AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Swamy Shraddananda: ಬೆಂಗಳೂರಿನಲ್ಲಿ ಶಕೀರಾ ಕೊಲೆ ಪ್ರಕರಣ; ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ 83 ವರ್ಷದ ಶ್ರದ್ಧಾನಂದ

Mercy petition: ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿ ಶಕೀರಾ ಹೆಸರಿನಲ್ಲಿರುವ 600 ಕೋಟಿ ರೂಪಾಯಿ ಆಸ್ತಿಯಿತ್ತು. ಪತ್ನಿ ಶಕೀರಾ ಹತ್ಯೆ ಮಾಡಿ ಮನೆಯ ಹಿಂಭಾಗವೇ ಶವವನ್ನು ಹೂತಿಟ್ಟಿದ್ದ. 2011 ರಲ್ಲಿ ಶ್ರದ್ಧಾನಂದನ ಮನವಿ ಮೇರೆಗೆ ಸ್ವಂತ ರಾಜ್ಯವಾದ ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯ ಜೈಲಿಗೆ ಶ್ರದ್ಧಾನಂದ ಸ್ಥಳಾಂತರವಾಗಿದ್ದ.

Swamy Shraddananda: ಬೆಂಗಳೂರಿನಲ್ಲಿ ಶಕೀರಾ ಕೊಲೆ ಪ್ರಕರಣ; ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ 83 ವರ್ಷದ ಶ್ರದ್ಧಾನಂದ
ಬೆಂಗಳೂರಿನಲ್ಲಿ ಶಕೀರಾ ಕೊಲೆ ಪ್ರಕರಣ; ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ 83 ವರ್ಷದ ಪ್ರಧಾನ ಅಪರಾಧಿ
TV9 Web
| Updated By: ಸಾಧು ಶ್ರೀನಾಥ್​|

Updated on:Aug 03, 2021 | 12:24 PM

Share

ಮಧ್ಯ ಪ್ರದೇಶ: ರಾಜಧಾನಿ ಬೆಂಗಳೂರಿನಲ್ಲಿ 1991 ರಲ್ಲಿ ನಡೆದಿದ್ದ ಶಕೀರಾ ಕೊಲೆ ಪ್ರಕರಣದ ಪ್ರಧಾನ ಅಪರಾಧಿ ಶ್ರದ್ಧಾನಂದ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾನೆ. ಪ್ರಕರಣದಲ್ಲಿ ಶ್ರದ್ಧಾನಂದ ಬದುಕಿರುವವರೆಗೂ ಜೈಲಿನಲ್ಲಿರುವಂತೆ 2008ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಪ್ರಸ್ತುತ ಶ್ರದ್ಧಾನಂದ ಮಧ್ಯ ಪ್ರದೇಶದ ಸಾಗರ್ ಜಿಲ್ಲಾ ಸೆಂಟ್ರಲ್ ಜೈಲಿನಲ್ಲಿದ್ದಾನೆ.

ಜೈಲಿನಲ್ಲಿ ಒಳ್ಳೆಯ ನಡತೆ ತೋರಿದ ಕಾರಣಕ್ಕಾಗಿ ಬಿಡುಗಡೆ ಕೋರಿ ಶ್ರದ್ಧಾನಂದ ಅರ್ಜಿ ಸಲ್ಲಿಸಿದ್ದಾನೆ. ಕಳೆದ 27 ವರ್ಷಗಳಿಂದ ಜೈಲಿನಲ್ಲಿರುವ ಸ್ವಾಮಿ ಶ್ರದ್ಧಾನಂದ ಅಲಿಯಾಸ್ ಮುರುಳಿ ಮನೋಹರ್ ಮಿಶ್ರಾಗೆ (Swamy Shraddananda Alias Murali Manohar Mishra) ಈಗ 83 ವರ್ಷ ವಯಸ್ಸು.

ಶ್ರದ್ಧಾನಂದ, ಮೈಸೂರಿನ ಮಾಜಿ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ (grand daughter of Sir Mirza Ismail) ಮೊಮ್ಮಗಳು ಶಕೀರಾ ಕಲೀಲಿ (Shakereh Khaleeli) ವಿವಾಹವಾಗಿದ್ದ. ಸಾಗರ್ ಜಿಲ್ಲಾ ನ್ಯಾಯಾಧೀಶ ದೇವ್ ನಾರಾಯಣ್ ಸಿಂಗ್ ಜೈಲಿಗೆ ಭೇಟಿ ನೀಡಿದಾಗ ರಾಷ್ಟ್ರಪತಿಯಿಂದ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಲು ಶ್ರದ್ಧಾನಂದ ನಿರ್ಧರಿಸಿದ್ದಾನೆ‌. ಪತ್ನಿ ಶಕೀರಾ ಹೆಸರಿನಲ್ಲಿದ್ದ 600 ಕೋಟಿ ರೂ ಆಸ್ತಿಗಾಗಿ ಆಕೆಯನ್ನು ಶ್ರದ್ಧಾನಂದ ಹತ್ಯೆ ಮಾಡಿದ್ದ.

ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿ ಶಕೀರಾ ಹೆಸರಿನಲ್ಲಿರುವ 600 ಕೋಟಿ ರೂಪಾಯಿ ಆಸ್ತಿಯಿತ್ತು. ಪತ್ನಿ ಶಕೀರಾ ಹತ್ಯೆ ಮಾಡಿ ಮನೆಯ ಹಿಂಭಾಗವೇ ಶವವನ್ನು ಹೂತಿಟ್ಟಿದ್ದ. 2011 ರಲ್ಲಿ ಶ್ರದ್ಧಾನಂದನ ಮನವಿ ಮೇರೆಗೆ ಸ್ವಂತ ರಾಜ್ಯವಾದ ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯ ಜೈಲಿಗೆ ಶ್ರದ್ಧಾನಂದ ಸ್ಥಳಾಂತರವಾಗಿದ್ದ.

Also Read: ಗಲ್ಲು ಗುಲ್ಲು ಇನ್ನೂ ಜೀವಂತ.. ನಿರ್ಭಯಾ ಹಂತಕರಿಗೆ ಸದ್ಯಕ್ಕೆ ಗಲ್ಲು ಶಿಕ್ಷೆ ಜಾರಿ ಇಲ್ಲ ಕೊನೆಗೂ ಫಲಿಸಿತು ನಿರ್ಭಯಾ ತಾಯಿಯ ನಿರಂತರ ಹೋರಾಟ!

(Mercy petition: 1991 shakira murder case in bangalore shraddhanand mercy plea by president)

Published On - 11:09 am, Tue, 3 August 21

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?