AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್ ದಿವಾಳಿತನದ ಅಂಚಿನಲ್ಲಿದೆ, ಇಲ್ಲಿನ ಜನರ ನಂಬಿಕೆಗೆ ದ್ರೋಹವಾಗಿದೆ: ಕಾಂಗ್ರೆಸ್ ಮುಖ್ಯಸ್ಥ ನವಜೋತ್​ ಸಿಂಗ್​ ಸಿಧು

ಚರಣಜಿತ್​ ಸಿಂಗ್​ ಛನ್ನಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಧು, ಅವರ ಸರ್ಕಾರಕ್ಕೆ ನಾನು ಅಂಕ ಕೊಡಲು ಸಾಧ್ಯವಿಲ್ಲ. ಅದನ್ನೇನಿದ್ದರೂ ಜನರೇ ನಿರ್ಧಾರ ಮಾಡಬೇಕು ಎಂದಿದ್ದಾರೆ. ಹಾಗೇ, ನಾನು ಯಾರೊಂದಿಗೂ ಸ್ಪರ್ಧೆಗೆ ಇಳಿದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.

ಪಂಜಾಬ್ ದಿವಾಳಿತನದ ಅಂಚಿನಲ್ಲಿದೆ, ಇಲ್ಲಿನ ಜನರ ನಂಬಿಕೆಗೆ ದ್ರೋಹವಾಗಿದೆ: ಕಾಂಗ್ರೆಸ್ ಮುಖ್ಯಸ್ಥ ನವಜೋತ್​ ಸಿಂಗ್​ ಸಿಧು
ನವಜೋತ್ ಸಿಂಗ್ ಸಿಧು
TV9 Web
| Edited By: |

Updated on: Jan 03, 2022 | 8:41 PM

Share

ಪಂಜಾಬ್​ ದಿವಾಳಿತನದ ಅಂಚಿನಲ್ಲಿದೆ ಮತ್ತು ಇಲ್ಲಿನ ಜನರ ನಂಬಿಕೆ ಸಂಪೂರ್ಣವಾಗಿ ಮುರಿದಿದೆ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್​ ಸಿಂಗ್ ಸಿಧು(Congress chief Navjot Singh Sidhu) ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.  ವಿಧಾನಸಭೆ ಚುನಾವಣೆ (Punjab Assembly Election 2022) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪಂಜಾಬ್​ನ ಹಣವನ್ನೆಲ್ಲ ಇಲ್ಲಿನ ಪ್ರಭಾವಿಗಳು ಬಳಸಿಕೊಂಡಿದ್ದಾರೆ. ಈ ರಾಜ್ಯವೀಗ ದಿವಾಳಿತನದ ಅಂಚಿನಲ್ಲಿ ನಿಂತಿದೆ ಎಂದು ಹೇಳಿದ್ದಾರೆ.  ಜನಸಾಮಾನ್ಯರ ಅಭಿವೃದ್ಧಿ ನನ್ನ ಆಸೆ. ಆದರೆ ಈ ರಾಜ್ಯದಲ್ಲಿ ಅಭಿವೃದ್ಧಿ ಮಾಡುವುದಾದರೂ ಹೇಗೆ? ಆದರೆ  ಇಲ್ಲಿನ ಬೊಕ್ಕಸವನ್ನು ಕದಿಯುವುದನ್ನು ನಿಲ್ಲಿಸಬಹುದು ಎಂದು ಹೇಳಿದ್ದಾರೆ.

ಹಿಂದೆ ಕ್ರಿಕೆಟ್​ ಆಟಗಾರರಾಗಿದ್ದ ನವಜೋತ್​ ಸಿಂಗ್ ಸಿಧು ನಂತರ ರಾಜಕಾರಣಕ್ಕೆ ಸೇರಿದ್ದಾರೆ. ಪಂಜಾಬ್​ನ ಕಾಂಗ್ರೆಸ್ ಮುಖ್ಯಸ್ಥರಾಗಿರುವ ಅವರು ಹಲವು ವಿವಾದಗಳನ್ನೂ ಸೃಷ್ಟಿಸಿಕೊಂಡವರು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅಮರಿಂದರ್ ಸಿಂಗ್​ ರಾಜೀನಾಮೆ ನೀಡಲು ಸಿಧುನೇ ಕಾರಣ ಎಂಬುದು ಜಗಜ್ಜಾಹೀರಾಗಿದೆ. ಅಲ್ಲಿ ಮುಖ್ಯಮಂತ್ರಿ ಹುದ್ದೆಗೆ ಚರಣಜಿತ್​ ಸಿಂಗ್​ ಛನ್ನಿ ಏರಿದ ಮೇಲೆಯೂ ಸಿಧು ಮುನಿಸು ತಣಿಯಲಿಲ್ಲ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಕ್ಕಿಂತ ಹೆಚ್ಚಾಗಿ ಪಾಕಿಸ್ತಾನ ಪ್ರಧಾನಿಯನ್ನು ಹೊಗಳಿ, ಅಲ್ಲಿನ ಸೇನಾ ಮುಖ್ಯಸ್ಥರನ್ನು ತಬ್ಬಿ ಸುದ್ದಿಯಾದವರು.  ಇದೀಗ ಚುನಾವಣೆ ಸಮೀಪಿಸುತ್ತಿರುವಾಗ, ಹಿಂದಿನ ಮುಖ್ಯಮಂತ್ರಿ ಅಮರಿಂದರ್​ ಸಿಂಗ್​, ಈಗಿನ ಸಿಎಂ ಚರಣಜಿತ್​ ಸಿಂಗ್​ ಛನ್ನಿ ಬಗ್ಗೆಯೂ ಮಾತನಾಡಿದ್ದಾರೆ.

ಚರಣಜಿತ್​ ಸಿಂಗ್​ ಛನ್ನಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಧು, ಅವರ ಸರ್ಕಾರಕ್ಕೆ ನಾನು ಅಂಕ ಕೊಡಲು ಸಾಧ್ಯವಿಲ್ಲ. ಅದನ್ನೇನಿದ್ದರೂ ಜನರೇ ನಿರ್ಧಾರ ಮಾಡಬೇಕು ಎಂದಿದ್ದಾರೆ. ಹಾಗೇ, ನಾನು ಯಾರೊಂದಿಗೂ ಸ್ಪರ್ಧೆಗೆ ಇಳಿದಿಲ್ಲ. ನನ್ನೊಂದಿಗೆ ನಾನು ಸ್ಪರ್ಧಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.  ಹಾಗೇ, ಹಿಂದಿನ ಸಿಎಂ ಅಮರಿಂದರ್ ಸಿಂಗ್​, ಅವರು ಬೇರೆ ಪಕ್ಷವನ್ನು ಕಟ್ಟಿ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ  ಬಗ್ಗೆ ಮಾತನಾಡಿದ ಸಿಧು, ಕ್ಯಾಪ್ಟನ್​ ಅಮರಿಂದರ್​ ಅವರು ಬಿಜೆಪಿಯ ಪರವಾಗಿಯೇ ಇದ್ದರು. ಇದು ಬಿಜೆಪಿಯ ತಂತ್ರ. ಪಶ್ಚಿಮ ಬಂಗಾಳ, ಬಿಹಾರದಂಥ ರಾಜ್ಯಗಳಲ್ಲೂ ಬಿಜೆಪಿ ಇದನ್ನೆಲ್ಲ ಮಾಡುತ್ತದೆ ಎಂದು ಹೇಳಿದರು.  ಹಾಗೇ, ಅಮರಿಂದರ್ ಸಿಂಗ್ ಆಡಳಿತದಲ್ಲಿಯೇ ಜನರ ನಂಬಿಕೆಗೆ ದ್ರೋಹವಾಗಿದ್ದು, ಪಂಜಾಬ್​ ಹಣ ಕೊಳ್ಳೆ ಹೊಡೆಯಲ್ಪಟ್ಟಿದ್ದು ಎಂದು ಅವರು ಒತ್ತಿ ಹೇಳಿದರು.  ತಾವು ಸೃಷ್ಟಿಸಿಕೊಂಡ ವಿವಾದಗಳ ಬಗ್ಗೆ ಮಾತನಾಡಿದ ನವಜೋತ್​ ಸಿಂಗ್ ಸಿಧು, ನನ್ನ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಜನರು ಯಾವಾಗಲೂ ಮಾವಿನ ಹಣ್ಣಿರುವ ಮರಕ್ಕೆ ಕಲ್ಲು ಹೊಡೆಯುತ್ತಾರೆ ಹೊರತು, ಯಾರೂ ಸತ್ತ ನಾಯಿಗೆ ಒದೆಯುವುದಿಲ್ಲ ಎಂದು ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ಇಸ್ಲಮಾಬಾದ್​ಗೆ ಬರಲು ಇಷ್ಟವಿಲ್ಲದೆ ಇದ್ದರೆ, ವರ್ಚ್ಯುವಲ್ ಆಗಿ ಪಾಲ್ಗೊಳ್ಳಿ; ಸಾರ್ಕ್​ ಶೃಂಗಸಭೆಗೆ ಪಾಕಿಸ್ತಾನದಿಂದ ಭಾರತಕ್ಕೆ ಆಹ್ವಾನ !

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ