AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ishan Kishan: 5 ವರ್ಷಗಳ ಬಳಿಕ ತಂಡಕ್ಕೆ ಎಂಟ್ರಿ: ಸ್ಟೋಟಕ ದಾಂಡಿಗನ ನೆನಪಿಸಿದ ಇಶಾನ್ ಕಿಶನ್

Ishan Kishan: ಬಾಂಗ್ಲಾದೇಶ್ ವಿರುದ್ಧ 131 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 24 ಫೋರ್​ನೊಂದಿಗೆ 210 ರನ್​ ಚಚ್ಚಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ ದ್ವಿಶತಕ ಬಾರಿಸಿದ ಬ್ಯಾಟರ್ ಆಗಿ ಇಶಾನ್ ಕಿಶನ್ ಹೊರಹೊಮ್ಮಿದ್ದಾರೆ.

TV9 Web
| Edited By: |

Updated on: Dec 10, 2022 | 7:09 PM

Share
ಇಶಾನ್ ಕಿಶನ್...ಈ ಹೆಸರು ಮೊದಲ ಬಾರಿಗೆ ಕ್ರಿಕೆಟ್ ಲೋಕದಲ್ಲಿ ಕೇಳಿ ಬಂದಿದ್ದು 2016 ರಲ್ಲಿ. ಅದು ಕೂಡ 17 ವರ್ಷದ ಟೀಮ್ ಇಂಡಿಯಾದ ನಾಯಕ ಎಂಬ ಹೆಡ್​ಲೈನ್​ನೊಂದಿಗೆ. ಆ ಬಳಿಕ ಪಾಕೆಟ್ ಡೈನಾಮೊ ಹಿಂತಿರುಗಿ ನೋಡಿಲ್ಲ ಎಂದರೆ ತಪ್ಪಾಗಲಾರದು.

ಇಶಾನ್ ಕಿಶನ್...ಈ ಹೆಸರು ಮೊದಲ ಬಾರಿಗೆ ಕ್ರಿಕೆಟ್ ಲೋಕದಲ್ಲಿ ಕೇಳಿ ಬಂದಿದ್ದು 2016 ರಲ್ಲಿ. ಅದು ಕೂಡ 17 ವರ್ಷದ ಟೀಮ್ ಇಂಡಿಯಾದ ನಾಯಕ ಎಂಬ ಹೆಡ್​ಲೈನ್​ನೊಂದಿಗೆ. ಆ ಬಳಿಕ ಪಾಕೆಟ್ ಡೈನಾಮೊ ಹಿಂತಿರುಗಿ ನೋಡಿಲ್ಲ ಎಂದರೆ ತಪ್ಪಾಗಲಾರದು.

1 / 10
ಹೌದು, 2016 ರಲ್ಲಿ ಅಂಡರ್ 19 ಟೀಮ್ ಇಂಡಿಯಾದ ನಾಯಕನಾಗಿ ಇಶಾನ್ ಕಿಶನ್ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೆ 2016 ರಲ್ಲಿ ಯುವ ದಾಂಡಿಗನನ್ನು ಗುಜರಾತ್ ಲಯನ್ಸ್  ಫ್ರಾಂಚೈಸಿಯು ಖರೀದಿಸಿತು. ಆದರೆ ಯುವ ಆಟಗಾರ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯಲು ವರ್ಷಗಳೇ ಕಾಯಬೇಕಾಯಿತು.

ಹೌದು, 2016 ರಲ್ಲಿ ಅಂಡರ್ 19 ಟೀಮ್ ಇಂಡಿಯಾದ ನಾಯಕನಾಗಿ ಇಶಾನ್ ಕಿಶನ್ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೆ 2016 ರಲ್ಲಿ ಯುವ ದಾಂಡಿಗನನ್ನು ಗುಜರಾತ್ ಲಯನ್ಸ್ ಫ್ರಾಂಚೈಸಿಯು ಖರೀದಿಸಿತು. ಆದರೆ ಯುವ ಆಟಗಾರ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯಲು ವರ್ಷಗಳೇ ಕಾಯಬೇಕಾಯಿತು.

2 / 10
ಇದಕ್ಕೆ ಮುಖ್ಯ ಕಾರಣ ಅಂದು ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಆಗಿ ಮಹೇಂದ್ರ ಸಿಂಗ್​ ಧೋನಿ ಇದ್ದರು. ಆದರೆ ಧೋನಿಯ ನಿವೃತ್ತಿಯ ಬಳಿಕ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಪೈಪೋಟಿಗೆ ಇಳಿದ ಆಟಗಾರರಲ್ಲಿ ಕಿಶನ್ ಕೂಡ ಒಬ್ಬರು. ಇದರ ನಡುವೆ ಕಅವರ ನಾಯಕತ್ವದಡಿಯಲ್ಲಿ ಕಿರಿಯರ ವಿಶ್ವಕಪ್ ಆಡಿದ ರಿಷಭ್ ಪಂತ್​ಗೆ ಅವಕಾಶ ಲಭಿಸಿದರೂ, ಇಶಾನ್ ಕಿಶನ್ ಅವರ ಅದೃಷ್ಟದ ಬಾಗಿಲು ತೆರೆದಿರಲಿಲ್ಲ.

ಇದಕ್ಕೆ ಮುಖ್ಯ ಕಾರಣ ಅಂದು ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಆಗಿ ಮಹೇಂದ್ರ ಸಿಂಗ್​ ಧೋನಿ ಇದ್ದರು. ಆದರೆ ಧೋನಿಯ ನಿವೃತ್ತಿಯ ಬಳಿಕ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಪೈಪೋಟಿಗೆ ಇಳಿದ ಆಟಗಾರರಲ್ಲಿ ಕಿಶನ್ ಕೂಡ ಒಬ್ಬರು. ಇದರ ನಡುವೆ ಕಅವರ ನಾಯಕತ್ವದಡಿಯಲ್ಲಿ ಕಿರಿಯರ ವಿಶ್ವಕಪ್ ಆಡಿದ ರಿಷಭ್ ಪಂತ್​ಗೆ ಅವಕಾಶ ಲಭಿಸಿದರೂ, ಇಶಾನ್ ಕಿಶನ್ ಅವರ ಅದೃಷ್ಟದ ಬಾಗಿಲು ತೆರೆದಿರಲಿಲ್ಲ.

3 / 10
ಈ ಪೈಪೋಟಿಯಲ್ಲಿ ಕೊನೆಗೆ ಫಲ ಸಿಕ್ಕಿದ್ದು 2021 ರಲ್ಲಿ. ಕಳೆದ ವರ್ಷ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯುವ ಮುನ್ನ ಇಶಾನ್ ಕಿಶನ್ ಐಪಿಎಲ್​ನಲ್ಲಿ 50 ಕ್ಕೂ ಅಧಿಕ ಪಂದ್ಯಗಳನ್ನಾಡಿದ್ದರು. ಅಲ್ಲದೆ ದೇಶೀಯ ಕ್ರಿಕೆಟ್​ನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಈ ಪೈಪೋಟಿಯಲ್ಲಿ ಕೊನೆಗೆ ಫಲ ಸಿಕ್ಕಿದ್ದು 2021 ರಲ್ಲಿ. ಕಳೆದ ವರ್ಷ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯುವ ಮುನ್ನ ಇಶಾನ್ ಕಿಶನ್ ಐಪಿಎಲ್​ನಲ್ಲಿ 50 ಕ್ಕೂ ಅಧಿಕ ಪಂದ್ಯಗಳನ್ನಾಡಿದ್ದರು. ಅಲ್ಲದೆ ದೇಶೀಯ ಕ್ರಿಕೆಟ್​ನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು.

4 / 10
ಆದರೆ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದರೂ, ಬೆಂಚ್ ಕಾದಿದ್ದೇ ಹೆಚ್ಚು. ಇದಕ್ಕೆ ಸಾಕ್ಷಿಯೇ ಕಿಶನ್ ಇದುವರೆಗೆ ಆಡಿರುವುದು ಕೇವಲ 10 ಏಕದಿನ ಪಂದ್ಯಗಳು ಮಾತ್ರ. ಈ ಬಾರಿ ಕೂಡ ಬೆಂಚ್ ಕಾಯುತ್ತಿದ್ದ ಕಿಶನ್​ಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಗಾಯವು ವರದಾನವಾಯಿತು.

ಆದರೆ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದರೂ, ಬೆಂಚ್ ಕಾದಿದ್ದೇ ಹೆಚ್ಚು. ಇದಕ್ಕೆ ಸಾಕ್ಷಿಯೇ ಕಿಶನ್ ಇದುವರೆಗೆ ಆಡಿರುವುದು ಕೇವಲ 10 ಏಕದಿನ ಪಂದ್ಯಗಳು ಮಾತ್ರ. ಈ ಬಾರಿ ಕೂಡ ಬೆಂಚ್ ಕಾಯುತ್ತಿದ್ದ ಕಿಶನ್​ಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಗಾಯವು ವರದಾನವಾಯಿತು.

5 / 10
ಬಾಂಗ್ಲಾದೇಶ್ ವಿರುದ್ಧದದ ಮೂರನೇ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಹಿಟ್​ಮ್ಯಾನ್ ಬದಲಿಗೆ ಕಿಶನ್ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಯುವ ಸ್ಪೋಟಕ ದಾಂಡಿಗ ಸಿಕ್ಸ್​-ಫೋರ್​ಗಳ ಸುರಿಮಳೆಗೈದು ಅಬ್ಬರಿಸಿದರು.

ಬಾಂಗ್ಲಾದೇಶ್ ವಿರುದ್ಧದದ ಮೂರನೇ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಹಿಟ್​ಮ್ಯಾನ್ ಬದಲಿಗೆ ಕಿಶನ್ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಯುವ ಸ್ಪೋಟಕ ದಾಂಡಿಗ ಸಿಕ್ಸ್​-ಫೋರ್​ಗಳ ಸುರಿಮಳೆಗೈದು ಅಬ್ಬರಿಸಿದರು.

6 / 10
ಅಷ್ಟೇ ಅಲ್ಲದೆ ಏಕದಿನ ಕ್ರಿಕೆಟ್​ನಲ್ಲಿ ಸ್ಪೋಟಕ ಡಬಲ್ ಸೆಂಚುರಿ ಇತಿಹಾಸ ಬರೆದರು. ಈ ಮೂಲಕ ಟೀಮ್ ಇಂಡಿಯಾದ ಆರಂಭಿಕ ಆಟಗಾರರ ಪೈಪೋಟಿಯಲ್ಲಿ ತಾನು ಕೂಡ ಇದ್ದೇನೆಂದು ಬ್ಯಾಟ್ ಮೂಲಕ ಸಾರಿ ಹೇಳಿದ್ದಾರೆ.  ಅಷ್ಟೇ ಯಾಕೆ ಟೀಮ್ ಇಂಡಿಯಾದ ಆರಂಭಿಕ ಹಾಗೂ ವಿಕೆಟ್ ಕೀಪರ್​ ಸಮಸ್ಯೆಗೆ ತಾನೇ ಅತ್ಯುತ್ತಮ ಆಯ್ಕೆ ಎಂದು ಸಾರಲು ಹೊರಟಿದ್ದಾರೆ ಇಶಾನ್ ಕಿಶನ್.

ಅಷ್ಟೇ ಅಲ್ಲದೆ ಏಕದಿನ ಕ್ರಿಕೆಟ್​ನಲ್ಲಿ ಸ್ಪೋಟಕ ಡಬಲ್ ಸೆಂಚುರಿ ಇತಿಹಾಸ ಬರೆದರು. ಈ ಮೂಲಕ ಟೀಮ್ ಇಂಡಿಯಾದ ಆರಂಭಿಕ ಆಟಗಾರರ ಪೈಪೋಟಿಯಲ್ಲಿ ತಾನು ಕೂಡ ಇದ್ದೇನೆಂದು ಬ್ಯಾಟ್ ಮೂಲಕ ಸಾರಿ ಹೇಳಿದ್ದಾರೆ. ಅಷ್ಟೇ ಯಾಕೆ ಟೀಮ್ ಇಂಡಿಯಾದ ಆರಂಭಿಕ ಹಾಗೂ ವಿಕೆಟ್ ಕೀಪರ್​ ಸಮಸ್ಯೆಗೆ ತಾನೇ ಅತ್ಯುತ್ತಮ ಆಯ್ಕೆ ಎಂದು ಸಾರಲು ಹೊರಟಿದ್ದಾರೆ ಇಶಾನ್ ಕಿಶನ್.

7 / 10
ಅಂದಹಾಗೆ ಇಶಾನ್ ಕಿಶನ್ ಮೂಲತಃ ಬಿಹಾರದವರು. ಬಿಹಾರ್ ಕ್ರಿಕೆಟ್ ಸಂಸ್ಥೆ ಹಾಗೂ ಬಿಸಿಸಿಐನ ವಿವಾದಿಂದಾಗಿ ಅವರು ರಣಜಿ ತಂಡವನ್ನು ಬದಲಿಸಿದ್ದರು. ಅಂದು ಜಾರ್ಖಂಡ್​ (ರಾಂಚಿ) ತಂಡದ ಟ್ರಯಲ್ಸ್​ನಲ್ಲಿ ಕಾಣಿಸಿಕೊಂಡಿದ್ದ ಕಿಶನ್ ಅವರನ್ನು ಮೊದಲ ಸುತ್ತಿನಲ್ಲೇ ಆಯ್ಕೆ ಮಾಡಲಾಯಿತು. ಅಂದರಂತೆ ಇದೀಗ ಮಹೇಂದ್ರ ಸಿಂಗ್ ಧೋನಿಯ ಬಳಿಕ ಜಾರ್ಖಂಡ್​ನಿಂದ ವಿಕೆಟ್ ಕೀಪರ್ ಬ್ಯಾಟರ್​ ಆಗಿ ಇಶಾನ್ ಕಿಶನ್ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ.

ಅಂದಹಾಗೆ ಇಶಾನ್ ಕಿಶನ್ ಮೂಲತಃ ಬಿಹಾರದವರು. ಬಿಹಾರ್ ಕ್ರಿಕೆಟ್ ಸಂಸ್ಥೆ ಹಾಗೂ ಬಿಸಿಸಿಐನ ವಿವಾದಿಂದಾಗಿ ಅವರು ರಣಜಿ ತಂಡವನ್ನು ಬದಲಿಸಿದ್ದರು. ಅಂದು ಜಾರ್ಖಂಡ್​ (ರಾಂಚಿ) ತಂಡದ ಟ್ರಯಲ್ಸ್​ನಲ್ಲಿ ಕಾಣಿಸಿಕೊಂಡಿದ್ದ ಕಿಶನ್ ಅವರನ್ನು ಮೊದಲ ಸುತ್ತಿನಲ್ಲೇ ಆಯ್ಕೆ ಮಾಡಲಾಯಿತು. ಅಂದರಂತೆ ಇದೀಗ ಮಹೇಂದ್ರ ಸಿಂಗ್ ಧೋನಿಯ ಬಳಿಕ ಜಾರ್ಖಂಡ್​ನಿಂದ ವಿಕೆಟ್ ಕೀಪರ್ ಬ್ಯಾಟರ್​ ಆಗಿ ಇಶಾನ್ ಕಿಶನ್ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ.

8 / 10
ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ಇಶಾನ್ ಕಿಶನ್ ಅವರ ರೋಲ್ ಮಾಡೆಲ್ ಮಹೇಂದ್ರ ಸಿಂಗ್ ಧೋನಿ. ಹಾಗೆಯೇ ಕಿಶನ್ ಅವರ ಫೇವರೇಟ್ ಬ್ಯಾಟ್ಸ್​ಮನ್ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಆ್ಯಡಂ ಗಿಲ್​ಕ್ರಿಸ್ಟ್. ಹೀಗಾಗಿ ಕಿಶನ್ ಅವರ ಸಿಡಿಲಬ್ಬರ ಕೆಲವೊಮ್ಮೆ ಗಿಲ್​ಕ್ರಿಸ್ಟ್​ ಅವರ ತೂಫಾನ್ ಬ್ಯಾಟಿಂಗ್ ಅನ್ನು ನೆನಪಿಸುತ್ತದೆ.

ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ಇಶಾನ್ ಕಿಶನ್ ಅವರ ರೋಲ್ ಮಾಡೆಲ್ ಮಹೇಂದ್ರ ಸಿಂಗ್ ಧೋನಿ. ಹಾಗೆಯೇ ಕಿಶನ್ ಅವರ ಫೇವರೇಟ್ ಬ್ಯಾಟ್ಸ್​ಮನ್ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಆ್ಯಡಂ ಗಿಲ್​ಕ್ರಿಸ್ಟ್. ಹೀಗಾಗಿ ಕಿಶನ್ ಅವರ ಸಿಡಿಲಬ್ಬರ ಕೆಲವೊಮ್ಮೆ ಗಿಲ್​ಕ್ರಿಸ್ಟ್​ ಅವರ ತೂಫಾನ್ ಬ್ಯಾಟಿಂಗ್ ಅನ್ನು ನೆನಪಿಸುತ್ತದೆ.

9 / 10
ಇದೀಗ ಗಿಲ್​ಕ್ರಿಸ್ಟ್ ಅವರ ಸಿಡಿಲಬ್ಬರವನ್ನು ನೆನಪಿಸುವಂತೆ ಬಾಂಗ್ಲಾದೇಶ್ ವಿರುದ್ಧ 131 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 24 ಫೋರ್​ನೊಂದಿಗೆ 210 ರನ್​ ಚಚ್ಚಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ ದ್ವಿಶತಕ ಬಾರಿಸಿದ ಬ್ಯಾಟರ್ ಆಗಿ ಇಶಾನ್ ಕಿಶನ್ ಹೊರಹೊಮ್ಮಿದ್ದಾರೆ.

ಇದೀಗ ಗಿಲ್​ಕ್ರಿಸ್ಟ್ ಅವರ ಸಿಡಿಲಬ್ಬರವನ್ನು ನೆನಪಿಸುವಂತೆ ಬಾಂಗ್ಲಾದೇಶ್ ವಿರುದ್ಧ 131 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 24 ಫೋರ್​ನೊಂದಿಗೆ 210 ರನ್​ ಚಚ್ಚಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ ದ್ವಿಶತಕ ಬಾರಿಸಿದ ಬ್ಯಾಟರ್ ಆಗಿ ಇಶಾನ್ ಕಿಶನ್ ಹೊರಹೊಮ್ಮಿದ್ದಾರೆ.

10 / 10
Web contact
Web contact

TV9 Kannada

Read More
Follow Us
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?