AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನಗಿಂತ 28 ವರ್ಷ ಚಿಕ್ಕವಳನ್ನು ಮದುವೆಯಾದ ಮಾಜಿ ಕ್ರಿಕೆಟಿಗ..!

Arun Lal: ಟೀಮ್ ಇಂಡಿಯಾ ಪರ 16 ಟೆಸ್ಟ್‌ಗಳು ಮತ್ತು 13 ಏಕದಿನ ಪಂದ್ಯಗಳನ್ನು ಆಡಿರುವ ಅರುಣ್ ಲಾಲ್ ಒಟ್ಟು 851 ರನ್ ಕಲೆಹಾಕಿದ್ದಾರೆ.

TV9 Web
| Edited By: |

Updated on:May 05, 2022 | 5:07 PM

Share
ಭಾರತ ತಂಡದ ಮಾಜಿ ಆಟಗಾರ ಅರುಣ್ ಲಾಲ್ ತಮ್ಮ 66ನೇ ವಯಸ್ಸಿನಲ್ಲಿ ಎರಡನೇ ವಿವಾಹವಾಗಿದ್ದಾರೆ. ವಿಶೇಷ ಎಂದರೆ ಅವರ ಪತ್ನಿ ಬುಲ್​ ಬುಲ್ ಸಹಾ ಅವರಿಗಿಂತ 28 ವರ್ಷ ಚಿಕ್ಕವರು ಎಂಬುದು. ಅಷ್ಟೇ ಅಲ್ಲದೆ 2ನೇ ವಿವಾಹಕ್ಕೆ ಮೊದಲ ಪತ್ನಿ ರೀನಾ ಅವರಿಂದ ಒಪ್ಪಿಗೆಯನ್ನೂ ಪಡೆದಿದ್ದರು. ಈ ಮೂಲಕ ಅರುಣ್ ಲಾಲ್ ದಾಂಪತ್ಯ ಜೀವನದಲ್ಲಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.

ಭಾರತ ತಂಡದ ಮಾಜಿ ಆಟಗಾರ ಅರುಣ್ ಲಾಲ್ ತಮ್ಮ 66ನೇ ವಯಸ್ಸಿನಲ್ಲಿ ಎರಡನೇ ವಿವಾಹವಾಗಿದ್ದಾರೆ. ವಿಶೇಷ ಎಂದರೆ ಅವರ ಪತ್ನಿ ಬುಲ್​ ಬುಲ್ ಸಹಾ ಅವರಿಗಿಂತ 28 ವರ್ಷ ಚಿಕ್ಕವರು ಎಂಬುದು. ಅಷ್ಟೇ ಅಲ್ಲದೆ 2ನೇ ವಿವಾಹಕ್ಕೆ ಮೊದಲ ಪತ್ನಿ ರೀನಾ ಅವರಿಂದ ಒಪ್ಪಿಗೆಯನ್ನೂ ಪಡೆದಿದ್ದರು. ಈ ಮೂಲಕ ಅರುಣ್ ಲಾಲ್ ದಾಂಪತ್ಯ ಜೀವನದಲ್ಲಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.

1 / 5
ಅರುಣ್ ಲಾಲ್ ತನ್ನ ಮೊದಲ ಪತ್ನಿ ರೀನಾದಿಂದ ದೂರವಾಗಿದ್ದರು. ಇದಾಗ್ಯೂ ಅವರು ಎರಡನೇ ಮದುವೆಗೆ ಅವರ ಒಪ್ಪಿಗೆಯನ್ನೂ ಪಡೆದಿದ್ದರು. ಇನ್ನು ಮೊದಲ ಪತ್ನಿ ರೀನಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅರುಣ್ ಲಾಲ್ 2ನೇ ಮದುವೆಯಾದರೂ ಅವರ ಮೊದಲ ಪತ್ನಿಯನ್ನು 2ನೇ ಪತ್ನಿ ಬುಲ್ ಬುಲ್ ಸಾಹ ನೋಡಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು.

ಅರುಣ್ ಲಾಲ್ ತನ್ನ ಮೊದಲ ಪತ್ನಿ ರೀನಾದಿಂದ ದೂರವಾಗಿದ್ದರು. ಇದಾಗ್ಯೂ ಅವರು ಎರಡನೇ ಮದುವೆಗೆ ಅವರ ಒಪ್ಪಿಗೆಯನ್ನೂ ಪಡೆದಿದ್ದರು. ಇನ್ನು ಮೊದಲ ಪತ್ನಿ ರೀನಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅರುಣ್ ಲಾಲ್ 2ನೇ ಮದುವೆಯಾದರೂ ಅವರ ಮೊದಲ ಪತ್ನಿಯನ್ನು 2ನೇ ಪತ್ನಿ ಬುಲ್ ಬುಲ್ ಸಾಹ ನೋಡಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು.

2 / 5
ಮಾಜಿ ಕ್ರಿಕೆಟಿಗ ಮತ್ತು ಬುಲ್​ ಬುಲ್ ಕೋಲ್ಕತ್ತಾದಲ್ಲಿ ಸರಳ ಸಮಾರಂಭದಲ್ಲಿ ವಿವಾಹವಾಗಿದ್ದಾರೆ.  ಕಳೆದ ವಾರ, ಅರಿಶಿನ ಸಮಾರಂಭದ ಚಿತ್ರಗಳು ಸಹ ವೈರಲ್ ಆಗಿದ್ದವು. ಇದೀಗ ಅರುಣ್ ಲಾಲ್ ಅವರ  ಮದುವೆಯ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮಾಜಿ ಕ್ರಿಕೆಟಿಗ ಮತ್ತು ಬುಲ್​ ಬುಲ್ ಕೋಲ್ಕತ್ತಾದಲ್ಲಿ ಸರಳ ಸಮಾರಂಭದಲ್ಲಿ ವಿವಾಹವಾಗಿದ್ದಾರೆ. ಕಳೆದ ವಾರ, ಅರಿಶಿನ ಸಮಾರಂಭದ ಚಿತ್ರಗಳು ಸಹ ವೈರಲ್ ಆಗಿದ್ದವು. ಇದೀಗ ಅರುಣ್ ಲಾಲ್ ಅವರ ಮದುವೆಯ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

3 / 5
ಅರುಣ್ ಲಾಲ್ ಬಂಗಾಳ ತಂಡದ ಮುಖ್ಯ ಕೋಚ್ ಆಗಿದ್ದಾರೆ.  ಬಂಗಾಳ ತಂಡವು 2019-20 ರ ರಣಜಿ ಟ್ರೋಫಿಯ ಫೈನಲ್‌ಗೆ ತಲುಪಿತ್ತು. ಆದರೆ ಫೈನಲ್​ನಲ್ಲಿ ಸೌರಾಷ್ಟ್ರ ವಿರುದ್ಧ ಸೋಲಬೇಕಾಯಿತು. ಇದಾಗ್ಯೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಬಂಗಾಳ ತಂಡದ ಕೋಚ್ ಆಗಿ ಹಿರಿವಯಸ್ಸಿನ ಅರುಣ್ ಲಾಲ್ ಅವರನ್ನು ಮುಂದುವರೆಸಲಾಗಿದೆ.

ಅರುಣ್ ಲಾಲ್ ಬಂಗಾಳ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಬಂಗಾಳ ತಂಡವು 2019-20 ರ ರಣಜಿ ಟ್ರೋಫಿಯ ಫೈನಲ್‌ಗೆ ತಲುಪಿತ್ತು. ಆದರೆ ಫೈನಲ್​ನಲ್ಲಿ ಸೌರಾಷ್ಟ್ರ ವಿರುದ್ಧ ಸೋಲಬೇಕಾಯಿತು. ಇದಾಗ್ಯೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಬಂಗಾಳ ತಂಡದ ಕೋಚ್ ಆಗಿ ಹಿರಿವಯಸ್ಸಿನ ಅರುಣ್ ಲಾಲ್ ಅವರನ್ನು ಮುಂದುವರೆಸಲಾಗಿದೆ.

4 / 5
ಅರುಣ್ ಲಾಲ್ ಅವರ ಎರಡನೇ ಪತ್ನಿ ಬುಲ್​ ಬುಲ್ ಸಾಹ ವೃತ್ತಿಯಲ್ಲಿ ಶಿಕ್ಷಕಿ. ಇದೀಗ ಮಾಜಿ ಕ್ರಿಕೆಟಿಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಟೀಮ್ ಇಂಡಿಯಾ ಪರ 16 ಟೆಸ್ಟ್‌ಗಳು ಮತ್ತು 13 ಏಕದಿನ ಪಂದ್ಯಗಳನ್ನು ಆಡಿರುವ ಅರುಣ್ ಲಾಲ್ ಒಟ್ಟು 851 ರನ್ ಕಲೆಹಾಕಿದ್ದಾರೆ. 2016 ರಲ್ಲಿ ಅಪರೂಪದ ಕ್ಯಾನ್ಸರ್ ಅಡೆನಾಯ್ಡ್ ಸಿಸ್ಟಿಕ್ ಕಾರ್ಸಿನೋಮಗೆ ಒಳಗಾಗಿದ್ದ ಅರುಣ್ ಲಾಲ್ ಇದೀಗ 66ನೇ ವಯಸ್ಸಿನಲ್ಲಿ ಹೊಸ ಇನಿಂಗ್ಸ್ ಆರಂಭಿಸಿರುವುದು ವಿಶೇಷ.

ಅರುಣ್ ಲಾಲ್ ಅವರ ಎರಡನೇ ಪತ್ನಿ ಬುಲ್​ ಬುಲ್ ಸಾಹ ವೃತ್ತಿಯಲ್ಲಿ ಶಿಕ್ಷಕಿ. ಇದೀಗ ಮಾಜಿ ಕ್ರಿಕೆಟಿಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಟೀಮ್ ಇಂಡಿಯಾ ಪರ 16 ಟೆಸ್ಟ್‌ಗಳು ಮತ್ತು 13 ಏಕದಿನ ಪಂದ್ಯಗಳನ್ನು ಆಡಿರುವ ಅರುಣ್ ಲಾಲ್ ಒಟ್ಟು 851 ರನ್ ಕಲೆಹಾಕಿದ್ದಾರೆ. 2016 ರಲ್ಲಿ ಅಪರೂಪದ ಕ್ಯಾನ್ಸರ್ ಅಡೆನಾಯ್ಡ್ ಸಿಸ್ಟಿಕ್ ಕಾರ್ಸಿನೋಮಗೆ ಒಳಗಾಗಿದ್ದ ಅರುಣ್ ಲಾಲ್ ಇದೀಗ 66ನೇ ವಯಸ್ಸಿನಲ್ಲಿ ಹೊಸ ಇನಿಂಗ್ಸ್ ಆರಂಭಿಸಿರುವುದು ವಿಶೇಷ.

5 / 5

Published On - 5:07 pm, Thu, 5 May 22

Follow Us
ಬೆಂಗಳೂರು: ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್
ಬೆಂಗಳೂರು: ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್