ಪರಿಚಯವೂ ಇಲ್ಲ, ದ್ವೇಷವೂ ಇಲ್ಲ ಆದ್ರೂ 6 ಅಪ್ರಾಪ್ತ ಬಾಲಕರು ಯುವಕನನ್ನು ಕೊಂದಿದ್ದೇಕೆ?
ಆ ಯುವಕ ಯಾರೆಂಬುದೇ ಗೊತ್ತಿಲ್ಲ, ಯಾವುದೇ ಮನಸ್ತಾಪವಿಲ್ಲ, ದ್ವೇಷವೂ ಇಲ್ಲ ಆದರೂ 6 ಅಪ್ರಾಪ್ತ ಬಾಲಕರು ಆತನನ್ನು ಕೊಂದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈಶಾನ್ಯ ದೆಹಲಿ ಭಜನ್ಪುರ್ ಪ್ರದೇಶದ ಸುಭಾಷ್ ಮೊಹಲ್ಲಾದಲ್ಲಿ ಶುಕ್ರವಾರ ರಾತ್ರಿ 28 ವರ್ಷದ ಯುವಕನನ್ನು ಕೊಲೆ(Murder) ಮಾಡಲಾಗಿದೆ.

ನವದೆಹಲಿ, ಏಪ್ರಿಲ್ 27: ಆ ಯುವಕ ಯಾರೆಂಬುದೇ ಗೊತ್ತಿಲ್ಲ, ಯಾವುದೇ ಮನಸ್ತಾಪವಿಲ್ಲ, ದ್ವೇಷವೂ ಇಲ್ಲ ಆದರೂ 6 ಅಪ್ರಾಪ್ತ ಬಾಲಕರು ಆತನನ್ನು ಕೊಂದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈಶಾನ್ಯ ದೆಹಲಿ ಭಜನ್ಪುರ್ ಪ್ರದೇಶದ ಸುಭಾಷ್ ಮೊಹಲ್ಲಾದಲ್ಲಿ ಶುಕ್ರವಾರ ರಾತ್ರಿ 28 ವರ್ಷದ ಯುವಕನನ್ನು ಕೊಲೆ(Murder) ಮಾಡಲಾಗಿದೆ.
ಮೃತ ಯುವಕನನ್ನು ಶಕೀರ್ ಎಂದು ಗುರುತಿಸಲಾಗಿದೆ. ಮೃತರ ತಂದೆಯ ಹೆಸರು ಶಹಜಾದ್. ಕೆಲವರು ಶಕೀರ್ನನ್ನು ಕ್ರೂರವಾಗಿ ಇರಿದು ಕೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಪೊಲೀಸರು ಈ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳು ಅಪ್ರಾಪ್ತ ವಯಸ್ಕರು. ಆರೋಪಿಯ ವಯಸ್ಸು 13 ರಿಂದ 15 ವರ್ಷ.
ಈ ಕೊಲೆಗೆ ಆರೋಪಿಗಳು ನೀಡಿರುವ ಕಾರಣ ತುಂಬಾ ಆಘಾತಕಾರಿಯಾಗಿದೆ. ಅಪರಾಧ ಜಗತ್ತಿನಲ್ಲಿ ಹೆಸರು ಗಳಿಸಲು ಬಯಸಿರುವುದಾಗಿ ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಅದಕ್ಕಾಗಿಯೇ ಅವನು ಈ ಘೋರ ಮತ್ತು ಅಸಹ್ಯಕರ ಅಪರಾಧವನ್ನು ಮಾಡಿದ್ದಾರೆ.
ಪೊಲೀಸರ ಪ್ರಕಾರ, ಶುಕ್ರವಾರ ರಾತ್ರಿ 9.31 ರ ಸುಮಾರಿಗೆ, ಸುಭಾಷ್ ಮೊಹಲ್ಲಾದಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಬಿದ್ದಿರುವ ಬಗ್ಗೆ ಮಾಹಿತಿ ಸಿಕ್ಕಿತು. ಆದರೆ, ಪೊಲೀಸರು ಸ್ಥಳಕ್ಕೆ ತಲುಪುವ ಮೊದಲೇ ಸ್ಥಳೀಯ ಜನರು ಶಕೀರ್ನನ್ನು ಜಿಟಿಬಿ ಆಸ್ಪತ್ರೆಗೆ ಕರೆದೊಯ್ದರು. ಚಿಕಿತ್ಸೆಯ ಸಮಯದಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಜಿಟಿಬಿ ಆಸ್ಪತ್ರೆಯ ವೈದ್ಯರು ಹೇಳಿದ್ದರು, ಶಕೀರ್ ಘೋಂಡಾದ ಸುಭಾಷ್ ಮೊಹಲ್ಲಾ ನಿವಾಸಿಯಾಗಿದ್ದರು.
ಮೃತರು ಡೊನ್ನಾ ಮತ್ತು ಪೇಪರ್ ಪ್ಲೇಟ್ಗಳನ್ನು ತಯಾರಿಸುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಷಯದಲ್ಲಿ ಪೊಲೀಸರು ತಕ್ಷಣ ಕ್ರಮ ಕೈಗೊಂಡರು. ಅಪರಾಧ ತಂಡ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ ತಂಡಗಳು ಅಪರಾಧ ಸ್ಥಳಕ್ಕೆ ತಲುಪಿ ಸಂಪೂರ್ಣ ಪರಿಶೀಲನೆ ನಡೆಸಿದವು. ಪೊಲೀಸರು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿದರು.
ಮತ್ತಷ್ಟು ಓದಿ: ಓಂ ಪ್ರಕಾಶ್ ಕೊಲೆ: ಪತಿಯನ್ನು 8-10 ಬಾರಿ ಇರಿದು ಪತ್ನಿ ಹತ್ಯೆ ಮಾಡಲು ಕಾರಣವೇನು? ಇಲ್ಲಿದೆ ಅಸಲಿ ಸತ್ಯ
ಪ್ರಕರಣದ ತನಿಖೆಯ ಸಮಯದಲ್ಲಿ, ಪೊಲೀಸರು 6 ಅಪ್ರಾಪ್ತ ವಯಸ್ಕರನ್ನು ಬಂಧಿಸಿದರು. ಪೊಲೀಸ್ ವಿಚಾರಣೆಯ ಸಮಯದಲ್ಲಿ, ಅಪ್ರಾಪ್ತ ವಯಸ್ಕರು ಅಪರಾಧ ಜಗತ್ತಿನಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಈ ಕೊಲೆ ಮಾಡಿದ್ದಾರೆ, ಅಪ್ರಾಪ್ತ ವಯಸ್ಕರು ನೀಡಿದ ಮಾಹಿತಿಯ ಆಧಾರದ ಮೇಲೆ, ಕೊಲೆಗೆ ಬಳಸಲಾದ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ