AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಛತ್ತೀಸ್​​ಗಡ ಕಾಂಗ್ರೆಸ್​​ನಲ್ಲಿ ಬಿಕ್ಕಟ್ಟು: ನಾಯಕತ್ವ ಬದಲಾವಣೆಯ ಮಾತುಕತೆ ಇಲ್ಲ ಎಂದ ಪಿಎಲ್ ಪುನಿಯಾ

Chhattisgarh: 2018 ರ ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಹುಲ್ ಗಾಂಧಿ ಅವರು ಸಿಎಂ ಅಭ್ಯರ್ಥಿಗಳಾದ ಬಘೇಲ್ ಮತ್ತು ಸಿಂಗ್ ದಿಯೊ ಅವರಿಗೆ ಈ ಹುದ್ದೆಯನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದರು. ಬಘೇಲ್ ಅವರು ಮೊದಲ ಎರಡೂ ವರ್ಷ ಆಡಳಿತ ನಡೆಸಬೇಕೆಂದು ಹೈಕಮಾಂಡ್ ಹೇಳಿತ್ತು

ಛತ್ತೀಸ್​​ಗಡ ಕಾಂಗ್ರೆಸ್​​ನಲ್ಲಿ ಬಿಕ್ಕಟ್ಟು: ನಾಯಕತ್ವ ಬದಲಾವಣೆಯ ಮಾತುಕತೆ ಇಲ್ಲ ಎಂದ ಪಿಎಲ್ ಪುನಿಯಾ
ಭೂಪೇಶ್ ಬಘೇಲ್ -ಟಿ ಎಸ್ ಸಿಂಗ್ ದಿಯೊ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Aug 24, 2021 | 3:40 PM

Share

ದೆಹಲಿ:  ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಕ್ಷದ ಛತ್ತೀಸ್​​ಗಡ ಉಸ್ತುವಾರಿ ಪಿಎಲ್ ಪುನಿಯಾ ಅವರು ಛತ್ತೀಸ್​​ಗಡದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.  ಮಂಗಳವಾರ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಆರೋಗ್ಯ ಸಚಿವ ಟಿಎಸ್ ಸಿಂಗ್ ದಿಯೊ ಅವರು ದೆಹಲಿಯಲ್ಲಿ  ರಾಹುಲ್ ಗಾಂಧಿ  ಅವರನ್ನು ಭೇಟಿಯಾಗಿದ್ದು ಈ ವೇಳೆ  ಪುನಿಯಾ ಹಾಜರಿದ್ದರು. ಛತ್ತೀಸ್‌ಗಡದಲ್ಲಿ ಜಾರಿಯಾಗುತ್ತಿರುವ ಹಲವಾರು ಯೋಜನೆಗಳು ಮತ್ತು ಯೋಜನೆಗಳ ಕುರಿತು ರಾಹುಲ್  ಗಾಂಧಿಯವರೊಂದಿಗೆ ವ್ಯಾಪಕ ಚರ್ಚೆಗಳನ್ನು ನಡೆಸಲಾಗಿದೆ ಎಂದು ಸಭೆಯ ನಂತರ ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

ಇವರಿಬ್ಬರ ನಡುವೆ ಹೆಚ್ಚುತ್ತಿರುವ ಬಿಕ್ಕಟ್ಟನ್ನು  ಬಗೆಹರಿಸುವ ನಿಟ್ಟಿನಲ್ಲಿ ರಾಹುಲ್  ಗಾಂಧಿ ರಾಜ್ಯದ ಇಬ್ಬರು ಉನ್ನತ ನಾಯಕರನ್ನು ಭೇಟಿಯಾಗಿದ್ದಾರೆ. ಪುನಿಯಾ ಜತೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಕೂಡ ಗಾಂಧಿ ಅವರ ನಿವಾಸದಲ್ಲಿ ಕರೆದಿದ್ದ ಸಭೆಯಲ್ಲಿ ಹಾಜರಿದ್ದರು.

ಜೂನ್ ನಲ್ಲಿ ಬಘೇಲ್  ಸರ್ಕಾರವು ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿತು. ಸಿಂಗ್ ದಿಯೊ ಅವರು ರಾಜ್ಯದಲ್ಲಿನ ಆಡಳಿತಕ್ಕೆ ಸಂಬಂಧಿಸಿದ ಹಲವು ಇತರ ವಿಷಯಗಳ ಜತೆಗೆ ಮುಖ್ಯಮಂತ್ರಿ ಹುದ್ದೆಯ ಪರ್ಯಾಯ ಕ್ರಮದ ಬಗ್ಗೆಯೂ ಪ್ರಸ್ತಾಪಿಸಬಹುದು ಎಂದು ಬಲ್ಲಮುೂಲಗಳು ರಾಹುಲ್  ಭೇಟಿ ಮುನ್ನ ವರದಿ ಮಾಡಿದ್ದವು.

2018 ರ ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಹುಲ್ ಗಾಂಧಿ ಅವರು ಸಿಎಂ ಅಭ್ಯರ್ಥಿಗಳಾದ ಬಘೇಲ್ ಮತ್ತು ಸಿಂಗ್ ದಿಯೊ ಅವರಿಗೆ ಈ ಹುದ್ದೆಯನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದರು. ಬಘೇಲ್ ಅವರು ಮೊದಲ ಎರಡೂ ವರ್ಷ ಆಡಳಿತ ನಡೆಸಬೇಕೆಂದು ಹೈಕಮಾಂಡ್ ಹೇಳಿತ್ತು. ಆದಾಗ್ಯೂ, ಬಘೇಲ್ ಪದೇ ಪದೇ ಅಂತಹ ಯಾವುದೇ ಒಪ್ಪಂದವನ್ನು ನಿರಾಕರಿಸಿದ್ದಾರೆ. ಕಳೆದ ತಿಂಗಳು, ಅವರು ಸಿಎಂಗಳನ್ನು ಪರ್ಯಾಯ ಕ್ರಮದಲ್ಲಿ ಬದಲಿಸುವುದು ಸಮ್ಮಿಶ್ರ ಸರ್ಕಾರಗಳ ಲಕ್ಷಣವಾಗಿದೆ, ಆದರೆ ಛತ್ತೀಸ್‌ಗಡದಲ್ಲಿ ಕಾಂಗ್ರೆಸ್‌ಗೆ ಮೂರನೇ ನಾಲ್ಕು ಬಹುಮತವಿದೆ ಎಂದಿದ್ದರು.

ಸೋಮವಾರ ಸಂಜೆ ದೆಹಲಿಗೆ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬಘೇಲ್ ರಾಜಧಾನಿಯಲ್ಲಿನ ಸಭೆಗಳ ಕಾರ್ಯಸೂಚಿಯನ್ನು ಬಹಿರಂಗಪಡಿಸಲಿಲ್ಲ. “ಬಹಳ ಸಮಯದ ನಂತರ, ನಾನು ದೆಹಲಿಗೆ ಹೋಗುತ್ತಿದ್ದೇನೆ. ರಾಹುಲ್ ಗಾಂಧಿ ಅವರೊಂದಿಗಿನ ಸಭೆಗಾಗಿ ಹೋಗುತ್ತಿದ್ದೇನೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮತ್ತು ರಾಜ್ಯದ ಉಸ್ತುವಾರಿ ಪಿ ಎಲ್ ಪುನಿಯಾ ಅವರೊಂದಿಗೂ ಸಭೆ ನಡೆಯಲಿದೆ ಎಂದು ಬಘೇಲ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿತ್ತು.  ಗಾಂಧಿಯವರನ್ನು ಭೇಟಿಯಾದಾಗ ಸಿಂಗ್ ದಿಯೊ ಹಾಜರಿರುತ್ತಾರೆಯೇ ಎಂಬ ಪ್ರಶ್ನೆಗೆ, “ರಾಹುಲ್ ಗಾಂಧಿಯವರನ್ನು ಮಾತ್ರ ಭೇಟಿ ಮಾಡುವ ಮಾಹಿತಿ ನನ್ನ ಬಳಿ ಇದೆ ಎಂದಿದ್ದಾರೆ.

ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗುತ್ತೀರಾ ಎಂದು ಕೇಳಿದಾಗ, ಈಗಾಗಲೇ ರಾಜಧಾನಿಯಲ್ಲಿರುವ ಸಿಂಗ್ ದಿಯೊ ಇದು ತನಗೆ ತಿಳಿದಿಲ್ಲ. ಪುನಿಯಾ ಅವರ ಮಾತಿಗಾಗಿ ಕಾಯುತ್ತಿದ್ದೇನೆ. “ಪುನಿಯಾ ಜೀ ಇದನ್ನು ಒಪ್ಪಿಸಿದ ವ್ಯಕ್ತಿ. ಅವರು ಹೈಕಮಾಂಡ್ ಸಂಪರ್ಕದಲ್ಲಿದ್ದಾರೆ. ನಾವು ಅವರ ಸಂದೇಶಕ್ಕಾಗಿ ಕಾಯುತ್ತಿದ್ದೇವೆ. ನಾನು ದೆಹಲಿಯಲ್ಲಿದ್ದೇನೆ ಎಂದು ನಾನು ಪುನಿಯಾ ಜಿಗೆ ತಿಳಿಸಿದ್ದೇನೆ ಮತ್ತು ಬೆಳಿಗ್ಗೆ (ಸಭೆಯ ಬಗ್ಗೆ) ನಮಗೆ ಹೇಳಲಾಗುವುದು ಎಂದು ನಾನು ಭಾವಿಸುತ್ತೇನೆ, ”ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಬಘೇಲ್ ಅವರ ನಿಕಟ ಮೂಲಗಳು ಈಗ ಸಿಎಂ ಬದಲಾವಣೆಯು ಸರ್ಕಾರವನ್ನು ಅಸ್ಥಿರಗೊಳಿಸುತ್ತದೆ ಮತ್ತು “ಹಾನಿಕಾರಕ” ಎಂದು ಹೇಳಿವೆ. ಉತ್ತರಪ್ರದೇಶ ಮತ್ತು ಪಂಜಾಬ್‌ನಂತಹ ನಿರ್ಣಾಯಕ ರಾಜ್ಯಗಳಲ್ಲಿ ಮುಂದಿನ ಆರು ತಿಂಗಳಲ್ಲಿ ಚುನಾವಣೆ ಬಂದಾಗ ಕಾಂಗ್ರೆಸ್ ತನ್ನ ಕೆಲವು ಸ್ಥಿರ ಸರ್ಕಾರಗಳಲ್ಲಿ ಒಂದನ್ನು ನಿಭಾಯಿಸಲು ಅಸಮರ್ಥವಾಗಿದೆ ಎಂದು ಮೂಲಗಳು ಹೇಳಿವೆ.

ಬಘೇಲ್ ಮತ್ತು ಸಿಂಗ್ ದಿಯೊ ನಡುವಿನ ಭಿನ್ನಾಭಿಪ್ರಾಯವು ಛತ್ತೀಸ್‌ಗಡಲ್ಲಿ ಬಹಿರಂಗವಾಗಿಯೇ ನಡೆಯುತ್ತಿದೆ. ಕಳೆದ ತಿಂಗಳು, ಕಾಂಗ್ರೆಸ್ ಶಾಸಕ ರಾಮಾನುಜ್‌ಗಂಜ್ ಶಾಸಕ ಬೃಹಸ್ಪತಿ ಸಿಂಗ್ ಅವರು ಬಘೇಲ್ ಪರವಾಗಿ ಹೇಳಿಕೆ ನೀಡಿದ್ದಕ್ಕಾಗಿ ಎಂದು ಆರೋಗ್ಯ ಖಾತೆಯನ್ನು ಹೊಂದಿರುವ ಸಿಂಗ್ ದಿಯೊ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಆರೋಪಿಸಿದ್ದರು. ಸಿಂಗ್ ದಿಯೊ ಅವರು ಅಸೆಂಬ್ಲಿಯಿಂದ ಹೊರನಡೆದರು, ಆರೋಪವನ್ನು ಸರ್ಕಾರವು ಅಧಿಕೃತವಾಗಿ ನಿರಾಕರಿಸಬೇಕೆಂಬ ಅವರ ಬೇಡಿಕೆಯನ್ನು ಒಪ್ಪಿಕೊಂಡಾಗ ಮಾತ್ರ ಹಿಂದಿರುಗಿದರು.

ಜೂನ್ ತಿಂಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ “ಆರೋಗ್ಯ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸಲು ಖಾಸಗಿ ವಲಯದ ಸಹಕಾರವನ್ನು ಪಡೆಯುವ” ಯೋಜನೆಯನ್ನು ಬಘೇಲ್ ಅನಾವರಣಗೊಳಿಸಿದ ನಂತರ ಅನುದಾನ/ ಸಬ್ಸಿಡಿಗಾಗಿ ಕ್ರಿಯಾ ಯೋಜನೆಯನ್ನು ತಯಾರಿಸಲು ಕೈಗಾರಿಕಾ ಇಲಾಖೆಗೆ ನಿರ್ದೇಶನ ನೀಡಿದ್ದರು. ಅಂದ ಹಾಗೆ ಈ ಬಗ್ಗೆ ಯಾವುದೇ ಚರ್ಚೆ ಸಚಿವ ಸಂಪುಟದಲ್ಲಿ ನಡೆದಿಲ್ಲ ಎಂದು ಸಿಂಗ್ ದಿಯೊ ಹೇಳಿದ್ದಾರೆ. “ನಾನು ಸಾರ್ವಕಾಲಿಕ ಆರೋಗ್ಯ ಯೋಜನೆಯ ಪರವಾಗಿ ಇದ್ದೇನೆ, ಹಾಗೆಯೇ ರಾಹುಲ್ ಜೀ. 2014 ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ‘ಆರೋಗ್ಯದ ಹಕ್ಕು’ ಎಂದು ಉಲ್ಲೇಖಿಸಿದೆ, “ಎಂದು ಅವರು ಹೇಳಿದರು.

ಸಿಂಗ್ ದಿಯೊ ಮತ್ತು ಬಘೇಲ್ ಅವರು ಉದ್ದೇಶಿತ ಲೆಮ್ರು ಎಲಿಫೆಂಟ್ ರಿಸರ್ವ್ ಮತ್ತು ಬುಡಕಟ್ಟು ಪ್ರದೇಶಗಳಿಗೆ PESA (ಪಂಚಾಯತ್ ವಿಸ್ತರಣೆ ಟು ಶೆಡ್ಯೂಲ್ಡ್ ಏರಿಯಾ ಆಕ್ಟ್) ಅಡಿಯಲ್ಲಿ ಕಾನೂನುಗಳನ್ನು ರೂಪಿಸುವ ಕುರಿತು ಸಂಘರ್ಷಕ್ಕಿಳಿದಿದ್ದಾರೆ.

ಇದನ್ನೂ ಓದಿ:  Protect Afghan Women : ಅಫ್ಘಾನಿಸ್ತಾನದ ಪುರುಷರನ್ನು ಆ ನೆಲದ ಮಹಿಳೆಯರು ಏನೆಂದು ನೆನಪಿಟ್ಟುಕೊಳ್ಳುವರು?

(No talks of leadership change in Chhattisgarh PL Punia on Bhupesh Baghel TS Singh Deo meet with Rahul Gandhi)

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ