AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ವಿರಾಟ್ ಕೊಹ್ಲಿಗೆ ನೋಬಾಲ್ ನೀಡದಿರಲು ಇದುವೇ ಕಾರಣ..!

IPL 2024: ಐಪಿಎಲ್ 2024ರ 36ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ರೋಚಕ ಜಯ ಸಾಧಿಸಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು 20 ಓವರ್​ಗಳಲ್ಲಿ 222 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ತಂಡವು 221 ರನ್​ಗಳಿಸುವ ಮೂಲಕ 1 ರನ್​ನಿಂದ ಸೋಲೊಪ್ಪಿಕೊಂಡಿತು.

TV9 Web
| Edited By: |

Updated on: Apr 22, 2024 | 10:08 AM

Share
ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) 36ನೇ ಪಂದ್ಯವು ನಾಟಕೀಯ ಸನ್ನಿವೇಶಕ್ಕೆ ಕಾರಣವಾಗಿತ್ತು. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನು ಔಟ್ ನೀಡಿದ ತೀರ್ಪು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) 36ನೇ ಪಂದ್ಯವು ನಾಟಕೀಯ ಸನ್ನಿವೇಶಕ್ಕೆ ಕಾರಣವಾಗಿತ್ತು. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನು ಔಟ್ ನೀಡಿದ ತೀರ್ಪು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

1 / 7
ಹರ್ಷಿತ್ ರಾಣ ಎಸೆದ 3ನೇ ಓವರ್​ನ ಮೊದಲ ಎಸೆತದಲ್ಲಿ ವಿರಾಟ್ ಕೊಹ್ಲಿ ಕ್ಯಾಚ್ ನೀಡಿ ಔಟಾಗಿದ್ದರು. ಆದರೆ ಈ ಎಸೆತವು ಅವರ ಸೊಂಟಕ್ಕಿಂತ ಮೇಲ್ಭಾಗದಲ್ಲಿತ್ತು. ಹೀಗಾಗಿ ಕೊಹ್ಲಿ ರಿವ್ಯೂ ಮೊರೆ ಹೋಗಿದ್ದರು. ಇದನ್ನು ಪರಿಶೀಲಿಸಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.

ಹರ್ಷಿತ್ ರಾಣ ಎಸೆದ 3ನೇ ಓವರ್​ನ ಮೊದಲ ಎಸೆತದಲ್ಲಿ ವಿರಾಟ್ ಕೊಹ್ಲಿ ಕ್ಯಾಚ್ ನೀಡಿ ಔಟಾಗಿದ್ದರು. ಆದರೆ ಈ ಎಸೆತವು ಅವರ ಸೊಂಟಕ್ಕಿಂತ ಮೇಲ್ಭಾಗದಲ್ಲಿತ್ತು. ಹೀಗಾಗಿ ಕೊಹ್ಲಿ ರಿವ್ಯೂ ಮೊರೆ ಹೋಗಿದ್ದರು. ಇದನ್ನು ಪರಿಶೀಲಿಸಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.

2 / 7
ಮೂರನೇ ಅಂಪೈರ್​ನ ಈ ತೀರ್ಪಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಫೀಲ್ಡ್ ಅಂಪೈರ್​ಗಳ ಜೊತೆ ವಾಗ್ವಾದಕ್ಕಿಳಿದಿದ್ದರು. ಅಲ್ಲದೆ ಅಂಪೈರ್ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಮೈದಾನ ತೊರೆದಿದ್ದರು. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲೂ ಅಂಪೈರ್ ತೀರ್ಪಿನ ಬಗ್ಗೆ ಚರ್ಚೆಗಳು ಶುರುವಾಗಿತ್ತು. ಅಷ್ಟಕ್ಕೂ ವಿರಾಟ್ ಕೊಹ್ಲಿ ಔಟಾ ಅಥವಾ ನಾಟೌಟಾ ಎಂದು ಕೇಳಿದರೆ, ಸ್ಪಷ್ಟ ಉತ್ತರ- ಔಟ್.

ಮೂರನೇ ಅಂಪೈರ್​ನ ಈ ತೀರ್ಪಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಫೀಲ್ಡ್ ಅಂಪೈರ್​ಗಳ ಜೊತೆ ವಾಗ್ವಾದಕ್ಕಿಳಿದಿದ್ದರು. ಅಲ್ಲದೆ ಅಂಪೈರ್ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಮೈದಾನ ತೊರೆದಿದ್ದರು. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲೂ ಅಂಪೈರ್ ತೀರ್ಪಿನ ಬಗ್ಗೆ ಚರ್ಚೆಗಳು ಶುರುವಾಗಿತ್ತು. ಅಷ್ಟಕ್ಕೂ ವಿರಾಟ್ ಕೊಹ್ಲಿ ಔಟಾ ಅಥವಾ ನಾಟೌಟಾ ಎಂದು ಕೇಳಿದರೆ, ಸ್ಪಷ್ಟ ಉತ್ತರ- ಔಟ್.

3 / 7
ಏಕೆಂದರೆ ಹರ್ಷಿತ್ ರಾಣ ಎಸೆದ ಚೆಂಡು ವಿರಾಟ್ ಕೊಹ್ಲಿಯ ಸೊಂಟಕ್ಕಿಂತ ಮೇಲ್ಬಾಗದಲ್ಲಿ ಬಂದಿದ್ದರೂ, ಈ ಚೆಂಡನ್ನು ಎದುರಿಸುವಾಗ ಕೊಹ್ಲಿ ಕ್ರೀಸ್​ನಿಂದ ಹೊರಗಿದ್ದರು. ಅಂದರೆ ಇಲ್ಲಿ ಬ್ಯಾಟ್ಸ್​ಮನ್​ ಕ್ರೀಸ್​ನಲ್ಲಿ ಎಲ್ಲಿ ಸ್ಟ್ಯಾನ್ಸ್​ ತೆಗೆದುಕೊಂಡಿದ್ದಾರೆ ಎಂಬುದನ್ನು ಆಧರಿಸಿ ನೋ ಬಾಲ್ ಅನ್ನು​ ನಿರ್ಧರಿಸಲಾಗುತ್ತದೆ.

ಏಕೆಂದರೆ ಹರ್ಷಿತ್ ರಾಣ ಎಸೆದ ಚೆಂಡು ವಿರಾಟ್ ಕೊಹ್ಲಿಯ ಸೊಂಟಕ್ಕಿಂತ ಮೇಲ್ಬಾಗದಲ್ಲಿ ಬಂದಿದ್ದರೂ, ಈ ಚೆಂಡನ್ನು ಎದುರಿಸುವಾಗ ಕೊಹ್ಲಿ ಕ್ರೀಸ್​ನಿಂದ ಹೊರಗಿದ್ದರು. ಅಂದರೆ ಇಲ್ಲಿ ಬ್ಯಾಟ್ಸ್​ಮನ್​ ಕ್ರೀಸ್​ನಲ್ಲಿ ಎಲ್ಲಿ ಸ್ಟ್ಯಾನ್ಸ್​ ತೆಗೆದುಕೊಂಡಿದ್ದಾರೆ ಎಂಬುದನ್ನು ಆಧರಿಸಿ ನೋ ಬಾಲ್ ಅನ್ನು​ ನಿರ್ಧರಿಸಲಾಗುತ್ತದೆ.

4 / 7
ಇಲ್ಲಿ ವಿರಾಟ್ ಕೊಹ್ಲಿ ಕ್ರೀಸ್​ನಿಂದ ಮುನ್ನುಗ್ಗಿ ಬಂದು ಚೆಂಡನ್ನು ಎದುರಿಸಿದ್ದಾರೆ. ಈ ವೇಳೆ ಚೆಂಡು ಅವರ ಸೊಂಟದ ಮೇಲ್ಭಾಗಕ್ಕೆ ಬಂದಿದೆ. ಆದರೆ ನೋ ಬಾಲ್​ ಅನ್ನು ಪರಿಶೀಲಿಸಲು ಟಿವಿ ಅಂಪೈರ್ ಹಾಕ್-ಐ ತಂತ್ರಜ್ಞಾನ ಬಳಸುವಾಗ ಬ್ಯಾಟ್ಸ್​ಮನ್​ ಬ್ಯಾಟಿಂಗ್​ಗೆ ನಿಂತ ಜಾಗವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಇಲ್ಲಿ ವಿರಾಟ್ ಕೊಹ್ಲಿ ಕ್ರೀಸ್​ನಿಂದ ಮುನ್ನುಗ್ಗಿ ಬಂದು ಚೆಂಡನ್ನು ಎದುರಿಸಿದ್ದಾರೆ. ಈ ವೇಳೆ ಚೆಂಡು ಅವರ ಸೊಂಟದ ಮೇಲ್ಭಾಗಕ್ಕೆ ಬಂದಿದೆ. ಆದರೆ ನೋ ಬಾಲ್​ ಅನ್ನು ಪರಿಶೀಲಿಸಲು ಟಿವಿ ಅಂಪೈರ್ ಹಾಕ್-ಐ ತಂತ್ರಜ್ಞಾನ ಬಳಸುವಾಗ ಬ್ಯಾಟ್ಸ್​ಮನ್​ ಬ್ಯಾಟಿಂಗ್​ಗೆ ನಿಂತ ಜಾಗವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

5 / 7
ಅದರಂತೆ ಕೊಹ್ಲಿ ಕ್ರೀಸ್​ನಲ್ಲಿ ಬ್ಯಾಟಿಂಗ್ ಸ್ಟ್ಯಾನ್ಸ್​ ತೆಗೆದುಕೊಂಡಿರುವುದನ್ನು ಪರಿಗಣನೆಗೆ ತೆಗೆದುಕೊಂಡಾಗ ಚೆಂಡಿನ ಪಥವು ಸೊಂಟದ ಭಾಗಕ್ಕಿಂತ 0.12 ಮೀಟರ್ ಕೆಳಭಾಗದಲ್ಲಿದೆ. ಅಂದರೆ ಕೊಹ್ಲಿಯ ಎತ್ತರಕ್ಕೆ ಅನುಗುಣವಾಗಿ ನೋ ಬಾಲ್ ನೀಡಬೇಕಿದ್ದರೆ ಸೊಂಟಕ್ಕಿಂತ 1.04 ಮೀಟರ್ ಮೇಲ್ಬಾಗದಲ್ಲಿ ಚೆಂಡು ಸಾಗಬೇಕು. ಆದರೆ ಹರ್ಷಿತ್ ರಾಣ ಎಸೆದ ಚೆಂಡು 0.92 ಮೀಟರ್ ಎತ್ತರದಲ್ಲಿ ಸಾಗಿದೆ. ಹೀಗಾಗಿಯೇ ಮೂರನೇ ಅಂಪೈರ್ ನೋ ಬಾಲ್ ಅಲ್ಲ, ಫುಲ್ ಟಾಸ್ ಬಾಲ್-ಔಟ್ ಎಂದು ತೀರ್ಪು ನೀಡಿದ್ದಾರೆ.

ಅದರಂತೆ ಕೊಹ್ಲಿ ಕ್ರೀಸ್​ನಲ್ಲಿ ಬ್ಯಾಟಿಂಗ್ ಸ್ಟ್ಯಾನ್ಸ್​ ತೆಗೆದುಕೊಂಡಿರುವುದನ್ನು ಪರಿಗಣನೆಗೆ ತೆಗೆದುಕೊಂಡಾಗ ಚೆಂಡಿನ ಪಥವು ಸೊಂಟದ ಭಾಗಕ್ಕಿಂತ 0.12 ಮೀಟರ್ ಕೆಳಭಾಗದಲ್ಲಿದೆ. ಅಂದರೆ ಕೊಹ್ಲಿಯ ಎತ್ತರಕ್ಕೆ ಅನುಗುಣವಾಗಿ ನೋ ಬಾಲ್ ನೀಡಬೇಕಿದ್ದರೆ ಸೊಂಟಕ್ಕಿಂತ 1.04 ಮೀಟರ್ ಮೇಲ್ಬಾಗದಲ್ಲಿ ಚೆಂಡು ಸಾಗಬೇಕು. ಆದರೆ ಹರ್ಷಿತ್ ರಾಣ ಎಸೆದ ಚೆಂಡು 0.92 ಮೀಟರ್ ಎತ್ತರದಲ್ಲಿ ಸಾಗಿದೆ. ಹೀಗಾಗಿಯೇ ಮೂರನೇ ಅಂಪೈರ್ ನೋ ಬಾಲ್ ಅಲ್ಲ, ಫುಲ್ ಟಾಸ್ ಬಾಲ್-ಔಟ್ ಎಂದು ತೀರ್ಪು ನೀಡಿದ್ದಾರೆ.

6 / 7
ಇನ್ನು ಈ ವಿವಾದ ಹುಟ್ಟಿಕೊಳ್ಳಲು ಕೂಡ ಮುಖ್ಯ ಕಾರಣ ಮೂರನೇ ಅಂಪೈರ್ ತೋರಿಸಿದ ಹಾಕ್-ಐ ಚಿತ್ರ ಎಂದರೆ ತಪ್ಪಾಗಲಾರದು. ಏಕೆಂದರೆ ಟಿವಿ ಅಂಪೈರ್ ವಿರಾಟ್ ಕೊಹ್ಲಿ ಮುನ್ನುಗ್ಗಿ ಬಂದು ಬಾಲ್​ನ್ನು ಎದುರಿಸುತ್ತಿರುವುದರೊಂದಿಗೆ ಚೆಂಡಿನ ಪಥ ತೋರಿಸಿದ್ದಾರೆ. ಇದೇ ವೇಳೆ ಅವರ ಬ್ಯಾಟಿಂಗ್ ಸ್ಟ್ಯಾನ್ಸ್​ (ಬ್ಯಾಟಿಂಗ್​ಗೆ ನಿಂತಿರುವ ಸ್ಥಾನ) ತೋರಿಸಿ ​ಚೆಂಡಿನ ಪಥವನ್ನು ಪ್ರದರ್ಶಿಸಿದ್ದರೆ ಇಂತಹ ಯಾವುದೇ ಗೊಂದಲ ಏರ್ಪಡುತ್ತಿರಲಿಲ್ಲ.

ಇನ್ನು ಈ ವಿವಾದ ಹುಟ್ಟಿಕೊಳ್ಳಲು ಕೂಡ ಮುಖ್ಯ ಕಾರಣ ಮೂರನೇ ಅಂಪೈರ್ ತೋರಿಸಿದ ಹಾಕ್-ಐ ಚಿತ್ರ ಎಂದರೆ ತಪ್ಪಾಗಲಾರದು. ಏಕೆಂದರೆ ಟಿವಿ ಅಂಪೈರ್ ವಿರಾಟ್ ಕೊಹ್ಲಿ ಮುನ್ನುಗ್ಗಿ ಬಂದು ಬಾಲ್​ನ್ನು ಎದುರಿಸುತ್ತಿರುವುದರೊಂದಿಗೆ ಚೆಂಡಿನ ಪಥ ತೋರಿಸಿದ್ದಾರೆ. ಇದೇ ವೇಳೆ ಅವರ ಬ್ಯಾಟಿಂಗ್ ಸ್ಟ್ಯಾನ್ಸ್​ (ಬ್ಯಾಟಿಂಗ್​ಗೆ ನಿಂತಿರುವ ಸ್ಥಾನ) ತೋರಿಸಿ ​ಚೆಂಡಿನ ಪಥವನ್ನು ಪ್ರದರ್ಶಿಸಿದ್ದರೆ ಇಂತಹ ಯಾವುದೇ ಗೊಂದಲ ಏರ್ಪಡುತ್ತಿರಲಿಲ್ಲ.

7 / 7
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್