AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: RCB ಹಿಂದಿ ಖಾತೆ ವಿರುದ್ಧ ತಿರುಗಿಬಿದ್ದ ಕನ್ನಡಿಗರು

IPL 2025: ಐಪಿಎಲ್ ಮೆಗಾ ಹರಾಜಿನ ಮೂಲಕ ಆರ್​​ಸಿಬಿ ಫ್ರಾಂಚೈಸಿಯು ಕೇವಲ ಇಬ್ಬರು ಕನ್ನಡಿಗರನ್ನು ಮಾತ್ರ ಖರೀದಿಸಿದೆ. ಅದರಂತೆ ದೇವದತ್ ಪಡಿಕ್ಕಲ್ ಹಾಗೂ ಮನೋಜ್ ಭಾಂಡಗೆ ಆರ್​​ಸಿಬಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದಾಗ್ಯೂ ಕರ್ನಾಟಕದ ಬೇರೆ ಆಟಗಾರರಿಗೆ ಮಣೆ ಹಾಕದಿರುವ ಬಗ್ಗೆ ಆರ್​​ಸಿಬಿ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಇದೀಗ ಹಿಂದಿ ಖಾತೆ ತೆರೆಯುವ ಮೂಲಕ ಮತ್ತೊಮ್ಮೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಝಾಹಿರ್ ಯೂಸುಫ್
|

Updated on: Nov 27, 2024 | 10:30 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು… ಇದು ಕನ್ನಡಿಗರ ಪಾಲಿಗೆ ಕೇವಲ ತಂಡವಲ್ಲ. ಅದೊಂದು ಭಾವನೆ. ಹೀಗಾಗಿಯೇ ಸೋತರೂ, ಗೆದ್ದರೂ ಕಳೆದ 17 ವರ್ಷಗಳಿಂದ ಆರ್​​ಸಿಬಿ ತಂಡವನ್ನು ಕನ್ನಡಿಗರು ಕೈ ಬಿಟ್ಟಿಲ್ಲ. ಆದರೆ ಇದೀಗ ಆರ್​​ಸಿಬಿ ಫ್ರಾಂಚೈಸಿ ತೆಗೆದುಕೊಂಡ ಒಂದು ನಿರ್ಧಾರದ ವಿರುದ್ಧ ಕರ್ನಾಟಕದ ಅಭಿಮಾನಿಗಳೇ ತಿರುಗಿ ಬಿದ್ದಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು… ಇದು ಕನ್ನಡಿಗರ ಪಾಲಿಗೆ ಕೇವಲ ತಂಡವಲ್ಲ. ಅದೊಂದು ಭಾವನೆ. ಹೀಗಾಗಿಯೇ ಸೋತರೂ, ಗೆದ್ದರೂ ಕಳೆದ 17 ವರ್ಷಗಳಿಂದ ಆರ್​​ಸಿಬಿ ತಂಡವನ್ನು ಕನ್ನಡಿಗರು ಕೈ ಬಿಟ್ಟಿಲ್ಲ. ಆದರೆ ಇದೀಗ ಆರ್​​ಸಿಬಿ ಫ್ರಾಂಚೈಸಿ ತೆಗೆದುಕೊಂಡ ಒಂದು ನಿರ್ಧಾರದ ವಿರುದ್ಧ ಕರ್ನಾಟಕದ ಅಭಿಮಾನಿಗಳೇ ತಿರುಗಿ ಬಿದ್ದಿದ್ದಾರೆ.

1 / 5
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತ ಹಿಂದಿ ಖಾತೆಯನ್ನು ತೆರೆದಿದೆ. ಆರ್​ಸಿಬಿಯ ಈ ನಿರ್ಧಾರಕ್ಕೆ ಇದೀಗ ಕನ್ನಡಿಗರು ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತ ಹಿಂದಿ ಖಾತೆಯನ್ನು ತೆರೆದಿದೆ. ಆರ್​ಸಿಬಿಯ ಈ ನಿರ್ಧಾರಕ್ಕೆ ಇದೀಗ ಕನ್ನಡಿಗರು ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

2 / 5
RCB ಫ್ರಾಂಚೈಸಿ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಹಿಂದಿಯನ್ನು ಬಳಸುವುದನ್ನು ನೋಡಲು ಬೇಸರವಾಗುತ್ತದೆ. ಬೆಂಗಳೂರು ಕನ್ನಡ  ಸಂಸ್ಕೃತಿ ಮತ್ತು ಭಾಷೆಯನ್ನು ಪ್ರತಿನಿಧಿಸುತ್ತದೆ. ಹೀಗಾಗಿ RCB ಕನ್ನಡ ಮತ್ತು ಇಂಗ್ಲಿಷ್​​ಗೆ ಆದ್ಯತೆ ನೀಡುವ ಮೂಲಕ ಇದನ್ನು ಗೌರವಿಸಬೇಕು ಎಂದು ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ. ಇನ್ನು ಮತ್ತೊಬ್ಬರು ಕರ್ನಾಟಕಕ್ಕೂ ಹಿಂದಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಆರ್​​ಸಿಬಿ ಹಿಂದಿ ಖಾತೆಯನ್ನು ಡಿಲೀಟ್ ಮಾಡಬೇಕೆಂದು ಅನೇಕರು ಆಗ್ರಹಿಸಿದ್ದಾರೆ.

RCB ಫ್ರಾಂಚೈಸಿ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಹಿಂದಿಯನ್ನು ಬಳಸುವುದನ್ನು ನೋಡಲು ಬೇಸರವಾಗುತ್ತದೆ. ಬೆಂಗಳೂರು ಕನ್ನಡ ಸಂಸ್ಕೃತಿ ಮತ್ತು ಭಾಷೆಯನ್ನು ಪ್ರತಿನಿಧಿಸುತ್ತದೆ. ಹೀಗಾಗಿ RCB ಕನ್ನಡ ಮತ್ತು ಇಂಗ್ಲಿಷ್​​ಗೆ ಆದ್ಯತೆ ನೀಡುವ ಮೂಲಕ ಇದನ್ನು ಗೌರವಿಸಬೇಕು ಎಂದು ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ. ಇನ್ನು ಮತ್ತೊಬ್ಬರು ಕರ್ನಾಟಕಕ್ಕೂ ಹಿಂದಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಆರ್​​ಸಿಬಿ ಹಿಂದಿ ಖಾತೆಯನ್ನು ಡಿಲೀಟ್ ಮಾಡಬೇಕೆಂದು ಅನೇಕರು ಆಗ್ರಹಿಸಿದ್ದಾರೆ.

3 / 5
ಇನ್ನೂ ಕೆಲವರು ಆರ್​​ಸಿಬಿ ಹಿಂದಿ ಖಾತೆಯನ್ನು ಬ್ಲಾಕ್ ಮಾಡುವಂತೆ ಅಭಿಯಾನ ಆರಂಭಿಸಿದ್ದಾರೆ. ಹಾಗೆಯೇ ಆರ್​​ಸಿಬಿ ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕೆಂದು ಕೆಲ ಕನ್ನಡಿಗರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಆರ್​​ಸಿಬಿ ಹಿಂದಿಯ ಖಾತೆಗೆ ಇದೀಗ ಆರ್​​ಸಿಬಿ ಅಭಿಮಾನಿಗಳಿಂದಲೇ ಆಕ್ರೋಶ ಮೂಡಿ ಬರುತ್ತಿದೆ.

ಇನ್ನೂ ಕೆಲವರು ಆರ್​​ಸಿಬಿ ಹಿಂದಿ ಖಾತೆಯನ್ನು ಬ್ಲಾಕ್ ಮಾಡುವಂತೆ ಅಭಿಯಾನ ಆರಂಭಿಸಿದ್ದಾರೆ. ಹಾಗೆಯೇ ಆರ್​​ಸಿಬಿ ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕೆಂದು ಕೆಲ ಕನ್ನಡಿಗರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಆರ್​​ಸಿಬಿ ಹಿಂದಿಯ ಖಾತೆಗೆ ಇದೀಗ ಆರ್​​ಸಿಬಿ ಅಭಿಮಾನಿಗಳಿಂದಲೇ ಆಕ್ರೋಶ ಮೂಡಿ ಬರುತ್ತಿದೆ.

4 / 5
ಇಲ್ಲಿ ಕನ್ನಡಿಗರು ಮುಂದಿಡುತ್ತಿರುವ ಪ್ರಶ್ನೆಯೆಂದರೆ… ಕರ್ನಾಟಕದಲ್ಲಿ ಇತರೆ ತಂಡಗಳ ಅಭಿಮಾನಿಗಳಿದ್ದಾರೆ. ಇದಾಗ್ಯೂ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್​, ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿಗಳು ಕನ್ನಡದಲ್ಲಿ ಖಾತೆ ತೆರೆದಿಲ್ಲ. ಆದರೆ ಆರ್​​ಸಿಬಿ ಫ್ರಾಂಚೈಸಿಗೇಕೆ ಈ ದರದು? ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಇದು ಹಿಂದಿ ಹೇರಿಕೆಯ ಮತ್ತೊಂದು ವಾಮಮಾರ್ಗ ಎಂದು ಅನೇಕರು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಒಂದು ಖಾತೆಯಿಂದ ಆರ್​ಸಿಬಿ ಫ್ರಾಂಚೈಸಿಯು ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಇಲ್ಲಿ ಕನ್ನಡಿಗರು ಮುಂದಿಡುತ್ತಿರುವ ಪ್ರಶ್ನೆಯೆಂದರೆ… ಕರ್ನಾಟಕದಲ್ಲಿ ಇತರೆ ತಂಡಗಳ ಅಭಿಮಾನಿಗಳಿದ್ದಾರೆ. ಇದಾಗ್ಯೂ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್​, ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿಗಳು ಕನ್ನಡದಲ್ಲಿ ಖಾತೆ ತೆರೆದಿಲ್ಲ. ಆದರೆ ಆರ್​​ಸಿಬಿ ಫ್ರಾಂಚೈಸಿಗೇಕೆ ಈ ದರದು? ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಇದು ಹಿಂದಿ ಹೇರಿಕೆಯ ಮತ್ತೊಂದು ವಾಮಮಾರ್ಗ ಎಂದು ಅನೇಕರು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಒಂದು ಖಾತೆಯಿಂದ ಆರ್​ಸಿಬಿ ಫ್ರಾಂಚೈಸಿಯು ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

5 / 5
Follow us
ದರ್ಶನ್ ಹೆಸರು ಹೇಳಿ ವಿನೋದ್ ಪ್ರಭಾಕರ್ ಅವರ ಕೊಂಡಾಡಿದ ಶ್ರುತಿ
ದರ್ಶನ್ ಹೆಸರು ಹೇಳಿ ವಿನೋದ್ ಪ್ರಭಾಕರ್ ಅವರ ಕೊಂಡಾಡಿದ ಶ್ರುತಿ
ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೆ ಏನಾಗುತ್ತೆ??
ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೆ ಏನಾಗುತ್ತೆ??
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!