AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಗಿ ಬಂದ ಚಿರತೆಯ ಕುತ್ತಿಗೆ ಹಿಡಿದು ಪ್ರಾಣ ಉಳಿಸಿಕೊಂಡ 13 ವರ್ಷದ ಬಾಲಕ

Madhya Pradesh boy saves his life from leopard attack: ಜಮೀನಿನ ಬಳಿ ಆಟ ಆಡಿಕೊಂಡಿದ್ದ 13 ವರ್ಷದ ಬಾಲಕನ ಮೇಲೆ ಚಿರತೆಯೊಂದು ದಾಳಿ ನಡೆಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಹೋಶಂಗಾಬಾದ್​ನ ಪಿಪರಿಯಾ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬಾಲಕ ತನ್ನ ಧೈರ್ಯ ಹಾಗೂ ಸಮಯಪ್ರಜ್ಞೆಯಿಂದ ಜೀವ ಉಳಿಸಿಕೊಂಡಿದ್ದಾನೆ.

ಎರಗಿ ಬಂದ ಚಿರತೆಯ ಕುತ್ತಿಗೆ ಹಿಡಿದು ಪ್ರಾಣ ಉಳಿಸಿಕೊಂಡ 13 ವರ್ಷದ ಬಾಲಕ
ಚಿತ್ರದಲ್ಲಿರುವುದು ಸತ್ಯಂ ಠಾಕೂರ್. ಚಿರತೆಯ ಫೋಟೋ ಸಾಂದರ್ಭಿಕ.Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 10, 2026 | 10:54 PM

Share

ಭೋಪಾಲ್, ಮೇ 10: ಅನಿರೀಕ್ಷಿತವಾಗಿ ಎರಗಿ ಬರುವ ಅಪಾಯಗಳನ್ನು ಎದುರಿಸಲು ಸಮಯಪ್ರಜ್ಞೆ, ಧೈರ್ಯ ಬೇಕು. ಮಧ್ಯಪ್ರದೇಶದ 13 ವರ್ಷದ ಬಾಲಕನೊಬ್ಬ ಸಮಯಪ್ರಜ್ಞೆ ಮತ್ತು ಧೈರ್ಯ ತೋರಿ ಚಿರತೆ ಬಾಯಿಗೆ (Leopard Attack) ಆಹಾರವಾಗುವುದರಿಂದ ತಪ್ಪಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಹೋಶಂಗಾಬಾದ್​ನ ಪಿಪರಿಯಾ ಅರಣ್ಯ ಪ್ರದೇಶಕ್ಕೆ ಸೇರಿದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. 8ನೇ ತರಗತಿಯ ಬಾಲಕ ಸತ್ಯಂ ಠಾಕೂರ್ ಈ ಸಾಹಸ ತೋರಿದವ.

ತನ್ನ ಮನೆಯ ಬಳಿ ಇರುವ ಜಮೀನಿನಲ್ಲಿ ಸತ್ಯಂ ಆಟವಾಡುತ್ತಿರುವಾಗ ಹತ್ತಿರದಲ್ಲೇ ಪೊದೆಯೊಂದರಲ್ಲಿ ಅಡಗಿದ್ದ ಚಿರತೆ ದಿಢೀರನೇ ಬಾಲಕನ ಮೇಲೆ ಎರಗಿದೆ. ಕೊಡಲಿ, ಮಚ್ಚು, ದೊಣ್ಣೆ ಇತ್ಯಾದಿ ಯಾವುದೇ ಆಯುಧ ಇಲ್ಲದ ಬಾಲಕ ಬರಿಗೈಯಲ್ಲೇ ಚಿರತೆಯನ್ನು ಎದುರಿಸಿದ್ದಾರೆ. ಎರಗಿ ಬಂದ ಆ ಕ್ರೂರ ಪ್ರಾಣಿಯ ಕತ್ತನ್ನು ಹಿಡಿದು ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ. ಚಿರತೆಯ ಉಗುರು ಪರಚಿ ಬಾಲಕನಿಗೆ ವಿವಿಧೆಡೆ ಗಾಯಗಳಾಗಿವೆ. ಆದರೆ, ಪ್ರಾಣ ಉಳಿದಿದೆ.

ಇದನ್ನೂ ಓದಿ: ಜಾಗತಿಕ ತೈಲ ಸಂಕಷ್ಟದ ನಡುವೆ ಇಂಧನ ಬಳಕೆ ಕಡಿತಕ್ಕೆ ಮೋದಿ ಕರೆ: ಚಿನ್ನ ಖರೀದಿ ತಪ್ಪಿಸುವಂತೆಯೂ ಮನವಿ

‘ನಾನು ಬಾವಿ ಸಮೀಪ ಆಡುತ್ತಿದ್ದಾಗ ದಿಢೀರನೇ ಚಿರತೆ ದಾಳಿ ಮಾಡಿತು. ನಾನು ಅದರ ಕತ್ತನ್ನು ಹಿಡಿದುಕೊಂಡೆ. ಅದು ನನ್ನ ಹೊಟ್ಟೆ ಮತ್ತು ಕಾಲನ್ನು ಪರಚಿತು. ನಾನು ಜೋರಾಗಿ ಕಿರುಚಿ ಅದನ್ನು ತಳ್ಳಿದೆ,’ ಎಂದು ಈ 13 ವರ್ಷದ ಬಾಲಕ ಸತ್ಯಂ ಠಾಕೂರ್ ಆ ಭೀಕರ ಘಟನೆಯ ವಿವರ ನೀಡುತ್ತಾನೆ.

ಸಂಜೆ 7ಕ್ಕೆ ಈ ಬಾಲಕನ ಕಿರುಚಾಟ ಕೇಳಿ ಆತನ ತಂದೆ ಮಹೇಂದ್ರ ಸಿಂಗ್ ಠಾಕೂರ್ ಹಾಗೂ ಇತರ ಕುಟುಂಬ ಸದಸ್ಯರು ಬಡಿಗೆಗಳನ್ನು ಹಿಡಿದುಕೊಂಡು ಸ್ಥಳಕ್ಕೆ ಧಾವಿಸುತ್ತಾರೆ. ಅಲ್ಲಿ ಬಾಲಕ ಆ ಚಿರತೆಯ ಕತ್ತು ಹಿಡಿಕೊಂಡು ತಡೆದು ನಿಲ್ಲಿಸಿರುತ್ತಾನೆ. ಜನರು ಕಿರಿಚುತ್ತಾ ಬಂದಾಗ ಚಿರತೆ ಹೆದರಿ ಕಾಡಿಗೆ ಓಡಿ ಹೋಗುತ್ತದೆ.

ಇದನ್ನೂ ಓದಿ: ಬ್ಲಾಸ್ಟ್​​ ಬೆದರಿಕೆ, ಜಿಲೆಟಿನ್​​ ಪತ್ತೆ; ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಖಾಕಿಗೆ ಟೆನ್ಷನ್​​ ತಂದ ಭದ್ರತೆ

ಬಾಲಕನ ಹೊಟ್ಟೆ, ಕೈ ಮತ್ತು ಕಾಲುಗಳಿಗೆ ಚಿರತೆ ಉಗುರು ಪರಿಚಿದ್ದರಿಂದ ಗಾಯಗಳಾಗಿವೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಡಳಿತದ ವತಿಯಿಂದ ಚಿಕಿತ್ಸೆಗೆ ತತ್​ಕ್ಷಣವೇ ಒಂದಷ್ಟು ಹಣಸಹಾಯ ಕೊಡಲಾಗಿದೆ.

ಅರಣ್ಯಾಧಿಕಾರಿಗಳು ಈ ಘಟನೆಯನ್ನು ಗಂಭೀರವೆಂದು ಬಣ್ಣಿಸಿದ್ದಾರೆ. ಅರಣ್ಯ ಪ್ರದೇಶಗಳಲ್ಲಿ ಚಿರತೆಗಳ ಓಡಾಟ ಸಾಮಾನ್ಯವೇ ಆಗಿರುತ್ತದೆ. ಆದರೆ, ಮಕ್ಕಳ ಮೇಲೆ ಅವುಗಳು ದಾಳಿ ಮಾಡುವುದು ಅಪರೂಪ ಎನ್ನುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮುಂಬೈಗೆ ಆರಂಭದಲ್ಲೇ ಮರ್ಮಾಘಾತ ನೀಡಿದ ಭುವಿ
ಮುಂಬೈಗೆ ಆರಂಭದಲ್ಲೇ ಮರ್ಮಾಘಾತ ನೀಡಿದ ಭುವಿ
ಸಚಿವ ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಕೆಶಿ
ಸಚಿವ ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಕೆಶಿ
‘ರುದ್ರಾಭಿಷೇಕಂ’ ಸಿನಿಮಾ ಬಗ್ಗೆ ನಟಿ ಪ್ರಿಯಾಂಕಾ ತಿಮ್ಮೇಶ್ ಮಾತು
‘ರುದ್ರಾಭಿಷೇಕಂ’ ಸಿನಿಮಾ ಬಗ್ಗೆ ನಟಿ ಪ್ರಿಯಾಂಕಾ ತಿಮ್ಮೇಶ್ ಮಾತು
ಮೋದಿ ಸಂಚರಿಸುವ ರಸ್ತೆ ಬಳಿ ಜಿಲೆಟಿನ್ ಕಡ್ಡಿ ಪತ್ತೆ: DIG ಹೇಳಿದ್ದಿಷ್ಟು
ಮೋದಿ ಸಂಚರಿಸುವ ರಸ್ತೆ ಬಳಿ ಜಿಲೆಟಿನ್ ಕಡ್ಡಿ ಪತ್ತೆ: DIG ಹೇಳಿದ್ದಿಷ್ಟು
ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ವಿಜಯ್​​
ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ವಿಜಯ್​​
ರವಿಶಂಕರ್ ಗುರೂಜಿ ಮಾತಿಗೆ ಪ್ರಧಾನಿ ಮೋದಿಗೂ ನಗು!
ರವಿಶಂಕರ್ ಗುರೂಜಿ ಮಾತಿಗೆ ಪ್ರಧಾನಿ ಮೋದಿಗೂ ನಗು!
ರವಿಶಂಕರ್ ಗುರೂಜಿಯ 100ನೇ ಹುಟ್ಟುಹಬ್ಬಕ್ಕೂ ಬರುತ್ತೇನೆ ಎಂದ ಪ್ರಧಾನಿ ಮೋದಿ
ರವಿಶಂಕರ್ ಗುರೂಜಿಯ 100ನೇ ಹುಟ್ಟುಹಬ್ಬಕ್ಕೂ ಬರುತ್ತೇನೆ ಎಂದ ಪ್ರಧಾನಿ ಮೋದಿ
ಮೋದಿ ಸಂಚರಿಸೋ ರಸ್ತೇಲಿ ಜಿಲೆಟಿನ್ ಕಡ್ಡಿಗಳು ಪತ್ತೆ: ಶಂಕಿತ ಪೊಲೀಸ್ ವಶಕ್ಕೆ
ಮೋದಿ ಸಂಚರಿಸೋ ರಸ್ತೇಲಿ ಜಿಲೆಟಿನ್ ಕಡ್ಡಿಗಳು ಪತ್ತೆ: ಶಂಕಿತ ಪೊಲೀಸ್ ವಶಕ್ಕೆ
ಮೋದಿಗೆ ಆರ್ಟ್​ ಆಫ್ ಲಿವಿಂಗ್ ಫೋಟೊ ಕೊಟ್ಟು ಸನ್ಮಾನಿಸಿದ ಗುರೂಜಿ
ಮೋದಿಗೆ ಆರ್ಟ್​ ಆಫ್ ಲಿವಿಂಗ್ ಫೋಟೊ ಕೊಟ್ಟು ಸನ್ಮಾನಿಸಿದ ಗುರೂಜಿ
ವಿಜಯ್ ಪ್ರಮಾಣವಚನ ಮುಗಿಸಿ ಹೊರಟ ತ್ರಿಶಾ ನೋಡಲು ಮುಗಿಬಿದ್ದ ಅಭಿಮಾನಿಗಳು
ವಿಜಯ್ ಪ್ರಮಾಣವಚನ ಮುಗಿಸಿ ಹೊರಟ ತ್ರಿಶಾ ನೋಡಲು ಮುಗಿಬಿದ್ದ ಅಭಿಮಾನಿಗಳು