AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರನೇ ಅಥವಾ ನಾಲ್ಕನೇ ರಂಗವು ಬಿಜೆಪಿಗೆ ಸವಾಲೊಡ್ಡಬಲ್ಲದು ಎಂದು ನನಗನಿಸುತ್ತಿಲ್ಲ: ಪ್ರಶಾಂತ್ ಕಿಶೋರ್

Prashant Kishor: ಯಾವುದೇ ಮೂರನೇ ಅಥವಾ ನಾಲ್ಕನೇ ರಂಗವು ನರೇಂದ್ರ ಮೋದಿಯವರನ್ನು ಸೋಲಿಸಬಹುದೆಂದು ನಾನು ನಂಬುವುದಿಲ್ಲ, ಹಾಗಾಗಿ ನಾನು ಯಾಕೆ ಅಂತಹ ಯಾವುದೇ ಒಕ್ಕೂಟದ ಭಾಗವಾಗಿರಬೇಕು? ದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದರು.

ಮೂರನೇ ಅಥವಾ ನಾಲ್ಕನೇ ರಂಗವು ಬಿಜೆಪಿಗೆ ಸವಾಲೊಡ್ಡಬಲ್ಲದು ಎಂದು ನನಗನಿಸುತ್ತಿಲ್ಲ: ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 22, 2021 | 12:52 PM

ಮುಂಬೈ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ತೃತೀಯ ಅಥವಾ ನಾಲ್ಕನೇ ರಂಗವು ಭಾರತೀಯ ಜನತಾ ಪಕ್ಷಕ್ಕೆ ಸವಾಲೊಡ್ಡುವ ಸಾಧ್ಯತೆಯನ್ನು ಪ್ರಶಾಂತ್ ಕಿಶೋರ್ ತಳ್ಳಿಹಾಕಿದ್ದಾರೆ. ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ರಾಷ್ಟ್ರೀಯ ಒಕ್ಕೂಟವನ್ನು ರಚಿಸಲಿವೆ ಎಂಬ ಊಹಾಪೋಹಗಳ ನಡುವೆ ಪ್ರಶಾಂತ್ ಕಿಶೋರ್ ಈ ರೀತಿ ಹೇಳಿದ್ದಾರೆ. ಅಂತಹ ಒಂದು ಒಕ್ಕೂಟವು ಬಿಜೆಪಿಗೆ ಸವಾಲೊಡ್ಡಲು ಸಾಧ್ಯವಾಗುತ್ತದೆ ಎಂದು ನನಗನಿಸುತ್ತಿಲ್ಲ. ಯಾವುದೇ ಮೂರನೇ ಅಥವಾ ನಾಲ್ಕನೇ ರಂಗವು ನರೇಂದ್ರ ಮೋದಿಯವರನ್ನು ಸೋಲಿಸಬಹುದೆಂದು ನಾನು ನಂಬುವುದಿಲ್ಲ, ಹಾಗಾಗಿ ನಾನು ಯಾಕೆ ಅಂತಹ ಯಾವುದೇ ಒಕ್ಕೂಟದ ಭಾಗವಾಗಿರಬೇಕು?. 15 ಜನರು ಸಭೆಯಲ್ಲಿ ಭಾಗವಹಿಸುತ್ತಾರೆ ಎಂದರೆ ನೀವು ಅದನ್ನು 15 ಪಕ್ಷಗಳ ಸಭೆ ಎಂದು ಕರೆಯಲು ಸಾಧ್ಯವಿಲ್ಲ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದರು.

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್, ಕಾಂಗ್ರೆಸ್ ಮತ್ತು ನಾಗರಿಕ ಸಮಾಜದ ಸದಸ್ಯರನ್ನು ಹೊರತುಪಡಿಸಿ ದೆಹಲಿಯ ತಮ್ಮ ಮನೆಯಲ್ಲಿ ಮಂಗಳವಾರ ಬಿಜೆಪಿಯ ವಿರುದ್ಧ ಸಂಘಟನೆಗಳನ್ನು ಒಟ್ಟುಗೂಡಿಸುವ ಕುರಿತು ಚರ್ಚೆಯನ್ನು ಪ್ರಾರಂಭಿಸಲು ಕರೆದಿದ್ದ ಸಭೆಯನ್ನು ಪ್ರಶಾಂತ್ ಕಿಶೋರ್ ಉಲ್ಲೇಖಿಸುತ್ತಿದ್ದರು. ಶರದ್ ಪವಾರ್ ಅವರನ್ನು ಪ್ರಶಾಂತ್ ಕಿಶೋರ್ ಒಂದು ತಿಂಗಳಲ್ಲಿ ಎರಡು ಬಾರಿಗೆ ಭೇಟಿಯಾದ ನಂತರ ಈ ಹೇಳಿಕೆ ನೀಡಿದ್ದಾರೆ.

“ನಾನು ಇತ್ತೀಚೆಗೆ ಮುಂಬೈನಲ್ಲಿದ್ದಾಗ ಅವರೊಂದಿಗೆ ಊಟ ಮಾಡಿದೆವು ಮತ್ತು ಇಂದು ಅವರು ನನ್ನನ್ನು ಕರೆದು ಚಹಾಕ್ಕಾಗಿ ಬರಲು ಹೇಳಿದರು. ಇದು ಕೇವಲ ಚಿಟ್-ಚಾಟ್ ಮತ್ತು ವಾಡಿಕೆಯ ಸಭೆ “ಎಂದು ಅವರು ಹೇಳಿದರು. ಅವರು ಎನ್‌ಸಿಪಿಯನ್ನು ಕ್ಲೈಂಟ್ ಆಗಿ ತೆಗೆದುಕೊಳ್ಳುತ್ತಿದ್ದಾರೆ ಎಂಬ ಊಹಾಪೋಹಗಳನ್ನು ಸಹ ಅವರು ತಿರಸ್ಕರಿಸಿದರು.” ನಾನು ಮೇ 2 ರಂದು ಘೋಷಿಸಿದಂತೆ ಈ ಜಾಗವನ್ನು (ಚುನಾವಣಾ ತಂತ್ರಜ್ಞ) ತೊರೆದ ಕಾರಣ ಪವಾರ್ ಸಾಹಬ್ ನನ್ನ ಕ್ಲೈಂಟ್ ಆಗುವ ಪ್ರಶ್ನೆಯೇ ಇಲ್ಲ” ಎಂದು ಕಿಶೋರ್ ಹೇಳಿದರು.

ಮುಂಬರುವ ಚುನಾವಣೆಗಳನ್ನು ಒಟ್ಟಿಗೆ ಅಥವಾ ಪ್ರತ್ಯೇಕವಾಗಿ ಹೋರಾಡಬೇಕೇ ಎಂಬ ಬಗ್ಗೆ ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಾಲುದಾರ ಶಿವಸೇನೆ ಮತ್ತು ಮಹಾರಾಷ್ಟ್ರದಲ್ಲಿ ಎನ್‌ಸಿಪಿ ನಡುವೆ ಹೆಚ್ಚುತ್ತಿರುವ ಬಿರುಕುಗಳ ಮಧ್ಯೆಯೇ 2018 ರಲ್ಲಿ ಸ್ಥಾಪಿಸಲಾದ ಬಿಜೆಪಿ ವಿರೋಧಿ ವೇದಿಕೆಯಾದ ರಾಷ್ಟ್ರ ಮಂಚ್‌ನ ಬ್ಯಾನರ್ ಅಡಿಯಲ್ಲಿ ಮಂಗಳವಾರ ಸಭೆ ನಡೆಯಲಿದೆ.

ಎನ್‌ಸಿಪಿ ವಕ್ತಾರ ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್ ಮಲಿಕ್ ಅವರು ಸರಣಿ ಟ್ವೀಟ್‌ಗಳಲ್ಲಿ ದೇಶದ ಪ್ರಸ್ತುತ ಸನ್ನಿವೇಶದ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ ಮತ್ತು ಇದರಲ್ಲಿ ರಾಷ್ಟ್ರೀಯ ಸಮ್ಮೇಳನ ಮುಖಂಡ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಭಾಗವಹಿಸಲಿದ್ದಾರೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಯಶ್ವಂತ್ ಸಿನ್ಹಾ, ಆಮ್ ಆದ್ಮಿ ಪಕ್ಷದ (ಎಎಪಿ) ಸಂಜಯ್ ಸಿಂಗ್ ಮತ್ತು ಸಿಪಿಐನಿಂದ ಡಿ ರಾಜಾ ಇತರರು ಭಾಗವಹಿಸಲಿದ್ದಾರೆ ಎಂದಿದ್ದಾರೆ.

ಮಂಗಳವಾರ ನಡೆಯಲಿರುವ ಸಭೆಯಲ್ಲಿ ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ಎಲ್ಲಾ ವಿರೋಧ ಪಕ್ಷಗಳನ್ನು ಹೇಗೆ ಒಗ್ಗೂಡಿಸುವುದು ಎಂಬ ಬಗ್ಗೆ ಪ್ರಾಥಮಿಕ ಚರ್ಚೆಯನ್ನು ಚರ್ಚಿಸುವ ಸಾಧ್ಯತೆಯಿದೆ. ದೇಶದ ವಿಪಕ್ಷ ಒಗ್ಗೂಡಿಸಲು ತಾನು ಕೆಲಸ ಮಾಡಲಿದ್ದೇನೆ ಎಂದು ಎನ್‌ಸಿಪಿ ಮುಖ್ಯಸ್ಥರು ಮಾಡಿದ ಘೋಷಣೆಯ ಮೊದಲ ಹೆಜ್ಜೆಯಾಗಿದೆ ಇದು ಎಂದು ಮಲಿಕ್ ಹೇಳಿದರು.

ಪವನ್ ವರ್ಮಾ, ಸಂಜಯ್ ಸಿಂಗ್, ಕೆಟಿಎಸ್ ತುಳಸಿ, ಮಜೀದ್ ಮೆಮನ್, ವಂದನಾ ಚವಾಣ್, ಘನಶ್ಯಾಮ್ ತಿವಾರಿ, ಕರಣ್ ಥಾಪರ್, ಜಾವೇದ್ ಅಖ್ತರ್, ಅಶುತೋಷ್, ಎಸ್‌ವೈ ಖುರೇಷಿ, ಅರುಣ್ ಕುಮಾರ್, ಕೆ.ಸಿ.ಸಿಂಗ್, ಸಂಜಯ್ ಝಾ, ಸುಧೀಂದ್ರ ಕುಲಕರ್ಣಿ, ಕಾಲಿನ್ ಗೋನ್ಸ್ಲೇವ್ ಮತ್ತು ಪ್ರಿತೀಶ್ ನಂದಿ ಸಂಜೆ 4 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಭಾಗಿಯಾಗಲಿದ್ದಾರೆ .

ಎಲ್ಲಾ ವಿರೋಧ ಪಕ್ಷಗಳು ತನ್ನ ವಿರುದ್ಧ ಒಗ್ಗೂಡಿದರೂ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಮಹಾರಾಷ್ಟ್ರದ ಬಿಜೆಪಿ ನಾಯಕ ಕಿರಿಟ್ ಸೋಮೈಯ ಹೇಳಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧದ ವಿರೋಧವನ್ನು ಒಂದುಗೂಡಿಸುವ ಬಗ್ಗೆ ಶರದ್ ಪವಾರ್ ಅವರು ಗಾಳಿಯಲ್ಲಿ ಕೋಟೆಗಳನ್ನು ನಿರ್ಮಿಸುತ್ತಿದ್ದಾರೆ. “ಮಹಾರಾಷ್ಟ್ರವು ನಿಯಂತ್ರಣ ತಪ್ಪುತ್ತಿರುವ ಸಮಯದಲ್ಲಿ, ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆ ಪರಸ್ಪರ ಶಪಿಸುತ್ತಿವೆ. ಶರದ್ ಪವಾರ್ ಜಿ ಅವರು ‘ಮುಂಗೇರಿ ಲಾಲ್ ಕೆ ಹಸೀನ್ ಸಪ್ನೆ’ (ಹಗಲುಗನಸು) ಹೊಂದಿದ್ದಾರೆ ಎಂದು ಸೋಮೈಯ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಇದನ್ನೂ ಓದಿ:  ಪ್ರಶಾಂತ್ ಕಿಶೋರ್ ಭೇಟಿಯ ನಂತರ ಪ್ರತಿಪಕ್ಷ ನಾಯಕರ ಸಭೆ ಕರೆದ ಶರದ್​ ಪವಾರ್: ರಾಷ್ಟ್ರ ರಾಜಕಾರಣದಲ್ಲಿ ಸಂಚಲನ

(Prashant Kishor ruled out the possibility of a third or fourth front defeating the BJP the next Lok Sabha elections)

ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿಲ್ ಅಲೆನ್
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿಲ್ ಅಲೆನ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ ಹಿಂದಿನ ಕಾರಣವನ್ನು ಬಿಚ್ಚಿಡಲಿರುವ ಬ್ಲ್ಯಾಕ್ ಬಾಕ್ಸ್
ವಿಮಾನ ದುರಂತ ಹಿಂದಿನ ಕಾರಣವನ್ನು ಬಿಚ್ಚಿಡಲಿರುವ ಬ್ಲ್ಯಾಕ್ ಬಾಕ್ಸ್
ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು