AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR ಫ್ರಾಂಚೈಸಿ ತಂಡಕ್ಕೆ ಇಬ್ಬರು ಪಾಕಿಸ್ತಾನ್ ಆಟಗಾರರು ಆಯ್ಕೆ..!

Caribbean Premier League 2025: ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ ಆಗಸ್ಟ್ 14 ರಿಂದ ಶುರುವಾಗಲಿದ್ದು, ಸೆಪ್ಟೆಂಬರ್ 21 ರವರೆಗೆ ನಡೆಯಲಿದೆ. ಈ ಪಂದ್ಯಾವಳಿಗಾಗಿ ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಘೋಷಿಸಿದ್ದಾರೆ. ಇದರಲ್ಲಿ ಇಬ್ಬರು ಪಾಕಿಸ್ತಾನ್ ವೇಗಿಗಳು ಕೂಡ ಕಾಣಿಸಿಕೊಂಡಿದ್ದಾರೆ.

ಝಾಹಿರ್ ಯೂಸುಫ್
|

Updated on:Jun 21, 2025 | 9:55 AM

Share
ಕೆರಿಬಿಯನ್ ಪ್ರೀಮಿಯರ್ ಲೀಗ್ (CPL 2025)​ ಸೀಸನ್-14 ಗೆ ಸಿದ್ಧತೆಗಳು ಶುರುವಾಗಿದೆ. ಆಗಸ್ಟ್ 14 ರಿಂದ ಆರಂಭವಾಗಲಿರುವ ಈ ಟೂರ್ನಿಗಾಗಿ ಈಗಾಗಲೇ ಎಲ್ಲಾ ತಂಡಗಳ ಘೋಷಣೆಯಾಗಿದೆ. ಈ ತಂಡಗಳಲ್ಲಿ ಕೆಲ ಪಾಕಿಸ್ತಾನ್ ಆಟಗಾರರು ಕೂಡ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ ಒಡೆತನದಲ್ಲಿರುವ ತಂಡದಲ್ಲಿ ಇಬ್ಬರು ಪಾಕ್ ವೇಗಿಗಳಿಗೆ ಸ್ಥಾನ ನೀಡಲಾಗಿರುವುದು ವಿಶೇಷ.

ಕೆರಿಬಿಯನ್ ಪ್ರೀಮಿಯರ್ ಲೀಗ್ (CPL 2025)​ ಸೀಸನ್-14 ಗೆ ಸಿದ್ಧತೆಗಳು ಶುರುವಾಗಿದೆ. ಆಗಸ್ಟ್ 14 ರಿಂದ ಆರಂಭವಾಗಲಿರುವ ಈ ಟೂರ್ನಿಗಾಗಿ ಈಗಾಗಲೇ ಎಲ್ಲಾ ತಂಡಗಳ ಘೋಷಣೆಯಾಗಿದೆ. ಈ ತಂಡಗಳಲ್ಲಿ ಕೆಲ ಪಾಕಿಸ್ತಾನ್ ಆಟಗಾರರು ಕೂಡ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ ಒಡೆತನದಲ್ಲಿರುವ ತಂಡದಲ್ಲಿ ಇಬ್ಬರು ಪಾಕ್ ವೇಗಿಗಳಿಗೆ ಸ್ಥಾನ ನೀಡಲಾಗಿರುವುದು ವಿಶೇಷ.

1 / 5
ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಮಾಲೀಕತ್ವದ ಟ್ರಿನ್​ಬ್ರಾಗೊ ನೈಟ್ ರೈಡರ್ಸ್ ತಂಡಕ್ಕೆ ಪಾಕಿಸ್ತಾನದ ಎಡಗೈ ವೇಗಿ ಮೊಹಮ್ಮದ್ ಅಮೀರ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಜಮೈಕಾ ತಲ್ಲವಾಸ್ ಮತ್ತು ಆಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಅಮೀರ್ ಅವರನ್ನು ಈ ಬಾರಿ ಟಿಕೆಆರ್ ಖರೀದಿಸಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಮಾಲೀಕತ್ವದ ಟ್ರಿನ್​ಬ್ರಾಗೊ ನೈಟ್ ರೈಡರ್ಸ್ ತಂಡಕ್ಕೆ ಪಾಕಿಸ್ತಾನದ ಎಡಗೈ ವೇಗಿ ಮೊಹಮ್ಮದ್ ಅಮೀರ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಜಮೈಕಾ ತಲ್ಲವಾಸ್ ಮತ್ತು ಆಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಅಮೀರ್ ಅವರನ್ನು ಈ ಬಾರಿ ಟಿಕೆಆರ್ ಖರೀದಿಸಿದೆ.

2 / 5
2021 ರಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಣಕ್ಕಿಳಿಯುತ್ತಿರುವ ಮೊಹಮ್ಮದ್ ಅಮೀರ್ ಒಟ್ಟು 39 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಬರೋಬ್ಬರಿ 51 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಬಾರಿಯ ಡ್ರಾಫ್ಟ್ ಪ್ರಕ್ರಿಯೆಗೂ ಮುನ್ನ ಆಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡವು ಪಾಕ್ ವೇಗಿಯನ್ನು ಬಿಡುಗಡೆ ಮಾಡಿತ್ತು.

2021 ರಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಣಕ್ಕಿಳಿಯುತ್ತಿರುವ ಮೊಹಮ್ಮದ್ ಅಮೀರ್ ಒಟ್ಟು 39 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಬರೋಬ್ಬರಿ 51 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಬಾರಿಯ ಡ್ರಾಫ್ಟ್ ಪ್ರಕ್ರಿಯೆಗೂ ಮುನ್ನ ಆಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡವು ಪಾಕ್ ವೇಗಿಯನ್ನು ಬಿಡುಗಡೆ ಮಾಡಿತ್ತು.

3 / 5
ಅದರಂತೆ ಡ್ರಾಫ್ಟ್ ಆಯ್ಕೆ ಪಟ್ಟಿಯಲ್ಲಿ ಕಾಣಿಸಿಕೊಂಡ ಮೊಹಮ್ಮದ್ ಅಮೀರ್ ಅವರನ್ನು ಟ್ರಿನ್​ಬ್ರಾಗೊ ನೈಟ್ ರೈಡರ್ಸ್ ತಂಡವು ಆಯ್ಕೆ ಮಾಡಿಕೊಂಡಿದೆ. ಹಾಗೆಯೇ ಪಾಕಿಸ್ತಾನದ ಮತ್ತೋರ್ವ ವೇಗದ ಬೌಲರ್ ಉಸ್ಮಾನ್ ತಾರಿಖ್ ಅವರಿಗೂ ಸ್ಥಾನ ನೀಡಲಾಗಿದೆ. ಈ  ಮೂಲಕ ಟಿಕೆಆರ್​ ತಂಡವು ತನ್ನ ಬೌಲಿಂಗ್ ಲೈನಪ್ ಅನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. 

ಅದರಂತೆ ಡ್ರಾಫ್ಟ್ ಆಯ್ಕೆ ಪಟ್ಟಿಯಲ್ಲಿ ಕಾಣಿಸಿಕೊಂಡ ಮೊಹಮ್ಮದ್ ಅಮೀರ್ ಅವರನ್ನು ಟ್ರಿನ್​ಬ್ರಾಗೊ ನೈಟ್ ರೈಡರ್ಸ್ ತಂಡವು ಆಯ್ಕೆ ಮಾಡಿಕೊಂಡಿದೆ. ಹಾಗೆಯೇ ಪಾಕಿಸ್ತಾನದ ಮತ್ತೋರ್ವ ವೇಗದ ಬೌಲರ್ ಉಸ್ಮಾನ್ ತಾರಿಖ್ ಅವರಿಗೂ ಸ್ಥಾನ ನೀಡಲಾಗಿದೆ. ಈ  ಮೂಲಕ ಟಿಕೆಆರ್​ ತಂಡವು ತನ್ನ ಬೌಲಿಂಗ್ ಲೈನಪ್ ಅನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. 

4 / 5
ಟ್ರಿನ್​ಬ್ರಾಗೊ ನೈಟ್ ರೈಡರ್ಸ್ ತಂಡ:  ಕೀರನ್ ಪೊಲಾರ್ಡ್, ಸುನಿಲ್ ನರೈನ್, ಆಂಡ್ರೆ ರಸ್ಸೆಲ್, ನಿಕೋಲಸ್ ಪೂರನ್, ಅಲಿ ಖಾನ್, ಕೀಸಿ ಕಾರ್ಟಿ, ಅಕೇಲ್ ಹೋಸೇನ್, ಟೆರನ್ಸ್ ಹಿಂಡ್ಸ್, ಅಲೆಕ್ಸ್ ಹೇಲ್ಸ್, ಕಾಲಿನ್ ಮನ್ರೋ, ಮೊಹಮ್ಮದ್ ಅಮೀರ್, ಉಸ್ಮಾನ್ ತಾರಿಕ್, ಜೋಶುವಾ ಡಾ ಸಿಲ್ವಾ, ನಾಥನ್ ಎಡ್ವರ್ಡ್ಸ್, ಮೆಕೆನ್ನಿ ಕ್ಲಾರ್ಕ್, ಡ್ಯಾರೆನ್ ಬ್ರಾವೋ, ಯಾನಿಕ್ ಕ್ಯಾರಿಯಾ, ಮೊಹಮ್ಮದ್ ಅಮೀರ್.

ಟ್ರಿನ್​ಬ್ರಾಗೊ ನೈಟ್ ರೈಡರ್ಸ್ ತಂಡ:  ಕೀರನ್ ಪೊಲಾರ್ಡ್, ಸುನಿಲ್ ನರೈನ್, ಆಂಡ್ರೆ ರಸ್ಸೆಲ್, ನಿಕೋಲಸ್ ಪೂರನ್, ಅಲಿ ಖಾನ್, ಕೀಸಿ ಕಾರ್ಟಿ, ಅಕೇಲ್ ಹೋಸೇನ್, ಟೆರನ್ಸ್ ಹಿಂಡ್ಸ್, ಅಲೆಕ್ಸ್ ಹೇಲ್ಸ್, ಕಾಲಿನ್ ಮನ್ರೋ, ಮೊಹಮ್ಮದ್ ಅಮೀರ್, ಉಸ್ಮಾನ್ ತಾರಿಕ್, ಜೋಶುವಾ ಡಾ ಸಿಲ್ವಾ, ನಾಥನ್ ಎಡ್ವರ್ಡ್ಸ್, ಮೆಕೆನ್ನಿ ಕ್ಲಾರ್ಕ್, ಡ್ಯಾರೆನ್ ಬ್ರಾವೋ, ಯಾನಿಕ್ ಕ್ಯಾರಿಯಾ, ಮೊಹಮ್ಮದ್ ಅಮೀರ್.

5 / 5

Published On - 9:54 am, Sat, 21 June 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ