AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಅಗ್ರ 4ರಲ್ಲಿ ಸ್ಥಾನ ಪಡೆಯುತ್ತಾ ಆರ್​ಸಿಬಿ? ಇಲ್ಲಿದೆ ಪ್ಲೇಆಫ್​ ಲೆಕ್ಕಾಚಾರ

IPL 2024 RCB Playoff Scenario: 17ನೇ ಆವೃತ್ತಿಯ ಐಪಿಎಲ್‌ ಆರಂಭಕ್ಕೂ ಮುನ್ನ ಆರ್​ಸಿಬಿ ತನ್ನ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿ ಅಖಾಡಕ್ಕಿಳಿದಿತ್ತು. ಆದರೆ ತಂಡ ಬದಲಾದರೂ ತಂಡದ ಪ್ರದರ್ಶನ ಮಾತ್ರ ಬದಲಾಗಿಲ್ಲ. ಪ್ರತಿ ಬಾರಿಯಂತೆ ಈ ಬಾರಿಯೂ ತಂಡ ಸತತ ಸೋಲುಗಳಿಂದ ಕಂಗೆಟ್ಟಿದ್ದು, ಪ್ಲೇಆಫ್​ಗೇರಲು ಇದೀಗ ಹರಸಾಹಸ ಪಡಬೇಕಾಗಿದೆ.

ಪೃಥ್ವಿಶಂಕರ
|

Updated on: Apr 12, 2024 | 4:30 PM

Share
17ನೇ ಆವೃತ್ತಿಯ ಐಪಿಎಲ್‌ ಆರಂಭಕ್ಕೂ ಮುನ್ನ ಆರ್​ಸಿಬಿ ತನ್ನ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿ ಅಖಾಡಕ್ಕಿಳಿದಿತ್ತು. ಆದರೆ ತಂಡ ಬದಲಾದರೂ ತಂಡದ ಪ್ರದರ್ಶನ ಮಾತ್ರ ಬದಲಾಗಿಲ್ಲ. ಪ್ರತಿ ಬಾರಿಯಂತೆ ಈ ಬಾರಿಯೂ ತಂಡ ಸತತ ಸೋಲುಗಳಿಂದ ಕಂಗೆಟ್ಟಿದ್ದು, ಪ್ಲೇಆಫ್​ಗೇರಲು ಇದೀಗ ಹರಸಾಹಸ ಪಡಬೇಕಾಗಿದೆ.

17ನೇ ಆವೃತ್ತಿಯ ಐಪಿಎಲ್‌ ಆರಂಭಕ್ಕೂ ಮುನ್ನ ಆರ್​ಸಿಬಿ ತನ್ನ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿ ಅಖಾಡಕ್ಕಿಳಿದಿತ್ತು. ಆದರೆ ತಂಡ ಬದಲಾದರೂ ತಂಡದ ಪ್ರದರ್ಶನ ಮಾತ್ರ ಬದಲಾಗಿಲ್ಲ. ಪ್ರತಿ ಬಾರಿಯಂತೆ ಈ ಬಾರಿಯೂ ತಂಡ ಸತತ ಸೋಲುಗಳಿಂದ ಕಂಗೆಟ್ಟಿದ್ದು, ಪ್ಲೇಆಫ್​ಗೇರಲು ಇದೀಗ ಹರಸಾಹಸ ಪಡಬೇಕಾಗಿದೆ.

1 / 9
ಆರ್​ಸಿಬಿ ಇದುವರೆಗೆ ಲೀಗ್​ನಲ್ಲಿ 6 ಪಂದ್ಯಗಳನ್ನು ಆಡಿದ್ದು, ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಎರಡು ಅಂಕಗಳೊಂದಿಗೆ ತಂಡವು 10 ತಂಡಗಳ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಈಗಾಗಲೇ 5 ಪಂದ್ಯಗಳಲ್ಲಿ ಸೋತಿರುವ ಆರ್​ಸಿಬಿ ಈ ವರ್ಷ ಪ್ಲೇ ಆಫ್ ತಲುಪುವುದು ಕಷ್ಟ ಎಂದು ಹೇಳಲಾಗುತ್ತಿದೆ. ಅದಾಗ್ಯೂ ಆರ್​ಸಿಬಿ ಪ್ಲೇ ಆಫ್ ಹಾದಿ ಈಗಲೂ ಜೀವಂತವಾಗಿದ್ದು, ಅದಕ್ಕಾಗಿ ತಂಡ ಎಷ್ಟು ಶ್ರಮಿಸಬೇಕು ಎಂಬ ವಿವರ ಹೀಗಿದೆ.

ಆರ್​ಸಿಬಿ ಇದುವರೆಗೆ ಲೀಗ್​ನಲ್ಲಿ 6 ಪಂದ್ಯಗಳನ್ನು ಆಡಿದ್ದು, ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಎರಡು ಅಂಕಗಳೊಂದಿಗೆ ತಂಡವು 10 ತಂಡಗಳ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಈಗಾಗಲೇ 5 ಪಂದ್ಯಗಳಲ್ಲಿ ಸೋತಿರುವ ಆರ್​ಸಿಬಿ ಈ ವರ್ಷ ಪ್ಲೇ ಆಫ್ ತಲುಪುವುದು ಕಷ್ಟ ಎಂದು ಹೇಳಲಾಗುತ್ತಿದೆ. ಅದಾಗ್ಯೂ ಆರ್​ಸಿಬಿ ಪ್ಲೇ ಆಫ್ ಹಾದಿ ಈಗಲೂ ಜೀವಂತವಾಗಿದ್ದು, ಅದಕ್ಕಾಗಿ ತಂಡ ಎಷ್ಟು ಶ್ರಮಿಸಬೇಕು ಎಂಬ ವಿವರ ಹೀಗಿದೆ.

2 / 9
ಮೇಲೆ ಹೇಳಿದಂತೆ ಈ ವರ್ಷ ಆರ್‌ಸಿಬಿ ಇದುವರೆಗೆ 6 ಪಂದ್ಯಗಳನ್ನು ಆಡಿದೆ. ಲೀಗ್ ಹಂತದಲ್ಲಿ ತಂಡವು 14 ಪಂದ್ಯಗಳನ್ನು ಆಡುತ್ತದೆ. ಅದರ ಪ್ರಕಾರ ಆರ್​ಸಿಬಿಗೆ ಇನ್ನು 8 ಪಂದ್ಯಗಳು ಬಾಕಿ ಉಳಿದಿವೆ. ಸದ್ಯದ ಲೆಕ್ಕಾಚಾರದ ಪ್ರಕಾರ ಆರ್​ಸಿಬಿ ಪ್ಲೇ ಆಫ್ ಕನಸು ಇನ್ನು ಜೀವಂತವಾಗಿದೆ.

ಮೇಲೆ ಹೇಳಿದಂತೆ ಈ ವರ್ಷ ಆರ್‌ಸಿಬಿ ಇದುವರೆಗೆ 6 ಪಂದ್ಯಗಳನ್ನು ಆಡಿದೆ. ಲೀಗ್ ಹಂತದಲ್ಲಿ ತಂಡವು 14 ಪಂದ್ಯಗಳನ್ನು ಆಡುತ್ತದೆ. ಅದರ ಪ್ರಕಾರ ಆರ್​ಸಿಬಿಗೆ ಇನ್ನು 8 ಪಂದ್ಯಗಳು ಬಾಕಿ ಉಳಿದಿವೆ. ಸದ್ಯದ ಲೆಕ್ಕಾಚಾರದ ಪ್ರಕಾರ ಆರ್​ಸಿಬಿ ಪ್ಲೇ ಆಫ್ ಕನಸು ಇನ್ನು ಜೀವಂತವಾಗಿದೆ.

3 / 9
ಅದಾಗ್ಯೂ ತಂಡ ಪ್ಲೇ ಆಫ್​ಗೇರಬೇಕೆಂದರೆ ಮುಂದಿನ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಹಾಗಾದಾಗ ಮಾತ್ರ ತಂಡ 16 ಅಂಕ ಸಂಪಾಧಿಸುವ ಮೂಲಕ ಪ್ಲೇ ಆಫ್​ಗೇರಬಹುದಾಗಿದೆ. ಈಗಾಗಲೇ ಒಂದು ಪಂದ್ಯ ಗೆದ್ದಿರುವ ಆರ್​ಸಿಬಿ ಇನ್ನು 7 ಪಂದ್ಯ ಗೆದ್ದರೆ, ಒಟ್ಟು 8 ಗೆಲುವುಗಳಿಂದ 16 ಅಂಕ ಸಂಪಾಧಿಸಲಿದೆ.

ಅದಾಗ್ಯೂ ತಂಡ ಪ್ಲೇ ಆಫ್​ಗೇರಬೇಕೆಂದರೆ ಮುಂದಿನ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಹಾಗಾದಾಗ ಮಾತ್ರ ತಂಡ 16 ಅಂಕ ಸಂಪಾಧಿಸುವ ಮೂಲಕ ಪ್ಲೇ ಆಫ್​ಗೇರಬಹುದಾಗಿದೆ. ಈಗಾಗಲೇ ಒಂದು ಪಂದ್ಯ ಗೆದ್ದಿರುವ ಆರ್​ಸಿಬಿ ಇನ್ನು 7 ಪಂದ್ಯ ಗೆದ್ದರೆ, ಒಟ್ಟು 8 ಗೆಲುವುಗಳಿಂದ 16 ಅಂಕ ಸಂಪಾಧಿಸಲಿದೆ.

4 / 9
ಕಳೆದ ಎರಡು ಐಪಿಎಲ್‌ ಸೀಸನ್​ಗಳಲ್ಲೂ 16 ಅಂಕ ಪಡೆದಿದ್ದ ತಂಡಗಳು ಪ್ಲೇ ಆಫ್​ಗೇರಿದ್ದವು. ಸ್ವತಃ ಆರ್​ಸಿಬಿ ಕೂಡ 2022 ರ ಐಪಿಎಲ್​ನಲ್ಲಿ 16 ಅಂಕ ಪಡೆದು ಪ್ಲೇ ಆಫ್​ಗೇರಿತ್ತು. 2023 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೂಡ 16 ಅಂಕ ಪಡೆಯುವ ಮೂಲಕ ಪ್ಲೇ ಆಫ್ ಆಡಿತ್ತು.

ಕಳೆದ ಎರಡು ಐಪಿಎಲ್‌ ಸೀಸನ್​ಗಳಲ್ಲೂ 16 ಅಂಕ ಪಡೆದಿದ್ದ ತಂಡಗಳು ಪ್ಲೇ ಆಫ್​ಗೇರಿದ್ದವು. ಸ್ವತಃ ಆರ್​ಸಿಬಿ ಕೂಡ 2022 ರ ಐಪಿಎಲ್​ನಲ್ಲಿ 16 ಅಂಕ ಪಡೆದು ಪ್ಲೇ ಆಫ್​ಗೇರಿತ್ತು. 2023 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೂಡ 16 ಅಂಕ ಪಡೆಯುವ ಮೂಲಕ ಪ್ಲೇ ಆಫ್ ಆಡಿತ್ತು.

5 / 9
ಒಂದು ವೇಳೆ ಆರ್​ಸಿಬಿ ಉಳಿದ 8 ಪಂದ್ಯಗಳನ್ನು ಗೆದ್ದರೆ ಒಟ್ಟು 18 ಅಂಕ ಗಳಿಸಲಿದೆ. ಇದು ಸಾಧ್ಯವಾದರೆ ಆರ್​ಸಿಬಿ ಸುಲಭವಾಗಿ ಪ್ಲೇ ಆಫ್​ಗೇರಲಿದೆ. ಅಲ್ಲದೆ ಆರ್​ಸಿಬಿ ಒಂದು ಪಂದ್ಯದಲ್ಲಿ ಸೋತರೂ 16 ಅಂಕಗಳೊಂದಿಗೆ ಪ್ಲೇ ಆಫ್‌ಗೆ ತಲುಪುವ ಅವಕಾಶ ಹೊಂದಿರುತ್ತದೆ.

ಒಂದು ವೇಳೆ ಆರ್​ಸಿಬಿ ಉಳಿದ 8 ಪಂದ್ಯಗಳನ್ನು ಗೆದ್ದರೆ ಒಟ್ಟು 18 ಅಂಕ ಗಳಿಸಲಿದೆ. ಇದು ಸಾಧ್ಯವಾದರೆ ಆರ್​ಸಿಬಿ ಸುಲಭವಾಗಿ ಪ್ಲೇ ಆಫ್​ಗೇರಲಿದೆ. ಅಲ್ಲದೆ ಆರ್​ಸಿಬಿ ಒಂದು ಪಂದ್ಯದಲ್ಲಿ ಸೋತರೂ 16 ಅಂಕಗಳೊಂದಿಗೆ ಪ್ಲೇ ಆಫ್‌ಗೆ ತಲುಪುವ ಅವಕಾಶ ಹೊಂದಿರುತ್ತದೆ.

6 / 9
ಆದರೆ ಆರ್​ಸಿಬಿ ಉಳಿದ 8 ಪಂದ್ಯಗಳಲ್ಲಿ 2 ರಲ್ಲಿ ಸೋತರೆ ತಂಡದ ಪ್ಲೇ ಆಫ್ ಹಾದಿ ಕಠಿಣವಾಗಲಿದೆ. ಏಕೆಂದರೆ ಆರ್​ಸಿಬಿ 7 ಗೆಲುವುಗಳೊಂದಿಗೆ 14 ಅಂಕಗಳನ್ನು ಮಾತ್ರ ಗಳಿಸಬಹುದಾಗಿದೆ. ಇಲ್ಲಿ 14 ಅಂಕಗಳಿದ್ದರೂ ಆರ್​ಸಿಬಿ ಪ್ಲೇಆಫ್ ತಲುಪಬಹುದು. ಆದರೆ ಇಲ್ಲಿ ತಂಡದ ನೆ	ಟ್ ರನ್​ರೇಟ್​ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

ಆದರೆ ಆರ್​ಸಿಬಿ ಉಳಿದ 8 ಪಂದ್ಯಗಳಲ್ಲಿ 2 ರಲ್ಲಿ ಸೋತರೆ ತಂಡದ ಪ್ಲೇ ಆಫ್ ಹಾದಿ ಕಠಿಣವಾಗಲಿದೆ. ಏಕೆಂದರೆ ಆರ್​ಸಿಬಿ 7 ಗೆಲುವುಗಳೊಂದಿಗೆ 14 ಅಂಕಗಳನ್ನು ಮಾತ್ರ ಗಳಿಸಬಹುದಾಗಿದೆ. ಇಲ್ಲಿ 14 ಅಂಕಗಳಿದ್ದರೂ ಆರ್​ಸಿಬಿ ಪ್ಲೇಆಫ್ ತಲುಪಬಹುದು. ಆದರೆ ಇಲ್ಲಿ ತಂಡದ ನೆ ಟ್ ರನ್​ರೇಟ್​ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

7 / 9
ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ 7 ವಿಕೆಟ್‌ಗಳ ಸೋಲು ಮಾತ್ರವಲ್ಲದೆ ಹೀನಾಯವಾಗಿ ಸೋತಿತ್ತು. ಹೀಗಾಗಿ ತಂಡದ ನೆಟ್ ರನ್ ರೇಟ್‌ನಲ್ಲಿಯೂ ಕುಸಿತ ಕಂಡಿದೆ. ಇದು ನಿರ್ಣಾಯಕ ಹಂತದಲ್ಲಿ ಆರ್​ಸಿಬಿಗೆ ತೊಡಕ್ಕಾಗುವ ಸಾಧ್ಯತೆಗಳಿವೆ.

ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ 7 ವಿಕೆಟ್‌ಗಳ ಸೋಲು ಮಾತ್ರವಲ್ಲದೆ ಹೀನಾಯವಾಗಿ ಸೋತಿತ್ತು. ಹೀಗಾಗಿ ತಂಡದ ನೆಟ್ ರನ್ ರೇಟ್‌ನಲ್ಲಿಯೂ ಕುಸಿತ ಕಂಡಿದೆ. ಇದು ನಿರ್ಣಾಯಕ ಹಂತದಲ್ಲಿ ಆರ್​ಸಿಬಿಗೆ ತೊಡಕ್ಕಾಗುವ ಸಾಧ್ಯತೆಗಳಿವೆ.

8 / 9
ಹೀಗಾಗಿ ಆರ್​ಸಿಬಿ ತನ್ನ ಮುಂದಿನ ಪಂದ್ಯಗಳಲ್ಲಿ ಕೇವಲ ಗೆಲುವು ಸಾಧಿಸಿದರೆ ಮಾತ್ರ ಸಾಲದು. ಬದಲಿಗೆ ಈ ಗೆಲುವು ಅತಿದೊಡ್ಡದಾಗಿರಬೇಕು. ಇದರಿಂದಾಗಿ ತಂಡದ ನೆಟ್ ರನ್​ರೇಟ್ ಉತ್ತಮಗೊಳ್ಳಲಿದ್ದು, ಪ್ಲೇ ಆಫ್ ಲೆಕ್ಕಾಚಾರದ ವೇಳೆ ಆರ್​ಸಿಬಿಗೆ ಸಹಾಯಕವಾಗಲಿದೆ.

ಹೀಗಾಗಿ ಆರ್​ಸಿಬಿ ತನ್ನ ಮುಂದಿನ ಪಂದ್ಯಗಳಲ್ಲಿ ಕೇವಲ ಗೆಲುವು ಸಾಧಿಸಿದರೆ ಮಾತ್ರ ಸಾಲದು. ಬದಲಿಗೆ ಈ ಗೆಲುವು ಅತಿದೊಡ್ಡದಾಗಿರಬೇಕು. ಇದರಿಂದಾಗಿ ತಂಡದ ನೆಟ್ ರನ್​ರೇಟ್ ಉತ್ತಮಗೊಳ್ಳಲಿದ್ದು, ಪ್ಲೇ ಆಫ್ ಲೆಕ್ಕಾಚಾರದ ವೇಳೆ ಆರ್​ಸಿಬಿಗೆ ಸಹಾಯಕವಾಗಲಿದೆ.

9 / 9
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
ಎಂಎಲ್​ಸಿಗಳ ಪ್ರಮಾಣವಚನಕ್ಕೆ ಬೈಕ್​ನಲ್ಲೇ ಆಗಮಿಸಿದ ಮಹಾರಾಷ್ಟ್ರ ಸಿಎಂ
ಎಂಎಲ್​ಸಿಗಳ ಪ್ರಮಾಣವಚನಕ್ಕೆ ಬೈಕ್​ನಲ್ಲೇ ಆಗಮಿಸಿದ ಮಹಾರಾಷ್ಟ್ರ ಸಿಎಂ
ಸಾವಿರಾರು ಕೋಟಿ ರೂ.ವಂಚನೆ:ಶಿವಂ ಅಸೋಸಿಯೇಟ್ ಮೇಲೆ ದಾಳಿ
ಸಾವಿರಾರು ಕೋಟಿ ರೂ.ವಂಚನೆ:ಶಿವಂ ಅಸೋಸಿಯೇಟ್ ಮೇಲೆ ದಾಳಿ
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ