ದಿಮಾಗಿ ನಕ್ಸಲರು ಯಾರು? ಹಫೀಜ್​ನಲ್ಲಿ ಸಾಹೇಬ ಕಾಣುವವರು, ಒಸಾಮನಲ್ಲಿ ಜಿ ಕಾಣುವವರು… ಬಿಜೆಪಿ ವ್ಯಂಗ್ಯ

Who are Dimagi Naxals according to BJP?: ದೇಶದಲ್ಲಿ ಈಗ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಮಧ್ಯೆ ದಿಮಾಗಿ ನಕ್ಸಲ್ ವಿಚಾರ ಚರ್ಚೆಯಾಗುತ್ತಿದೆ. ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿಗಳು ದಿಮಾಗಿ ನಕ್ಸಲ್ ಪದ ಬಳಕೆ ಮಾಡಿದ್ದು ಈ ಚರ್ಚೆಗೆ ಕಾರಣವಾಗಿದೆ. ದಿಮಾಗಿ ನಕ್ಸಲ್ ಎಂದಿದ್ದು ವಿಪಕ್ಷಗಳನ್ನು ಕುರಿತಾಗಿ ಅಲ್ಲ ಎಂದು ಬಿಜೆಪಿಗರು ವಿವಿಧ ವ್ಯಾಖ್ಯಾನಗಳನ್ನು ನೀಡಿದ್ದಾರೆ.

ದಿಮಾಗಿ ನಕ್ಸಲರು ಯಾರು? ಹಫೀಜ್​ನಲ್ಲಿ ಸಾಹೇಬ ಕಾಣುವವರು, ಒಸಾಮನಲ್ಲಿ ಜಿ ಕಾಣುವವರು... ಬಿಜೆಪಿ ವ್ಯಂಗ್ಯ
ಸುಧಾಂಶು ತ್ರಿವೇದಿ
Image Credit source: X user @MeghUpdates

Updated on: Aug 17, 2026 | 8:10 PM

ನವದೆಹಲಿ, ಆಗಸ್ಟ್ 17: ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ್ದ “ದಿಮಾಗಿ ನಕ್ಸಲ್” ಎಂಬ ಪದದ ಕುರಿತು ವಿರೋಧ ಪಕ್ಷಗಳ ಆಕ್ಷೇಪಕ್ಕೆ ಬಿಜೆಪಿ ನಾಯಕರುಗಳು ಒಂದಿಷ್ಟು ಸ್ಪಷ್ಟನೆ, ಹೆಚ್ಚುವರಿ ವ್ಯಾಖ್ಯಾನಗಳನ್ನು ನೀಡುತ್ತಿದ್ದಾರೆ. ಪ್ರಧಾನಿಯವರ ಹೇಳಿಕೆಗೆ ಪ್ರತಿಯಾಗಿ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ‘ನಾನು ದಿಮಾಗಿ ನಕ್ಸಲ್ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ’ ಎಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದರು. ಅದರ ಬೆನ್ನಲ್ಲೇ ಬಿಜೆಪಿಗರ ಪ್ರತಿಕ್ರಿಯೆ ಮತ್ತು ಸ್ಪಂದನೆಗಳು ಬಂದಿವೆ.

ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಪ್ರಕಾರ ದಿಮಾಗಿ ನಕ್ಸಲರೆಂದರೆ ಯಾರು?

  • ಹಫೀಜ್ ಅವರಲ್ಲಿ ‘ಸಾಹೇಬ’ ಕಾಣುವವರು…
  • ಯಾಕುಬ್ ಮೆಮೋನ್ ಸಾವಿನಲ್ಲಿ ‘ನ್ಯಾಯಾಂಗ ಹತ್ಯೆ’ ಕಾಣುವವರು
  • ಒಸಾಮನಲ್ಲಿ ‘ಜಿ’ ನೋಡುವವರು
  • ಝಾಕಿರ್ ನಾಯ್ಕ್ ಅವರಲ್ಲಿ ‘ಶಾಂತಿ ದೂತ’ ಕಾಣುವವರು
  • ಇಶ್ರತ್ ಜಹಾನ್​ಳಲ್ಲಿ ‘ಮಗಳನ್ನು’ ಕಾಣುವವರು
  • ಬುರ್ಹನ್ ವಾನಿಯಲ್ಲಿ ‘ದಾರಿತಪ್ಪಿದ ಯುವಕ’ನ ಕಾಣುವವರು.
  • ಭಾರತೀಯ ಸೇನಾ ಮುಖ್ಯಸ್ಥರಲ್ಲಿ ‘ಬೀದಿ ರೌಡಿ’ ಕಾಣುವವರು.

ಹೀಗೆಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಸಮಜಾಯಿಷಿ ನೀಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ತೊರೆಯಲು ನಿಜವಾದ ಕಾರಣ ಬಿಚ್ಚಿಟ್ಟ ಅಣ್ಣಾಮಲೈ; ಗುಜರಾತ್ ಕೇಂದ್ರಿತ, ದೆಹಲಿ ಕೇಂದ್ರಿತ ರಾಜಕೀಯ ಧೋರಣೆಗೆ ಟೀಕೆ

ಪ್ರಧಾನಿ ಹೇಳಿದ್ದೇನು?

80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಿಂದ ಮಾತನಾಡಿದ್ದ ಪ್ರಧಾನಿ ಮೋದಿ, “ಬಂದೂಕು ಹಿಡಿದ ಸಶಸ್ತ್ರ ನಕ್ಸಲರನ್ನು ಮಟ್ಟಹಾಕಲಾಗಿದೆ. ಆದರೆ ‘ದಿಮಾಗಿ ನಕ್ಸಲರು’ (ವೈಚಾರಿಕ/ಬುದ್ಧಿಜೀವಿ ನಕ್ಸಲರು) ಸಮಾಜದಲ್ಲಿದ್ದು, ಅವರನ್ನು ಗುರುತಿಸಿ ದೂರವಿಡಬೇಕಿದೆ” ಎಂದು ಹೇಳಿದ್ದರು.

ಈ ಹೇಳಿಕೆಗೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿ, “ಸರ್ಕಾರವನ್ನು ಪ್ರಶ್ನಿಸುವವರನ್ನು ಗುರಿಯಾಗಿಸಲು ಈ ಪದ ಬಳಸಲಾಗುತ್ತಿದೆ” ಎಂದು ಆರೋಪಿಸಿದವು. ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು “ನಾನು ದಿಮಾಗಿ ನಕ್ಸಲ್ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ” ಎಂದು ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದರು.

ದಿಮಾಗಿ ನಕ್ಸಲ್ ಕುರಿತು ಕೇಂದ್ರ ಸಚಿವ ಕಿರಣ್ ರಿಜಿಜು ಸ್ಪಷ್ಟನೆ

ಪ್ರಧಾನಿಯವರು ವಿರೋಧ ಪಕ್ಷದ ನಾಯಕರನ್ನು ‘ದಿಮಾಗಿ ನಕ್ಸಲರು’ ಎಂದು ಕರೆದಿಲ್ಲ ಎಂದು ಸಚಿವರಾದ ಕಿರಣ್ ರಿಜಿಜು ಸ್ಪಷ್ಟಪಡಿಸಿದ್ದು, ಈ ಕೆಳಗಿನ ವರ್ಗಗಳ ಜನರನ್ನು ಮಾತ್ರ ‘ದಿಮಾಗಿ ನಕ್ಸಲರು’ ಎಂದು ಕರೆಯಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ:

  1. ಮಾವೋವಾದಿಗಳನ್ನು ಬೆಂಬಲಿಸುವ ಮತ್ತು ಭಾರತದ ಸಂವಿಧಾನವನ್ನು ತಿರಸ್ಕರಿಸುವವರು.
  2. ಪ್ರತ್ಯೇಕತಾವಾದಿಗಳನ್ನು ಮತ್ತು ಆರ್ಟಿಕಲ್ 370 ಅನ್ನು ಬೆಂಬಲಿಸುವವರು.
  3. ಈಶಾನ್ಯ ಭಾರತವನ್ನು ದೇಶದಿಂದ ಪ್ರತ್ಯೇಕಿಸಲು ‘ಚಿಕನ್ಸ್ ನೆಕ್’ (Chicken’s Neck) ಕಾರಿಡಾರ್ ಅನ್ನು ಕತ್ತರಿಸಬೇಕು ಎಂದು ಕರೆ ನೀಡುವವರನ್ನು (ಶಾರ್ಜಿಲ್ ಇಮಾಮ್ ಅವರಂತಹ ವ್ಯಕ್ತಿಗಳು) ಬೆಂಬಲಿಸುವವರು.

ಇದನ್ನೂ ಓದಿ: ರಾಹುಲ್ ವಿರುದ್ಧ ಅಕ್ರಮ ಆಸ್ತಿ ಪ್ರಕರಣ: ವಿಚಾರಣೆ ಸದ್ಯಕ್ಕೆ ನಿಲ್ಲಿಸುವಂತೆ ಅಲಹಾಬಾದ್ ಹೈಕೋರ್ಟ್​ಗೆ ಸುಪ್ರೀಂ ನಿರ್ದೇಶನ

ಪ್ರಧಾನಿಯವರ ಈ ಹೇಳಿಕೆ ದೇಶದ ಏಕತೆ ಮತ್ತು ಸುರಕ್ಷತೆಗೆ ಸಂಬಂಧಿಸಿದ್ದಾಗಿದೆಯೇ ಹೊರತು, ರಾಜಕೀಯ ವಿರೋಧಿಗಳ ವಿರುದ್ಧ ಅಲ್ಲ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us