Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆಕ್ಸಿಜನ್ ಇಲ್ಲ ಎಂದು ಇಂಥ ಟ್ರಿಕ್​ಗಳನ್ನು ಎಂದೆಂದೂ ಮಾಡ್ಬೇಡಿ’-ವೈದ್ಯರೊಬ್ಬರ ನೆಬ್ಯೂಲೈಸರ್​ ಸಲಹೆ ವಿರುದ್ಧ ತಿರುಗಿಬಿದ್ದ ತಜ್ಞರು

ಆಮ್ಲಜನಕದ ಸಿಲಿಂಡರ್​ಗೆ ಬದಲಿಯಾಗಿ ನೆಬ್ಯುಲೈಸರ್​​ಗಳನ್ನು ಬಳಸಲಾಗದು. ನೆಬ್ಯುಲೈಸರ್​ಗಳಿಂದ ರಕ್ತದಲ್ಲಿ ಆಮ್ಲಜನಕ ಮಟ್ಟ ಹೆಚ್ಚುತ್ತದೆ ಎಂಬುದು ಆಧಾರ ರಹಿತ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

‘ಆಕ್ಸಿಜನ್ ಇಲ್ಲ ಎಂದು ಇಂಥ ಟ್ರಿಕ್​ಗಳನ್ನು ಎಂದೆಂದೂ ಮಾಡ್ಬೇಡಿ’-ವೈದ್ಯರೊಬ್ಬರ ನೆಬ್ಯೂಲೈಸರ್​ ಸಲಹೆ ವಿರುದ್ಧ ತಿರುಗಿಬಿದ್ದ ತಜ್ಞರು
ತಪ್ಪು ಮಾಹಿತಿ ನೀಡಿದ್ದ ವೈದ್ಯ ಡಾ. ಅಲೋಕ್​
Follow us
Lakshmi Hegde
|

Updated on: Apr 25, 2021 | 1:46 PM

ಸದ್ಯ ದೇಶದೆಲ್ಲೆಡೆ ಆಮ್ಲಜನಕಕ್ಕಾಗಿ ಬೇಡಿಕೆ ಹೆಚ್ಚುತ್ತಿದೆ. ಆಕ್ಸಿಜನ್ ಸರಿಯಾಗಿ, ಬೇಕಾದಷ್ಟು ಪ್ರಮಾಣದಲ್ಲಿ ಪೂರೈಕೆ ಆಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಹೀಗಿರುವಾಗ ಫರಿದಾಬಾದ್​ನ ಸರ್ವೋದಯ ಆಸ್ಪತ್ರೆಯ ಡಾ. ಅಲೋಕ್​ ಎಂಬುವರ ವಿಡಿಯೋ ವೈರಲ್ ಆಗಿತ್ತು. ನೆಬ್ಯೂಲೈಸರ್​​ಗಳನ್ನು ಬಳಸುವುದರಿಂದಲೂ ರಕ್ತದಲ್ಲಿ ಆಕ್ಸಿಜನ್​ ಪ್ರಮಾಣ ಹೆಚ್ಚುತ್ತದೆ ಎಂದು ಡಾ. ಅಲೋಕ್ ಹೇಳಿದ ವಿಡಿಯೋ ಇದು. ಆದರೆ ಈ ವಿಡಿಯೋದಲ್ಲಿ ಡಾ. ಅಲೋಕ್​ ಹೇಳಿಕೆ ತಜ್ಞ ವೈದ್ಯರೇ ವಿರೋಧ ವ್ಯಕ್ತಪಡಿಸಿದ್ದಾರೆ. ನೆಬ್ಯೂಲೈಸರ್​ಗಳಿಂದ ಆಮ್ಲಜನಕ ಪೂರೈಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಡಾ. ಅಲೋಕ್ ಕೆಲಸ ಮಾಡುತ್ತಿರುವ ಸರ್ವೋದಯ ಆಸ್ಪತ್ರೆಯೂ ಕೂಡ ಈ ವಿಡಿಯೋಗೂ, ನಮಗೂ ಯಾವುದೇ ಸಂಬಂಧವಿಲ್ಲ, ಅದು ಅಲೋಕ್ ಅವರ ವೈಯಕ್ತಿಕ ಅಭಿಪ್ರಾಯ. ಹಾಗೇ, ನೆಬ್ಯೂಲೈಸರ್​ಗಳಿಂದ ಆಮ್ಲಜನಕ ನೀಡಬಹುದು ಎಂಬ ಹೇಳಿಕೆಗೆ ನಮ್ಮ ಅನುಮೋದನೆ ಇಲ್ಲ ಎಂದು ತಿಳಿಸಿದೆ.

ವಿಡಿಯೋದಲ್ಲಿ ಏನಿತ್ತು? ಡಾ. ಅಲೋಕ್​ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿತ್ತು. ಆಮ್ಲಜನಕವಿಲ್ಲದೆ ಜನರು ಪರದಾಡುತ್ತಿರುವುದು, ಸಾಯುತ್ತಿರುವದನ್ನು ನೋಡಲು ಸಾಧ್ಯವಾಗುತ್ತಿಲ್ಲ. ಆಮ್ಲಜನಕ ಸಿಗುತ್ತಿಲ್ಲ ಎಂದರೆ ಅದರ ಬದಲಿಗೆ ಏನು ಮಾಡಬಹುದು? ಎಂಬುದಕ್ಕೆ ಒಂದು ಟ್ರಿಕ್​ ಹೇಳುತ್ತೇನೆ. ನೀವದನ್ನು ಮಾಡಬಹುದು. ನೆಬ್ಯುಲೈಸರ್​ಗಳನ್ನು ಬಳಕೆ ಮಾಡಬಹುದು. ಆದರೆ ನೆಬ್ಯುಲೈಸರ್​​ಗಳಲ್ಲಿ ಔಷಧ ಹಾಕಬಾರದು. ಖಾಲಿ ನೆಬ್ಯುಲೈಸರ್​ಗಳಿಂದ ಆಮ್ಲಜನಕ ಪಡೆದುಕೊಳ್ಳಬಹುದು ಎಂದು ಡಾ. ಅಲೋಕ್​ ವಿಡಿಯೋದಲ್ಲಿ ಹೇಳಿದ್ದರು. ಖಾಲಿ ನೆಬ್ಯುಲೈಸರ್​ಗಳಿಂದ ಹೇಗೆ ಆಮ್ಲಜನಕ ಪಡೆಯಬಹುದು ಎಂಬುದನ್ನೂ ಡಾ. ಅಲೋಕ್​ ವಿವರಿಸಿದ್ದರು.

ಆದರೆ ಇದನ್ನು ತಜ್ಞ ವೈದ್ಯರು ಅಲ್ಲಗಳೆದಿದ್ದಾರೆ. ಆಮ್ಲಜನಕದ ಸಿಲಿಂಡರ್​ಗೆ ಬದಲಿಯಾಗಿ ನೆಬ್ಯುಲೈಸರ್​​ಗಳನ್ನು ಬಳಸಲಾಗದು. ನೆಬ್ಯುಲೈಸರ್​ಗಳಿಂದ ರಕ್ತದಲ್ಲಿ ಆಮ್ಲಜನಕ ಮಟ್ಟ ಹೆಚ್ಚುತ್ತದೆ ಎಂಬುದು ಆಧಾರ ರಹಿತ ಎಂದು ಮೇದಾಂತಾದ ಲಿವರ್​ ಕಸಿ ಮತ್ತು ರಿಜನರೇಟಿವ್​ ಮೆಡಿಸಿನ್​ನ ಚೇರ್​ಮನ್​ ಡಾ. ಅರವಿಂದರ್​ ಸಿಂಗ್ ಸಾಯ್ನ್​ ತಿಳಿಸಿದ್ದಾರೆ. ಇಂಥ ತಂತ್ರಗಳನ್ನು ಬಳಸಬೇಡಿ ಎಂದು ಡಾ. ಅರವಿಂದರ್ ಸೇರಿ ಹಲವು ತಜ್ಞರು ಮನವಿ ಮಾಡಿದ್ದಾರೆ. ನಂತರ ಹೀಗೆ ಸಲಹೆ ನೀಡಿದ್ದ ಡಾ. ಅಲೋಕ್ ಕೂಡ ಕ್ಷಮೆ ಕೇಳಿದ್ದಾರೆ. ತಪ್ಪು ಮಾಹಿತಿ ನೀಡಿದ್ದಕ್ಕೆ ಕ್ಷಮಿಸಿ ಎಂದು ಮತ್ತೊಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ನೆಬ್ಯುಲೈಸರ್​ನ್ನು ಸಾಮಾನ್ಯವಾಗಿ ಅಸ್ತಮಾ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಅಸ್ತಮಾ ಇರುವವರಿಗೆ ಉಸಿರಾಟದ ತೊಂದರೆಯಾದಾಗ ಈ ಮಷಿನ್​ನಲ್ಲಿ ಔಷಧ ತುಂಬಿ ನೀಡಲಾಗುತ್ತದೆ. ಇದು ನೇರವಾಗಿ ಶ್ವಾಸಕೋಶಕ್ಕೆ ಹೋಗಿ ಉಸಿರಾಟ ಸರಾಗ ಮಾಡುತ್ತದೆ.

ಇದನ್ನೂ ಓದಿ: ದೆಹಲಿಯಲ್ಲಿ ಕೊವಿಡ್ ಪ್ರಕರಣ ಹೆಚ್ಚಳ, ಮೇ 3ರವರೆಗೆ ಲಾಕ್​ಡೌನ್ ವಿಸ್ತರಣೆ: ಅರವಿಂದ್ ಕೇಜ್ರಿವಾಲ್

ಅಭಿ ಚಿತ್ರ ರಿಲೀಸ್​ ಆದ ದಿನಾಂಕದಲ್ಲೇ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದ ರಮ್ಯಾ

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್