AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DAP ರಸಗೊಬ್ಬರ ಖರೀದಿ ಸಬ್ಸಿಡಿ 700 ರೂಪಾಯಿಗೆ ಹೆಚ್ಚಳ: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

Subsidy on DAP Fertilizer: ಕೇಂದ್ರ ಸಚಿವ ಸಂಪುಟ ಸಭೆ ನಂತರ ಮಾತನಾಡಿದ ರಸಗೊಬ್ಬರ ಖಾತೆ ರಾಜ್ಯ ಸಚಿವ ಮನಸುಖ್ ಮಾಂಡವಿಯಾ ಅವರು ಈವರೆಗೆ DAP ರಸಗೊಬ್ಬರ ಖರೀದಿ ಮೇಲೆ ರೈತರಿಗೆ 500 ರೂಪಾಯಿ ಸಬ್ಸಿಡಿ ನೀಡಲಾಗುತ್ತಿತ್ತು. ಡಿಎಪಿಗೆ ಒಟ್ಟು 1200 ರೂಪಾಯಿ ಸಬ್ಸಿಡಿ ನೀಡಲು ನಿರ್ಧಾರವಾಗಿದೆ.

DAP ರಸಗೊಬ್ಬರ ಖರೀದಿ ಸಬ್ಸಿಡಿ 700 ರೂಪಾಯಿಗೆ ಹೆಚ್ಚಳ: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
DAP ರಸಗೊಬ್ಬರ ಖರೀದಿ ಸಬ್ಸಿಡಿ 700 ರೂಪಾಯಿಗೆ ಹೆಚ್ಚಳ: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
TV9 Web
| Edited By: |

Updated on:Jun 16, 2021 | 4:06 PM

Share

ನವದೆಹಲಿ: ಇಂದು ಸಭೆ ಸೇರಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡಿದ್ದು, DAP ರಸಗೊಬ್ಬರದ ಮೇಲೆ ರೈತರಿಗೆ ನೀಡುವ ಸಬ್ಸಿಡಿಯನ್ನು 700 ರೂಪಾಯಿಗೆ ಹೆಚ್ಚಿಸಲು ನಿರ್ಧರಿಸಿದೆ.

ಸಂಪುಟ ಸಭೆ ನಂತರ ಮಾತನಾಡಿದ ರಸಗೊಬ್ಬರ ಖಾತೆ ರಾಜ್ಯ ಸಚಿವ ಮನಸುಖ್ ಮಾಂಡವಿಯಾ ಅವರು ಈವರೆಗೆ DAP ರಸಗೊಬ್ಬರ ಖರೀದಿ ಮೇಲೆ ರೈತರಿಗೆ 500 ರೂಪಾಯಿ ಸಬ್ಸಿಡಿ ನೀಡಲಾಗುತ್ತಿತ್ತು. ಡಿಎಪಿಗೆ (ಡೈ ಅಮೋನಿಯಂ ಫಾಸ್ಫೇಟ್​) ಒಟ್ಟು 1200 ರೂಪಾಯಿ ಸಬ್ಸಿಡಿ ನೀಡಲು ನಿರ್ಧಾರವಾಗಿದೆ. ರೈತರಿಗೆ ಒಂದು ಮೂಟೆ ಡಿಎಪಿ 1,200 ರೂಪಾಯಿಗೆ ಸಿಗಲಿದೆ. ಮಾರ್ಕೆಟ್‌ನಲ್ಲಿ 1 ಮೂಟೆ ಡಿಎಪಿ ಬೆಲೆ 2,400 ರೂ. ಇದೆ. ಯೂರಿಯಾಗೆ 900 ರೂಪಾಯಿ ಸಬ್ಸಿಡಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಜಲಸಾರಿಗೆ ಮಾರ್ಗದ ಅಭಿವೃದ್ಧಿಗೆ ನಿರ್ಣಯ: ಸಚಿವ ಪ್ರಕಾಶ್ ಜಾವಡೇಕರ್

ಇದೇ ವೇಳೆ ಕೇಂದ್ರ ಸಂಪುಟ ಸಭೆ ಬಳಿಕ ಮಾತನಾಡಿದ ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಒಳನಾಡು ಜಲಸಾರಿಗೆ ಮಾರ್ಗದ ಅಭಿವೃದ್ಧಿಗೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಮುದ್ರದ ಆಳದ ಮಿಷನ್ ರಚನೆಗೆ ಕೇಂದ್ರ ಸಂಪುಟ ಒಪ್ಪಿಗೆ ಸಿಕ್ಕಿದೆ. ಇದರ ಮೂಲಕ ಸಾಕಷ್ಟು ಅಭಿವೃದ್ಧಿ ಕಾಣಬಹುದಾಗಿದೆ ಎಂದರು.

ಸಮುದ್ರದ 6 ಸಾವಿರ ಮೀಟರ್ ಒಳಭಾಗದಲ್ಲಿ ಖನಿಜಗಳಿವೆ. ಸಮುದ್ರದ ಆಳದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಅಧ್ಯಯನ ನಡೆಯಲಿದೆ. ಅಡ್ವಾನ್ಸ್ ಮರೀನ್ ಸ್ಟೇಷನ್ ಸ್ಥಾಪಿಸಲಾಗುತ್ತೆ ಎಂದು ಸಚಿವ ಜಾವಡೇಕರ್ ಇದೇ ವೇಳೆ ಹೇಳಿದರು.

(subsidy on dap fertilizer purchase increased by 200 rupees says central agriculture minister mansukh mandaviya)

ಡಿಎಪಿ ರಸಗೊಬ್ಬರ ಮೇಲಿನ ಸಬ್ಸಿಡಿಯನ್ನು 140% ಹೆಚ್ಚಿಸಿ ರೈತರಿಗೆ ದೊಡ್ಡ ಕೊಡುಗೆ ನೀಡಿದ ಕೇಂದ್ರ ಸರ್ಕಾರ

Published On - 3:55 pm, Wed, 16 June 21