ಭಾರತದಲ್ಲಿ ಬಾವಲಿಗಳ ಅಧ್ಯಯನ ನಡೆಸಿಹೋದ ಚೀನಾ​ ವಿಜ್ಞಾನಿಗಳು.. ಅಮೆರಿಕದಿಂದ ಧನ ಸಹಾಯ! ತನಿಖೆಗೆ ಆದೇಶಿಸಿದ ಕೇಂದ್ರ

ಪ್ರತಿ ಹೊಸ ರೋಗಗಳು ಬಾವಲಿಯಿಂದ ಹುಟ್ಟಿಕೊಳ್ಳುತ್ತವೆ. ಎಬೋಲಾ, ರೇಬಿಸ್​, ಸಾರ್ಸ್​ ಕೊರೊನಾ ವೈರಸ್​ ಬಾವಲಿಯಿಂದಲೇ ಹುಟ್ಟಿದೆ. ಪ್ರತಿ ಬಾರಿ ಹುಟ್ಟುವ ಹೊಸ ಸಾಂಕ್ರಾಮಿಕಗಳ ಜನಕ ಬಾವಲಿಯೇ.

ಭಾರತದಲ್ಲಿ ಬಾವಲಿಗಳ ಅಧ್ಯಯನ ನಡೆಸಿಹೋದ ಚೀನಾ​ ವಿಜ್ಞಾನಿಗಳು.. ಅಮೆರಿಕದಿಂದ ಧನ ಸಹಾಯ! ತನಿಖೆಗೆ ಆದೇಶಿಸಿದ ಕೇಂದ್ರ
ಸಾಂದರ್ಭಿಕ ಚಿತ್ರ
Edited By: ಸಾಧು ಶ್ರೀನಾಥ್​

Updated on: Feb 18, 2021 | 3:51 PM

ನವದೆಹಲಿ: ಎಬೊಲಾದಂತಹ ಮಾರಕ ವೈರಸ್‌ಗಳಿಗೆ ಬಾವಲಿ ಮತ್ತು ಮಾನವರಲ್ಲಿರುವ ಪ್ರತಿಕಾಯ ಹೇಗೆ ವರ್ತಿಸುತ್ತದೆ ಎನ್ನುವ ಬಗ್ಗೆ ಅಮೆರಿಕ, ಚೀನಾ ಮತ್ತು ಭಾರತದ ಸಂಶೋಧಕರು ನಾಗಾಲ್ಯಾಂಡ್‌ನಲ್ಲಿ ಜಂಟಿಯಾಗಿ ಅಧ್ಯಯನ ನಡೆಸಿದ್ದರು. ಈ ಅಧ್ಯಯನ ಸರ್ಕಾರದ ಗಮನಕ್ಕೆ ತರದೇ ನಡೆದಿದೆ. ಹೀಗಾಗಿ, ಈ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದೆ. 12 ಸಂಶೋಧಕರಲ್ಲಿ ಇಬ್ಬರು ವುಹಾನ್ ಇನ್‌ಸ್ಟಿಟ್ಯೂಟ್​​​ನ ಸಾಂಕ್ರಾಮಿಕ ರೋಗಗಳ ವಿಭಾಗಕ್ಕೆ ಸೇರಿದವರಾಗಿದ್ದಾರೆ. ಬೇರೆ ದೇಶದಿಂದ ಬಂದು ಭಾರತದಲ್ಲಿ ಅಧ್ಯಯನ ನಡೆಸುತ್ತಾರೆ ಎಂದಾದರೆ ಅವರು ವಿಶೇಷ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಆದರೆ, ಆ ರೀತಿ ಮಾಡದೇ ಈ ಅಧ್ಯಯನ ನಡೆದಿದೆ. ಶಾಕಿಂಗ್​ ವಿಚಾರ ಎಂದರೆ ಈ ಅಧ್ಯಯನಕ್ಕೆ ಅಮೆರಿಕ ಧನಸಹಾಯ ಮಾಡಿದೆ!

ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್ (ಎನ್‌ಸಿಬಿಎಸ್), ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ, ಅಮೆರಿಕದ ಏಕರೂಪ ಸೇವೆಗಳ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಸಿಂಗಾಪುರದ ಡ್ಯೂಕ್-ರಾಷ್ಟ್ರೀಯ ವಿಶ್ವವಿದ್ಯಾಲಯ ವಿಜ್ಞಾನಿಗಳು ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದರು. ಯಾವುದೆ ಅನುಮತಿಯಿಲ್ಲದೆ ಬಾವಲಿಗಳು ಮತ್ತು ಬಾವಲಿಯನ್ನು ಬೇಟೆ ಮಾಡುವವರ ರಕ್ತದ ಮಾದರಿಗಳನ್ನು ಸಂಗ್ರಹಿಸಲು ಹೇಗೆ ಅವಕಾಶ ಸಿಕ್ಕಿತು ಎಂಬುದರ ಕುರಿತು ಈಗ ತನಿಖೆ ನಡೆಸಲಾಗುತ್ತಿದೆ.

ಈ ಬಗ್ಗೆ ಅಧ್ಯಯನ ನಡೆಸುವುದಕ್ಕೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನಾಗಾಲ್ಯಾಂಡ್​ಗೆ ಐದು ಸದಸ್ಯರ ಸಮಿತಿಯನ್ನು ಕಳುಹಿಸಿದೆ. ಈಗಾಗಲೇ ಅಧ್ಯಯನ ಪೂರ್ಣಗೊಂಡಿದ್ದು, ವರದಿಯನ್ನು ಆರೋಗ್ಯ ಇಲಾಖೆಗೆ ಸಲ್ಲಿಕೆ ಮಾಡಲಾಗಿದೆ.

ಪ್ರತಿ ಹೊಸ ರೋಗಗಳು ಬಾವಲಿಯಿಂದ ಹುಟ್ಟಿಕೊಳ್ಳುತ್ತವೆ. ಎಬೋಲಾ, ರೇಬಿಸ್​, ಸಾರ್ಸ್​ ಕೊರೊನಾ ವೈರಸ್​ ಬಾವಲಿಯಿಂದಲೇ ಹುಟ್ಟಿದೆ. ಪ್ರತಿ ಬಾರಿ ಹುಟ್ಟುವ ಹೊಸ ಸಾಂಕ್ರಾಮಿಕಗಳ ಜನಕ ಬಾವಲಿಯೇ. ಎಬೋಲಾ ಕಾಣಿಸಿಕೊಂಡರೆ ಮೈ ಸುಡುವ ಜ್ವರ ಹಾಗೂ ವಾಂತಿ ಮತ್ತಿತ್ಯಾದಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಎಬೋಲಾ ಕಾಣಿಸಿಕೊಂಡವರಲ್ಲಿ ಶೇ. 50 ಮಂದಿ ಮೃತಪಟ್ಟಿದ್ದಾರೆ. ಎಬೋಲಾ 2013-16 ಅವಧಿಯಲ್ಲಿ ಆಫ್ರಿಕಾವನ್ನು ಕಾಡಿತ್ತು.

ಇನ್ನು, ಈ ಬೆಳವಣಿಗೆ ಬಗ್ಗೆ ರಾಜ್ಯಸಭಾ ಸಂಸದ ಸುಬ್ರಮಣಿಯನ್​ ಸ್ವಾಮಿ, ವುಹಾನ್ ಸಾಂಕ್ರಾಮಿಕ ರೋಗಗಳ ಘಟಕ ಮತ್ತು ಟಾಟಾ ಇನ್​​ಸ್ಟಿಟ್ಯೂಟ್ ಫಾರ್ ಫಂಡಮೆಂಟಲ್ ರಿಸರ್ಚ್​​​ ತಂಡ ನಾಗಾಲ್ಯಾಂಡ್​​ನ ಮಿಮಿ ಗ್ರಾಮದಲ್ಲಿ ಬಾವಲಿ ವೈರಸ್ ಕುರಿತ ಜಂಟಿ ಸಂಶೋಧನೆಗೆ ಸರ್ಕಾರದ ಸರಿಯಾದ ಪೂರ್ವಾನುಮತಿ ಸಿಕ್ಕಿಲ್ಲ ಎನ್ನುವುದು ದೃಢವಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕೊರೊನಾ ವೈರಾಣು ಮೂಲ ಪತ್ತೆಗೆ ಚೀನಾದ ವುಹಾನ್​ ಪ್ರಯೋಗಾಲಯಕ್ಕೆ ಕಾಲಿಟ್ಟ WHO ತಂಡ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us