AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anjadip: ಭಾರತೀಯ ನೌಕಾಪಡೆಯ ಹೊಸ ಜಲಾಂತರ್ಗಾಮಿ ಹಡಗಿಗೆ ಕರ್ನಾಟಕ ದ್ವೀಪದ ಹೆಸರು

ಭಾರತೀಯ ನೌಕಾಪಡೆ ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ (ಜಿಆರ್‌ಎಸ್‌ಇ) ನಿರ್ಮಿಸಿದ ಜಲಾಂತರ್ಗಾಮಿ ವಿರೋಧಿ ಯುದ್ಧ ಹಡಗು ವಾಟರ್‌ಕ್ರಾಫ್ಟ್ ಹಡಗನ್ನು ಮಂಗಳವಾರ ಕಟ್ಟುಪಲ್ಲಿ ಬಂದರಿನ ಲಾರ್ಸನ್ ಮತ್ತು ಟೂಬ್ರೊದಲ್ಲಿ ಅನವರಣ ಮಾಡಲಾಯಿತು.

Anjadip: ಭಾರತೀಯ ನೌಕಾಪಡೆಯ ಹೊಸ ಜಲಾಂತರ್ಗಾಮಿ ಹಡಗಿಗೆ ಕರ್ನಾಟಕ ದ್ವೀಪದ ಹೆಸರು
ಜಲಾಂತರ್ಗಾಮಿ ವಿರೋಧಿ ಯುದ್ಧ ಹಡಗು ವಾಟರ್‌ಕ್ರಾಫ್ಟ್
ಅಕ್ಷಯ್​ ಪಲ್ಲಮಜಲು​​
|

Updated on: Jun 14, 2023 | 1:53 PM

Share

ಚೆನ್ನೈ: ಭಾರತೀಯ ನೌಕಾಪಡೆ ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ (ಜಿಆರ್‌ಎಸ್‌ಇ) ನಿರ್ಮಿಸಿದ ಜಲಾಂತರ್ಗಾಮಿ ವಿರೋಧಿ ಯುದ್ಧ ಹಡಗು ವಾಟರ್‌ಕ್ರಾಫ್ಟ್ ಹಡಗನ್ನು ಮಂಗಳವಾರ ಕಟ್ಟುಪಲ್ಲಿ ಬಂದರಿನ ಲಾರ್ಸನ್ ಮತ್ತು ಟೂಬ್ರೊದಲ್ಲಿ ಅನವರಣ ಮಾಡಲಾಯಿತು. ಇದಕ್ಕೆ ಕರ್ನಾಟಕದ ಅಂಜದೀಪ್  ದ್ವೀಪದ ಹೆಸರನ್ನು ಇಡಲಾಗಿದೆ, ಏಪ್ರಿಲ್ 2019ರಲ್ಲಿ ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್, ರಕ್ಷಣಾ ಸಚಿವಾಲಯದ ನಡುವೆ ನಡೆದ ಯೋಜನೆಯ ಒಪ್ಪಂದದ ಎಂಟು ಹಡಗುಗಳಲ್ಲಿ ಇದು ಮೂರನೆಯದು ಎಂದು ಹೇಳಲಾಗಿದೆ.

ಅದರ ಕಾರ್ಯತಂತ್ರದ ಪ್ರಕಾರ ಕಡಲ ಪ್ರಾಮುಖ್ಯತೆಯನ್ನು ಸೂಚಿಸುವ ಕರ್ನಾಟಕದ ಕಾರವಾರ ಬಂದರಿನ ಆಚೆ ಇರುವ ಅಂಜದೀಪ್ ದ್ವೀಪದ ಹೆಸರನ್ನು ಈ ಹಡಗಿಗೆ ಹೆಸರಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

GRSE ನಿರ್ಮಿಸಿದ ‘ಅರ್ನಾಲಾ’ ಹಡಗುಗಳು ಪ್ರಸ್ತುತ ನೌಕಾಪಡೆಯ ಜಲಾಂತರ್ಗಾಮಿ ವಿರೋಧಿ ವಾರ್‌ಫೇರ್ ಕಾರ್ವೆಟ್‌ಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ. ಕರಾವಳಿಯ ಸಮುದ್ರದಲ್ಲಿ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಳು, ಕಡಿಮೆ ತೀವ್ರತೆಯ ಕಡಲ ಕಾರ್ಯಾಚರಣೆಗಳು, ಇತರ ಮೇಲ್ಮೈ ಕಣ್ಗಾವಲುಗಳನ್ನು ಕೈಗೊಳ್ಳಲು ಈ ಹಡಗುಗಳನ್ನು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: INS Vagir: ಅತ್ಯಂತ ಕಡಿಮೆ ಸಮಯದಲ್ಲಿ ನಿರ್ಮಾಣಗೊಂಡ ಐಎನ್ಎಸ್ ವಗೀರ್ ಜಲಾಂತರ್ಗಾಮಿ, ಭಾರತೀಯ ನೌಕಾಪಡೆಗೆ ಸೇರ್ಪಡೆ

ಈ ಹಡಗುಗಳು ಶೇಕಡಾ 80ರಷ್ಟು ಸ್ವದೇಶೀಕರಣವನ್ನು ಹೊಂದಿರುತ್ತವೆ. ಸುಮಾರು 77 ಮೀಟರ್ ಉದ್ದವಿರುವ ಪ್ರತಿಯೊಂದು ಹಡಗು 900 ಟನ್‌ಗಳಷ್ಟು ಸ್ಥಳಾಂತರ ಶಕ್ತಿಯನ್ನು ಹೊಂದಿದ್ದು, ಗರಿಷ್ಠ 25 ಗಂಟೆಗಳ ವೇಗ ಮತ್ತು 1,800 ನಾಟಿಕಲ್ ಮೈಲುಗಳಷ್ಟು ಸಹಿಷ್ಣುತೆಯನ್ನು ಹೊಂದಿರುತ್ತದೆ.

ಇಂದು ಅಂಜದೀಪ್ ಹಡಗು ಬಿಡುಗಡೆ ಸಮಾರಂಭದಲ್ಲಿ ವೈಸ್ ಅಡ್ಮಿರಲ್ ಮತ್ತು ಕಮಾಂಡರ್ ಇನ್ ಚೀಫ್ ಆಫ್ ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್ ಆರ್ ಬಿ ಪಂಡಿತ್ ಉಪಸ್ಥಿತರಿದ್ದರು. ಒಪ್ಪಂದದ ಪ್ರಕಾರ, ನಾಲ್ಕು ಹಡಗುಗಳನ್ನು ಜಿಆರ್‌ಎಸ್‌ಇ, ಕೋಲ್ಕತ್ತಾ ನಿರ್ಮಿಸಿದರೆ ಉಳಿದ ನಾಲ್ಕು ಹಡಗುಗಳನ್ನು ಲಾರ್ಸನ್ ಮತ್ತು ಟೌಬ್ರೊ, ಶಿಪ್ ಬಿಲ್ಡಿಂಗ್, ಕಟ್ಟುಪಲ್ಲಿಗೆ ಉಪಗುತ್ತಿಗೆ ನೀಡಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ