AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪನ 45 ಲಕ್ಷ ರೂ. ಹಣಕ್ಕಾಗಿ ಲವರ್ ಜೊತೆ ಸೇರಿ ತಾಯಿಯನ್ನೇ ಕೊಂದ ದತ್ತು ಮಗಳು!

ಜಾರ್ಖಂಡ್​​​ನಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ. ಜಾರ್ಖಂಡ್‌ನ ರಾಂಚಿಯಲ್ಲಿ ಮೃತಪಟ್ಟ ಅಪ್ಪನ ಹಣದಾಸೆಗೆ ಯುವತಿಯೊಬ್ಬಳು ತನ್ನ ಅಮ್ಮನನ್ನೇ ಕೊಲೆ ಮಾಡಿದ್ದಾಳೆ. ನಂತರ ಆಕೆ ತನ್ನ ತಾಯಿ ಬಾತ್ ರೂಂನಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾಳೆ. ಉತ್ತರ ಪ್ರದೇಶ ಮತ್ತು ಹಜಾರಿಬಾಗ್‌ನಲ್ಲಿ ವಾಸಿಸುವ ಪರ್ವೀನ್ ಅವರ ಸಂಬಂಧಿಕರು ಭಾನುವಾರ ಅಂತಿಮ ನಮನ ಸಲ್ಲಿಸಲು ಮತ್ತು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ರಾಂಚಿಗೆ ಆಗಮಿಸಿದರು. ಅದಾದ 2 ದಿನಗಳ ನಂತರ ಅಪ್ರಾಪ್ತ ಬಾಲಕಿ ಮತ್ತು ಆಕೆಯ ಪ್ರೇಮಿಯನ್ನು ಬಂಧಿಸಲಾಯಿತು.

ಅಪ್ಪನ 45 ಲಕ್ಷ ರೂ. ಹಣಕ್ಕಾಗಿ ಲವರ್ ಜೊತೆ ಸೇರಿ ತಾಯಿಯನ್ನೇ ಕೊಂದ ದತ್ತು ಮಗಳು!
Crime NewsImage Credit source: iStock
ಸುಷ್ಮಾ ಚಕ್ರೆ
|

Updated on: Apr 30, 2026 | 10:05 PM

Share

ರಾಂಚಿ, ಏಪ್ರಿಲ್ 30: ಆ ದಂಪತಿಗೆ ಮಕ್ಕಳಿರಲಿಲ್ಲ. ಹೀಗಾಗಿ, ಹೆಣ್ಣುಮಗುವೊಂದನ್ನು ದತ್ತು ಪಡೆದು, ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸಿದ್ದರು. ಆದರೆ, ಆ ಮಗಳೇ ತಮ್ಮ ಪಾಲಿಗೆ ಮೃತ್ಯುವಾಗುತ್ತಾಳೆ ಎಂದು ಅವರು ಊಹೆ ಕೂಡ ಮಾಡಿರಲಿಲ್ಲ. ಇದು ಜಾರ್ಖಂಡ್​​ನಲ್ಲಿ ನಡೆದ ಕತೆ. ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಪ್ರಿಯಕರ ಮತ್ತು ಅವನ ಮೂವರು ಸ್ನೇಹಿತರೊಂದಿಗೆ ಸೇರಿ ಜಾರ್ಖಂಡ್‌ನ (Jharkhand) ರಾಂಚಿಯಲ್ಲಿ ತನ್ನ ತಾಯಿಯನ್ನು ಕೊಂದಿದ್ದಾಳೆ. ಆ ಹುಡುಗಿಯನ್ನು ಬಂಧಿಸಲಾಗಿದೆ. ಆಕೆಯ ಗೆಳೆಯ ಮತ್ತು ಇನ್ನೊಬ್ಬ ಆರೋಪಿಯನ್ನು ಕೂಡ ಬಂಧಿಸಲಾಗಿದೆ.

ಜಾರ್ಖಂಡ್​​ನ ಮನಿಟೋಲಾದ ನಿವಾಸಿ ನಹಿದಾ ಪರ್ವೀನ್ ತನ್ನ 17 ವರ್ಷದ ದತ್ತು ಮಗಳ ಜೊತೆ ವಾಸಿಸುತ್ತಿದ್ದರು. 4 ವರ್ಷಗಳ ಹಿಂದೆ ವಿದ್ಯುತ್ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ತನ್ನ ಪತಿಯ ಮರಣದ ನಂತರ ಪರ್ವೀನ್ 45 ಲಕ್ಷ ರೂ. ಆರ್ಥಿಕ ಪರಿಹಾರವನ್ನು ಪಡೆದಿದ್ದರು. ಆ ಹಣಕ್ಕೆ ಅವರ ದತ್ತು ಮಗಳು ಏಕೈಕ ನಾಮಿನಿಯಾಗಿದ್ದಳು. ಆ ಹುಡುಗಿ ಆಗಾಗ ಬ್ಯಾಂಕ್ ಖಾತೆಯಿಂದ ಹಣವನ್ನು ಡ್ರಾ ಮಾಡಿ ತನ್ನ ಪ್ರೇಮಿಯಾದ 20 ವರ್ಷದ ಅರ್ಬಾಜ್‌ಗೆ ನೀಡುತ್ತಿದ್ದಳು. ಪರ್ವೀನ್​ಗೆ ಈ ವಿಷಯ ಗೊತ್ತಾದ ಮೇಲೆ ಆಕೆ ಈ ರೀತಿ ಹಣ ನೀಡುವುದನ್ನು ನಿಲ್ಲಿಸಿದ್ದಳು. ಇದರಿಂದ ಆಕೆಯ ಪ್ರೇಮಿ ಕೋಪ ಮಾಡಿಕೊಂಡಿದ್ದ. ಹೀಗಾಗಿ, ತನ್ನ ತಾಯಿಯ ಕಾಟದಿಂದ ಪಾರಾಗಲು ಆಕೆ ಲವರ್ ಜೊತೆ ಸೇರಿ ಆಕೆಯನ್ನು ಕೊಲ್ಲುವ ನಿರ್ಧಾರ ಮಾಡಿದ್ದಳು.

ಇದನ್ನೂ ಓದಿ: ಅತಿಥಿಗಳ ನಡುವೆ ಕೂಲರ್​​ಗಾಗಿ ಜಗಳ; ಸಾವಿನ ಮನೆಯಾದ ಮದುವೆಮನೆ

ನಹಿದಾ ಪರ್ವೀನ್ ಅವರನ್ನು ಕೊಂದ ನಂತರ ಅವರ 17 ವರ್ಷದ ದತ್ತು ಮಗಳು ತನ್ನ ತಾಯಿ ಸ್ನಾನಗೃಹದಲ್ಲಿ ಬಿದ್ದು ಮೃತಪಟ್ಟಿದ್ದಾಳೆ ಎಂದು ಕುಟುಂಬದ ಸದಸ್ಯರಿಗೆ ತಿಳಿಸಿದ್ದಾಳೆ. ಹೀಗಾಗಿ, ಸಂಬಂಧಿಕರು ಪರ್ವೀನ್‌ಗೆ ಅಂತಿಮ ನಮನ ಸಲ್ಲಿಸಲು ಮತ್ತು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ರಾಂಚಿಗೆ ಬಂದರು. ಆದರೆ, ದಾದ 2 ದಿನಗಳ ನಂತರ, ಶವವನ್ನು ಅಗೆದು ಹೊರತೆಗೆದ ನಂತರ ಪರ್ವೀನ್‌ನನ್ನು ಕೊಲೆ ಮಾಡಿದ್ದಕ್ಕಾಗಿ ಹದಿಹರೆಯದವರನ್ನು ಬಂಧಿಸಲಾಯಿತು.

ಪರ್ವೀನ್‌ರನ್ನು ಕೊಂದರೆ 45 ಲಕ್ಷ ರೂ. ಹಣ ಬೇಗ ತಮ್ಮ ಕೈ ಸೇರುತ್ತದೆ ಮತ್ತು ಅಪ್ಪನ ಉದ್ಯೋಗವೂ ಸಿಗುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿತ್ತು. ಇದೇ ಕಾರಣದಿಂದ ಏಪ್ರಿಲ್ 24 ರಂದು ಪರ್ವೀನ್ ಅವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲ್ಲಲಾಗಿತ್ತು. ಆಕೆ ಬಿಡಿಸಿಕೊಳ್ಳಲು ಯತ್ನಿಸಿದಾಗ ಆಕೆಯ ಕುತ್ತಿಗೆಗೆ ಗಾಯವಾಗಿತ್ತು. ವಿಪರೀತ ರಕ್ತಸ್ರಾವವಾಗಿ ಅವರು ಮೃತಪಟ್ಟಿದ್ದರು. ಬಳಿಕ ಪರ್ವೀನ್ ಅವರ ದೇಹವನ್ನು ಡೀಪ್ ಫ್ರೀಜರ್‌ನಲ್ಲಿ ಇರಿಸಲಾಗಿತ್ತು. ಅವರ ಹಾಸಿಗೆಯನ್ನು ತೆಗೆದು ಮನೆಯ ಬಳಿಯ ಮರದ ಬಳಿ ಮರೆಮಾಡಲಾಯಿತು.

ಇದನ್ನೂ ಓದಿ: ಹೆಂಡತಿಯನ್ನು ಕೊಚ್ಚಿ ಕೊಲೆಗೈದು ಮಗುವಿನೊಂದಿಗೆ ಬಾವಿಗೆ ಹಾರಿದ ಗಂಡ; ಸ್ಥಳೀಯರಿಂದ ಮಗುವಿನ ರಕ್ಷಣೆ, ಲಕ್ಷ್ಮೀಪುತ್ರ ಸಾವು!

ಈ ಕೊಲೆಯನ್ನು ಮಾಡಿದ ನಂತರ ಆ ಯುವತಿ ತನ್ನ ಸಂಬಂಧಿಕರಿಗೆ ಮರುದಿನ ಕರೆ ಮಾಡಿ ಬೆಳಿಗ್ಗೆ ಸ್ನಾನಗೃಹದಲ್ಲಿ ಬಿದ್ದು ಪರ್ವೀನ್ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದಳು. ಪರ್ವೀನ್ ಮೃತದೇಹವನ್ನು ಮರುದಿನ ಸಮಾಧಿ ಮಾಡಲಾಯಿತು. ಆದರೆ, ಪರ್ವೀನ್ ಕುತ್ತಿಗೆಯಲ್ಲಿ ಗಾಯದ ಗುರುತುಗಳನ್ನು ಕೆಲವು ಸಂಬಂಧಿಕರು ಗಮನಿಸಿದ್ದು, ಇದು ಅನುಮಾನಕ್ಕೆ ಕಾರಣವಾಯಿತು. ಭಾನುವಾರ, ಪರ್ವೀನ್ ಅವರ ಸೋದರ ಮಾವ ಲಿಖಿತ ದೂರು ದಾಖಲಿಸಿದರು. ಪೊಲೀಸರು ತನಿಖೆ ಆರಂಭಿಸಿ ಅಪ್ರಾಪ್ತ ಬಾಲಕಿಯನ್ನು ವಶಕ್ಕೆ ಪಡೆದರು. ಬಳಿಕ ಬಿಹಾರದ ಗಯಾದ ಆಕೆಯ ಪ್ರೇಮಿ ಸೇರಿದಂತೆ ಇಬ್ಬರನ್ನು ಬಂಧಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us