Gati Shakti Express Cargo: ಭಾರತೀಯ ರೈಲ್ವೆ, ಅಂಚೆ ಇಲಾಖೆ ಸಹಯೋಗದಲ್ಲಿ ಗತಿ ಶಕ್ತಿ ಎಕ್ಸ್ಪ್ರೆಸ್ ಕಾರ್ಗೋ ಸೇವೆ ಆರಂಭ

ಫೆಬ್ರವರಿ 16ರಂದು ನಾಲ್ಕು ವಲಯಗಳಲ್ಲಿ ಕಾರ್ಗೋ ಸೇವೆಯನ್ನು ಪ್ರಾರಂಭಿಸಲಾಯಿತು. ಯೋಜನೆಯ ಮೊದಲ ಹಂತದಲ್ಲಿ ಈ ಸೇವೆಯು 15 ವಯಲಗಳನ್ನು ಒಳಗೊಂಡಿದೆ. ಈ ವಾರದ ಆರಂಭದಲ್ಲಿ ಭಾರತೀಯ ರೈಲ್ವೆ ಮತ್ತು ಭಾರತೀಯ ಅಂಚೆ ಘಟಕದ ಜಂಟಿ ಸಹಯೋಗದಲ್ಲಿ ಗತಿಶಕ್ತಿ ಎಕ್ಸ್ಪ್ರೆಸ್ ಕಾರ್ಗೋ ಸೇವೆಯನ್ನು ಪ್ರಾರಂಭಿಸಲಾಯಿತು.

Gati Shakti Express Cargo: ಭಾರತೀಯ ರೈಲ್ವೆ, ಅಂಚೆ ಇಲಾಖೆ ಸಹಯೋಗದಲ್ಲಿ ಗತಿ ಶಕ್ತಿ ಎಕ್ಸ್ಪ್ರೆಸ್ ಕಾರ್ಗೋ ಸೇವೆ ಆರಂಭ
ಸಾಂದರ್ಭಿಕ ಚಿತ್ರ
Follow us
|

Updated on: Feb 20, 2023 | 3:32 PM

ಫೆಬ್ರವರಿ 16ರಂದು ನಾಲ್ಕು ವಲಯಗಳಲ್ಲಿ ಕಾರ್ಗೋ ಸೇವೆಯನ್ನು ಪ್ರಾರಂಭಿಸಲಾಯಿತು. ಯೋಜನೆಯ ಮೊದಲ ಹಂತದಲ್ಲಿ ಈ ಸೇವೆಯು 15 ವಯಲಗಳನ್ನು ಒಳಗೊಂಡಿದೆ. ಈ ವಾರದ ಆರಂಭದಲ್ಲಿ ಭಾರತೀಯ ರೈಲ್ವೆ ಮತ್ತು ಭಾರತೀಯ ಅಂಚೆ ಘಟಕದ ಜಂಟಿ ಸಹಯೋಗದಲ್ಲಿ ಗತಿಶಕ್ತಿ ಎಕ್ಸ್ಪ್ರೆಸ್ ಕಾರ್ಗೋ (Gati Shakti Express Cargo) ಸೇವೆಯನ್ನು ಪ್ರಾರಂಭಿಸಲಾಯಿತು. ಫೆಬ್ರವರಿ 16 ರಂದು ನಾಲ್ಕು ವಲಯಗಳಲ್ಲಿ ಏಕಕಾಲದಲ್ಲಿ ಪ್ರಾರಂಭಿಸಲಾದ ಈ ಸೇವೆಯು ಕಳೆದ ವರ್ಷದ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಮಾಡಿರುವ ಘೋಷಣೆಗಳಲ್ಲಿ ಒಂದಾಗಿದೆ. ಸಂಪೂರ್ಣ ಸೇವೆಗಳ ಪ್ರಾರಂಭವು ಮಾರ್ಚ್ 31ರಂದು ಸೂರತ್ ಮತ್ತು ವಾರಣಾಸಿಯ ನಡುವೆ ಪ್ರಾಯೋಗಿಕ ಸಾಪ್ತಾಹಿಕ ಸೇವೆಯನ್ನು ಆರಂಭಿಸಿದ ಬಳಿಕ ಇದರ ಸಂಪೂರ್ಣ ಸೇವೆ ಆರಂಭವಾಗಲಿದೆ.

ರೈಲು ಪೋಸ್ಟ್ ಗತಿ ಶಕ್ತಿ ಎಕ್ಸ್ಪ್ರೆಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಮಾಹಿತಿಗಳು ಇಲ್ಲಿವೆ:

ಪ್ರೆಸ್ ರಿಲೀಸ್‌ನಲ್ಲಿ, ರೈಲ್ವೆ ಸಚಿವಾಲಯವು ರೈಲು ಪೋಸ್ಟ್ ಗತಿ ಶಕ್ತಿ ಎಕ್ಸ್ಪ್ರೆಸ್ ಇದು ದೇಶದ ಸೇವಾ ವಲಯಕ್ಕೆ ತಡೆರಹಿತ ಲಾಜಿಸ್ಟಿಕ್ ಒದಗಿಸಲು ಭಾರತೀಯ ರೈಲ್ವೆ ಮತ್ತು ಭಾರತೀಯ ಅಂಚೆಯ ಸಹಯೋಗದ ಉಪಕ್ರಮವಾಗಿ ವಿವರಿಸಲಾಗಿದೆ. ದೆಹಲಿ-ಕೋಲ್ಕತ್ತಾ, ಬೆಂಗಳೂರು-ಗುವಾಹಟಿ, ಸೂರತ್-ಮುಜಾಫರ್‌ಪುರ ಮತ್ತು ಹೈದರಬಾದ್-ಹಜರ್ ನಿಜಾಮುದ್ದೀನ್ ಈ ವಲಯಗಳಲ್ಲಿ ಸೇವಾ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ.

ಭಾರತೀಯ ಅಂಚೆಯು ಗ್ರಾಹಕರ ಮನೆ ಬಾಗಿಲಿನಿಂದ ಭಾರದ ಪಾರ್ಸೆಲ್‌ಗಳ ರವಾನೆಯನ್ನು ತೆಗೆದುಕೊಂಡು ಅದನ್ನು ರೈಲು ನಿಲ್ದಾಣಕ್ಕೆ ಕೊಂಡೊಯ್ಯುತ್ತದೆ. ಮತ್ತು ಆ ಪಾರ್ಸೆಲ್‌ನ್ನು ರೈಲಿನ ಮೂಲಕ ವಿಳಾಸದಾದರರ ಮನೆ ಬಾಗಿಲಿಗೆ ತಲುಪಿಸುತ್ತದೆ. ಪಾರ್ಸೆಲ್ ಲೋಡ್ ತೂಕದ ಮೇಲೆ ಯಾವುದೇ ಮಿತಿಯಿಲ್ಲ, ಸುರಕ್ಷತೆಯ ದೃಷ್ಟಿಯಿಂದ ಇವುಗಳನ್ನು ಪೆಟ್ಟಿಗೆಯಿಂದ ಮುಚ್ಚಲಾಗುತ್ತದೆ.

ಇದನ್ನೂ ಓದಿ:ಭಾರತೀಯ ರೈಲ್ವೆ ಟಿಕೆಟ್ ದರದಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ಏಕಿಲ್ಲ? ಸಚಿವ ಅಶ್ವಿನಿ ವೃಷ್ಣವ್ ಹೇಳಿದ್ದೇನು?

ಈ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುವ ರೈಲುಗಳು ಮೂಲ ನಿಲ್ದಾಣದಿಂದ ನಿಗದಿತ ನಿರ್ಗಮನವನ್ನು ಹೊಂದಿರುತ್ತದೆ ಮತ್ತು ಮಧ್ಯಂತರ ಮತ್ತು ಗಮ್ಯಸ್ಥಾನದ ನಿಲ್ದಾಣಗಳಿಗೆ ನಿಗದಿತ ಪ್ರವೇಶವನ್ನು ಹೊಂದಿರುತ್ತದೆ. ಈ ಪಾರ್ಸೆಲ್ ಸೌಲಭ್ಯವನ್ನು ಪಡೆಯುವ ಗ್ರಾಹಕರಿಗೆ ಅಂಚೆ ಇಲಾಖೆಯಿಂದ ಮೂರನೇ ವ್ಯಕ್ತಿಯ ವಿಮೆಯನ್ನು ನೀಡಲಾಗುತ್ತದೆ. ಇದನ್ನು ಸರಕು ಮೌಲ್ಯದ 0.03%ನಲ್ಲಿ ನೀಡಲಾಗುತ್ತದೆ.

ಸರಕುಗಳ ರವಾನೆಯ ಪ್ರಯಾಣದುದ್ದಕ್ಕೂ, ಭಾರತೀಯ ಅಂಚೆ ಮಾತ್ರ ಗ್ರಾಹಕರಿಗೆ ಏಕೈಕ ಸಂಪಕ್ ಮಾರ್ಗವಾಗಿರುತ್ತದೆ. ಗ್ರಾಹಕರು ತಮ್ಮ ಸರಕುಗಳನ್ನು ಕಾಯ್ದಿರಿಸಲು, ಮತ್ತು ಪಾರ್ಸೆಲ್‌ಗಳ ಸ್ಥಿತಿಯನ್ನು ಟ್ಯ್ರಾಯಕ್ ಮಾಡಲು ಹಾಗೂ ಇತರ ಸೇವೆಗಳನ್ನು ಒದಗಿಸಲು ಮೊಬೈಲ್ ಅಪ್ಲಿಕೇಶನ್‌ನನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?