AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಬರೋಬ್ಬರಿ 115 ರನ್ಸ್: RCB ಆರ್ಭಟಕ್ಕೆ ಮಗುಚಿ ಬಿದ್ದ JCB

IPL 2025 MI vs RCB: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 221 ರನ್​ ಕಲೆಹಾಕಿದರೆ, ಮುಂಬೈ ಇಂಡಿಯನ್ಸ್ ತಂಡವು 209 ರನ್​ಗಳಿಸಿ 12 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಝಾಹಿರ್ ಯೂಸುಫ್
|

Updated on: Apr 08, 2025 | 10:30 AM

Share
10 ಓವರ್​ಗಳಲ್ಲಿ ಬರೋಬ್ಬರಿ 115 ರನ್​ಗಳು... ಇದು ಯಾವುದೇ ಹೊಸ ಬೌಲರ್​ ನೀಡಿದ ರನ್​ಗಳಲ್ಲ. ಬದಲಾಗಿ ಮುಂಬೈ ಇಂಡಿಯನ್ಸ್ ತಂಡದ ತ್ರಿವಳಿ ಅಸ್ತ್ರವೆಂದೇ ಗುರುತಿಸಿಕೊಂಡಿರುವ ಜಸ್​ಪ್ರೀತ್ ಬುಮ್ರಾ, ದೀಪಕ್ ಚಹರ್ ಹಾಗೂ ಟ್ರೆಂಟ್ ಬೌಲ್ಟ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಬ್ಯಾಟರ್​ಗಳು ಕಲೆಹಾಕಿದ ರನ್​ಗಳು.

10 ಓವರ್​ಗಳಲ್ಲಿ ಬರೋಬ್ಬರಿ 115 ರನ್​ಗಳು... ಇದು ಯಾವುದೇ ಹೊಸ ಬೌಲರ್​ ನೀಡಿದ ರನ್​ಗಳಲ್ಲ. ಬದಲಾಗಿ ಮುಂಬೈ ಇಂಡಿಯನ್ಸ್ ತಂಡದ ತ್ರಿವಳಿ ಅಸ್ತ್ರವೆಂದೇ ಗುರುತಿಸಿಕೊಂಡಿರುವ ಜಸ್​ಪ್ರೀತ್ ಬುಮ್ರಾ, ದೀಪಕ್ ಚಹರ್ ಹಾಗೂ ಟ್ರೆಂಟ್ ಬೌಲ್ಟ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಬ್ಯಾಟರ್​ಗಳು ಕಲೆಹಾಕಿದ ರನ್​ಗಳು.

1 / 5
ಐಪಿಎಲ್ ಮೆಗಾ ಹರಾಜಿನ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸಖತ್ ಸುದ್ದಿಯಾಗಿದ್ದು JCB ಟ್ಯಾಗ್​ ಲೈನ್​ನೊಂದಿಗೆ. ಇಲ್ಲಿ J ಅಂದರೆ ಜಸ್​ಪ್ರೀತ್, C ಅಂದರೆ ಚಹರ್ ಹಾಗೂ B ಅಂದರೆ ಬೌಲ್ಟ್​. ಈ ಮೂವರು ಪ್ರಮುಖ ವೇಗಿಗಳನ್ನು ಜೊತೆಗೂಡಿಸುವ ಮೂಲಕ ಐಪಿಎಲ್ 2025 ರಲ್ಲಿ ಮುಂಬೈ ಇಂಡಿಯನ್ಸ್ JCB ಅಸ್ತ್ರ ಪ್ರಯೋಗಿಸಲಿದೆ ಎನ್ನಲಾಗಿತ್ತು. ಆದರೀಗ ಆರ್​ಸಿಬಿ ಬ್ಯಾಟರ್​ಗಳ ಆರ್ಭಟಕ್ಕೆ JCB ಮಗುಚಿ ಬಿದ್ದಿದೆ.

ಐಪಿಎಲ್ ಮೆಗಾ ಹರಾಜಿನ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸಖತ್ ಸುದ್ದಿಯಾಗಿದ್ದು JCB ಟ್ಯಾಗ್​ ಲೈನ್​ನೊಂದಿಗೆ. ಇಲ್ಲಿ J ಅಂದರೆ ಜಸ್​ಪ್ರೀತ್, C ಅಂದರೆ ಚಹರ್ ಹಾಗೂ B ಅಂದರೆ ಬೌಲ್ಟ್​. ಈ ಮೂವರು ಪ್ರಮುಖ ವೇಗಿಗಳನ್ನು ಜೊತೆಗೂಡಿಸುವ ಮೂಲಕ ಐಪಿಎಲ್ 2025 ರಲ್ಲಿ ಮುಂಬೈ ಇಂಡಿಯನ್ಸ್ JCB ಅಸ್ತ್ರ ಪ್ರಯೋಗಿಸಲಿದೆ ಎನ್ನಲಾಗಿತ್ತು. ಆದರೀಗ ಆರ್​ಸಿಬಿ ಬ್ಯಾಟರ್​ಗಳ ಆರ್ಭಟಕ್ಕೆ JCB ಮಗುಚಿ ಬಿದ್ದಿದೆ.

2 / 5
ಮುಂಬೈನ ವಾಂಖಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಪರ ಮೊದಲ ಓವರ್ ಎಸೆದಿದ್ದು ಟ್ರೆಂಟ್ ಬೌಲ್ಟ್. ಮೊದಲ ಓವರ್​ನಲ್ಲಿ ಸಾಲ್ಟ್ ವಿಕೆಟ್ ಪಡೆದ ಬೌಲ್ಟ್ ಅನ್ನು ಆ ಬಳಿಕ ಆರ್​ಸಿಬಿ ಬ್ಯಾಟರ್​ಗಳು ಅಟ್ಟಾಡಿಸಿಕೊಂಡು ಹೊಡೆದಿದ್ದರು. ಪರಿಣಾಮ 4 ಓವರ್​ಗಳಲ್ಲಿ ಟ್ರೆಂಟ್ ಬೌಲ್ಟ್ ನೀಡಿದ್ದು ಬರೋಬ್ಬರಿ 57 ರನ್​ಗಳು.

ಮುಂಬೈನ ವಾಂಖಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಪರ ಮೊದಲ ಓವರ್ ಎಸೆದಿದ್ದು ಟ್ರೆಂಟ್ ಬೌಲ್ಟ್. ಮೊದಲ ಓವರ್​ನಲ್ಲಿ ಸಾಲ್ಟ್ ವಿಕೆಟ್ ಪಡೆದ ಬೌಲ್ಟ್ ಅನ್ನು ಆ ಬಳಿಕ ಆರ್​ಸಿಬಿ ಬ್ಯಾಟರ್​ಗಳು ಅಟ್ಟಾಡಿಸಿಕೊಂಡು ಹೊಡೆದಿದ್ದರು. ಪರಿಣಾಮ 4 ಓವರ್​ಗಳಲ್ಲಿ ಟ್ರೆಂಟ್ ಬೌಲ್ಟ್ ನೀಡಿದ್ದು ಬರೋಬ್ಬರಿ 57 ರನ್​ಗಳು.

3 / 5
ಮುಂಬೈ ಇಂಡಿಯನ್ಸ್ ತಂಡದ ಮತ್ತೋರ್ವ ವೇಗಾಸ್ತ್ರವಾಗಿ ಗುರುತಿಸಿಕೊಂಡಿರುವ ದೀಪಕ್ ಚಹರ್ ಅವರ ಓವರ್​ಗಳಲ್ಲೂ ಆರ್​ಸಿಬಿ ಬ್ಯಾಟರ್​ಗಳು ಅಬ್ಬರಿಸಿದರು. ಪರಿಣಾಮ 2 ಓವರ್​ಗಳಲ್ಲಿ ಚಹರ್ ನೀಡಿದ್ದು ಬರೋಬ್ಬರಿ 29 ರನ್​ಗಳು. ಆ ಬಳಿಕ ಅವರಿಗೆ ಹಾರ್ದಿಕ್ ಪಾಂಡ್ಯ ಓವರ್ ನೀಡಲಿಲ್ಲ ಎಂಬುದು ವಿಶೇಷ.

ಮುಂಬೈ ಇಂಡಿಯನ್ಸ್ ತಂಡದ ಮತ್ತೋರ್ವ ವೇಗಾಸ್ತ್ರವಾಗಿ ಗುರುತಿಸಿಕೊಂಡಿರುವ ದೀಪಕ್ ಚಹರ್ ಅವರ ಓವರ್​ಗಳಲ್ಲೂ ಆರ್​ಸಿಬಿ ಬ್ಯಾಟರ್​ಗಳು ಅಬ್ಬರಿಸಿದರು. ಪರಿಣಾಮ 2 ಓವರ್​ಗಳಲ್ಲಿ ಚಹರ್ ನೀಡಿದ್ದು ಬರೋಬ್ಬರಿ 29 ರನ್​ಗಳು. ಆ ಬಳಿಕ ಅವರಿಗೆ ಹಾರ್ದಿಕ್ ಪಾಂಡ್ಯ ಓವರ್ ನೀಡಲಿಲ್ಲ ಎಂಬುದು ವಿಶೇಷ.

4 / 5
ಇನ್ನು ಮುಂಬೈ ಇಂಡಿಯನ್ಸ್ ಪರ ತುಸು ಉತ್ತಮ ಪ್ರದರ್ಶನ ನೀಡಿದ್ದು ಜಸ್​ಪ್ರೀತ್ ಬುಮ್ರಾ. 4 ಓವರ್​ಗಳನ್ನು ಎಸೆದ ಬುಮ್ರಾ ಒಟ್ಟು 29 ರನ್​ ನೀಡಿದ್ದರು. ಇದಾಗ್ಯೂ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಈ ಮೂಲಕ ಆರ್​ಸಿಬಿ ಬ್ಯಾಟರ್​ಗಳು JCB ವೇಗಾಸ್ತ್ರದ ವಿರುದ್ಧ ಬರೋಬ್ಬರಿ 115 ರನ್​ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ. ಅದು ಸಹ ಕೇವಲ 10 ಓವರ್​ಗಳಲ್ಲಿ ಎಂಬುದು ವಿಶೇಷ.

ಇನ್ನು ಮುಂಬೈ ಇಂಡಿಯನ್ಸ್ ಪರ ತುಸು ಉತ್ತಮ ಪ್ರದರ್ಶನ ನೀಡಿದ್ದು ಜಸ್​ಪ್ರೀತ್ ಬುಮ್ರಾ. 4 ಓವರ್​ಗಳನ್ನು ಎಸೆದ ಬುಮ್ರಾ ಒಟ್ಟು 29 ರನ್​ ನೀಡಿದ್ದರು. ಇದಾಗ್ಯೂ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಈ ಮೂಲಕ ಆರ್​ಸಿಬಿ ಬ್ಯಾಟರ್​ಗಳು JCB ವೇಗಾಸ್ತ್ರದ ವಿರುದ್ಧ ಬರೋಬ್ಬರಿ 115 ರನ್​ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ. ಅದು ಸಹ ಕೇವಲ 10 ಓವರ್​ಗಳಲ್ಲಿ ಎಂಬುದು ವಿಶೇಷ.

5 / 5
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ