AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾದ ನಂದನ್ ಕಾನನ್ ಎಕ್ಸ್‌ಪ್ರೆಸ್‌ನಲ್ಲಿ ದುಷ್ಕರ್ಮಿಗಳಿಂದ ಗುಂಡಿನ ದಾಳಿ; ಕಿಟಕಿಗಳಿಗೆ ಹಾನಿ

ಒಡಿಶಾದ ನಂದನ್‌ ಕಾನನ್ ಎಕ್ಸ್‌ಪ್ರೆಸ್‌ನಲ್ಲಿ ಕಿಡಿಗೇಡಿಗಳು ಗುಂಡು ಹಾರಿಸಿದ್ದಾರೆ. ಇದರಿಂದ ರೈಲಿನ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ. ಭದ್ರಕ್ ಪೊಲೀಸರು ಮತ್ತು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಈ ಘಟನೆಯ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಒಡಿಶಾದ ನಂದನ್ ಕಾನನ್ ಎಕ್ಸ್‌ಪ್ರೆಸ್‌ನಲ್ಲಿ ದುಷ್ಕರ್ಮಿಗಳಿಂದ ಗುಂಡಿನ ದಾಳಿ; ಕಿಟಕಿಗಳಿಗೆ ಹಾನಿ
ಒಡಿಶಾದ ನಂದನ್ ಕಾನನ್ ಎಕ್ಸ್‌ಪ್ರೆಸ್‌ನಲ್ಲಿ ದುಷ್ಕರ್ಮಿಗಳಿಂದ ಗುಂಡಿನ ದಾಳಿ
ಸುಷ್ಮಾ ಚಕ್ರೆ
|

Updated on: Nov 05, 2024 | 7:03 PM

Share

ಪುರಿ: ಒಡಿಶಾದ ಪುರಿ-ನವದೆಹಲಿ ನಂದನ್ ಕಾನನ್ ಎಕ್ಸ್ ಪ್ರೆಸ್ ನಲ್ಲಿ ಇಂದು ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಲೋಹದ ವಸ್ತುಗಳನ್ನು ಎಸೆದಿದ್ದಾರೆ. ಒಡಿಶಾದ ಭದ್ರಕ್ ರೈಲು ನಿಲ್ದಾಣದ ಮೂಲಕ ರೈಲು ಹಾದು ಹೋಗುತ್ತಿದ್ದಾಗ ಇಂದು ಬೆಳಗ್ಗೆ 9ರಿಂದ 9.30ರ ನಡುವೆ ಈ ಘಟನೆ ನಡೆದಿದೆ. ”ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು GRP ಮತ್ತು RPF ರೈಲನ್ನು ಪುರಿಗೆ ಬೆಂಗಾವಲಾಗಿ ನೀಡಲಾಗಿದೆ. ಆರ್‌ಪಿಎಫ್, ಪೊಲೀಸರು ಸೇರಿದಂತೆ 4 ತಂಡಗಳು ತನಿಖೆಯಲ್ಲಿ ತೊಡಗಿವೆ” ಎಂದು ಪೊಲೀಸರು ತಿಳಿಸಿದ್ದಾರೆ.

ನಂದನ್‌ ಕಾನನ್ ಎಕ್ಸ್‌ಪ್ರೆಸ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು, ರೈಲು ಸಿಬ್ಬಂದಿ ಮೆಮೊ ನೀಡಿದ ನಂತರ ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವರದಿಯ ಪ್ರಕಾರ, ಯಾವುದೇ ಗಾಯಗಳು ವರದಿಯಾಗಿಲ್ಲ. 12816 ನಂದನ್‌ ಕಾನನ್ ಎಕ್ಸ್‌ಪ್ರೆಸ್‌ನಲ್ಲಿ ಬೆಳಿಗ್ಗೆ 9.30ರ ಸುಮಾರಿಗೆ ಭದ್ರಕ್ ಮತ್ತು ಬೌದ್‌ಪುರ್ ವಿಭಾಗಗಳ ನಡುವೆ ರೈಲು ಪ್ರಯಾಣಿಸುತ್ತಿದ್ದಾಗ ಎರಡು ಬುಲೆಟ್‌ಗಳು ಕೋಚ್‌ನ ಶೌಚಾಲಯದ ಕಿಟಕಿಯ ಹಲಗೆಗೆ ಬಡಿದಿವೆ. ಗುಂಡಿನ ದಾಳಿಗೆ ಕಾರಣವೇನು ಎಂಬುದನ್ನು ತಿಳಿಯಲು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದ ಸಿಕರ್‌ನಲ್ಲಿ ಭೀಕರ ಬಸ್ ಅಪಘಾತ; 12 ಜನ ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

ರೈಲಿನ ಸಿಬ್ಬಂದಿ ತಕ್ಷಣ ಚಾಲಕ ಮತ್ತು ಹಿರಿಯ ರೈಲ್ವೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. “ರೈಲು ಭದ್ರಕ್ ನಿಲ್ದಾಣದ ದಕ್ಷಿಣ ಕ್ಯಾಬಿನ್‌ನಿಂದ ಹಿಂದೆ ಸರಿದ ನಂತರ ಟ್ರಾಫಿಕ್ ಗೇಟ್‌ನಲ್ಲಿ ಸಿಗ್ನಲ್ ಬದಲಾಯಿಸುವಾಗ ದೊಡ್ಡ ಶಬ್ದ ಮತ್ತು ಕೋಚ್‌ಗೆ ಏನಾದರೂ ಬಡಿದ ಶಬ್ದವನ್ನು ನಾನು ಮೊದಲು ಕೇಳಿದೆ. ಇದು ರೈಲಿನ ಮೇಲೆ ಕಲ್ಲು ತೂರಾಟದ ಕಾರಣ ಎಂದು ನಾನು ಭಾವಿಸಿದೆವು. ಆದರೆ, ನಾನು ಬಾಗಿಲಿನ ಹತ್ತಿರ ಬಂದಾಗ ಒಬ್ಬ ವ್ಯಕ್ತಿ ಪಿಸ್ತೂಲ್‌ ಹಿಡಿದಿರುವುದನ್ನು ನೋಡಿದೆ” ಎಂದು ರೈಲಿನಲ್ಲಿದ್ದ ಸಿಬ್ಬಂದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ