ಇದು 6ನೇ ಶತಮಾನದ ದೇಗುಲ: ರಕ್ಷಾ ಬಂಧನದ ದಿನ ಮಾತ್ರವೇ ಈ ದೇವಾಲಯವನ್ನು ತೆರೆಯಲಾಗುತ್ತದೆ! ಇದರ ರಹಸ್ಯ ತಿಳಿಯಿರಿ

Bansi Narayan Temple: ಈ ದೇವಾಲಯವು ನೈಸರ್ಗಿಕ ಸೌಂದರ್ಯದಿಂದ ಆವೃತವಾಗಿದೆ, ಮಾನವ ವಾಸಸ್ಥಳದಿಂದ ಬಹು ದೂರದಲ್ಲಿದೆ ಮತ್ತು ಪರ್ವತಗಳ ಸುಂದರ ನೋಟಗಳು ನಯನಮನೋಹರವಾಗಿ ಗೋಚರಿಸುತ್ತವೆ. ಈ ದೇವಾಲಯವನ್ನು ತಲುಪಲು ದಟ್ಟವಾದ ಓಕ್ ಕಾಡುಗಳ ಮೂಲಕ ಹೋಗಬೇಕು. ಈ ದೇವಾಲಯವನ್ನು ಸುಮಾರು 6 ರಿಂದ 8 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.

ಇದು 6ನೇ ಶತಮಾನದ ದೇಗುಲ: ರಕ್ಷಾ ಬಂಧನದ ದಿನ ಮಾತ್ರವೇ ಈ ದೇವಾಲಯವನ್ನು ತೆರೆಯಲಾಗುತ್ತದೆ! ಇದರ ರಹಸ್ಯ ತಿಳಿಯಿರಿ
ಇದು 6ನೇ ಶತಮಾನದ ದೇಗುಲ
Follow us
|

Updated on:Aug 16, 2024 | 10:56 AM

Bansi Narayan Temple: ಭಾರತವನ್ನು ದೇವಾಲಯಗಳ ದೇಶ ಎಂದು ಕರೆಯಲಾಗುತ್ತದೆ. ಪವಾಡಗಳಿಂದ ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಅನೇಕ ದೇವಾಲಯಗಳು ಇಲ್ಲಿವೆ. ವಿಶಿಷ್ಟವಾದ ಸಂಪ್ರದಾಯಗಳು ಮತ್ತು ನಂಬಿಕೆಗಳಿಗೆ ಹೆಸರುವಾಸಿಯಾದ ಇಂತಹ ಅನೇಕ ದೇವಾಲಯಗಳಿವೆ. ಅಂತಹ ಒಂದು ವಿಶಿಷ್ಟವಾದ ದೇವಾಲಯವು ಉತ್ತರಾಖಂಡದಲ್ಲಿದೆ.

ಉತ್ತರಾಖಂಡದ ಬಾನ್ಸಿ ನಾರಾಯಣ ದೇವಾಲಯವು ಹಿಮಾಲಯದ ಮಡಿಲಲ್ಲಿರುವ ದೇವಾಲಯವಾಗಿದ್ದು, ತನ್ನ ವೈಶಿಷ್ಟ್ಯದಿಂದಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ರಕ್ಷಾಬಂಧನದ ದಿನದಂದು ವರ್ಷಕ್ಕೊಮ್ಮೆ ಮಾತ್ರ ಈ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಈ ಕಾರಣಕ್ಕಾಗಿ ಇದು ನಿಗೂಢ ಮತ್ತು ಪವಿತ್ರ ತೀರ್ಥಯಾತ್ರೆ ಎಂದು ಪರಿಗಣಿಸಲಾಗಿದೆ. ಈ ದಿನ ಇಲ್ಲಿ ವಿಶೇಷ ಪೂಜೆಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತವೆ. ಈ ದಿನ ಇಲ್ಲಿಗೆ ಬಂದು ಪೂಜಿಸುವುದು ವಿಶೇಷವಾಗಿ ಮಂಗಳಕರವೆಂದು ನಂಬಲಾಗಿದೆ ಮತ್ತು ಈ ದಿನವು ಭಗವಾನ್ ವಿಷ್ಣುವಿನ ವಿಶೇಷ ಅನುಗ್ರಹವನ್ನು ಪಡೆಯುವುದು ತುಂಬಾ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಇಲ್ಲಿ ಮಾಡುವ ಪೂಜೆ ಮತ್ತು ದರ್ಶನವು ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿದೆ ಎಂದು ನಂಬಲಾಗಿದೆ. ರಕ್ಷಾಬಂಧನದ ದಿನದಂದು ಇಲ್ಲಿ ದರ್ಶನಕ್ಕಾಗಿ ಭಕ್ತಾದಿಗಳು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ.

ಅಂದಹಾಗೆ… ಈ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯು ಆಗಸ್ಟ್‌ 19 ಸೋಮವಾರ ಬೆಳಗ್ಗೆ 03:04 ರಿಂದ ಪ್ರಾರಂಭವಾಗುತ್ತದೆ. ಮತ್ತು ರಾತ್ರಿ 11:55 ಕ್ಕೆ ಕೊನೆಗೊಳ್ಳುತ್ತದೆ. ಈ ಶುಭ ದಿನದಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ.

Also Read: ಶ್ರಾವಣ ಮಾಸ 2024 – ಕೃಷ್ಣ ಜನ್ಮಾಷ್ಟಮಿ ಯಾವಾಗ? ವೃಂದಾವನದಲ್ಲಿ ಆಚರಣೆ ಯಾವಾಗ, ಹೇಗೆ?

ಬಾನ್ಸಿ ನಾರಾಯಣ ದೇವಸ್ಥಾನ, ಉತ್ತರಾಖಂಡ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಉರ್ಗಾಮ್ ಕಣಿವೆಯಲ್ಲಿರುವ ಬಾನ್ಸಿ ನಾರಾಯಣ ದೇವಾಲಯವು ಶ್ರೀಮನ್ನಾರಾಯಣನಿಗೆ ಸಮರ್ಪಿತವಾಗಿದೆ, ಆದರೆ ಈ ದೇವಾಲಯದಲ್ಲಿ ಭಗವಾನ್ ಶಿವ ಮತ್ತು ಭಗವಾನ್ ನಾರಾಯಣ (ಶ್ರೀ ಕೃಷ್ಣ) ಇಬ್ಬರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಈ ದೇವಾಲಯವನ್ನು ಬಾನ್ಸಿ ನಾರಾಯಣ (ಶಿವ) ಮತ್ತು ಬಾನ್ಸಿ ನಾರಾಯಣ (ಶ್ರೀಕೃಷ್ಣ) ದೇವಾಲಯ ಎಂದು ಕರೆಯಲಾಗುತ್ತದೆ. ಒಳಗಿನಿಂದ ಈ ದೇವಾಲಯದ ಎತ್ತರ ಕೇವಲ 10 ಅಡಿ ಎತ್ತರ ಹೊಂದಿದೆ. ಇಲ್ಲಿನ ಅರ್ಚಕರು ಪ್ರತಿ ವರ್ಷ ರಕ್ಷಾಬಂಧನದಂದು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ದೇವಾಲಯದ ಬಳಿ ಕರಡಿ ಗುಹೆಯೂ ಇದೆ, ಈ ಗುಹೆಯಲ್ಲಿ ಭಕ್ತರು ಪ್ರಸಾದವನ್ನು ಮಾಡುತ್ತಾರೆ. ರಕ್ಷಾಬಂಧನದ ದಿನದಂದು ಈ ಊರಿನಿಂದ ಪ್ರತಿ ಮನೆಯಿಂದಲೂ ಬೆಣ್ಣೆಯನ್ನು ತಂದು ಅದನ್ನು ಪ್ರಸಾದದಲ್ಲಿ ಸೇರಿಸಿ ದೇವರಿಗೆ ಅರ್ಪಿಸಲಾಗುತ್ತದೆ.

ಈ ದೇವಾಲಯವು ಪ್ರಕೃತಿ ಸೌಂದರ್ಯದಿಂದ ಆವೃತವಾಗಿದೆ: ಈ ದೇವಾಲಯವು ನೈಸರ್ಗಿಕ ಸೌಂದರ್ಯದಿಂದ ಆವೃತವಾಗಿದೆ, ಮಾನವ ವಾಸಸ್ಥಳದಿಂದ ಬಹು ದೂರದಲ್ಲಿದೆ ಮತ್ತು ಪರ್ವತಗಳ ಸುಂದರ ನೋಟಗಳು ನಯನಮನೋಹರವಾಗಿ ಗೋಚರಿಸುತ್ತವೆ. ಈ ದೇವಾಲಯವನ್ನು ತಲುಪಲು ದಟ್ಟವಾದ ಓಕ್ ಕಾಡುಗಳ ಮೂಲಕ ಹೋಗಬೇಕು. ಈ ದೇವಾಲಯವನ್ನು ಸುಮಾರು 6 ರಿಂದ 8 ನೇ ಶತಮಾನದ ಮಧ್ಯೆ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.

Also Read: Oh my Dog ಸ್ವಾಮಿನಿಷ್ಠೆಯ ನಾಯಿಗಳಿಗಾಗಿ ಶತ ಶತಮಾನಗಳ ಹಿಂದೆಯೇ ದೇಗುಲಗಳನ್ನು ಕಟ್ಟಲಾಗಿದೆ! ರೋಚಕ ಕತೆಗಳು ಇಲ್ಲಿವೆ

ರಕ್ಷಾಬಂಧನದಂದು ಅಪಾರ ಸಂಖ್ಯೆಯಲ್ಲಿ ಭಕ್ತರ ದಂಡೇ ನೆರೆದಿತ್ತು: ರಕ್ಷಾಬಂಧನದ ದಿನದಂದು ಬಾನ್ಸಿ ನಾರಾಯಣ ದೇವಸ್ಥಾನದಲ್ಲಿ ಸಹೋದರರಿಗೆ ರಾಖಿ ಕಟ್ಟುವ ಸಹೋದರಿಯರು ಸಂತೋಷ, ಸಮೃದ್ಧಿ ಮತ್ತು ಯಶಸ್ಸಿನ ಆಶೀರ್ವಾದವನ್ನು ಪಡೆಯುತ್ತಾರೆ ಮತ್ತು ಅವರ ಸಹೋದರರು ತಮಗೆ ಎದುರಾಗುವ ಎಲ್ಲಾ ತೊಂದರೆಗಳು ಮತ್ತು ಆತಂಕಗಳು/ಪೀಡೆಗಳನ್ನು ತೊಡೆದುಹಾಕುತ್ತಾರೆ ಎಂಬ ಕುತೂಹಲಕಾರಿ ನಂಬಿಕೆಯು ಈ ದೇವಾಲಯದಲ್ಲಿದೆ. ಹಾಗಾಗಿ ರಕ್ಷಾಬಂಧನದ ದಿನ ಇಲ್ಲಿ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಈ ದಿನ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪೂಜೆಯ ನಂತರ ಪ್ರಸಾದ ವಿತರಣೆ. ಸಂಜೆ ಸೂರ್ಯ ಮುಳುಗುತ್ತಿದ್ದಂತೆ, ಮುಂದಿನ ರಕ್ಷಾಬಂಧನದವರೆಗೆ ದೇವಾಲಯದ ಬಾಗಿಲುಗಳನ್ನು ಮತ್ತೆ ಮುಚ್ಚಲಾಗುತ್ತದೆ.

ದೇವಾಲಯಕ್ಕೆ ಸಂಬಂಧಿಸಿದ ಪೌರಾಣಿಕ ಕಥೆ: ಬಾನ್ಸಿ ನಾರಾಯಣ ದೇವಾಲಯಕ್ಕೆ ಸಂಬಂಧಿಸಿದ ಒಂದು ಪೌರಾಣಿಕ ಕಥೆಯಿದೆ. ಈ ಕಥೆಯ ಪ್ರಕಾರ, ವಿಷ್ಣುವು ತನ್ನ ವಾಮನ ಅವತಾರದಿಂದ ಮುಕ್ತವಾದ ನಂತರ ಇಲ್ಲಿ ಕಾಣಿಸಿಕೊಂಡಿದ್ದಾನೆ. ಈ ಸ್ಥಳದಲ್ಲಿ ದೇವಋಷಿ ನಾರದರು ಭಗವಾನ್ ನಾರಾಯಣನನ್ನು ಪೂಜಿಸಿದರು ಎಂದು ನಂಬಲಾಗಿದೆ. ನಾರದರು ವರ್ಷದ 364 ದಿನಗಳ ಕಾಲ ಇಲ್ಲಿ ಭಗವಾನ್ ವಿಷ್ಣುವನ್ನು ಪೂಜಿಸಿ, ಹೋಗಿದ್ದಾರೆ. ಆದ್ದರಿಂದ ಭಕ್ತರು ಇಲ್ಲಿ ನಾರಾಯಣನನ್ನು ಪೂಜಿಸಬಹುದು. ಈ ಕಾರಣಕ್ಕಾಗಿ, ಈ ದೇವಾಲಯದ ಬಾಗಿಲು ವರ್ಷಕ್ಕೊಮ್ಮೆ ಮಾತ್ರ ರಕ್ಷಾಬಂಧನದ ದಿನದಂದು ತೆರೆಯುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

Published On - 10:21 am, Fri, 16 August 24

ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?