ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಜೂನ್​​ನಲ್ಲಿ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆ ಸಾಧ್ಯತೆ

44 ವರ್ಷ ವಯಸ್ಸಿನ ಉದಯನಿಧಿ ಅವರು ಜೂನ್ ವೇಳೆಗೆ ತಮ್ಮ ಬಾಕಿ ಉಳಿದಿರುವ ಚಲನಚಿತ್ರಗಳನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. "ನೆಂಜುಕ್ಕು ನೀಧಿ (ಆರ್ಟಿಕಲ್ 15 ರ ತಮಿಳು ರಿಮೇಕ್) ಸೇರಿದಂತೆ, ಅವರ ಎರಡು ಯೋಜನೆಗಳು ಅಂತಿಮ ಹಂತದಲ್ಲಿವೆ.

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಜೂನ್​​ನಲ್ಲಿ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆ ಸಾಧ್ಯತೆ
ಉದಯನಿಧಿ ಸ್ಟಾಲಿನ್ - ಎಂಕೆ ಸ್ಟಾಲಿನ್
Follow us
| Updated By: ರಶ್ಮಿ ಕಲ್ಲಕಟ್ಟ

Updated on:Apr 29, 2022 | 7:32 PM

ಚೆನ್ನೈ: ಡಿಎಂಕೆ ಶಾಸಕ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಅವರ ಪುತ್ರ ಉದಯನಿಧಿ ಸ್ಟಾಲಿನ್(Udhayanidhi Stalin) ಅವರು ಜೂನ್ ವೇಳೆಗೆ ತಮಿಳುನಾಡು (TamilNadu) ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಪಕ್ಷ ಮತ್ತು ಅವರ ಮೊದಲ ಕುಟುಂಬವು ಸ್ಟಾಲಿನ್‌ನೊಂದಿಗೆ ಮಾಡಿದ ತಪ್ಪನ್ನು ಪುನರಾವರ್ತಿಸಲು ಬಯಸುವುದಿಲ್ಲ ಎಂದು ಡಿಎಂಕೆ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ”ಸ್ಟಾಲಿನ್ ಸಿಎಂ ಆಗಿದ್ದು 70 ವರ್ಷಗಳಲ್ಲಿ. ಮುಂದಿನ ಚುನಾವಣೆಯ ವೇಳೆಗೆ ಅವರಿಗೆ 70 ವಯಸ್ಸಾಗಲಿದೆ. ಇಂತಹ ತಪ್ಪು ಉದಯನಿಧಿ ಅವರ ರಾಜಕೀಯ ಭವಿಷ್ಯದಲ್ಲಿ ಆಗಬಾರದು ಎಂದು ಪಕ್ಷ ಮತ್ತು ಕುಟುಂಬ ನಂಬಿದೆ,” ಎಂದು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. 44 ವರ್ಷ ವಯಸ್ಸಿನ ಉದಯನಿಧಿ ಅವರು ಜೂನ್ ವೇಳೆಗೆ ತಮ್ಮ ಬಾಕಿ ಉಳಿದಿರುವ ಚಲನಚಿತ್ರಗಳನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. “ನೆಂಜುಕ್ಕು ನೀಧಿ (ಆರ್ಟಿಕಲ್ 15 ರ ತಮಿಳು ರಿಮೇಕ್) ಸೇರಿದಂತೆ, ಅವರ ಎರಡು ಯೋಜನೆಗಳು ಅಂತಿಮ ಹಂತದಲ್ಲಿವೆ. ಅವರು ಇನ್ನೂ ಎರಡು ಯೋಜನೆಗಳ ಬಗ್ಗೆ ಚರ್ಚೆಯಲ್ಲಿದ್ದರು. ಆದರೆ ಅವರು ಅವುಗಳಲ್ಲಿ ನಟಿಸುವ ಸಾಧ್ಯತೆಯಿಲ್ಲ ಎಂದು ನಮಗೆ ತಿಳಿದಿದೆ ಎಂದಿ ಡಿಎಂಕೆ ನಾಯಕ ಹೇಳಿದ್ದಾರೆ. ಯೋಜನೆಯ ಬಗ್ಗೆ ಕೇಳಿದಾಗ ಮತ್ತೊಬ್ಬ ಹಿರಿಯ ಡಿಎಂಕೆ ನಾಯಕರು ಇದು ಸಂಭವಿಸುವ ಸಾಧ್ಯತೆಯಿದೆ ಎಂದು ಹೇಳಿದರು. “

ನಾವು ಮೇ ಮೊದಲ ವಾರದಲ್ಲಿ ಒಂದು ವರ್ಷವನ್ನು (ಅಧಿಕಾರದಲ್ಲಿ) ಪೂರ್ಣಗೊಳಿಸುತ್ತೇವೆ. ಉದಯನಿಧಿ ಅವರ ಪ್ರವೇಶವನ್ನು ವಿಳಂಬ ಮಾಡಬಾರದು ಎಂಬ ಭಾವನೆ ನಮ್ಮೆಲ್ಲರಲ್ಲಿದೆ. ಅವರು ಸಚಿವ ಸಂಪುಟಕ್ಕೆ ಸೇರ್ಪಡೆಯಾದರೆ ಯಾವ ಖಾತೆ ನೀಡಲಾಗುತ್ತದೆ ಎಂಬುದನ್ನು ನಿರ್ಧರಿಸಿಲಾಗಿಲ್ಲ. ಆದರೆ ಅವರ ಸೇರ್ಪಡೆಯು ಇತರರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ಏಕೆಂದರೆ ಯಾವುದೇ ಸಚಿವರನ್ನು ಬದಲಾಯಿಸದೆ ಅವರನ್ನು ಸಂಪುಟಕ್ಕೆ ಸೇರಿಸಬಹುದು ಎಂದು ಡಿಎಂಕೆ ನಾಯಕ ಹೇಳಿದರು.

ಉದಯನಿಧಿಗೆ ನೀಡಲಾದ ಖಾತೆ ಸ್ವಯಂಚಾಲಿತವಾಗಿ ಬೆಳಕಿಗೆ ಬರುತ್ತದೆ, ಅದು ಸಾರ್ವಜನಿಕ ಪರಿಶೀಲನೆಯನ್ನು ಸಹ ಎದುರಿಸುತ್ತದೆ. ಮೇಯರ್ ಆಗಿ (ಚೆನ್ನೈನ) ಅವರ ಅಧಿಕಾರಾವಧಿಯನ್ನು ಹೊರತುಪಡಿಸಿ, ಸ್ಟಾಲಿನ್ ಅವರಿಗೆ ಬಹಳಷ್ಟು ಸಹಾಯ ಮಾಡಿದ್ದು 2006-’11 ಸರ್ಕಾರದಲ್ಲಿ ಅವರ ಸ್ಥಳೀಯ ಸಂಸ್ಥೆಯ ಜವಾಬ್ದಾರಿಯಾಗಿತ್ತು. ಉದಯನಿಧಿ ಅವರ ಇದೇ ರೀತಿ ಪರಿಗಣಿಸಲಾಗುತ್ತಿದೆ. ಗರಿಷ್ಠ ಸಂಖ್ಯೆಯ ಜನರನ್ನು ಭೇಟಿ ಮಾಡಲು ಅವರು ರಾಜ್ಯದಾದ್ಯಂತ ಪ್ರಯಾಣಿಸಬೇಕೆಂದು ಒತ್ತಾಯಿಸುವ ಜವಾಬ್ದಾರಿ. ಅವರಿನ್ನೂ ಚಿಕ್ಕವರು, ಅವರು ಉತ್ತರದಿಂದ ದಕ್ಷಿಣಕ್ಕೆ ಮತ್ತು ಪಶ್ಚಿಮದಿಂದ ಪೂರ್ವಕ್ಕೆ ಪ್ರಯಾಣಿಸಬಹುದು. ಅವರ ಉತ್ತಮ ಕಾರ್ಯನಿರ್ವಹಣೆಯ ಜೊತೆಗೆ, ಆಡಳಿತ, ನಿಧಿಗಳು ಮತ್ತು ಕೇಂದ್ರ ಸರ್ಕಾರ ಮತ್ತು ಅವರ ಸಂಪನ್ಮೂಲಗಳನ್ನು ನಿಭಾಯಿಸುವುದು ಅವರ ಭವಿಷ್ಯಕ್ಕಾಗಿ ನಿರ್ಣಾಯಕವಾಗಿದೆ.

ರಾಜಕೀಯದಲ್ಲಿ ಉದಯನಿಧಿ ಅವರ ಮೇಲ್ದರ್ಜೆಗೇರಿಸುವುದು ಪಕ್ಷದಲ್ಲಿ ಪ್ರಾಥಮಿಕವಾಗಿ ಅವರ ತಾಯಿ ದುರ್ಗಾ ಅವರ ಕನಸಾಗಿದೆ. ಡಿಎಂಕೆ ನಾಯಕತ್ವವು ಉದಯನಿಧಿಯವರ ಬೆಳವಣಿಗೆಗೆ ಯಾವುದೇ ಆಂತರಿಕ ವಿರೋಧವಿರುವುದಿಲ್ಲ ಎಂದು ನಂಬಿದ್ದರೂ, ದಿ ಇಂಡಿಯನ್ ಎಕ್ಸ್‌ಪ್ರೆಸ್ ಜತೆ ಮಾತನಾಡಿದ ನಾಯಕರೊಬ್ಬರು “ಕುಟುಂಬದಲ್ಲಿ ಘರ್ಷಣೆಗಳು ಇರಬಹುದು ಆದರೆ ಬಹಳ ಮಹತ್ವದ್ದಾಗಿಲ್ಲ” ಎಂದು ಹೇಳಿದರು. “ಕನಿಮೋಳಿ ಅವರ ಪಾತ್ರ ಮತ್ತು ಅಧಿಕಾರವನ್ನು ಈಗಾಗಲೇ ವ್ಯಾಖ್ಯಾನಿಸಿರುವುದರಿಂದ ಅವರು ವಿರೋಧವನ್ನು ಎತ್ತುವ ನಿರೀಕ್ಷೆಯಿಲ್ಲ” ಎಂದು ಪಕ್ಷದ ಕಾರ್ಯನಿರ್ವಾಹಕರು ಹೇಳಿದ್ದಾರೆ.

ಬಹುಮೂಲಗಳ ಪ್ರಕಾರ ಕಳೆದ ವರ್ಷ ಡಿಎಂಕೆಯ ಚುನಾವಣಾ ಗೆಲುವಿನಿಂದ ಅಳಗಿರಿ ಏನನ್ನೂ ಪಡೆಯದ ಕಾರಣ ಸ್ಟಾಲಿನ್ ಅವರ ಹಿರಿಯ ಸಹೋದರ ಅಳಗಿರಿ ಅವರ ಕುಟುಂಬವು ಹೆಚ್ಚಾಗಿ ಅಸಮಾಧಾನಗೊಂಡಿದೆ. ಅಳಗಿರಿ ಅವರ ಪುತ್ರ ದಯಾನಿಧಿ ಅಳಗಿರಿ ಸೇರಿದಂತೆ ಕುಟುಂಬವು ಚೆನ್ನೈನಲ್ಲಿರುವ ಉದಯನಿಧಿ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದೆ. ಅಳಗಿರಿ ಅವರ ಕುಟುಂಬವು ಅದರ ಸಣ್ಣ ವ್ಯವಹಾರಗಳಿಗೆ “ಕನಿಷ್ಠ ಸಹಾಯ ಮತ್ತು ಸಂಪನ್ಮೂಲಗಳನ್ನು” ಪಡೆಯುತ್ತದೆ ಎಂದು ಮೂಲವೊಂದು ತಿಳಿಸಿದೆ.

ಸ್ಟಾಲಿನ್ ಅವರು ತಡವಾಗಿ ಮೇಲ್ದರ್ಜೆಗೇರಿರುವುದು ಉದಯನಿಧಿ ಆರಂಭಿಕ ಪ್ರವೇಶಕ್ಕೆ ಕಾರಣವಾಗಿರಬಹುದು ಎಂದು ತಿರುಚ್ಚಿಯ ಸಾಮಾಜಿಕ ಬಹಿಷ್ಕಾರ ಮತ್ತು ಅಂತರ್ಗತ ನೀತಿಯ ಅಧ್ಯಯನ ಕೇಂದ್ರದ ರಾಜಕೀಯ ವಿಶ್ಲೇಷಕ ಪಿ ರಾಮಜಯಂ ಹೇಳಿದರು. “ಇದು ಶೀಘ್ರದಲ್ಲೇ ಆಗಬೇಕಾದರೆ, ಅವರು ಉದಯನಿಧಿಯನ್ನು ಹೆಚ್ಚು ಕಾಲ ಕಾಯುವಂತೆ ಮಾಡಬಾರದು ಎಂದು ಅವರು ಯೋಚಿಸುತ್ತಿರಬಹುದು. ರಾಜ್ಯ ಸಚಿವ ಸಂಪುಟಕ್ಕೆ ಶೀಘ್ರವಾಗಿ ಪ್ರವೇಶಿಸುವುದು ಎಂದರೆ ಸ್ಟಾಲಿನ್‌ಗಿಂತ ಮುಂಚೆಯೇ ಅವರು ಪ್ರಮುಖ ವ್ಯಕ್ತಿಯಾಗಿ ವಿಕಸನಗೊಳ್ಳುತ್ತಾರೆ ಎಂದರ್ಥ. ಅಂತಹ ಜವಾಬ್ದಾರಿಗಳು ಅವರಿಗೆ ಆಡಳಿತಾತ್ಮಕ ನಿರ್ಧಾರಗಳು ಮತ್ತು ಸರ್ಕಾರದ ಕಾರ್ಯಾಚರಣೆಗಳ ಪರಿಚಯವನ್ನು ನೀಡುತ್ತದೆ. ವಂಶಾಡಳಿತ ರಾಜಕಾರಣವನ್ನು ಇಂದಿನ ದಿನಗಳಲ್ಲಿ ಜನರಿಗೆ ಅರಗಿಸಿಕೊಳ್ಳುವುದು ಕಷ್ಟದ ವಿಷಯವಲ್ಲ. ಇದು ಈಗ ಎಲ್ಲಾ ರಾಜಕೀಯ ಪಕ್ಷಗಳ ಭಾಗವಾಗಿದೆ. ರಾಜವಂಶದ ಕುಟುಂಬಗಳಿಂದ ಹೊರಹೊಮ್ಮುವ ನಾಯಕರನ್ನು ಈಗ ಮುಂದಿನ ಪೀಳಿಗೆಯ ನಾಯಕರನ್ನಾಗಿಯೂ ನೋಡಲಾಗುತ್ತದೆ ಎಂದಿದ್ದಾರೆ ರಾಮಜಯಂ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 7:10 pm, Fri, 29 April 22