AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ಪಾಸಿಟಿವ್ ಆಗಿದ್ದು 30 ದಿನಗಳಲ್ಲಿ ಆತ್ಮಹತ್ಯೆ ಮಾಡಿದ್ದರೆ ಅದನ್ನು ‘ಕೊವಿಡ್-19ನಿಂದ ಸಾವು’ ಎಂದು ಪರಿಗಣಿಸಲಾಗುತ್ತದೆ: ಕೇಂದ್ರ ಸರ್ಕಾರ

Coronavirus: ಅಫಿಡವಿಟ್ ಪ್ರಕಾರ ಕೊವಿಡ್ -19 ಎಂದು ದೃಢಪಟ್ಟ 30 ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬ ಸದಸ್ಯರು ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಅಡಿಯಲ್ಲಿ ನೀಡಲಾದ ಹಣಕಾಸಿನ ಸಹಾಯವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಕೊವಿಡ್ ಪಾಸಿಟಿವ್ ಆಗಿದ್ದು 30 ದಿನಗಳಲ್ಲಿ ಆತ್ಮಹತ್ಯೆ ಮಾಡಿದ್ದರೆ ಅದನ್ನು 'ಕೊವಿಡ್-19ನಿಂದ ಸಾವು' ಎಂದು ಪರಿಗಣಿಸಲಾಗುತ್ತದೆ: ಕೇಂದ್ರ ಸರ್ಕಾರ
ಸುಪ್ರೀಂಕೋರ್ಟ್​
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Sep 23, 2021 | 4:30 PM

Share

ದೆಹಲಿ: ಆತ್ಮಹತ್ಯೆ ಪ್ರಕರಣಗಳು ಸೇರಿದಂತೆ ಕೊರೊನಾವೈರಸ್ (Coronavirus) ಸೋಂಕಿಗೊಳಗಾದ ವ್ಯಕ್ತಿ 30 ದಿನಗಳಲ್ಲಿ ಒಬ್ಬ ವ್ಯಕ್ತಿಯು ಮರಣ ಹೊಂದಿದರೆ ಅದನ್ನು ಕೊವಿಡ್-19 ನಿಂದಾದ ಸಾವು ಎಂದು ಪರಿಗಣಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​​ಗೆ (Supreme Court) ಅಫಿಡವಿಟ್ ಸಲ್ಲಿಸಿದೆ. ಅಫಿಡವಿಟ್ ಪ್ರಕಾರ ಕೊವಿಡ್ -19 ಎಂದು ದೃಢಪಟ್ಟ 30 ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬ ಸದಸ್ಯರು ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಅಡಿಯಲ್ಲಿ ನೀಡಲಾದ ಹಣಕಾಸಿನ ಸಹಾಯವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಕೇಂದ್ರವು ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಮೊದಲು ಅಥವಾ ಜಿಲ್ಲಾ ಮಟ್ಟದ ಸಮಿತಿ  ನೀಡುವ ಯಾವುದೇ ಮರಣ ಪ್ರಮಾಣಪತ್ರವನ್ನು  “ಕೊವಿಡ್ -19 ನಿಂದ ಸಾವು” ಎಂದು ಪರಿಗಣಿಸಲು ಮಾನ್ಯ ದಾಖಲೆಯಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದೆ.

ಹೊಸ ಆದೇಶವನ್ನು ಜಾರಿಗೆ ತರುವ ಮೊದಲು ನೀಡಿದ ಮರಣ ಪ್ರಮಾಣಪತ್ರಗಳನ್ನು ಜಿಲ್ಲಾ ಮಟ್ಟದ ಸಮಿತಿಯ ಮುಂದೆ ಮನವಿ ಸಲ್ಲಿಸುವ ಮೂಲಕ ಸರಿಪಡಿಸಬಹುದು. ಇದನ್ನು ರಾಜ್ಯ ಸರ್ಕಾರಗಳು ಸ್ಥಾಪಿಸುತ್ತವೆ. ರಾಜ್ಯಗಳು 30 ದಿನಗಳಲ್ಲಿ ದೂರು ಪರಿಹಾರ ಸಮಿತಿಗಳನ್ನು ರಚಿಸಬೇಕು ಎಂದು ಸಾಲಿಸಿಟರ್ ಜನರಲ್ ಸುಪ್ರೀಂಕೋರ್ಟ್ ನಲ್ಲಿ ಹೇಳಿದ್ದಾರೆ.

ಸಾವಿನ ಪ್ರಮಾಣಪತ್ರವು ಕೊವಿಡ್ -19 ನಿಂದ ಸಾವು” ಎಂದು ಗುರುತಿಸದಿದ್ದರೆ ಮತ್ತು ಸಾವಿನ ಪ್ರಮಾಣಪತ್ರದಲ್ಲಿ ಇತರ ಕೆಲವು ಸಾಂದರ್ಭಿಕ ಕಾರಣಗಳನ್ನು ಉಲ್ಲೇಖಿಸದಿದ್ದರೆ ಮೃತರ ಕುಟುಂಬ ಸದಸ್ಯರು ತಮ್ಮ ದೂರುಗಳನ್ನು ಸಂಬಂಧಪಟ್ಟ ಜಿಲ್ಲಾ ಮಟ್ಟದ ಸಮಿತಿಯ ಮುಂದೆ ಸಲ್ಲಿಸಬಹುದು.

ಈ ತಿಂಗಳ ಆರಂಭದಲ್ಲಿ ಕೊವಿಡ್ ಪರೀಕ್ಷೆಯ ದಿನಾಂಕದಿಂದ ಅಥವಾ ಕೊವಿಡ್ -19 ಪ್ರಕರಣವೆಂದು ವೈದ್ಯಕೀಯವಾಗಿ ನಿರ್ಧರಿಸಿದ ದಿನಾಂಕದಿಂದ 30 ದಿನಗಳಲ್ಲಿ ಸಂಭವಿಸುವ ಸಾವುಗಳನ್ನು ‘ಕೊವಿಡ್ -19 ನಿಂದ ಸಾವುಗಳು’ ಎಂದು ಪರಿಗಣಿಸಲಾಗುವುದು ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಇದು ಆಸ್ಪತ್ರೆಲ್ಲಿ ಅಥವಾ ಆಸ್ಪತ್ರೆಯ ಹೊರಗೆ ಸಂಭವಿಸಿದ ಸಾವು ಪ್ರಕರಣಗಳನ್ನೂ ಸೇರಿರುತ್ತದೆ. ಅದೇ ವೇಳೆ ವಿಷ, ಆತ್ಮಹತ್ಯೆ, ನರಹತ್ಯೆ ಮತ್ತು ಅಪಘಾತದಿಂದ ಉಂಟಾಗುವ ಸಾವು ಇತ್ಯಾದಿಗಳಿಂದ ಸಂಭವಿಸುವ ಸಾವುಗಳನ್ನು ಕೊವಿಡ್ -19 ಸಾವು ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.

ಐಸಿಎಂಆರ್ ಅಧ್ಯಯನದ ಪ್ರಕಾರ ಕೊವಿಡ್‌ಗೆ ಧನಾತ್ಮಕ ಪರೀಕ್ಷೆ ಮಾಡಿದ 25 ದಿನಗಳಲ್ಲಿ ಶೇ 95 ಸಾವುಗಳು ಸಂಭವಿಸುತ್ತವೆ ಎಂದು ಮಾರ್ಗಸೂಚಿಗಳು ಸೇರಿಸಲಾಗಿದೆ. ಕೊವಿಡ್ -19 ಪ್ರಕರಣವನ್ನು ಆಸ್ಪತ್ರೆಗೆ/ಇನ್ ಪೇಷಂಟ್ ದಾಖಲಿಸಿದಾಗ ಮತ್ತು 30 ದಿನಗಳ ನಂತರ ಅದೇ ಪ್ರವೇಶವನ್ನು ಮುಂದುವರಿಸಿದ ಮತ್ತು ನಂತರ ಸಾವನ್ನಪ್ಪಿದವರನ್ನು ಕೊವಿಡ್ -19 ಸಾವು ಎಂದು ಪರಿಗಣಿಸಲಾಗುತ್ತದೆ ಎಂದು ಮಾರ್ಗಸೂಚಿಗಳು ಹೇಳಿವೆ.

ಇದನ್ನೂ ಓದಿ: Coronavirus cases in India: ದೇಶದಲ್ಲಿ 31,923 ಹೊಸ ಕೊವಿಡ್ ಪ್ರಕರಣ, 282 ಮಂದಿ ಸಾವು