AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ಆಯೋಗ ಮುಟ್ಟುಗೋಲು ಹಾಕಿಕೊಂಡ ಮೊತ್ತ ₹ 1000 ಕೋಟಿ

Assembly Elections 2021: ಚುನಾವಣಾ ಆಯೋಗದ ಮಾಹಿತಿ ಪ್ರಕಾರ ತಮಿಳುನಾಡಿನಿಂದ ಮುಟ್ಟುಗೋಲು ಹಾಕಿದ ನಗದು ₹236.69 ಕೋಟಿ, ₹5.27 ಕೋಟಿ ಮೌಲ್ಯದ ಮದ್ಯ ,₹ 2.22 ಕೋಟಿ ಮೌಲ್ಯದ ಮಾದಕ ವಸ್ತು, ₹25.64 ಕೋಟಿ ಮೌಲ್ಯದ ಉಚಿತ ಕೊಡುಗೆ, ₹176.46 ಕೋಟಿ ಮೌಲ್ಯದ ಬೆಲೆಬಾಳುವ ಲೋಹ ವಶ ಪಡಿಸಿಕೊಳ್ಳಲಾಗಿದೆ. ಇಲ್ಲಿ ವಶ ಪಡಿಸಿಕೊಂಡಿರುವ ವಸ್ತುಗಳ ಒಟ್ಟು ಮೊತ್ತ ₹446.28 ಕೋಟಿ.

ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ಆಯೋಗ ಮುಟ್ಟುಗೋಲು ಹಾಕಿಕೊಂಡ ಮೊತ್ತ ₹ 1000 ಕೋಟಿ
ಭಾರತೀಯ ಚುನಾವಣಾ ಆಯೋಗ (ಸಂಗ್ರಹ ಚಿತ್ರ)
ರಶ್ಮಿ ಕಲ್ಲಕಟ್ಟ
|

Updated on: Apr 16, 2021 | 7:39 PM

Share

ದೆಹಲಿ: ಪಂಚ ರಾಜ್ಯಗಳಲ್ಲಿನ ವಿಧಾನಸಭೆ ಚುನಾವಣೆಯ ವೇಳೆ ಚುನಾವಣಾ ಆಯೋಗವು ವಿವಿಧ ರಾಜ್ಯಗಳಲ್ಲಿ ದಾಳಿ ನಡೆಸಿ ವಶ ಪಡಿಸಿಕೊಂಡಿದ್ದು ₹ 1000 ಕೋಟಿ . ಇದೇ ಮೊದಲ ಬಾರಿ ವಿಧಾನಸಭೆ ಚುನಾವಣೆ ವೇಳೆ ಆಯೋಗ ಇಷ್ಟೊಂದು ಮೊತ್ತ ಮುಟ್ಟುಗೋಲು  ಹಾಕಿದ್ದು ಎಂದು ಚುನಾವಣಾ ಆಯೋಗ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ವಶ ಪಡಿಸಿಕೊಂಡಿರುವ ಮೊತ್ತ ಗರಿಷ್ಠ ಆಗಿದೆ. ಚುನಾವಣೆಯ ಹೊತ್ತಲ್ಲಿ ರಾಜ್ಯಗಳ ಮೇಲೆ ನಿಗಾ ಇರಿಸಲು 5 ವಿಶೇಷ ವೆಚ್ಚ ನಿರೀಕ್ಷಕರು ಮತ್ತು 321 ವೆಚ್ಚ ನಿರೀಕ್ಷರನ್ನು ನಿಯೋಜಿಸಲಾಗಿತ್ತು. 25 ವಿಧಾನಸಭಾ ಕ್ಷೇತ್ರಗಳನ್ನು ಸೂಕ್ಷ್ಮ ಚುನಾವಣಾ ಕ್ಷೇತ್ರಗಳೆಂದು ಗುರುತಿಸಿ ನಿಗಾ ಇರಿಸಲಾಗಿತ್ತು.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಅಸ್ಸಾಂನಿಂದ ನಗದು ₹27.0 ಕೋಟಿ, ₹41.97 ಕೋಟಿ ಮೌಲ್ಯದ ಮದ್ಯ , ₹34.4 ಕೋಟಿ ಮೌಲ್ಯದ ಮಾದಕ ವಸ್ತು, ₹15.18 ಕೋಟಿ ಮೌಲ್ಯದ ಉಚಿತ ಕೊಡುಗೆ, ₹3.69 ಕೋಟಿ ಮೌಲ್ಯದ ಬೆಲೆಬಾಳುವ ಲೋಹ ವಶ ಪಡಿಸಿಕೊಳ್ಳಲಾಗಿದೆ. ಇಲ್ಲಿ ವಶ ಪಡಿಸಿಕೊಂಡಿರುವ ವಸ್ತುಗಳ ಒಟ್ಟು ಮೊತ್ತ $122.35 ಕೋಟಿ.

ಪುದುಚೇರಿಯಿಂದ ಮುಟ್ಟುಗೋಲು ಹಾಕಿದ ನಗದು ₹5.52 ಕೋಟಿ, ₹0.70 ಕೋಟಿ ಮೌಲ್ಯದ ಮದ್ಯ , ₹0.25 ಕೋಟಿ ಮೌಲ್ಯದ ಮಾದಕ ವಸ್ತು, ₹3.06 ಕೋಟಿ ಮೌಲ್ಯದ ಉಚಿತ ಕೊಡುಗೆ, ₹27.42 ಕೋಟಿ ಮೌಲ್ಯದ ಬೆಲೆಬಾಳುವ ಲೋಹ ವಶ ಪಡಿಸಿಕೊಳ್ಳಲಾಗಿದೆ. ಇಲ್ಲಿ ವಶ ಪಡಿಸಿಕೊಂಡಿರುವ ವಸ್ತುಗಳ ಒಟ್ಟು ಮೊತ್ತ ₹36.95 ಕೋಟಿ.

ತಮಿಳುನಾಡಿನಿಂದ ಮುಟ್ಟುಗೋಲು ಹಾಕಿದ ನಗದು ₹236.69 ಕೋಟಿ, ₹5.27 ಕೋಟಿ ಮೌಲ್ಯದ ಮದ್ಯ ,₹ 2.22 ಕೋಟಿ ಮೌಲ್ಯದ ಮಾದಕ ವಸ್ತು, ₹25.64 ಕೋಟಿ ಮೌಲ್ಯದ ಉಚಿತ ಕೊಡುಗೆ, ₹176.46 ಕೋಟಿ ಮೌಲ್ಯದ ಬೆಲೆಬಾಳುವ ಲೋಹ ವಶ ಪಡಿಸಿಕೊಳ್ಳಲಾಗಿದೆ. ಇಲ್ಲಿ ವಶ ಪಡಿಸಿಕೊಂಡಿರುವ ವಸ್ತುಗಳ ಒಟ್ಟು ಮೊತ್ತ ₹446.28 ಕೋಟಿ.

ಕೇರಳದಿಂದ ಮುಟ್ಟುಗೋಲು ಹಾಕಿದ ನಗದು ₹22.88 ಕೋಟಿ,  ₹5.16 ಕೋಟಿ ಮೌಲ್ಯದ ಮದ್ಯ , ₹4.06 ಕೋಟಿ ಮೌಲ್ಯದ ಮಾದಕ ವಸ್ತು, ₹1.95 ಕೋಟಿ ಮೌಲ್ಯದ ಉಚಿತ ಕೊಡುಗೆ, ₹50.86 ಕೋಟಿ ಮೌಲ್ಯದ ಬೆಲೆಬಾಳುವ ಲೋಹ ವಶ ಪಡಿಸಿಕೊಳ್ಳಲಾಗಿದೆ. ಇಲ್ಲಿ ವಶ ಪಡಿಸಿಕೊಂಡಿರುವ ವಸ್ತುಗಳ ಒಟ್ಟು ಮೊತ್ತ ₹84.91 ಕೋಟಿ.

ಪಶ್ಚಿಮ ಬಂಗಾಳದಿಂದ ಮುಟ್ಟುಗೋಲು ಹಾಕಿದ ನಗದು ₹50.71 ಕೋಟಿ, ₹30.11ಕೋಟಿ ಮೌಲ್ಯದ ಮದ್ಯ , ₹118.83 ಕೋಟಿ ಮೌಲ್ಯದ ಮಾದಕ ವಸ್ತು, ₹88.39 ಕೋಟಿ ಮೌಲ್ಯದ ಉಚಿತ ಕೊಡುಗೆ, ₹12.07 ಕೋಟಿ ಮೌಲ್ಯದ ಬೆಲೆಬಾಳುವ ಲೋಹ ವಶ ಪಡಿಸಿಕೊಳ್ಳಲಾಗಿದೆ. ಇಲ್ಲಿ ವಶ ಪಡಿಸಿಕೊಂಡಿರುವ ವಸ್ತುಗಳ ಒಟ್ಟು ಮೊತ್ತ ₹84.91ಕೋಟಿ.

ಉಪ ಚುನಾವಣೆಯಲ್ಲಿ ಮುಟ್ಟುಗೋಲು ಹಾಕಿದ ನಗದು ₹1.96 ಕೋಟಿ, ₹1.79 ಕೋಟಿ ಮೌಲ್ಯದ ಮದ್ಯ , ₹1.83 ಕೋಟಿ ಮೌಲ್ಯದ ಮಾದಕ ವಸ್ತು, ₹4.96 ಕೋಟಿ ಮೌಲ್ಯದ ಉಚಿತ ಕೊಡುಗೆ, ₹0.30 ಕೋಟಿ ಮೌಲ್ಯದ ಬೆಲೆಬಾಳುವ ಲೋಹ ವಶ ಪಡಿಸಿಕೊಳ್ಳಲಾಗಿದೆ. ಇಲ್ಲಿ ವಶ ಪಡಿಸಿಕೊಂಡಿರುವ ವಸ್ತುಗಳ ಒಟ್ಟು ಮೊತ್ತ ₹10.84 ಕೋಟಿ.

ಈ ರಾಜ್ಯಗಳಿಂದ ವಶ ಪಡಿಸಿಕೊಂಡಿರುವ ಒಟ್ಟು ನಗದು ಪ್ರಮಾಣ ₹344.85  ಕೋಟಿ, ಮದ್ಯ ₹85.01 ಕೋಟಿ, ಮಾದಕ ವಸ್ತುಗಳ ಮೌಲ್ಯ ₹161.60 ಕೋಟಿ, ಉಚಿತ ಕೊಡುಗೆಯ ಮೌಲ್ಯ ₹139.18 , ಬೆಲೆ ಬಾಳುವ ಲೋಹದ ಮೌಲ್ಯ ₹270.80, ಒಟ್ಟು ಮೊತ್ತ  ₹1001.44 ಆಗಿದೆ.

ಇದನ್ನೂ ಓದಿ:  ಚುನಾವಣಾ ಪ್ರಚಾರದ ವೇಳೆ ಕೊವಿಡ್​ ನಿಯಮ ಪಾಲಿಸದಿದ್ದರೆ ಕ್ರಮ: ರಾಜಕಾರಣಿಗಳಿಗೆ ಚುನಾವಣಾ ಆಯೋಗ ಎಚ್ಚರಿಕೆ

(Seizures in Assembly Elections 2021 Crosses Rs 1000 Crores says Election Commission of India)

Follow Us
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ