AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

E20 ಪೆಟ್ರೋಲ್‌ನಲ್ಲಿ ಕ್ಲೋರೈಡ್, ತೇವಾಂಶ ಪತ್ತೆ ವದಂತಿ ಸುಳ್ಳು: ಗ್ರಾಹಕರಿಗೆ ಆತಂಕ ಬೇಡ ಎಂದ ತೈಲ ಕಂಪನಿಗಳು

E20 ಪೆಟ್ರೋಲ್‌ನಲ್ಲಿ ಕ್ಲೋರೈಡ್ ಮತ್ತು ನೀರಿನ ಅಂಶವಿದೆ ಎಂಬ ಮಾಧ್ಯಮಗಳ ವರದಿಯನ್ನು ತೈಲ ಕಂಪನಿಗಳು (OMCs) ತಳ್ಳಿಹಾಕಿವೆ. ದೇಶಾದ್ಯಂತ ನಡೆಸಿದ ತೀವ್ರ ನಿಗಾ ತಪಾಸಣೆಯಲ್ಲಿ ಇಂಧನದ ಗುಣಮಟ್ಟವು ನಿಯಮಿತ ಮಾನದಂಡಗಳ ಮಿತಿಯಲ್ಲೇ ಇರುವುದು ದೃಢಪಟ್ಟಿದೆ. ದೇಶದ 90,000 ಪೆಟ್ರೋಲ್ ಬಂಕ್‌ಗಳಲ್ಲಿ ದಿನಕ್ಕೆ 8-12 ಬಾರಿ ಗುಣಮಟ್ಟದ ತಪಾಸಣೆ ನಡೆಸಲಾಗುತ್ತಿದ್ದು, ಗ್ರಾಹಕರು ಯಾವುದೇ ಆತಂಕವಿಲ್ಲದೆ ಇಂಧನ ಬಳಸಬಹುದು ಎಂದು ಕಂಪನಿಗಳು ಭರವಸೆ ನೀಡಿವೆ.

E20 ಪೆಟ್ರೋಲ್‌ನಲ್ಲಿ ಕ್ಲೋರೈಡ್, ತೇವಾಂಶ ಪತ್ತೆ ವದಂತಿ ಸುಳ್ಳು: ಗ್ರಾಹಕರಿಗೆ ಆತಂಕ ಬೇಡ ಎಂದ ತೈಲ ಕಂಪನಿಗಳು
ಸಾಂದರ್ಭಿಕ ಚಿತ್ರImage Credit source: the times of India
ಭಾವನಾ ಹೆಗಡೆ
|

Updated on:Aug 08, 2026 | 6:45 AM

Share

ಮುಖ್ಯಾಂಶಗಳು

  • E20 ಪೆಟ್ರೋಲ್ ಕಲುಷಿತಗೊಂಡಿದೆ ಎಂಬ ಮಾಧ್ಯಮಗಳ ವರದಿಗಳು ಸಂಪೂರ್ಣ ಸುಳ್ಳು.
  • ಇಂಧನ ಗುಣಮಟ್ಟ ಪರಿಶೀಲಿಸಲು ಬಂಕ್‌ಗಳಲ್ಲಿ ದಿನಕ್ಕೆ 12 ಬಾರಿ ತಪಾಸಣೆ.
  • ದೇಶಾದ್ಯಂತ ಕ್ಲೋರೈಡ್ ಪ್ರಮಾಣ ನಿಯಮಿತ ಮಟ್ಟಕ್ಕಿಂತ ಅತ್ಯಂತ ಕಡಿಮೆ ದಾಖಲಾಗಿದೆ.

ನವದೆಹಲಿ, ಆಗಸ್ಟ್ 08: ಇತ್ತೀಚಿನ ದಿನಗಳಲ್ಲಿ E20 ಪೆಟ್ರೋಲ್‌ನಲ್ಲಿ (ಎಥನಾಲ್ ಮಿಶ್ರಿತ ಪೆಟ್ರೋಲ್) ಅತಿಯಾದ ಕ್ಲೋರೈಡ್ ಮತ್ತು ತೇವಾಂಶ (ನೀರಿನ ಅಂಶ) ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದ ಬೆನ್ನಲ್ಲೇ, ದೇಶದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು (OMCs) ದೇಶಾದ್ಯಂತ ತೀವ್ರ ನಿಗಾ ವಹಿಸಿ ತಪಾಸಣೆ ನಡೆಸಿವೆ. ಈ ತಪಾಸಣೆಯಲ್ಲಿ ಇಂಧನದ ಗುಣಮಟ್ಟವು ನಿಗದಿತ ಮಾನದಂಡಗಳ ಒಳಗೇ ಇರುವುದು ದೃಢಪಟ್ಟಿದ್ದು, ಇಂಧನ ಕಲುಷಿತಗೊಂಡಿದೆ ಎಂಬ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಕಂಪನಿಗಳು ಸ್ಪಷ್ಟಪಡಿಸಿವೆ. ಮಾಧ್ಯಮಗಳಲ್ಲಿ 500 ppm ವರೆಗೆ ಕ್ಲೋರೈಡ್ ಪತ್ತೆಯಾಗಿದೆ ಎಂದು ಮಾಡಲಾಗಿದ್ದ ಆರೋಪಗಳನ್ನು ತಳ್ಳಿಹಾಕಿರುವ ಕಂಪನಿಗಳು, ಗ್ರಾಹಕರು ಯಾವುದೇ ಆತಂಕವಿಲ್ಲದೆ E20 ಪೆಟ್ರೋಲ್ ಬಳಸಬಹುದು ಎಂದು ತಿಳಿಸಿವೆ.

ದಿನಕ್ಕೆ 8 ರಿಂದ 12 ಬಾರಿ ಗುಣಮಟ್ಟ ತಪಾಸಣೆ!

ಗ್ರಾಹಕರ ನಂಬಿಕೆ ಮತ್ತು ವಾಹನಗಳ ಕಾರ್ಯಕ್ಷಮತೆಗೆ ಯಾವುದೇ ಧಕ್ಕೆಯಾಗದಂತೆ ತಡೆಯಲು ಭಾರತ ಸರ್ಕಾರ ಮತ್ತು ತೈಲ ಕಂಪನಿಗಳು ಕಠಿಣ ಕ್ರಮಗಳನ್ನು ಕೈಗೊಂಡಿವೆ. ದೇಶದ ಪ್ರತಿ ಪೆಟ್ರೋಲ್ ಬಂಕ್‌ಗಳಲ್ಲಿರುವ ಭೂಗತ ಇಂಧನ ಟ್ಯಾಂಕ್‌ಗಳನ್ನು ದಿನಕ್ಕೆ 8 ರಿಂದ 12 ಬಾರಿ ನೀರಿನ ಸೋರಿಕೆ ಮತ್ತು ಸಾಂದ್ರತೆ ತಪಾಸಣೆಗೆ ಒಳಪಡಿಸಲಾಗುತ್ತಿದೆ. ದೇಶಾದ್ಯಂತ ಸುಮಾರು 90,000 ಪೆಟ್ರೋಲ್ ಬಂಕ್‌ಗಳಲ್ಲಿ ಈ ಕಡ್ಡಾಯ ತಪಾಸಣೆ ನಡೆಯುತ್ತಿದ್ದು, ಎಲ್ಲಿಯೂ ನೀರಿನ ಅಂಶ ಪತ್ತೆಯಾಗಿಲ್ಲ.

ಇದರೊಂದಿಗೆ ಸಂಚಾರಿ ಇಂಧನ ಗುಣಮಟ್ಟ ತಪಾಸಣಾ ಪ್ರಯೋಗಾಲಯಗಳನ್ನು (Mobile Fuel Quality Testing Laboratories) ನಿಯೋಜಿಸಲಾಗಿದ್ದು, ಪ್ರಯೋಗಾಲಯಗಳ ಮೂಲಕ ಸ್ವತಂತ್ರವಾಗಿ ಗುಣಮಟ್ಟವನ್ನು ಮರುಪರಿಶೀಲಿಸಲಾಗುತ್ತಿದೆ.

ವಿವಿಧ ಹಂತಗಳಲ್ಲಿ ನಡೆದ ತಪಾಸಣೆ

  • ಶುದ್ಧೀಕರಣ ಹಂತ: ರಿಫೈನರಿಗಳಿಂದ ಹೊರಬರುವ ಪೆಟ್ರೋಲ್ ಮಾದರಿಗಳನ್ನು ಪರೀಕ್ಷಿಸಿದಾಗ, ಅದರಲ್ಲಿರುವ ಕ್ಲೋರೈಡ್ ಪ್ರಮಾಣವು 1 ppm ಗಿಂತಲೂ ಕಡಿಮೆ ಇರುವುದು ಕಂಡುಬಂದಿದೆ.
  • ಡಿಸ್ಟಿಲರಿ ಹಂತ (ಎಥನಾಲ್ ಉತ್ಪಾದನಾ ಘಟಕ): ಕಳೆದ 10 ದಿನಗಳಲ್ಲಿ ದೇಶದ 80 ಎಥನಾಲ್ ಉತ್ಪಾದನಾ ಘಟಕಗಳಿಂದ ಮಾದರಿಗಳನ್ನು ಸಂಗ್ರಹಿಸಿ ತಜ್ಞರ ತಂಡ ಪರಿಶೀಲಿಸಿದೆ. ಎಲ್ಲಾ ಮಾದರಿಗಳಲ್ಲೂ ಕ್ಲೋರೈಡ್ ಪ್ರಮಾಣ 3 ppm ಗಿಂತ ಕಡಿಮೆ ಇದೆ.
  • ಇಂಧನ ಪೂರೈಕೆ: ದೇಶಾದ್ಯಂತ ತೈಲ ಡಿಪೋಗಳಿಂದ ಸಂಗ್ರಹಿಸಿದ 80ಕ್ಕೂ ಹೆಚ್ಚು ಇಂಧನ ಮಾದರಿಗಳಲ್ಲೂ ಕ್ಲೋರೈಡ್ ಅಂಶ 3 ppm ಗಿಂತ ಕಡಿಮೆ ದಾಖಲಾಗಿದೆ.
  • ಪೆಟ್ರೋಲ್ ಬಂಕ್‌: 1000ಕ್ಕೂ ಹೆಚ್ಚು ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಈ ಪೈಕಿ ಲಭ್ಯವಾಗಿರುವ 160 ವರದಿಗಳಲ್ಲಿ ಕ್ಲೋರೈಡ್ ಪ್ರಮಾಣ 0 ಇಂದ 3 ppm ವ್ಯಾಪ್ತಿಯಲ್ಲಿದೆ.

ಕೇವಲ 4 ಕಡೆ ಲೋಪ – ತಕ್ಷಣವೇ ಸರಬರಾಜು ಸ್ಥಗಿತ

ಈ ವ್ಯಾಪಕ ತಪಾಸಣೆಯ ಸಂದರ್ಭದಲ್ಲಿ ಕೇವಲ ನಾಲ್ಕು ಪೆಟ್ರೋಲ್ ಬಂಕ್‌ಗಳಲ್ಲಿ ಮಾತ್ರ ಕ್ಲೋರೈಡ್ ಪ್ರಮಾಣ ಕೊಂಚ ಹೆಚ್ಚಿರುವುದು ಪತ್ತೆಯಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆ ಬಂಕ್‌ಗಳ ಇಂಧನ ಮಾರಾಟವನ್ನು ಅಮಾನತುಗೊಳಿಸಿದ್ದಾರೆ. ಅದರ ಮೂಲ ಕಾರಣವನ್ನು ಪತ್ತೆಹಚ್ಚಿ, ಅಗತ್ಯ ಕ್ರಮ ಕೈಗೊಂಡ ಬಳಿಕವಷ್ಟೇ ಅಲ್ಲಿ ಮತ್ತೆ ಇಂಧನ ಪೂರೈಕೆಗೆ ಅವಕಾಶ ನೀಡಲಾಗಿದೆ.

ಈ ಎಲ್ಲಾ ತಪಾಸಣೆಗಳ ಸಂಪೂರ್ಣ ವಿವರ ಹಾಗೂ ಕೋಷ್ಟಕವನ್ನು ಸೆಂಟರ್ ಫಾರ್ ಹೈ ಟೆಕ್ನಾಲಜಿ (CHT) ಅಧಿಕೃತ ವೆಬ್‌ಸೈಟ್ www.cht.gov.in ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಗುಣಮಟ್ಟಕ್ಕೆ ನಮ್ಮ ಮೊದಲ ಆದ್ಯತೆಯಾಗಿದ್ದು, ಗ್ರಾಹಕರು ಯಾವುದೇ ಗೊಂದಲವಿಲ್ಲದೆ ಇಂಧನ ಖರೀದಿಸಬಹುದು ಎಂದು ತೈಲ ಮಾರುಕಟ್ಟೆ ಕಂಪನಿಗಳು ಪ್ರಕಟಣೆಯಲ್ಲಿ ಭರವಸೆ ನೀಡಿವೆ.

ಇನ್ನಷ್ಟು  ರಾಷ್ಟ್ರೀಯ ಸುದ್ದಿಗಳನ್ನು  ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:43 am, Sat, 8 August 26

Follow Us
ಬಿಗ್​​ಬಾಸ್​ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ: ಮಾಜಿ ​​ಸ್ಪರ್ಧಿಗಳ ಕೆಲಸವೇನು?
ಬಿಗ್​​ಬಾಸ್​ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ: ಮಾಜಿ ​​ಸ್ಪರ್ಧಿಗಳ ಕೆಲಸವೇನು?
‘ಬಾಸ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಹೀಗೆಂದರಂತೆ
‘ಬಾಸ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಹೀಗೆಂದರಂತೆ
ಕೈ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕೈ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
5 ಸ್ಟಾರ್ ಹೋಟೆಲ್​​ಗಳಲ್ಲಿ ಕೊಳೆತ ತರಕಾರಿ, ಮಾಂಸ ಪತ್ತೆ: ಕಠಿಣ ಕ್ರಮ
5 ಸ್ಟಾರ್ ಹೋಟೆಲ್​​ಗಳಲ್ಲಿ ಕೊಳೆತ ತರಕಾರಿ, ಮಾಂಸ ಪತ್ತೆ: ಕಠಿಣ ಕ್ರಮ
ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ
ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ
ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು
ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು
ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?