AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆಯಿಂದ ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ ಆರಂಭ; ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ 5 ದಿನಗಳ ಮಹಾ ಉತ್ಸವ

TV9 ಭಾರತ್ ಮಹೋತ್ಸವವು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಆಚರಣೆಯಾಗಿದೆ. ದಸರಾ ಸಂಪ್ರದಾಯ ಮತ್ತು ಆಧುನಿಕತೆಯ ಸಂಗಮವಾಗಿದೆ. ಈ 5 ದಿನಗಳ ಹಬ್ಬವು ಅನನ್ಯ ಮತ್ತು ಸ್ಮರಣೀಯ ಅನುಭವವನ್ನು ನೀಡುತ್ತದೆ. ಈ ಸಮಯದಲ್ಲಿ ಭಾರತದ ಸಂಸ್ಕೃತಿ, ವೈವಿಧ್ಯಮಯ ಬಣ್ಣಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತುತಪಡಿಸಲಾಗುತ್ತದೆ.

ನಾಳೆಯಿಂದ ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ ಆರಂಭ; ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ 5 ದಿನಗಳ ಮಹಾ ಉತ್ಸವ
ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ ಆರಂಭ
ಸುಷ್ಮಾ ಚಕ್ರೆ
|

Updated on:Oct 08, 2024 | 9:53 PM

Share

ನವದೆಹಲಿ: ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾದ 2ನೇ ಆವೃತ್ತಿಯು ತನ್ನ ವೈವಿಧ್ಯಮಯತೆಗೆ ಹೆಸರುವಾಸಿಯಾಗಿದೆ. ನಾಳೆಯಿಂದ (ಬುಧವಾರ) ದೆಹಲಿಯಲ್ಲಿ ದಸರಾ ದುರ್ಗಾಪೂಜೆ ಪ್ರಾರಂಭವಾಗಲಿದೆ. ಈ ಉತ್ಸವ ಉತ್ಸಾಹ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಹಬ್ಬಕ್ಕೆ ಹೆಸರುವಾಸಿಯಾಗಿದೆ. ಈ ಉತ್ಸವವನ್ನು ಅಕ್ಟೋಬರ್ 9ರಿಂದ 13ರವರೆಗೆ ನವದೆಹಲಿಯ ಇಂಡಿಯಾ ಗೇಟ್ ಬಳಿಯ ಮೇಜರ್ ಧ್ಯಾನಚಂದ್ ಸ್ಟೇಡಿಯಂನಲ್ಲಿ ನಡೆಯಲಿದೆ. 5 ದಿನಗಳ ಕಾಲ ಈ ಉತ್ಸವವನ್ನು ಆನಂದಿಸಬಹುದು.

ಈ ಟಿವಿ9 ದುರ್ಗಾಪೂಜೆ ಉತ್ಸವವು ಅನೇಕ ಲೈವ್ ಕಾನ್ಸರ್ಟ್ ಮತ್ತು ಸ್ಮರಣೀಯ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಹಬ್ಬದ ಸಮಯದಲ್ಲಿ ತಮ್ಮಿಷ್ಟದ ಖರೀದಿಗಳನ್ನು ಮಾಡಲು ಉತ್ತಮ ಅವಕಾಶವಿದೆ. ಇಲ್ಲಿ 250ಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ ಅಂತಾರಾಷ್ಟ್ರೀಯ ಪ್ರದರ್ಶನಗಳು, ರುಚಿಕರವಾದ ತಿನಿಸು, ಲೈವ್ ಸಂಗೀತವನ್ನು ಆನಂದಿಸಬಹುದು.

ಇದನ್ನೂ ಓದಿ: ಮುಂಬೈ ಮೆಟ್ರೋ ಹತ್ತಿ ಪ್ರಯಾಣಿಕರ ಜೊತೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ಕಳೆದ ವರ್ಷ ಈ ಹಬ್ಬ ನಗರದಲ್ಲಿ ಸಂಚಲನ ಮೂಡಿಸಿತ್ತು. ಈ ಬಾರಿಯೂ ಈ ಹಬ್ಬ ಹೊಸ ಅಬ್ಬರದೊಂದಿಗೆ ಮರಳಿದೆ. TV9 ಫೆಸ್ಟಿವಲ್ ಆಫ್ ಇಂಡಿಯಾ ಮತ್ತೊಮ್ಮೆ ದೆಹಲಿಯ ಅತಿ ಎತ್ತರದ ದುರ್ಗಾಪೂಜಾ ಪಂಡಲ್ ಅನ್ನು ಆಯೋಜಿಸುತ್ತದೆ. ರೋಮಾಂಚಕ ಅಲಂಕಾರಗಳು ಮತ್ತು ಭಕ್ತಿ ಸಂಗೀತವು ಪ್ರವಾಸಿಗರನ್ನು ಸೆಳೆಯುತ್ತದೆ.

ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾದ ಕಾರ್ಯಕ್ರಮಗಳು:

9 ಅಕ್ಟೋಬರ್ (ಮಹಾಷಷ್ಠಿ): ರಾತ್ರಿ 8:00 ಗಂಟೆಗೆ ದೇವಿ ಬೋಧನೆ ಮತ್ತು ಪಾಂಡಲ್ ಉದ್ಘಾಟನೆ.

10 ಅಕ್ಟೋಬರ್ (ಮಹಾ ಸಪ್ತಮಿ): ನವಪತ್ರಿಕಾ ಪ್ರವೇಶ, ಆರತಿ ಮತ್ತು ಪುಷ್ಪ ಸಮರ್ಪಣೆಯೊಂದಿಗೆ ಪೂಜೆ.

11 ಅಕ್ಟೋಬರ್ (ಮಹಾ ಅಷ್ಟಮಿ): ಸೋಂಧಿ ಪೂಜೆ ಮತ್ತು ಭೋಗ್ ಆರತಿ.

12 ಅಕ್ಟೋಬರ್ (ಮಹಾನವಮಿ): ನವಮಿ ಪೂಜೆ ಮತ್ತು ಪ್ರಸಾದ ವಿತರಣೆ.

13 ಅಕ್ಟೋಬರ್ (ವಿಜಯದಶಮಿ): ದೇವಿಯ ಆರಾಧನೆಯೊಂದಿಗೆ ಹಬ್ಬವು ಮುಕ್ತಾಯವಾಗುತ್ತದೆ.

ವಿವಿಧ ದೇಶಗಳ 250ಕ್ಕೂ ಹೆಚ್ಚು ಮಳಿಗೆಗಳು:

ಈ ಬಾರಿ ಹಬ್ಬದ ಸಮಯದಲ್ಲಿ ಅದ್ಭುತವಾದ ಶಾಪಿಂಗ್ ಅನುಭವವನ್ನು ಕೂಡ ಪಡೆಯಲು ಅವಕಾಶವಿದೆ. ವಿವಿಧ ದೇಶಗಳ 250ಕ್ಕೂ ಹೆಚ್ಚು ಮಳಿಗೆಗಳಿರಲಿವೆ. ಇಲ್ಲಿ ನೀವು ಉತ್ತಮ ಗುಣಮಟ್ಟದ ಜೀವನಶೈಲಿ, ಫ್ಯಾಶನ್ ಮತ್ತು ಸೌಂದರ್ಯ ಉತ್ಪನ್ನಗಳನ್ನು ಕಾಣಬಹುದು. ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ಸ್ ಮತ್ತು ಪೀಠೋಪಕರಣಗಳು ಸಹ ಲಭ್ಯವಿರುತ್ತವೆ. ನಿಮ್ಮ ಲಿವಿಂಗ್ ರೂಮ್ ಅನ್ನು ಆಕರ್ಷಕವಾಗಿಸಲು ನೀವು ಇಲ್ಲಿಂದ ಆಕರ್ಷಕ ಬಟ್ಟೆಗಳನ್ನು ಅಥವಾ ವಿಶಿಷ್ಟವಾದ ಅಲಂಕಾರಿಕ ವಸ್ತುಗಳನ್ನು ಕೂಡ ಖರೀದಿಸಬಹುದು.

ಇದನ್ನೂ ಓದಿ: ಸ್ಪಷ್ಟ ಬಹುಮತ ನೀಡಿದ ಜನರಿಗೆ ಸೆಲ್ಯೂಟ್; ಹರಿಯಾಣದಲ್ಲಿ ಬಿಜೆಪಿ ಭರ್ಜರಿ ಗೆಲುವಿಗೆ ಪ್ರಧಾನಿ ಮೋದಿ ಸಂತಸ

ಇಷ್ಟು ಮಾತ್ರವಲ್ಲದೆ, ನೀವು ರುಚಿಕರವಾದ ಆಹಾರವನ್ನು ಇಷ್ಟಪಡುವವರಾಗಿದ್ದರೆ ನಿಮ್ಮ ಆಯ್ಕೆಯ ಎಲ್ಲಾ ತಿನಿಸುಗಳು ಇಲ್ಲಿ ಲಭ್ಯವಿರಲಿವೆ. ಈ ಖಾದ್ಯಗಳಲ್ಲಿ ಭಾರತದ ವೈವಿಧ್ಯತೆ ಗೋಚರಿಸುತ್ತದೆ. ದೆಹಲಿಯ ಮಸಾಲೆಯುಕ್ತ ಸ್ಟ್ರೀಟ್ ಫುಡ್​ನಿಂದ ಲಕ್ನೋದ ಬೆಣ್ಣೆ ಕಬಾಬ್‌ಗಳವರೆಗೆ ಎಲ್ಲವೂ ಇಲ್ಲಿ ಲಭ್ಯವಿರುತ್ತವೆ. ಬೆಂಗಾಲಿ ಸಿಹಿತಿಂಡಿಗಳಿಂದ ಹೈದರಾಬಾದ್ ಬಿರಿಯಾನಿಯವರೆಗೆ ಸಿಗುತ್ತವೆ. ಭಾರತದ ಪ್ರತಿಯೊಂದು ಮೂಲೆಯನ್ನು ಇಲ್ಲಿ ಪ್ರತಿನಿಧಿಸಲಾಗುತ್ತದೆ.

ಸಂಗೀತ ಪ್ರಿಯರಿಗೆ ಇಲ್ಲಿ ಲೈವ್ ಸಂಗೀತದ ವ್ಯವಸ್ಥೆಯೂ ಇದೆ. ಇದು ನಿಮ್ಮನ್ನು ನೃತ್ಯ ಮಾಡಲು ಪ್ರೇರೇಪಿಸುತ್ತದೆ. ಸೂಫಿ, ಬಾಲಿವುಡ್ ಹಿಟ್‌ಗಳು ಅಥವಾ ಜಾನಪದ ಸಂಗೀತ ನಿಮಗೆ ಯಾವುದು ಇಷ್ಟವೋ, ಅದೆಲ್ಲವೂ ಇರಲಿದೆ. ಆದ್ದರಿಂದ ಅಕ್ಟೋಬರ್ 9 ರಿಂದ 13 ರವರೆಗೆ ನವದೆಹಲಿ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ನಮ್ಮೊಂದಿಗೆ ಸೇರಿಕೊಳ್ಳಿ.

ಕಾರ್ಯಕ್ರಮ ನಡೆಯುವ ಸ್ಥಳ:

TV9 ಫೆಸ್ಟಿವಲ್ ಆಫ್ ಇಂಡಿಯಾ ದಿನಾಂಕ: ಅಕ್ಟೋಬರ್ 9 ರಿಂದ ಅಕ್ಟೋಬರ್ 13

ಸ್ಥಳ: ಮೇಜರ್ ಧ್ಯಾನ್ ಚಂದ್ ನ್ಯಾಷನಲ್ ಸ್ಟೇಡಿಯಂ, ಇಂಡಿಯಾ ಗೇಟ್ ಹತ್ತಿರ, ನವದೆಹಲಿ

ಸಮಯ: ಬೆಳಗ್ಗೆ 10ರಿಂದ ರಾತ್ರಿ 10 ಗಂಟೆಯವರೆಗೆ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:50 pm, Tue, 8 October 24

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ