AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಪ್ತಮಿ ಗೌಡ-ಚೈತ್ರಾ ಆಚಾರ್​ಗೆ ಪರಭಾಷೆಯಲ್ಲಿ ಈ ವಾರ ಅಗ್ನಿಪರೀಕ್ಷೆ; ಗೆಲುವು ಯಾರಿಗೆ?

ಚೈತ್ರಾ ಆಚಾರ್ ಹಾಗೂ ಸಪ್ತಮಿ ಗೌಡ ಇಬ್ಬರೂ ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಕಂಡವರು. ಇವರಿಗೆ ಸಾಕಷ್ಟು ಹೆಸರು ಬಂದಿದೆ. ವಿಶೇಷ ಎಂದರೆ ಇವರು ಪರಭಾಷೆಯಲ್ಲಿ ನಟಿಸಿರೋ ಸಿನಿಮಾ ಈ ವಾರ (ಜುಲೈ 4) ರಿಲೀಸ್ ಆಗುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.

ರಾಜೇಶ್ ದುಗ್ಗುಮನೆ
|

Updated on: Jul 01, 2025 | 2:50 PM

Share
ಸಪ್ತಮಿ ಗೌಡ ಅವರು ‘ಕಾಂತಾರ’ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಗೆಲುವು ಕಂಡರು. ಅವರಿಗೆ ಈ ವಾರ ತೆಲುಗಿನಲ್ಲಿ ದೊಡ್ಡ ಅಗ್ನಿಪರೀಕ್ಷೆ ಇದೆ. ಅವರ ನಟನೆಯ ತೆಲುಗಿನ ‘ತಮ್ಮುಡು’ ಸಿನಿಮಾ ಈ ವಾರ (ಜುಲೈ 4) ತೆರೆಗೆ ಬರುತ್ತಿದೆ.

ಸಪ್ತಮಿ ಗೌಡ ಅವರು ‘ಕಾಂತಾರ’ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಗೆಲುವು ಕಂಡರು. ಅವರಿಗೆ ಈ ವಾರ ತೆಲುಗಿನಲ್ಲಿ ದೊಡ್ಡ ಅಗ್ನಿಪರೀಕ್ಷೆ ಇದೆ. ಅವರ ನಟನೆಯ ತೆಲುಗಿನ ‘ತಮ್ಮುಡು’ ಸಿನಿಮಾ ಈ ವಾರ (ಜುಲೈ 4) ತೆರೆಗೆ ಬರುತ್ತಿದೆ.

1 / 6
ಈ ಚಿತ್ರಕ್ಕೆ ತೆಲುಗು ನಟ ನಿತಿನ್ ಅವರು ಹೀರೋ. ಅವರು ತೆಲುಗಿನಲ್ಲಿ ಅನೇಕ ಹಿಟ್​​ಗಳನ್ನು ನೀಡಿದ್ದಾರೆ. ಅವರ ಜೊತೆ ಸಪ್ತಮಿ ಗೌಡ ಅವರು ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಸಪ್ತಮಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಈ ಚಿತ್ರಕ್ಕೆ ತೆಲುಗು ನಟ ನಿತಿನ್ ಅವರು ಹೀರೋ. ಅವರು ತೆಲುಗಿನಲ್ಲಿ ಅನೇಕ ಹಿಟ್​​ಗಳನ್ನು ನೀಡಿದ್ದಾರೆ. ಅವರ ಜೊತೆ ಸಪ್ತಮಿ ಗೌಡ ಅವರು ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಸಪ್ತಮಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

2 / 6
ಸಪ್ತಮಿ ಗೌಡ ಅವರ ಪಾತ್ರದ ಹೆಸರು ರತ್ನ ಎಂದು. ಈ ಚಿತ್ರದಲ್ಲಿ ಅವರು ಡಿಗ್ಲಾಮ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಕಾಂತಾರ’ ಚಿತ್ರದಲ್ಲೂ ಅವರಿಗೆ ಇದೇ ರೀತಿಯ ಪಾತ್ರ ಸಿಕ್ಕಿತ್ತು ಅನ್ನೋದು ವಿಶೇಷ. ಈ ಸಿನಿಮಾ ಹಿಟ್ ಆದರೆ, ತೆಲುಗಿನಲ್ಲಿ ಆಫರ್​ಗಳು ಬರಲಿವೆ.

ಸಪ್ತಮಿ ಗೌಡ ಅವರ ಪಾತ್ರದ ಹೆಸರು ರತ್ನ ಎಂದು. ಈ ಚಿತ್ರದಲ್ಲಿ ಅವರು ಡಿಗ್ಲಾಮ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಕಾಂತಾರ’ ಚಿತ್ರದಲ್ಲೂ ಅವರಿಗೆ ಇದೇ ರೀತಿಯ ಪಾತ್ರ ಸಿಕ್ಕಿತ್ತು ಅನ್ನೋದು ವಿಶೇಷ. ಈ ಸಿನಿಮಾ ಹಿಟ್ ಆದರೆ, ತೆಲುಗಿನಲ್ಲಿ ಆಫರ್​ಗಳು ಬರಲಿವೆ.

3 / 6
ಚೈತ್ರಾ ಆಚಾರ್ ಕೂಡ ಕನ್ನಡದಲ್ಲಿ ಹೆಸರು ಮಾಡಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್ 2’ ಅವರಿಗೆ ದೊಡ್ಡ ಮಟ್ಟದಲ್ಲಿ ಗೆಲುವು ತಂದು ಕೊಟ್ಟಿತು. ಈ ಚಿತ್ರ ಪರಭಾಷೆಯಲ್ಲೂ ರಿಲೀಸ್ ಆಗಿರುವುದರಿಂದ ಅವರನ್ನು ಅಲ್ಲಿಯೂ ಗುರುತಿಸುತ್ತಾರೆ.

ಚೈತ್ರಾ ಆಚಾರ್ ಕೂಡ ಕನ್ನಡದಲ್ಲಿ ಹೆಸರು ಮಾಡಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್ 2’ ಅವರಿಗೆ ದೊಡ್ಡ ಮಟ್ಟದಲ್ಲಿ ಗೆಲುವು ತಂದು ಕೊಟ್ಟಿತು. ಈ ಚಿತ್ರ ಪರಭಾಷೆಯಲ್ಲೂ ರಿಲೀಸ್ ಆಗಿರುವುದರಿಂದ ಅವರನ್ನು ಅಲ್ಲಿಯೂ ಗುರುತಿಸುತ್ತಾರೆ.

4 / 6
ಈ ವಾರ ತಮಿಳಿನ ‘3 ಬಿಎಚ್​​ಕೆ’ ಸಿನಿಮಾ ರಿಲೀಸ್ ಆಗುತ್ತಿದೆ. ಮಧ್ಯಮ ವರ್ಗದ ಮನೆ ಕಟ್ಟುವ ಕಥೆಯನ್ನು ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈ ಚಿತ್ರದ ಮೂಲಕ ಚೈತ್ರಾ ಪರಭಾಷೆಯಲ್ಲಿ ಗುರುತಿಸಿಕೊಳ್ಳುವ ಹಂಬಲದಲ್ಲಿ ಇದ್ದಾರೆ.

ಈ ವಾರ ತಮಿಳಿನ ‘3 ಬಿಎಚ್​​ಕೆ’ ಸಿನಿಮಾ ರಿಲೀಸ್ ಆಗುತ್ತಿದೆ. ಮಧ್ಯಮ ವರ್ಗದ ಮನೆ ಕಟ್ಟುವ ಕಥೆಯನ್ನು ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈ ಚಿತ್ರದ ಮೂಲಕ ಚೈತ್ರಾ ಪರಭಾಷೆಯಲ್ಲಿ ಗುರುತಿಸಿಕೊಳ್ಳುವ ಹಂಬಲದಲ್ಲಿ ಇದ್ದಾರೆ.

5 / 6
ಈ ಸಿನಿಮಾದಲ್ಲಿ ತಮಿಳು ನಟ ಸಿದ್ದಾರ್ಥ್​, ಶರತ್ ಕುಮಾರ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಯಶಸ್ಸು ಕಂಡರೆ ಚೈತ್ರಾ ಅವರಿಗೆ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಲಿದೆ. ಈ ಚಿತ್ರ ಗೆಲುವು ಕಾಣಲಿ ಎಂಬುದು ಫ್ಯಾನ್ಸ್ ಕೋರಿಕೆ ಕೂಡ ಹೌದು.

ಈ ಸಿನಿಮಾದಲ್ಲಿ ತಮಿಳು ನಟ ಸಿದ್ದಾರ್ಥ್​, ಶರತ್ ಕುಮಾರ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಯಶಸ್ಸು ಕಂಡರೆ ಚೈತ್ರಾ ಅವರಿಗೆ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಲಿದೆ. ಈ ಚಿತ್ರ ಗೆಲುವು ಕಾಣಲಿ ಎಂಬುದು ಫ್ಯಾನ್ಸ್ ಕೋರಿಕೆ ಕೂಡ ಹೌದು.

6 / 6
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು