ಮೇ ತಿಂಗಳಲ್ಲಿ ಭಾರತದ ಸಿಂಹಗಳ ಗಣತಿ; ವಿಶ್ವ ವನ್ಯಜೀವಿ ದಿನದಂದು ಪ್ರಧಾನಿ ಮೋದಿ ಘೋಷಣೆ
ವಿಶ್ವ ವನ್ಯಜೀವಿ ದಿನದ ಅಂಗವಾಗಿ ಇಂದು ಗುಜರಾತ್ನ ಜುನಾಗಢ ಜಿಲ್ಲೆಯ ಸಸಾನ್ನಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ 7ನೇ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈ ವರ್ಷದ ಮೇ ತಿಂಗಳಲ್ಲಿ ಏಷ್ಯಾಟಿಕ್ ಸಿಂಹಗಳ ಗಣತಿ ನಡೆಸುವುದಾಗಿ ಘೋಷಿಸಿದ್ದಾರೆ. ಹಾಗೇ, ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಾನವ- ವನ್ಯಜೀವಿ ಸಂಘರ್ಷ ನಿರ್ವಹಣೆಗಾಗಿ SACON ಅನ್ನು ಸ್ಥಾಪಿಸುವುದಾಗಿಯೂ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಇದೇ ವೇಳೆ ಅವರು ನದಿ ಡಾಲ್ಫಿನ್ಗಳ ಕುರಿತು ಪುಸ್ತಕವನ್ನು ಕೂಡ ಬಿಡುಗಡೆ ಮಾಡಿದರು.

ಅಹಮದಾಬಾದ್ (ಮಾರ್ಚ್ 3): ಗುಜರಾತ್ನ ಗಿರ್ನಲ್ಲಿ ಇಂದು ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ವಹಿಸಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಸಂರಕ್ಷಣಾ ಪ್ರಯತ್ನಗಳನ್ನು ಸುಧಾರಿಸಲು ಹಲವು ಮಹತ್ವದ ನಿರ್ಧಾರಗಳು ಮತ್ತು ಸಂಶೋಧನೆಗಳನ್ನು ಘೋಷಿಸಿದರು. ವಿಶ್ವ ವನ್ಯಜೀವಿ ದಿನದಂದು ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ ಮೋದಿ, ಮೇ ತಿಂಗಳಲ್ಲಿ 16ನೇ ಏಷ್ಯಾಟಿಕ್ ಸಿಂಹಗಳ ಜನಸಂಖ್ಯಾ ಗಣತಿ ನಡೆಸಲಾಗುವುದು ಎಂದು ಘೋಷಿಸಿದ್ದಾರೆ.
ವಿಶ್ವ ವನ್ಯಜೀವಿ ದಿನಾಚರಣೆಯೊಂದಿಗೆ ಸೋಮವಾರ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ (NBWL) ಏಳನೇ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈ ಸಭೆಯಲ್ಲಿ ಈ ವರ್ಷದ ಮೇ ತಿಂಗಳಲ್ಲಿ 16ನೇ ಏಷ್ಯಾಟಿಕ್ ಸಿಂಹಗಳ ಜನಸಂಖ್ಯಾ ಗಣತಿನು ನಡೆಸಲಾಗುವುದು ಎಂದು ಘೋಷಿಸಿದ್ದಾರೆ.ಇದೇ ವೇಳೆ ಪ್ರಧಾನಿ ಮೋದಿ ಜುನಾಗಢದಲ್ಲಿ ರಾಷ್ಟ್ರೀಯ ಉಲ್ಲೇಖ ಕೇಂದ್ರ-ವನ್ಯಜೀವಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಹಾಗೇ, ಮೊದಲ ಬಾರಿಗೆ ನದಿ ಡಾಲ್ಫಿನ್ಗಳ ಕುರಿತು ಪುಸ್ತಕವನ್ನು ಬಿಡುಗಡೆಗೊಳಿಸಿದರು. ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣೆಗಾಗಿ ಶ್ರೇಷ್ಠತೆಯ ಕೇಂದ್ರ, SACON ಸ್ಥಾಪನೆಯನ್ನು ಕೂಡ ಮೋದಿ ಘೋಷಿಸಿದರು.
ಇದನ್ನೂ ಓದಿ: Photos: ಬೆಳ್ಳಂಬೆಳಗ್ಗೆ ಗಿರ್ ಅಭಯಾರಣ್ಯದಲ್ಲಿ ಪ್ರಧಾನಿ ಮೋದಿ ಸಫಾರಿ, ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದೇನೇನು?
ಇದಕ್ಕೂ ಮೊದಲು, ಪ್ರಧಾನಿ ಮೋದಿ ಗುಜರಾತ್ನ ಜುನಾಗಢ ಜಿಲ್ಲೆಯ ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಂಹ ಸಫಾರಿಯನ್ನು ಎಂಜಾಯ್ ಮಾಡಿದರು. ಅವರೊಂದಿಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಕೂಡ ಇದ್ದರು.
There have been significant deliberations and outcomes during the meeting of the National Board for Wildlife held in Gir today, which is also #WorldWildlifeDay!
This includes:
Laying the foundation stone of a National Referral Centre for Wildlife at Junagadh.
Announcement of… pic.twitter.com/nrp2T97W1r
— Narendra Modi (@narendramodi) March 3, 2025
ಗುಜರಾತ್ನಲ್ಲಿ ಮಾತ್ರ ಕಂಡುಬರುವ ಏಷ್ಯಾಟಿಕ್ ಸಿಂಹಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿರುವ ಪ್ರಾಜೆಕ್ಟ್ ಲಯನ್ಗಾಗಿ ಕೇಂದ್ರ ಸರ್ಕಾರವು 2,900 ಕೋಟಿ ರೂ.ಗಳಿಗೂ ಹೆಚ್ಚು ಅನುದಾನವನ್ನು ಅನುಮೋದನೆ ನೀಡಿದೆ. ಪ್ರಸ್ತುತ, ಗುಜರಾತ್ನ 9 ಜಿಲ್ಲೆಗಳ 53 ತಾಲೂಕುಗಳಲ್ಲಿ ಸುಮಾರು 30,000 ಚದರ ಕಿಲೋಮೀಟರ್ಗಳಲ್ಲಿ ಏಷ್ಯಾಟಿಕ್ ಸಿಂಹಗಳು ವಾಸಿಸುತ್ತಿವೆ. ಈ ರಾಷ್ಟ್ರೀಯ ಉಪಕ್ರಮದ ಭಾಗವಾಗಿ, ಜುನಾಗಢ ಜಿಲ್ಲೆಯ ನ್ಯೂ ಪಿಪಾಲ್ಯದಲ್ಲಿ 20.24 ಹೆಕ್ಟೇರ್ಗೂ ಹೆಚ್ಚು ಭೂಮಿಯಲ್ಲಿ ವನ್ಯಜೀವಿಗಳ ರಾಷ್ಟ್ರೀಯ ಉಲ್ಲೇಖ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ.
A memorable visit to Gir! Have a look at the highlights… pic.twitter.com/DTqzwlerTc
— Narendra Modi (@narendramodi) March 3, 2025
ಇದನ್ನೂ ಓದಿ: ಗಿರ್ನಲ್ಲಿ ಪ್ರಧಾನಿ ಮೋದಿಯ ಸಿಂಹ ಸಫಾರಿಯ ಕ್ಷಣಗಳ ವಿಡಿಯೋ ಇಲ್ಲಿದೆ
ಪ್ರತಿ 5 ವರ್ಷಗಳಿಗೊಮ್ಮೆ ಏಷ್ಯಾಟಿಕ್ ಸಿಂಹಗಳ ಜನಸಂಖ್ಯಾ ಅಂದಾಜನ್ನು ನಡೆಸಲಾಗುತ್ತದೆ. ಕೊನೆಯದಾಗಿ ಸಿಂಹಗಳ ಗಣತಿಯನ್ನು 2020ರಲ್ಲಿ ನಡೆಸಲಾಯಿತು.
This morning, on #WorldWildlifeDay, I went on a Safari in Gir, which, as we all know, is home to the majestic Asiatic Lion. Coming to Gir also brings back many memories of the work we collectively did when I was serving as Gujarat CM. In the last many years, collective efforts… pic.twitter.com/S8XMmn2zN7
— Narendra Modi (@narendramodi) March 3, 2025
ಇಂದಿನ ಸಭೆಯಲ್ಲಿ, ಪ್ರಧಾನಿ ಮೋದಿ ಭಾರತದಲ್ಲಿ ನಡೆಸಿದ ಮೊದಲ ನದಿ ಡಾಲ್ಫಿನ್ ಅಂದಾಜಿನ ವರದಿಯನ್ನು ಬಿಡುಗಡೆ ಮಾಡಿದರು. ಇದು ದೇಶದಲ್ಲಿ ಒಟ್ಟು 6,327 ಡಾಲ್ಫಿನ್ಗಳಿವೆ ಎಂದು ಅಂದಾಜಿಸಿದೆ. ಈ ಪ್ರಯತ್ನವು 8 ರಾಜ್ಯಗಳಾದ್ಯಂತ 28 ನದಿಗಳ ಸಮೀಕ್ಷೆಯನ್ನು ಒಳಗೊಂಡಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ