AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ISRO: ಇಸ್ರೋದಿಂದ ಸಿಂಗಾಪುರದ 7 ಉಪಗ್ರಹಗಳ ಉಡಾವಣೆ ಯಶಸ್ವಿ

ಸಿಂಗಾಪುರದ ಏಳು ಉಪಗ್ರಹಗಳನ್ನು ಇಸ್ರೋ ಪಿಎಸ್​ಎಲ್‌ವಿ- ಸಿ56 ರಾಕೆಟ್ ಮೂಲಕ ಇಂದು ಬೆಳಿಗ್ಗೆ 6.30ಕ್ಕೆ ಆಂದ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಿದೆ.​

ISRO: ಇಸ್ರೋದಿಂದ ಸಿಂಗಾಪುರದ 7 ಉಪಗ್ರಹಗಳ ಉಡಾವಣೆ ಯಶಸ್ವಿ
ನಭಕ್ಕೆ ಹಾರಿದ 7 ಉಪಗ್ರಹಗಳು
Follow us
ವಿವೇಕ ಬಿರಾದಾರ
|

Updated on:Jul 30, 2023 | 7:47 AM

ಶ್ರೀಹರಿಕೋಟಾ ಜು.30: ಇತ್ತೀಚಿಗಷ್ಟೆ ಚಂದ್ರಯಾನ-3 (Chandrayaan-3) ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ವಿಶೇಷ ಸಾಧನೆ ಮಾಡಿತ್ತು. ಇದೀಗ ಇಸ್ರೋ ಸಿಂಗಾಪುರದ ಏಳು ಉಪಗ್ರಹಗಳನ್ನು (Seven Singaporean Satellites) ಪಿಎಸ್​ಎಲ್‌ವಿ- ಸಿ56 ರಾಕೆಟ್ ಮೂಲಕ ಇಂದು (ಜು.30) ಬೆಳಿಗ್ಗೆ 6.30ಕ್ಕೆ ಆಂದ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಿದೆ.

ನಭಕ್ಕೆ ಹಾರಿದ ಏಳು ಉಪಗ್ರಹಗಳಲ್ಲಿ ಇಸ್ರೇಲ್​​ ವಿಜ್ಞಾನಿಗಳು ಸಿದ್ಧಪಡಿಸಿರುವ ಡಿಎಸ್​​-ಸಿಂಥೆಟಿಕ್​ ಅಪೆರ್ಚರ್​ ಏರೋಸ್ಪೇಸ್​​ ಎಂಬ ಉಪಗ್ರಹ 360 ಕೇಜಿ ತೂಕವಿದ್ದು, ಇದು ಎಂತಹ ಹವಾಮಾನವಿದ್ದಾಗಲೂ ಚಿತ್ರಗಳನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ ಸಿಂಗಾಪುರ ರಕ್ಷಣಾ ಇಲಾಖೆ ತಯಾರಿಸಿರುವ ಮೂರು ಉಪಗ್ರಹಗಳು ನಭಕ್ಕೆ ಹಾರಿವೆ. ಇದರಲ್ಲಿ ಸ್ವಯಂಚಾಲಿತ ಕಾರ್ ಚಾಲನೆಗೆ ಸಹಾಯ ಒದಗಿಸುವ ಉಪಗ್ರಹಗವಿದೆ.

ಇದನ್ನುಓದಿ: ISRO Satellite Launch: ಚಂದ್ರಯಾನ 3ರ ಬಳಿಕ ಇಸ್ರೋದಿಂದ ಮತ್ತೊಂದು ಸಾಧನೆ, ಒಂದೇ ಬಾರಿಗೆ 6 ಉಪಗ್ರಹಗಳ ಉಡಾವಣೆ

ಇನ್ನು ಇಸ್ರೋದ ನ್ಯೂಸ್ಪೇಸ್ ಇಂಡಿಯಾ ಯೋಜನೆಯಡಿ ಈ ಉಪಗ್ರಹಗಳ ಉಡಾವಣೆಯಾಗಿದ್ದು, ಈ ಯೋಜನೆಯಡಿ ಖಾಸಗಿಯವರಿಗೂ ಉಪಗ್ರಹ ಉಡಾವಣೆಗೆ ಅವಕಾಶ ನೀಡಲಾಗಿದೆ. ವೆಲೊಕ್ಸ್​​-ಎಮ್, ಆರ್ಕೇಡ್​​ ಅಟ್ಮಾಸ್ಫಿಯರಿಕ್​ ಕಪ್ಲಿಂಗ್​ ಆಂಡ್​ ಡೈನಾಮಿಕ್ಸ್​ ಎಕ್ಸಪ್ಲೋರರ್​ (ARCADE), ಸ್ಕೂಬ್​-2, ಗೆಲೇಸಿಯ-2, ಒಆರ್​ಬಿ12-ಸ್ಟ್ರೈಡರ್, ನೂಲಯನ್​ ಎಂಬ ಹೆಸರಿನ ಉಪಗ್ರಹಗಳನ್ನು ಪಿಎಸ್​ಎಲ್‌ವಿ- ಸಿ56 ರಾಕೆಟ್ ಹೊತ್ತೊಯ್ದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:44 am, Sun, 30 July 23

ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು