್ಕಾಗಿ ತೆರಳಿದರು. ಚಕಮಕಿಯು ಪ್ರಾರಂಭವಾದಾಗ ಮತ್ತು ಸಾವುನೋವುಗಳು ಹೆಚ್ಚಾಗುತ್ತಿದ್ದಂತೆ, ಗಾಯಗೊಂಡ ಸೈನಿಕರಿಗೆ ಪ್ರಥಮ ಚಿಕಿತ್ಸೆ ನೀಡಲು ಮುಂಚೂಣಿಯಲ್ಲಿ ಹೊರಟರು. ನಂತರದ ಚಕಮಕಿಯಲ್ಲಿ ಭಾರೀ ಕಲ್ಲು ತೂರಾಟದ ವೇಳೆ ಅವರಿಗೆ ಗಂಭೀರ ಗಾಯಗಳಾಯಿತು. ಆದರೆ ಅವರು ಹಿಂಜರಿಯಲಿಲ್ಲ ಮತ್ತು ದಣಿವರಿಯದೆ ಅವರು ವೈದ್ಯಕೀಯ ಸಹಾಯವನ್ನು ನೀಡುವುದನ್ನು ಮುಂದುವರೆಸಿದರು. ಸಿಂಗ್ ಅವರು ಗಂಭೀರಗಾಯಗಳಿಂದ ಕೊನೆಯುಸಿರೆಳೆಯುವ ಮುನ್ನ ಅನೇಕ ಜೀವಗಳನ್ನು ಉಳಿಸಿದರು. “ಅವರು 30 ಕ್ಕೂ ಹೆಚ್ಚು ಭಾರತೀಯ ಸೈನಿಕರ ಚಿಕಿತ್ಸೆ ಮತ್ತು ಜೀವಗಳನ್ನು ಉಳಿಸುವಲ್ಲಿ ಪ್ರಮುಖರಾಗಿದ್ದರು, ಇದು ಅವರು ವೃತ್ತಿಪರ ಕುಶಾಗ್ರಮತಿ ಎಂದು ಬಿಂಬಿಸುತ್ತದೆ” ಎಂದು ಅವರ ಬಗ್ಗೆ ಹೇಳಲಾಗಿದೆ.

ಘರ್ಷಣೆಯ ಸಮಯದಲ್ಲಿ ಮಡಿದ ಇನ್ನೊಬ್ಬ ಯೋಧ ಸಿಪಾಯಿ ಲೇಟ್ ಗುರ್ತೇಜ್ ಸಿಂಗ್ ಅವರು “ಶತ್ರು ಪಡೆಗಳನ್ನು ತೀವ್ರವಾಗಿ ಎದುರ

Published On - 5:06 pm, Tue, 23 November 21

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ