AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗನ್ನಾಥ್​ ಮಂದಿರದ ಬಹುದಾ ಯಾತ್ರೆಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭಾಗಿ

ಒಡಿಶಾದಲ್ಲಿ 4 ದಶಕಗಳಿಂದ ಮುಚ್ಚಿದ್ದ ರತ್ನ ಭಂಡಾರದ ಎಲ್ಲಾ ಬಾಗಿಲುಗಳು ನಿನ್ನೆ ತೆರೆದಿವೆ. ಒಡಿಶಾದ ಸ್ಥಳೀಯ ಆಡಳಿತ ಮತ್ತು ಮೋಹನ್ ಮಾಝಿ ನೇತೃತ್ವದ ಹೊಸ ಬಿಜೆಪಿ ಸರ್ಕಾರವು ನ್ಯಾಯಾಲಯದ ಆದೇಶದಂತೆ ದೇವರ ಆಶೀರ್ವಾದದೊಂದಿಗೆ ಎಲ್ಲವನ್ನು ಸುಗಮವಾಗಿ ಮಾಡಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಜಗನ್ನಾಥ್​ ಮಂದಿರದ ಬಹುದಾ ಯಾತ್ರೆಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭಾಗಿ
ಜಗನ್ನಾಥ್​ ಮಂದಿರದ ಬಹುದಾ ಯಾತ್ರೆಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭಾಗಿ
ಗಂಗಾಧರ​ ಬ. ಸಾಬೋಜಿ
|

Updated on: Jul 15, 2024 | 11:04 PM

Share

ದೆಹಲಿ, ಜುಲೈ 15: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಸೋಮವಾರ ನಗರದ ಹೌಜ್ ಖಾಸ್​​​ನಲ್ಲಿರುವ ಜಗನ್ನಾಥ್ (Jagannath)​ ಮಂದಿರದ ಬಹುದಾ ಯಾತ್ರೆಯಲ್ಲಿ ಭಾಗವಹಿಸಿದ್ದರು. ಇಡೀ ಪ್ರದೇಶವು ಧಾರ್ಮಿಕ ವಾತಾವರಣದಿಂದ ತುಂಬಿತ್ತು. ಈ ಸಂದರ್ಭದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಮಧ್ಯಾಹ್ನ 12.30ರ ಸುಮಾರಿಗೆ ದೇವಾಲಯದ ಮುಂಭಾಗದ ಮುಖ್ಯ ರಸ್ತೆಯಲ್ಲಿ ದೇವತೆಗಳ ಮೆರವಣಿಗೆ ಮಾಡಲಾಯಿತು.

ಬಹುದಾ ಯಾತ್ರೆಗೆ ಮುಖ್ಯ ಅತಿಥಿಯಾಗಿ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್​ ಅವರು ಆಗಮಿಸಿ ಸಾಂಪ್ರದಾಯಿಕವಾಗಿ ‘ಚೇರಾಪಹಾರ’ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕ ಎಸ್. ಕೆ. ಜೆನಾ, ಶಾಸಕ ರಘುಬ್ ದಾಸ್, ಕೇದಾರನಾಥ್ ತ್ರಿಪಾಠಿ, ಸೂರಜ್ ನಾಯಕ್ ಮುಂತಾದ ನಾಯಕರು ಉಪಸ್ಥಿತರಿದ್ದರು.

ಧರ್ಮೇಂದ್ರ ಪ್ರಧಾನ್ ಹೇಳಿದ್ದಿಷ್ಟು 

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್​ ಅವರು, ಒಡಿಶಾದಲ್ಲಿ 4 ದಶಕಗಳಿಂದ ಮುಚ್ಚಿದ್ದ ರತ್ನ ಭಂಡಾರದ ಎಲ್ಲಾ ಬಾಗಿಲುಗಳು ನಿನ್ನೆ ತೆರೆದಿವೆ. ಒಡಿಶಾದ ಸ್ಥಳೀಯ ಆಡಳಿತ ಮತ್ತು ಮೋಹನ್ ಮಾಝಿ ನೇತೃತ್ವದ ಹೊಸ ಬಿಜೆಪಿ ಸರ್ಕಾರವು ನ್ಯಾಯಾಲಯದ ಆದೇಶದಂತೆ ದೇವರ ಆಶೀರ್ವಾದದೊಂದಿಗೆ ಎಲ್ಲವನ್ನು ಸುಗಮವಾಗಿ ಮಾಡಿದೆ.

ಸಮಿತಿಯೊಂದನ್ನು ರಚಿಸಿ ಅವರ ಮೇಲ್ವಿಚಾರಣೆಯಲ್ಲಿ ತೆರೆಯಲಾಗುವುದು. ರಿಸರ್ವ್ ಬ್ಯಾಂಕ್ ಕೂಡ ಅದರ ಭಾಗವಾಗಿದೆ. ಜನರೆಲ್ಲರೂ ಸೇರಿ ಮಹಾಪ್ರಭುವಿನ ಆಶಯವನ್ನು ಈಡೇರಿಸುತ್ತಿದ್ದಾರೆ. ಮತ್ತು ಇದು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಯವರ ಭರವಸೆ ಈಡೇರಿದೆ-ಧರ್ಮೇಂದ್ರ ಪ್ರಧಾನ್

ಜಗನ್ನಾಥ್ ಪ್ರತಿಯೊಬ್ಬರಿಗೂ ಆಶೀರ್ವದಿಸಲಿ, ಎಲ್ಲರ ಜೀವನ ಆರೋಗ್ಯ ಮತ್ತು ಸಂತೋಷದಿಂದ ತುಂಬಿರಲಿ ಎಂದು ಬರೆದುಕೊಂಡಿದ್ದಾರೆ. ಇನ್ನು ಈ ವೇಳೆ ಉತ್ಸಾಹದಲ್ಲಿದ್ದ ಭಕ್ತರು ಜಗನ್ನಾಥ್​​ನಿಗೆ ಘೋಷಣೆ ಕೂಗಿದರು. ಭಜನೆ ಮತ್ತು ಮಂತ್ರಗಳನ್ನು ಪಠಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.