AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Statue of Equality: ಹೈದರಾಬಾದ್​ನಲ್ಲಿ ರಾಮಾನುಜಾಚಾರ್ಯರ ಪ್ರತಿಮೆ ಉದ್ಘಾಟನೆಗೆ ಸಕಲ ಸಿದ್ಧತೆ

216 ಅಡಿ ಎತ್ತರದ ರಾಮಾನುಜಾಚಾರ್ಯರ ಪ್ರತಿಮೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಫೆಬ್ರವರಿ 5ರಂದು ಅನಾವರಣಗೊಳಿಸಲಿದ್ದಾರೆ.

Statue of Equality: ಹೈದರಾಬಾದ್​ನಲ್ಲಿ ರಾಮಾನುಜಾಚಾರ್ಯರ ಪ್ರತಿಮೆ ಉದ್ಘಾಟನೆಗೆ ಸಕಲ ಸಿದ್ಧತೆ
ರಾಮಾನುಜಾಚಾರ್ಯರ ಪ್ರತಿಮೆ
S Chandramohan
| Updated By: ಸುಷ್ಮಾ ಚಕ್ರೆ|

Updated on:Feb 04, 2022 | 8:08 PM

Share

ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ ಬಳಿ “ಸಮಾನತೆಯ ಪ್ರತಿಮೆ”ಯ (Statue of Equality) ಅನಾವರಣದ ಭವ್ಯ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲು ಪೂರ್ಣ ಪ್ರಮಾಣದ ಸಿದ್ದತೆ ನಡೆಯುತ್ತಿದೆ. ಸಹಸ್ರಮಾನದ ಆಚರಣೆಗಳು ಫೆಬ್ರವರಿ 2ರಿಂದ ಪ್ರಾರಂಭವಾಗಿದ್ದು, ಫೆಬ್ರವರಿ 13ರವರೆಗೆ ನಡೆಯಲಿದೆ. ವಿಶ್ವದ ಅತಿ ದೊಡ್ಡ ಮೆಟಾಲಿಕ್ ಆಸನ ಪ್ರತಿಮೆಯ ಉದ್ಘಾಟನಾ ಸಮಾರಂಭದಲ್ಲಿ 5,000 ಪುರೋಹಿತರು ಯಜ್ಞವನ್ನು ನಡೆಸುತ್ತಾರೆ. ಈ ಸಹಸ್ರಮಾನದ ಆಚರಣೆಯ ಕುರಿತು ಇನ್ನಷ್ಟು ಆಸಕ್ತಿದಾಯಕ ಸಂಗತಿಗಳನ್ನು TV9 ನಿಮ್ಮ ಮುಂದೆ ಇಡುತ್ತಿದೆ.

11ನೇ ಶತಮಾನದ ಭಕ್ತಿ ವೈಷ್ಣವ ಮತ್ತು ಕ್ರಾಂತಿಕಾರಿ ಸಮಾಜ ಸುಧಾರಕ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆಯು ಜಗತ್ತಿನಲ್ಲಿ ಕರುಣೆ, ಆನಂದ ಮತ್ತು ಸಮಾನತೆಯನ್ನು ಪ್ರತಿನಿಧಿಸುತ್ತದೆ. 216 ಅಡಿ ಎತ್ತರದ ರಾಮಾನುಜಾಚಾರ್ಯರ ಪ್ರತಿಮೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಫೆಬ್ರವರಿ 5ರಂದು ಅನಾವರಣಗೊಳಿಸಲಿದ್ದಾರೆ. ಫೆಬ್ರವರಿ 13ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಮಾನುಜಾಚಾರ್ಯರ 120 ಕೆಜಿ ಚಿನ್ನದ ದೇವರನ್ನು ಅನಾವರಣಗೊಳಿಸಲಿದ್ದಾರೆ. ಕೆ ಚಂದ್ರಶೇಖರ್ ರಾವ್ ಡೈನಾಮಿಕ್ ಫೌಂಟೇನ್ ಉದ್ಘಾಟಿಸುವರು. ಅನೇಕ ರಾಜಕೀಯ ನಾಯಕರು, ಪ್ರಸಿದ್ಧ ವ್ಯಕ್ತಿಗಳು ಈ ಕಾರ್ಯಕ್ರಮದ ಭಾಗವಾಗಲಿದ್ದಾರೆ.

ಡೈನಾಮಿಕ್ ಫೌಂಟೇನ್ ಅನ್ನು ಈ ಪ್ರಪಂಚದ ಪ್ರತಿಯೊಬ್ಬರ ಗುಣಲಕ್ಷಣಗಳ ಅದ್ಭುತ ಗುಂಪುನ್ನು ಪ್ರತಿಬಿಂಬಿಸಲು ಜೋಡಿಸಲಾಗಿದೆ. ಎಂಟು ಸಿಂಹಗಳು, ಎಂಟು ಆನೆಗಳು ಮತ್ತು ಎಂಟು ಹಂಸಗಳಿದ್ದು, ಅದರ ಮೇಲೆ ಸುಂದರವಾದ ಕಮಲವಿದೆ. ರಾಮಾನುಜಾಚಾರ್ಯ ಸ್ವಾಮಿಗಳು ಈ ಕಮಲದ ಮೇಲೆ ಗೌರವಾರ್ಥವಾಗಿ ಕುಳಿತಿದ್ದಾರೆ.

ಅಧಿಕಾರಿಗಳು 15 ಲಕ್ಷ ಲೀಟರ್ ಕುಡಿಯುವ ನೀರನ್ನು ಆಹರಂನಲ್ಲಿರುವ ಸಂಪ್‌ಗಳಿಗೆ ಸರಬರಾಜು ಮಾಡಿದ್ದಾರೆ. ಯಜ್ಞ ಕುಂಡದಲ್ಲಿ ಬಳಕೆಗಾಗಿ ಸಗಣಿ ಕೇಕ್​ಗಳ ದೀರ್ಘ ರೂಪವನ್ನು ಬೇಯಿಸಲಾಗುತ್ತಿದೆ. ಒಟ್ಟು 1035 ಅಗ್ನಿಕುಂಡಗಳಲ್ಲಿ ಹವನ, ಯಜ್ಞ ನಡೆಯಲಿದೆ. ಯಜ್ಞಕ್ಕಾಗಿ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ನಿಂದ ಸುಮಾರು 2 ಲಕ್ಷ ಕೆಜಿ ಶುದ್ಧ ಹಸುವಿನ ತುಪ್ಪವನ್ನು ಸಂಗ್ರಹಿಸಲಾಗಿದೆ.

‘ಸಮಾನತೆ’ ಎಂಬ ಪದ ಕೇವಲ ಘೋಷಣೆಯಾಗಿಬಿಟ್ಟಿದೆ. ರಾಮಾನುಜಾಚಾರ್ಯರು ರೂಪ ಮತ್ತು ಅವರ ಮಾತುಗಳು ಸಮಾಜಕ್ಕೆ ಸ್ಫೂರ್ತಿ ನೀಡಬಲ್ಲವು. ಈ ಸ್ಫೂರ್ತಿಯನ್ನು ಅನುಭವಿಸಲು ಅವರ ಜನ್ಮ ಸಹಸ್ರಮಾನಕ್ಕಿಂತ ಉತ್ತಮ ಸಮಯ ಯಾವುದು ಇಲ್ಲ. ರಾಷ್ಟ್ರೀಯತೆ, ಲಿಂಗ, ಜನಾಂಗ, ಜಾತಿ ಅಥವಾ ಪಂಥವನ್ನು ಲೆಕ್ಕಿಸದೆ ಪ್ರತಿಯೊಬ್ಬ ಮನುಷ್ಯನು ಸಮಾನರು ಎಂಬ ನಂಬಿಕೆಯ ಆಧಾರದ ಮೇಲೆ ಅವರು ಲಕ್ಷಾಂತರ ಜನರನ್ನು ಸಾಮಾಜಿಕ, ಸಾಂಸ್ಕೃತಿಕ, ಲಿಂಗ, ಶೈಕ್ಷಣಿಕ ಮತ್ತು ಆರ್ಥಿಕ ತಾರತಮ್ಯದಿಂದ ಮುಕ್ತಗೊಳಿಸಿದರು. ಪ್ರಪಂಚದಾದ್ಯಂತದ ಸಮಾಜ ಸುಧಾರಕರಿಗೆ, ರಾಮಾನುಜಾಚಾರ್ಯರು ಸಮಾನತೆಯ ಶಾಶ್ವತ ಸಂಕೇತವಾಗಿದ್ದಾರೆ.

ಇದನ್ನೂ ಓದಿ: ಫೆ. 5ರಂದು ಹೈದರಾಬಾದ್​ಗೆ ಪ್ರಧಾನಿ ಮೋದಿ ಭೇಟಿ; ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆ ಅನಾವರಣ

Ramanujacharya Statue: ರಾಮಾನುಜಾಚಾರ್ಯ ಸಹಸ್ರಾಬ್ದಿ ಕಾರ್ಯಕ್ರಮಗಳ ಆರಂಭಕ್ಕೆ ಭರದ ಸಿದ್ಧತೆ

Published On - 8:08 pm, Fri, 4 February 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ