AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia: ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್ ಪಿಚ್​ನಲ್ಲಿ​ ಬದಲಾವಣೆ: ಯಾರಿಗೆ ಅನುಕೂಲ?

India vs Australia 3rd Test: ನಾಗ್ಪುರ ಟೆಸ್ಟ್ ಹಾಗೂ ದೆಹಲಿ ಟೆಸ್ಟ್​ ಪಂದ್ಯಗಳಲ್ಲಿ ಸ್ಪಿನ್ ಬೌಲರ್​ಗಳು ಮಿಂಚಿದ್ದರು. ಆದರೆ ಇಂದೋರ್ ಟೆಸ್ಟ್ ಪಂದ್ಯಕ್ಕಾಗಿ ಚೆಂಡು ಪುಟಿದೇಳುವ ಬೌನ್ಸಿ ಪಿಚ್​ಗಳನ್ನು ರೂಪಿಸಲಾಗಿದೆ.

TV9 Web
| Edited By: |

Updated on:Feb 27, 2023 | 9:56 PM

Share
ಭಾರತ-ಆಸ್ಟ್ರೇಲಿಯಾ ನಡುವಣ 3ನೇ ಟೆಸ್ಟ್ ಪಂದ್ಯವು ಮಾರ್ಚ್​ 1 ರಿಂದ ಶುರುವಾಗಲಿದೆ. ಇಂದೋರ್​ನ ಹೋಲ್ಕರ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ವಿಶೇಷ ಪಿಚ್ ಅನ್ನು ರೂಪಿಸಲಾಗಿದೆ ಎಂದು ವರದಿಯಾಗಿದೆ.

ಭಾರತ-ಆಸ್ಟ್ರೇಲಿಯಾ ನಡುವಣ 3ನೇ ಟೆಸ್ಟ್ ಪಂದ್ಯವು ಮಾರ್ಚ್​ 1 ರಿಂದ ಶುರುವಾಗಲಿದೆ. ಇಂದೋರ್​ನ ಹೋಲ್ಕರ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ವಿಶೇಷ ಪಿಚ್ ಅನ್ನು ರೂಪಿಸಲಾಗಿದೆ ಎಂದು ವರದಿಯಾಗಿದೆ.

1 / 8
ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಪಿಚ್​ ಸಿದ್ಧಪಡಿಸಲು ಎಂಪಿಸಿಎ  ಮುಂಬೈನಿಂದ ವಿಶೇಷ ಕೆಂಪು ಮಣ್ಣಿನ್ನು ತರಿಸಿಕೊಂಡಿದೆ. ಈ ಪಿಚ್​ ವಾಂಖೆಡೆ ಅಥವಾ ಬ್ರಬೋರ್ನ್ ಸ್ಟೇಡಿಯಂಗಳಲ್ಲಿ ಕಂಡುಬರುವಂತೆ  ಬಹಳಷ್ಟು ಬೌನ್ಸಿ ಆಗಿರಲಿದೆ. ಇದರಿಂದ ವೇಗದ ಬೌಲರ್​ಗಳು ಸಂಪೂರ್ಣ ನೆರವು ಪಡೆಯಬಹುದು.

ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಪಿಚ್​ ಸಿದ್ಧಪಡಿಸಲು ಎಂಪಿಸಿಎ ಮುಂಬೈನಿಂದ ವಿಶೇಷ ಕೆಂಪು ಮಣ್ಣಿನ್ನು ತರಿಸಿಕೊಂಡಿದೆ. ಈ ಪಿಚ್​ ವಾಂಖೆಡೆ ಅಥವಾ ಬ್ರಬೋರ್ನ್ ಸ್ಟೇಡಿಯಂಗಳಲ್ಲಿ ಕಂಡುಬರುವಂತೆ ಬಹಳಷ್ಟು ಬೌನ್ಸಿ ಆಗಿರಲಿದೆ. ಇದರಿಂದ ವೇಗದ ಬೌಲರ್​ಗಳು ಸಂಪೂರ್ಣ ನೆರವು ಪಡೆಯಬಹುದು.

2 / 8
ಇದಕ್ಕೂ ಮುನ್ನ ನಡೆದ ನಾಗ್ಪುರ ಟೆಸ್ಟ್ ಹಾಗೂ ದೆಹಲಿ ಟೆಸ್ಟ್​ ಪಂದ್ಯಗಳಲ್ಲಿ ಸ್ಪಿನ್ ಬೌಲರ್​ಗಳು ಮಿಂಚಿದ್ದರು. ಆದರೆ ಇಂದೋರ್ ಟೆಸ್ಟ್ ಪಂದ್ಯಕ್ಕಾಗಿ ಚೆಂಡು ಪುಟಿದೇಳುವ ಬೌನ್ಸಿ ಪಿಚ್​ಗಳನ್ನು ರೂಪಿಸಲಾಗಿದೆ. ಅತ್ತ ವೇಗದ ಬೌಲಿಂಗ್​ಗೆ ಅತ್ಯುತ್ತಮವಾಗಿ ಆಡುವ ಆಸ್ಟ್ರೇಲಿಯಾ ತಂಡಕ್ಕೆ ಇದು ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ.

ಇದಕ್ಕೂ ಮುನ್ನ ನಡೆದ ನಾಗ್ಪುರ ಟೆಸ್ಟ್ ಹಾಗೂ ದೆಹಲಿ ಟೆಸ್ಟ್​ ಪಂದ್ಯಗಳಲ್ಲಿ ಸ್ಪಿನ್ ಬೌಲರ್​ಗಳು ಮಿಂಚಿದ್ದರು. ಆದರೆ ಇಂದೋರ್ ಟೆಸ್ಟ್ ಪಂದ್ಯಕ್ಕಾಗಿ ಚೆಂಡು ಪುಟಿದೇಳುವ ಬೌನ್ಸಿ ಪಿಚ್​ಗಳನ್ನು ರೂಪಿಸಲಾಗಿದೆ. ಅತ್ತ ವೇಗದ ಬೌಲಿಂಗ್​ಗೆ ಅತ್ಯುತ್ತಮವಾಗಿ ಆಡುವ ಆಸ್ಟ್ರೇಲಿಯಾ ತಂಡಕ್ಕೆ ಇದು ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ.

3 / 8
ಇನ್ನು ಇಂದೋರ್​ನಲ್ಲಿ ಸಿದ್ಧಪಡಿಸಲಾಗಿರುವ ಪಿಚ್​ನಲ್ಲಿ ಮೊದಲ ಇನಿಂಗ್ಸ್​ನಲ್ಲಿ ಬ್ಯಾಟ್ ಮಾಡುವ ತಂಡವು ಕನಿಷ್ಠ 350 ರನ್​ ಕಲೆಹಾಕುವ ನಿರೀಕ್ಷೆಯಿದೆ. ಅಂದರೆ ಹೋಲ್ಕರ್ ಮೈದಾನದ ಪಿಚ್ ವೇಗದ ಬೌಲರ್​ಗಳಿಗೆ ಎಷ್ಟು ಸಹಕಾರಿಯೋ, ಹಾಗೆಯೇ ಬ್ಯಾಟರ್​ಗಳಿಗೂ ಹೆಚ್ಚಿನ ನೆರವು ನೀಡಲಿದೆ.

ಇನ್ನು ಇಂದೋರ್​ನಲ್ಲಿ ಸಿದ್ಧಪಡಿಸಲಾಗಿರುವ ಪಿಚ್​ನಲ್ಲಿ ಮೊದಲ ಇನಿಂಗ್ಸ್​ನಲ್ಲಿ ಬ್ಯಾಟ್ ಮಾಡುವ ತಂಡವು ಕನಿಷ್ಠ 350 ರನ್​ ಕಲೆಹಾಕುವ ನಿರೀಕ್ಷೆಯಿದೆ. ಅಂದರೆ ಹೋಲ್ಕರ್ ಮೈದಾನದ ಪಿಚ್ ವೇಗದ ಬೌಲರ್​ಗಳಿಗೆ ಎಷ್ಟು ಸಹಕಾರಿಯೋ, ಹಾಗೆಯೇ ಬ್ಯಾಟರ್​ಗಳಿಗೂ ಹೆಚ್ಚಿನ ನೆರವು ನೀಡಲಿದೆ.

4 / 8
ಏಕಪಕ್ಷೀಯವಾಗಿ ನಡೆದಿದ್ದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸಂಪೂರ್ಣ ಹಿಡಿತ ಸಾಧಿಸಿತ್ತು. ಅದರಲ್ಲೂ 2 ಪಂದ್ಯಗಳು ಕೇವಲ 3 ದಿನಗಳಲ್ಲಿ ಅಂತ್ಯಗೊಂಡಿತ್ತು. ಅತ್ತ ನಾಗ್ಪುರ ಹಾಗೂ ದೆಹಲಿ ಪಿಚ್​ಗೆ ಐಸಿಸಿ ಮತ್ತು ಅದರ ಮ್ಯಾಚ್ ರೆಫರಿ ಜಿಂಬಾಬ್ವೆಯ ಆಂಡಿ ಪೈಕ್ರಾಫ್ಟ್‌ 'ಸರಾಸರಿ' ರೇಟಿಂಗ್ ನೀಡಿದ್ದರು.

ಏಕಪಕ್ಷೀಯವಾಗಿ ನಡೆದಿದ್ದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸಂಪೂರ್ಣ ಹಿಡಿತ ಸಾಧಿಸಿತ್ತು. ಅದರಲ್ಲೂ 2 ಪಂದ್ಯಗಳು ಕೇವಲ 3 ದಿನಗಳಲ್ಲಿ ಅಂತ್ಯಗೊಂಡಿತ್ತು. ಅತ್ತ ನಾಗ್ಪುರ ಹಾಗೂ ದೆಹಲಿ ಪಿಚ್​ಗೆ ಐಸಿಸಿ ಮತ್ತು ಅದರ ಮ್ಯಾಚ್ ರೆಫರಿ ಜಿಂಬಾಬ್ವೆಯ ಆಂಡಿ ಪೈಕ್ರಾಫ್ಟ್‌ 'ಸರಾಸರಿ' ರೇಟಿಂಗ್ ನೀಡಿದ್ದರು.

5 / 8
ಇದೇ ಕಾರಣದಿಂದಾಗಿ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಅತ್ಯುತ್ತಮ ಪಿಚ್ ಸಿದ್ಧಪಡಿಸಲು ಬಿಸಿಸಿಐ ಸೂಚಿಸಿತ್ತು. ಇದೀಗ ವೇಗದ ಬೌಲರ್​ಗಳಿಗೆ ಹಾಗೂ ಬ್ಯಾಟರ್​ಗಳಿಗೆ ಸಹಕಾರಿಯಾಗುವ ಪಿಚ್ ಸಿದ್ಧಪಡಿಸಲಾಗಿದೆ ಎಂದು ವರದಿಯಾಗಿದೆ. ಇಲ್ಲಿ ಬ್ಯಾಟರ್​ಗಳು ಮೇಲುಗೈ ಸಾಧಿಸಲಿದ್ದಾರಾ ಅಥವಾ ಬೌಲರ್​ಗಳು ಮಿಂಚಲಿದ್ದಾರಾ ಎಂಬುದು ಮಾರ್ಚ್ 1 ರಿಂದ ಗೊತ್ತಾಗಲಿದೆ.

ಇದೇ ಕಾರಣದಿಂದಾಗಿ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಅತ್ಯುತ್ತಮ ಪಿಚ್ ಸಿದ್ಧಪಡಿಸಲು ಬಿಸಿಸಿಐ ಸೂಚಿಸಿತ್ತು. ಇದೀಗ ವೇಗದ ಬೌಲರ್​ಗಳಿಗೆ ಹಾಗೂ ಬ್ಯಾಟರ್​ಗಳಿಗೆ ಸಹಕಾರಿಯಾಗುವ ಪಿಚ್ ಸಿದ್ಧಪಡಿಸಲಾಗಿದೆ ಎಂದು ವರದಿಯಾಗಿದೆ. ಇಲ್ಲಿ ಬ್ಯಾಟರ್​ಗಳು ಮೇಲುಗೈ ಸಾಧಿಸಲಿದ್ದಾರಾ ಅಥವಾ ಬೌಲರ್​ಗಳು ಮಿಂಚಲಿದ್ದಾರಾ ಎಂಬುದು ಮಾರ್ಚ್ 1 ರಿಂದ ಗೊತ್ತಾಗಲಿದೆ.

6 / 8
ಭಾರತ ತಂಡ:  ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್, ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ , ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್, ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ , ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್.

7 / 8
ಆಸ್ಟ್ರೇಲಿಯಾ ತಂಡ: ಸ್ಟೀವನ್ ಸ್ಮಿತ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಮ್ಯಾಟ್ ರೆನ್‌ಶಾ, ಮಿಚೆಲ್ ಸ್ಟಾರ್ಕ್, ಮ್ಯಾಥ್ಯೂ ಕುಹ್ನೆಮನ್

ಆಸ್ಟ್ರೇಲಿಯಾ ತಂಡ: ಸ್ಟೀವನ್ ಸ್ಮಿತ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಮ್ಯಾಟ್ ರೆನ್‌ಶಾ, ಮಿಚೆಲ್ ಸ್ಟಾರ್ಕ್, ಮ್ಯಾಥ್ಯೂ ಕುಹ್ನೆಮನ್

8 / 8

Published On - 9:53 pm, Mon, 27 February 23

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ