AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದ್ವೇಷ ಭಾಷಣ ಪ್ರಕರಣದ ವಿಚಾರಣೆಯನ್ನು ಆಗಸ್ಟ್‌ಗೆ ಮುಂದೂಡಿದ ಸುಪ್ರೀಂಕೋರ್ಟ್

ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠಕ್ಕೆ ಅವರು, ಸರ್ಕಾರ ಸಲ್ಲಿಸಿದ ಪ್ರತಿ-ಅಫಿಡವಿಟ್‌ನಲ್ಲಿ ಪ್ರಥಮ ಮಾಹಿತಿ ವರದಿಗಳ (ಎಫ್‌ಐಆರ್) ಪ್ರತಿಗಳನ್ನು ದಾಖಲೆಯಲ್ಲಿ ನಮೂದಿಸಿದ್ದರೂ ಸಹ ಒದಗಿಸಿಲ್ಲ ಎಂದು ಹೇಳಿದರು

ದ್ವೇಷ ಭಾಷಣ ಪ್ರಕರಣದ ವಿಚಾರಣೆಯನ್ನು ಆಗಸ್ಟ್‌ಗೆ ಮುಂದೂಡಿದ ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
ರಶ್ಮಿ ಕಲ್ಲಕಟ್ಟ
|

Updated on: May 17, 2023 | 6:44 PM

Share

ದೇಶದಾದ್ಯಂತ ದ್ವೇಷ ಭಾಷಣ (Hate Speech) ಸೇರಿದಂತೆ ದ್ವೇಷದ ಅಪರಾಧಗಳ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಭಾರತದ ಸುಪ್ರೀಂಕೋರ್ಟ್(Supreme Court) ಆಗಸ್ಟ್‌ಗೆ ಮುಂದೂಡಿದೆ. ದ್ವೇಷ ಭಾಷಣದ ನಿದರ್ಶನಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದ ಆರೋಪದ ಮೇಲೆ ಮಹಾರಾಷ್ಟ್ರ ರಾಜ್ಯದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವ ಅರ್ಜಿದಾರರ ಪರವಾಗಿ ವಕೀಲ ನಿಜಾಮ್ ಪಾಷಾ ವಾದ ಮಂಡಿಸಿದರು. ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠಕ್ಕೆ ಅವರು, ಸರ್ಕಾರ ಸಲ್ಲಿಸಿದ ಪ್ರತಿ-ಅಫಿಡವಿಟ್‌ನಲ್ಲಿ ಪ್ರಥಮ ಮಾಹಿತಿ ವರದಿಗಳ (ಎಫ್‌ಐಆರ್) ಪ್ರತಿಗಳನ್ನು ದಾಖಲೆಯಲ್ಲಿ ನಮೂದಿಸಿದ್ದರೂ ಸಹ ಒದಗಿಸಿಲ್ಲ ಎಂದು ಹೇಳಿದರು. ನಮಗೆ ತಿಳಿದಿರುವಂತೆ, ಕೆಲವು ದಿನಾಂಕಗಳು ತಪ್ಪಾಗಿವೆ. ನಮ್ಮ ಮಾಹಿತಿಯ ಪ್ರಕಾರ, ಎಫ್‌ಐಆರ್‌ಗಳು ಇತರ ಕೆಲವು ದಿನಾಂಕಗಳು ಮತ್ತು ಇತರ ಕೆಲವು ಘಟನೆಗಳಿಗೆ ಸಂಬಂಧಿಸಿದೆ ಎಂದು ಅವರು ಹೇಳಿದ್ದಾರೆ.

ನೀವು ಅರ್ಜಿ ಸಲ್ಲಿಸಿ ನಿಮ್ಮ ಮೌಖಿಕ ಪ್ರತಿಪಾದನೆಗಳಿಗೆ ನಾನು ಹೇಗೆ ಪ್ರತಿಕ್ರಿಯಿಸಲಿ? ದೆಹಲಿಯಲ್ಲಿ ತಂಗಿರುವ ಅರ್ಜಿದಾರರು ಮುಂಬೈನಲ್ಲಿ ನಡೆದ ಕೆಲವು ಘಟನೆಗಳನ್ನು ಮೌಖಿಕವಾಗಿ ಹೇಳುತ್ತಿದ್ದಾರೆ ಎಂದು ಸಾಲಿಸಿಟರ್-ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ. ಸಂಬಂಧಿತ ಎಫ್‌ಐಆರ್‌ಗಳ ಪ್ರತಿಗಳನ್ನು ಪೂರೈಸಲು ವಿನಂತಿಸುವುದು ನನ್ನ ಏಕೈಕ ಉದ್ದೇಶವಾಗಿದೆ ಎಂದು ಪಾಷಾ ಸ್ಪಷ್ಟಪಡಿಸಿದ್ದಾರೆ.

ಏನು ಸಲ್ಲಿಸಬೇಕೋ ಅದನ್ನು ನಾವು ಸಲ್ಲಿಸುತ್ತೇವೆ ಎಂದು ವಕೀಲರು ಹೇಳಿದಾಗ ಪ್ರತಿ-ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾದ ಎಫ್‌ಐಆರ್‌ನ ಪ್ರತಿಗಳನ್ನು ಅರ್ಜಿದಾರರಿಗೆ ಲಭ್ಯವಾಗುವಂತೆ ಮಾಡುವಂತೆ ಪೀಠ ಹೇಳಿದೆ. ಇದಲ್ಲದೆ, ಮಾನವ ಹಕ್ಕುಗಳ ಸಂಘಟನೆಯು ಅಫಿಡವಿಟ್ ಸಲ್ಲಿಸಿದೆ ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಪಾರಿಖ್ ಪೀಠಕ್ಕೆ ತಿಳಿಸಿದರು. ಇದು ಮುಖ್ಯವಾಗಿದೆ ಎಂದು ಹೇಳಿದ ಪಾರಿಖ್, “ಮಹಾರಾಷ್ಟ್ರ ರಾಜ್ಯದಲ್ಲಿ ದ್ವೇಷದ ಭಾಷಣದ ಘಟನೆಗಳ ಸಂಖ್ಯೆ ಇನ್ನೂ ಮುಂದುವರೆದಿದೆ. ನಾವು ಅದನ್ನು ನಮ್ಮ ಅಫಿಡವಿಟ್‌ನಲ್ಲಿ ಹಾಕಿದ್ದೇವೆ ಎಂದಿದ್ದಾರೆ.

ಎಫ್‌ಐಆರ್‌ಗಳನ್ನು ದಾಖಲಿಸಿ ಅಥವಾ ಇಲ್ಲವೇ ಮ್ಯಾಜಿಸ್ಟ್ರೇಟ್‌ ಬಳಿ ಹೋಗಿ. ಸುಪ್ರೀಂಕೋರ್ಟ್ ಮ್ಯಾಜಿಸ್ಟ್ರೇಟ್ ಕೋರ್ಟ್ ಅಲ್ಲ ಎಂದು ನ್ಯಾಯಮೂರ್ತಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಅದೇ ವೇಳೆ ದ್ವೇಷ ಭಾಷಣದ ಘಟನೆಗಳು ಹೆಚ್ಚೂ ಆಗಿಲ್ಲ, ಕಡಿಮೆಯೂ ಆಗಿಲ್ಲ ಎಂದು ಮೆಹ್ತಾ ಹೇಳಿದ್ದಾರೆ.

ಇದನ್ನೂ ಓದಿ: ಮಾದಕವಸ್ತು ಕಳ್ಳಸಾಗಣೆ, ಭಯೋತ್ಪಾದನಾ ಚಟುವಟಿಕೆ; ಆರು ರಾಜ್ಯಗಳಲ್ಲಿ ಎನ್​ಐಎ ದಾಳಿ

ಅರ್ಜಿದಾರರು ಸುಪ್ರೀಂಕೋರ್ಟ್‌ಗೆ ಆಯ್ದ ಪ್ರಕರಣಗಳನ್ನು ತರುತ್ತಿದ್ದಾರೆ. ಮಹಾರಾಷ್ಟ್ರವನ್ನು ಹೊರತುಪಡಿಸಿ ಇತರ ರಾಜ್ಯಗಳು ಶಾಂತಿಯುತವಾಗಿವೆಯೇ ಅಥವಾ ಇತರ ಸಮುದಾಯಗಳಿಂದ ಯಾವುದೇ ದ್ವೇಷದ ಭಾಷಣವಿಲ್ಲವೇ? ಇದು ಆಯ್ದ ದಾವೆ.ನ್ಯಾಯಾಲಯ ನಾವು ಸಲಹೆಗಳನ್ನು ನೀಡಬೇಕೆಂದು ಬಯಸಿದ್ದರು, ಆದ್ದರಿಂದ ನಾವು ಅದನ್ನು ನಮ್ಮ ಅಫಿಡವಿಟ್‌ನಲ್ಲಿ ಸೇರಿಸಿದ್ದೇವೆ ಎಂದು ಪಾರಿಖ್ ಹೇಳಿದಾಗ,ಈ ನ್ಯಾಯಾಲಯಕ್ಕೆ ನಿಮ್ಮ ಸಲಹೆಗಳು ಬೇಕಾಗಿಲ್ಲ, ನೀವು ಅವುಗಳನ್ನು ನೀಡಲು ಬಯಸಿದ್ದೀರಿ. ಸುಪ್ರೀಂಕೋರ್ಟ್ ಸಲಹೆಗಳನ್ನು ಬಯಸುವುದಿಲ್ಲ, ಅದು ನಿರ್ದೇಶನಗಳನ್ನು ನೀಡುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಹಾಗಾದರೆ ನಾನು ಸುಮ್ಮನಿರುತ್ತೇನೆ ಎಂದು ಪಾರಿಖ್ ಹೇಳಿದ್ದಾರೆ. ಆದಾಗ್ಯೂ , ನ್ಯಾಯಮೂರ್ತಿ ಜೋಸೆಫ್ ಅವರನ್ನು ಮುಂದುವರಿಸುವಂತೆ ಒತ್ತಾಯಿಸಿದ್ದು ಎಲ್ಲರೂ ಮೌನವಾಗಿದ್ದರೆ, ನ್ಯಾಯಾಲಯವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ” ಎಂದು ಹೇಳಿದರು. ನಂತರ ಹಿರಿಯ ವಕೀಲರು ಪೀಠಕ್ಕೆ, ದ್ವೇಷದ ಭಾಷಣದ ನಿದರ್ಶನಗಳು ಮುಂದುವರಿದಿರುವುದು ಮಾತ್ರವಲ್ಲದೆ, ಪೊಲೀಸರು ದಾಖಲಿಸಿದ ಎಫ್‌ಐಆರ್‌ಗಳ ಪ್ರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

ಹಾಗಾದರೆ ಅವರು ಮ್ಯಾಜಿಸ್ಟ್ರೇಟ್ ಬಳಿಗೆ ಹೋಗಲಿ. ಅಲ್ಲಿ ವ್ಯವಸ್ಥೆ ಇದೆ ಎಂದು ಸಾಲಿಸಿಟರ್ ಜನರಲ್ ಉತ್ತರಿಸಿದ್ದಾರೆ. ಚಿಂತಿಸಬೇಡಿ. ಅದೆಲ್ಲವನ್ನೂ ಪರಿಗಣಿಸಲಾಗುವುದು” ಎಂದು ನ್ಯಾಯಮೂರ್ತಿ ಜೋಸೆಫ್ ಅವರು ಪಾರಿಖ್ ಅವರಿಗೆ ಹೇಳಿದರು. ನ್ಯಾಯವಾದಿ ಕಾಳೀಶ್ವರಂ ರಾಜ್ ಕೂಡ ಧ್ವನಿಗೂಡಿಸಿ, ದ್ವೇಷ ಭಾಷಣದ ವಿರುದ್ಧ ಸ್ವಯಂ ಪ್ರೇರಿತ ಕ್ರಮಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಈ ಹಿಂದೆ ನೀಡಿದ್ದ ನಿರ್ದೇಶನಗಳು ‘ಮುಂದುವರಿಯುವ ಮಂದಗತಿ’ಯ ಲಕ್ಷಣವನ್ನು ಹೊಂದಿವೆ ಎಂದು ಹೇಳಿದರು. “ಇವುಗಳನ್ನು ಉಳಿಸಿಕೊಳ್ಳಬೇಕು ಮತ್ತು ಸಂಪೂರ್ಣಗೊಳಿಸಬೇಕು. ಈ ಆದೇಶಗಳನ್ನು ಅನುಸರಿಸಬೇಕು” ಎಂದು ಅವರು ಹೇಳಿದರು.

ನನಗೆ ಒಂದೇ ಒಂದು ಸಲ್ಲಿಕೆ ಇದೆ, ಅದನ್ನು ವಿಚಾರಣೆ ಮಾಡಿದಾಗ ನಾನು ಮಾಡುತ್ತೇನೆ. ಇದು ಮ್ಯಾಜಿಸ್ಟ್ರೇಟ್‌ನ ನ್ಯಾಯಾಲಯವಲ್ಲ. ಯಾವುದೇ ಉಲ್ಲಂಘನೆಯಾಗಿದ್ದರೆ, ಅಲ್ಲಿ ವ್ಯವಸ್ಥೆ ಇದೆ ಸಾಲಿಸಿಟರ್ ಜನರಲ್ ಮೆಹ್ತಾ ಹೇಳಿದರು. ನಾವು ಅದನ್ನು ಬಿಟ್ಟುಬಿಡುತ್ತೇವೆ ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದರು. ಅಂತಿಮವಾಗಿ ಪೀಠವು ವಿಚಾರಣೆಯನ್ನು ಆಗಸ್ಟ್ ಮೊದಲ ವಾರಕ್ಕೆ ಮುಂದೂಡಲು ನಿರ್ಧರಿಸಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ