Sign In

By signing in or creating an account, you agree with Associated Broadcasting Company's Terms & Conditions and Privacy Policy.

King of Spices: MDH ಗ್ರೂಪ್‌ ಮಾಲೀಕ ಮಹಾಶಯ ಧರ್ಮಪಾಲ್ ಗುಲಾಟಿ ನಿಧನ

ಭಾರತೀಯ ಮಸಾಲೆ ಇಂಡಸ್ಟ್ರಿಯ ಪಿತಾಮಹ ಎಂದೇ ಖ್ಯಾತಿ ಪಡೆದಿದ್ದ MDH ಗ್ರೂಪ್‌ ಮುಖ್ಯಸ್ಥ ಮಹಾಶಯ ಧರ್ಮಪಾಲ್ ಗುಲಾಟಿ(98) ಕೊನೆಯುಸಿರೆಳೆದಿದ್ದಾರೆ.

King of Spices: MDH ಗ್ರೂಪ್‌ ಮಾಲೀಕ ಮಹಾಶಯ ಧರ್ಮಪಾಲ್ ಗುಲಾಟಿ ನಿಧನ
MDH ಗ್ರೂಪ್‌ ಮುಖ್ಯಸ್ಥ ಮಹಾಶಯ ಧರ್ಮಪಾಲ್
Follow us
ಆಯೇಷಾ ಬಾನು
|

Updated on:Dec 04, 2020 | 6:49 AM

ದೆಹಲಿ: ಭಾರತೀಯ ಮಸಾಲೆ ಇಂಡಸ್ಟ್ರಿಯ ಪಿತಾಮಹ ಎಂದೇ ಖ್ಯಾತಿ ಪಡೆದಿದ್ದ MDH ಗ್ರೂಪ್‌ ಮುಖ್ಯಸ್ಥ ಮಹಾಶಯ ಧರ್ಮಪಾಲ್ ಗುಲಾಟಿ (98) ಕೊನೆಯುಸಿರೆಳೆದಿದ್ದಾರೆ. ಧರ್ಮಪಾಲ್ ನಿಧನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಂತಾಪ ಸೂಚಿಸಿದ್ದಾರೆ.

ಮಸಾಲೆ ಪದಾರ್ಥಗಳಲ್ಲಿ ಭಾರತ ಅತಿ ದೊಡ್ಡ ಹೆಸರು ಮಾಡಿದೆ. ಭಾರತದಲ್ಲಿ ಸಿಗುವ ಮಸಾಲೆಗಳು ಬೇರೆಲ್ಲೂ ಸಿಗುವುದಿಲ್ಲ. ಹೀಗಾಗಿ ಯೂರೋಪಿಯನ್ನರು ಸಹ ನಮ್ಮ ದೇಶದ ಮಸಾಲೆಗೆ ಮಾರು ಹೋಗಿದ್ದಾರೆ. ಇಂತಹ ಮಸಾಲೆ ಬ್ರಾಂಡ್ MDH ಮಾಲೀಕ ಮಹಾಶಯ ಧರ್ಮಪಾಲ್ ಗುಲಾಟಿ ಅವರು ಇಂದು ನಿಧನರಾಗಿದ್ದಾರೆ. ವರದಿಗಳ ಪ್ರಕಾರ, ಅವರು ಕಳೆದ ಮೂರು ವಾರಗಳಿಂದ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ 5:30 ಕ್ಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ದೇಶದಲ್ಲಿ ಮಸಾಲೆ ಪದಾರ್ಥಗಳಿಂದಲೇ ಖ್ಯಾತಿ ಪಡೆದಿದ್ದ ಮಹಾಶಯ: ‘ದಾದಾಜಿ’ ಮತ್ತು ‘ಮಹಾಶಯ’ ಎಂದು ಪ್ರೀತಿಯಿಂದ ಕರೆಯಲ್ಪಡುವ ಧರ್ಮಪಾಲ್ 1923 ರಲ್ಲಿ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಜನಿಸಿದರು. ಶಾಲೆಯಿಂದ ಹೊರಗುಳಿದ ಇವರು ತಮ್ಮ ಆರಂಭಿಕ ಜೀವನವನ್ನು ತಂದೆಯ ಜೊತೆ ಸೇರಿ ಮಸಾಲೆ ವ್ಯವಹಾರದಲ್ಲೇ ಕಳೆದಿದ್ದಾರೆ.

1947 ಭಾರತ-ಪಾಕಿಸ್ತಾನ ವಿಭಜನೆಯ ನಂತರ, ಅವರು ಭಾರತಕ್ಕೆ ಬಂದು ಅಮೃತಸರದ ನಿರಾಶ್ರಿತರ ಶಿಬಿರದಲ್ಲಿ ತಂಗಿದ್ದರು. ನಂತರ ಅವರು ದೆಹಲಿಯ ಕರೋಲ್ ಬಾಗ್‌ಗೆ ತೆರಳಿ ಅಲ್ಲಿ ಒಂದು ಅಂಗಡಿಯನ್ನು ತೆರೆದರು. ಬಳಿಕ 1959 ರಲ್ಲಿ MDH ಮಸಾಲೆ ಅಂಗಡಿಯನ್ನು ಬ್ರಾಂಡ್ ಆಗಿ ಪ್ರಾರಂಭಿಸಿದರು. ದೇಶದಲ್ಲಿ 2ನೇ ಅತಿದೊಡ್ಡ ಮಸಾಲೆ ಪದಾರ್ಥ ಉತ್ಪನ್ನಗಳನ್ನ ಉತ್ಪಾದಿಸೋ ಕಂಪನಿ ಅನ್ನೋ ಖ್ಯಾತಿ ಎಂಡಿಹೆಚ್​ಗೆ ಸಲ್ಲುವಂತೆ ಗ್ರೂಪ್​ನ ಅಧ್ಯಕ್ಷ ಧರ್ಮಪಾಲ್​ ಮಾಡಿದ್ದರು.

Mahashian Di Hatti Private Limited

Published On - 9:49 am, Thu, 3 December 20

ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ
ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ