Gyanvapi Mosque Case ಜ್ಞಾನವಾಪಿ ಮಸೀದಿ ಪ್ರಕರಣ: ವಾರಣಾಸಿ ಜಿಲ್ಲಾ ನ್ಯಾಯಾಧೀಶರಿಗೆ ಪ್ರಕರಣವನ್ನು ವರ್ಗಾಯಿಸಲು ಸುಪ್ರೀಂಕೋರ್ಟ್ ಆದೇಶ

| Updated By: ರಶ್ಮಿ ಕಲ್ಲಕಟ್ಟ

Updated on: May 20, 2022 | 5:41 PM

ಮುಸ್ಲಿಂ ಕಡೆಯ ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್ ಶುಕ್ರವಾರ ಜ್ಞಾನವಾಪಿ ಮಸೀದಿ ಪ್ರಕರಣವನ್ನು ವಾರಣಾಸಿ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಲು ಆದೇಶಿಸಿದೆ. ಉತ್ತರ ಪ್ರದೇಶದ ನ್ಯಾಯಾಂಗ ಸೇವೆಗಳ "ಹಿರಿಯ ಮತ್ತು ಅನುಭವಿ" ನ್ಯಾಯಾಂಗ ಅಧಿಕಾರಿಯೊಬ್ಬರು ಪ್ರಕರಣದ ವಿಚಾರಣೆ ನಡೆಸಲಿದ್ದಾರೆ

Gyanvapi Mosque Case ಜ್ಞಾನವಾಪಿ ಮಸೀದಿ ಪ್ರಕರಣ: ವಾರಣಾಸಿ ಜಿಲ್ಲಾ ನ್ಯಾಯಾಧೀಶರಿಗೆ ಪ್ರಕರಣವನ್ನು ವರ್ಗಾಯಿಸಲು ಸುಪ್ರೀಂಕೋರ್ಟ್ ಆದೇಶ
ಜ್ಞಾನವಾಪಿ ಮಸೀದಿ
Follow us on

ದೆಹಲಿ: ವಾರಣಾಸಿಯ ಜ್ಞಾನವಾಪಿ ಮಸೀದಿ (Gyanvapi mosque )ಪ್ರಕರಣ ಬಗ್ಗೆ ಶುಕ್ರವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ (Supreme Court), ಪ್ರಕರಣದ ಅರ್ಹತೆಯ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಮತ್ತು ಮಧ್ಯಂತರ ಆದೇಶ (ಮಸೀದಿಯಲ್ಲಿನ ‘ಶಿವಲಿಂಗ’ವನ್ನು ರಕ್ಷಿಸುವ ಕುರಿತು) ಸದ್ಯಕ್ಕೆ ಮುಂದುವರಿಯಬಹುದು ಎಂದು ಹೇಳಿದೆ. “ಇದು ಸಂಕೀರ್ಣ ಮತ್ತು ಸೂಕ್ಷ್ಮ ವಿಷಯವಾಗಿದೆ. ಮೊಕದ್ದಮೆಯನ್ನು ವಿಚಾರಣಾ ನ್ಯಾಯಾಧೀಶರ ಬದಲಿಗೆ ಜಿಲ್ಲಾ ನ್ಯಾಯಾಧೀಶರು ವಿಚಾರಣೆ ಮಾಡಬೇಕು ಎಂದು ನಾವು ಭಾವಿಸುತ್ತೇವೆ. ಏಕೆಂದರೆ ಹೆಚ್ಚು ಅನುಭವಿಗಳು ಅದನ್ನು ಆಲಿಸಿದರೆ ಉತ್ತಮ” ಎಂದು ನ್ಯಾಯಾಲಯ ಹೇಳಿದೆ. ಶುಕ್ರವಾರ ಮತ್ತೆ ಈ ಪ್ರಕರಣವನ್ನು ಕೈಗೆತ್ತಿಕೊಳ್ಳುವವರೆಗೆ ಪ್ರಕರಣದ ವಿಚಾರಣೆಯನ್ನು ಮುಂದುವರಿಸದಂತೆ ವಾರಣಾಸಿ(Varanasi) ನ್ಯಾಯಾಲಯಕ್ಕೆ ಸೂಚಿಸಿದ ಒಂದು ದಿನದ ನಂತರ ಸುಪ್ರೀಂಕೋರ್ಟ್ ಪ್ರಕರಣವನ್ನು ಮತ್ತೊಮ್ಮೆ ವಿಚಾರಣೆ ನಡೆಸುತ್ತಿದೆ. ವಾರಣಾಸಿ ನ್ಯಾಯಾಲಯವು ಮೇ 23 ರಂದು ತನ್ನ ವಿಚಾರಣೆಯನ್ನು ಮುಂದುವರೆಸಲಿದೆ ಎಂದು ಹಿಂದೂ ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರು ತಿಳಿಸಿದ್ದಾರೆ. ಗುರುವಾರ ವಿಚಾರಣಾ ನ್ಯಾಯಾಲಯದ ಮುಂದೆ ಎರಡೂ ಕಡೆಯವರು ತಮ್ಮ “ಆಕ್ಷೇಪಣೆಗಳು ಮತ್ತು ಪ್ರತಿ-ಆಕ್ಷೇಪಣೆಗಳನ್ನು” ಸಲ್ಲಿಸಿದರು ಎಂದು ಮಸೀದಿ ಆಡಳಿತ ಸಮಿತಿಯ ವಕೀಲರು ಹೇಳಿದರು. “ಇದು ಸಂಕೀರ್ಣ ಮತ್ತು ಸೂಕ್ಷ್ಮ ವಿಷಯವಾಗಿದೆ. ಮೊಕದ್ದಮೆಯನ್ನು ವಿಚಾರಣಾ ನ್ಯಾಯಾಧೀಶರ ಬದಲಿಗೆ ಜಿಲ್ಲಾ ನ್ಯಾಯಾಧೀಶರು ವಿಚಾರಣೆ ಮಾಡಬೇಕು ಎಂದು ನಾವು ಭಾವಿಸುತ್ತೇವೆ. ಏಕೆಂದರೆ ಹೆಚ್ಚು ಅನುಭವಿಗಳು ಅದನ್ನು ಆಲಿಸಿದರೆ ಉತ್ತಮ” ಎಂದು ನ್ಯಾಯಾಲಯ ಹೇಳಿದೆ.

ಶುಕ್ರವಾರ ಮತ್ತೆ ಈ ಪ್ರಕರಣವನ್ನು ಕೈಗೆತ್ತಿಕೊಳ್ಳುವವರೆಗೆ ಪ್ರಕರಣದ ವಿಚಾರಣೆಯನ್ನು ಮುಂದುವರಿಸದಂತೆ ವಾರಣಾಸಿ ನ್ಯಾಯಾಲಯಕ್ಕೆ ಸೂಚಿಸಿದ ಒಂದು ದಿನದ ನಂತರ ಸುಪ್ರೀಂಕೋರ್ಟ್ ಪ್ರಕರಣವನ್ನು ಮತ್ತೊಮ್ಮೆ ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: Jammu Tunnel Collapse: ಜಮ್ಮುವಿನಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ; ಓರ್ವ ಸಾವು, 10 ಜನ ನಾಪತ್ತೆ

ಇದನ್ನೂ ಓದಿ
Gyanvapi mosque case ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಮಾತ್ರವಲ್ಲ ತ್ರಿಶೂಲ, ಡಮರು, ಶಿಲ್ಪಗಳೂ ಸಿಕ್ಕಿವೆ ಎಂದ ಸಮೀಕ್ಷೆ ವರದಿ
Gyanvapi Mosque row ಜ್ಞಾನವಾಪಿ ಮಸೀದಿ ಪ್ರಕರಣ: ವಾರಣಾಸಿ ನ್ಯಾಯಾಲಯಕ್ಕೆ ವಿಡಿಯೊ ಚಿತ್ರೀಕರಣದ ವರದಿ ಸಲ್ಲಿಕೆ, ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂಕೋರ್ಟ್
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಬಗ್ಗೆ ಆಕ್ಷೇಪಾರ್ಹ ಪೋಸ್ಟ್; ಹಿಂದೂ ಕಾಲೇಜಿನ ಪ್ರೊಫೆಸರ್ ವಿರುದ್ಧ ಕೇಸು ದಾಖಲು
Fact Check ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗಿರುವ ಫೋಟೊ ವಿಯೆಟ್ನಾಂನದ್ದು

ವಾರಣಾಸಿ ನ್ಯಾಯಾಲಯವು ಮೇ 23 ರಂದು ತನ್ನ ವಿಚಾರಣೆಯನ್ನು ಮುಂದುವರೆಸಲಿದೆ ಎಂದು ಹಿಂದೂ ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರು ತಿಳಿಸಿದ್ದಾರೆ. ಗುರುವಾರ ವಿಚಾರಣಾ ನ್ಯಾಯಾಲಯದ ಮುಂದೆ ಎರಡೂ ಕಡೆಯವರು ತಮ್ಮ “ಆಕ್ಷೇಪಣೆಗಳು ಮತ್ತು ಪ್ರತಿ-ಆಕ್ಷೇಪಣೆಗಳನ್ನು” ಸಲ್ಲಿಸಿದರು ಎಂದು ಮಸೀದಿ ಆಡಳಿತ ಸಮಿತಿಯ ವಕೀಲರು ಹೇಳಿದರು.

ವಾರಣಾಸಿ ಜಿಲ್ಲಾ ನ್ಯಾಯಾಧೀಶರಿಗೆ ಪ್ರಕರಣವನ್ನು ವರ್ಗಾಯಿಸಲು ಸುಪ್ರೀಂಆದೇಶ

ಮುಸ್ಲಿಂ ಕಡೆಯ ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್ ಶುಕ್ರವಾರ ಜ್ಞಾನವಾಪಿ ಮಸೀದಿ ಪ್ರಕರಣವನ್ನು ವಾರಣಾಸಿ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಲು ಆದೇಶಿಸಿದೆ. ಉತ್ತರ ಪ್ರದೇಶದ ನ್ಯಾಯಾಂಗ ಸೇವೆಗಳ “ಹಿರಿಯ ಮತ್ತು ಅನುಭವಿ” ನ್ಯಾಯಾಂಗ ಅಧಿಕಾರಿಯೊಬ್ಬರು ಪ್ರಕರಣದ ವಿಚಾರಣೆ ನಡೆಸಲಿದ್ದಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಸಿವಿಲ್ ಮೊಕದ್ದಮೆಯ “ಸೂಕ್ಷ್ಮತೆಗೆ” ಸಂಬಂಧಿಸಿದಂತೆ, ಪ್ರಕರಣವನ್ನು ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರಿಂದ ವಾರಣಾಸಿಯ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಲಾಗಿದೆ ಎಂದು ಅದು ಹೇಳಿದೆ.

‘ಶಿವಲಿಂಗ’ ರಕ್ಷಣೆಯ ಕುರಿತು ಮತ್ತು ಮುಸ್ಲಿಮರಿಗೆ ಪ್ರವೇಶ ಕುರಿತು ಮಧ್ಯಂತರ ಆದೇಶ ಮುಂದುವರಿಯಲಿದೆ

ಹಿಂದೂ ಪಕ್ಷದಿಂದ ಮೊಕದ್ದಮೆಯನ್ನು ನಿರ್ವಹಿಸಲಾಗುವುದಿಲ್ಲ ಎಂಬ ಮಸೀದಿ ಸಮಿತಿಯ ಮನವಿಯನ್ನು ಜಿಲ್ಲಾ ನ್ಯಾಯಾಧೀಶರು ನಿರ್ಧರಿಸುತ್ತಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅಲ್ಲಿಯವರೆಗೆ ಶಿವಲಿಂಗ ಪತ್ತೆಯಾಗಿರುವ ಪ್ರದೇಶದ ರಕ್ಷಣೆ ಮತ್ತು ನಮಾಜ್ ಮಾಡಲು ಮುಸ್ಲಿಮರಿಗೆ ಉಚಿತ ಪ್ರವೇಶದ ಕುರಿತು ಮಧ್ಯಂತರ ಆದೇಶ ಮುಂದುವರಿಯುತ್ತದೆ ಎಂದು ಉಚ್ಚ ನ್ಯಾಯಾಲಯ ಹೇಳಿದೆ.

ವಿಚಾರಣಾ ನ್ಯಾಯಾಲಯವನ್ನು ದುರುಪಯೋಗಪಡಿಸಿಕೊಳ್ಳಲು ಅನುಮತಿಸುವುದಿಲ್ಲ

ಮುಸ್ಲಿಂ ಕಡೆಯ ವಾದವನ್ನು ಆಲಿಸಿದ ಸುಪ್ರೀಂಕೋರ್ಟ್ “ನಿಮ್ಮ ವಾದದಲ್ಲಿ ಅರ್ಹತೆಯನ್ನು ಕಂಡ ನಾವು ವಿಚಾರಣಾ ನ್ಯಾಯಾಲಯವನ್ನು ದುರುಪಯೋಗಪಡಿಸಿಕೊಳ್ಳಲು ಅನುಮತಿಸುವುದಿಲ್ಲ. ಆದ್ದರಿಂದ, ನಾವು ಸಮತೋಲನವನ್ನು ಹಿಡಿದಿಟ್ಟುಕೊಳ್ಳುತ್ತೇವೆ. ಸಂವಿಧಾನದ ಆಶಯದಂತೆ ಸಮುದಾಯಗಳ ನಡುವೆ ಶಾಂತಿ ಮತ್ತು ಭ್ರಾತೃತ್ವದ ವಾತಾವರಣವನ್ನು ಕಾಪಾಡಿಕೊಳ್ಳಲು ನಾವು ಚೌಕಟ್ಟನ್ನು ರಚಿಸಿದ್ದೇವೆ. ಆ ಸಂದೇಶವನ್ನು ಎತ್ತಿಹಿಡಿಯುವುದು ನಮ್ಮ ಕರ್ತವ್ಯ . “ಇವು ಸಂಕೀರ್ಣವಾದ ಸಾಮಾಜಿಕ ಸಮಸ್ಯೆಗಳು ಮತ್ತು ಮಾನವನಿಂದ ಯಾವುದೇ ಪರಿಹಾರವು ಪರಿಪೂರ್ಣವಾಗುವುದಿಲ್ಲ. ಒಂದು ನಿರ್ದಿಷ್ಟ ಮಟ್ಟದ ಶಾಂತಿ ಮತ್ತು ಸಮಾಧಾನವನ್ನು ಕಾಪಾಡಿಕೊಳ್ಳುವುದು ನಮ್ಮ ಆದೇಶವಾಗಿದೆ. ಮಧ್ಯಂತರ ಆದೇಶಗಳು ಕೆಲವು ದುರ್ಬಲಗೊಂಡ ನರಗಳನ್ನು ಗುಣಪಡಿಸುವ ಸ್ಪರ್ಶದೊಂದಿಗೆ ಶಾಂತಗೊಳಿಸುತ್ತವೆ.

ಆಯೋಗದ ವರದಿಯ ಸೋರಿಕೆ ಮಾಡಬೇಡಿ

ಆಯೋಗದ ವರದಿಯು ಮಾಧ್ಯಮಗಳಲ್ಲಿ ಸೋರಿಕೆಯಾಗುತ್ತಿರುವುದನ್ನು ಗಮನಿಸಿದ ಸುಪ್ರೀಂಕೋರ್ಟ್, ಒಮ್ಮೆ ವರದಿಯನ್ನು ಮಂಡಿಸಿದರೆ ಅದು ಸೋರಿಕೆಯಾಗ ಬಾರದು ಎಂದು ಹೇಳಿದೆ. “ಪತ್ರಿಕೆಗಳಿಗೆ ವಿಷಯಗಳನ್ನು ಸೋರಿಕೆ ಮಾಡಬೇಡಿ, ನ್ಯಾಯಾಧೀಶರು ಮಾತ್ರ ವರದಿಯನ್ನು ತೆರೆಯುತ್ತಾರೆ” ಎಂದು ಸುಪ್ರೀಂಕೋರ್ಟ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಮಸೀದಿ ಒಳಗೆ ಕಂಡುಬಂದಿರುವುದು ಶಿವಲಿಂಗವಲ್ಲ, ಕಾರಂಜಿ- ಮಸೀದಿ ಸಮಿತಿಯ ಪರ ವಕೀಲರ ವಾದ

ಮಸೀದಿ ಸಮಿತಿಯ ಪರ ಹಿರಿಯ ವಕೀಲ ಹುಝೆಫಾ ಅಹ್ಮದಿ ಅವರು ಮಸೀದಿ ಒಳಗೆ ಕಂಡುಬಂದಿರುವುದು ಶಿವಲಿಂಗವಲ್ಲ, ಕಾರಂಜಿ. ವುಜು ಖಾನಾವನ್ನು ನಿರ್ಬಂಧಿಸಲಾಗಿದ್ದು ಮತ್ತು ಕಬ್ಬಿಣದ ಗೇಟ್‌ಗಳನ್ನು ಭಾರೀ ಪೊಲೀಸ್ ಉಪಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್ 1991 ರ ಪೂಜಾ ಸ್ಥಳಗಳ ಕಾಯಿದೆಯ ಸೆಕ್ಷನ್ 3 ರ ಅಡಿಯಲ್ಲಿ ಧಾರ್ಮಿಕ ಪಾತ್ರದ ನಿರ್ಣಯವನ್ನು ನಿರ್ಬಂಧಿಸಲಾಗಿಲ್ಲ ಎಂದಿದೆ. “ಒಂದು ಬದಿಯಲ್ಲಿ ಮಸೀದಿ ಮತ್ತು ಇನ್ನೊಂದು ಕಡೆ ದೇವಸ್ಥಾನವಿದೆ ಎಂಬುದನ್ನು ಮರೆಯಬೇಡಿ. ಒಂದು ಪಾರ್ಸಿ ದೇವಾಲಯವಿದೆ ಮತ್ತು ಪ್ರದೇಶದ ಮೂಲೆಯಲ್ಲಿ ಒಂದು ಶಿಲುಬೆ ಇದೆ ಎಂದು ಭಾವಿಸೋಣ. ‘ಅಗಿಯಾರಿ (ಪಾರ್ಸಿ ದೇಗುಲ)’ ಇರುವಿಕೆಯು ಶಿಲುಬೆಯನ್ನು ‘ಅಗಿಯಾರಿ’ ಅಥವಾ ‘ಅಗಯಾರಿ’ ಕ್ರಿಶ್ಚಿಯನ್ ಮಾಡುತ್ತದೆಯೇ? ಎಂದು ಕೇಳಿದ್ದಾರೆ. ಅದಕ್ಕೆ ಕೋರ್ಟ್ ಈ ಹೈಬ್ರಿಡ್ ಪಾತ್ರವು ತಿಳಿದಿಲ್ಲ. ಇಲ್ಲಿ ಝೋರಾಸ್ಟ್ರಿಯನ್ ನಂಬಿಕೆಯ ರಚನೆಯು ಕ್ರಿಶ್ಚಿಯನ್ ರಚನೆಯನ್ನು ಝೋರಾಸ್ಟ್ರಿಯನ್ ಅಥವಾ ಪ್ರತಿಯಾಗಿ ಮಾಡುವುದಿಲ್ಲ. ಆದರೆ ಒಂದು ಸ್ಥಳದ ಧಾರ್ಮಿಕ ಸ್ವರೂಪದ ದೃಢೀಕರಣವು 1991 ರ ಕಾಯಿದೆಯ ಸೆಕ್ಷನ್ 3ನ್ನು ಉಲ್ಲಂಘಿಸಿಲ್ಲ ಎಂದು ಹೇಳಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 4:08 pm, Fri, 20 May 22