AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

IPL Mega Auction 2022: ಆರ್​ಸಿಬಿ ಅತ್ಯುತ್ತಮ ಆಟಗಾರನನ್ನು ಮೆಗಾ ಹರಾಜಿನಲ್ಲಿ ಖರೀದಿಸಬೇಕಾಗುತ್ತದೆ. ಅದರಲ್ಲೂ ಮೆಗಾ ಹರಾಜಿನಲ್ಲಿ ಕೆಲ ಆಟಗಾರರಿದ್ದಾರೆ. ಅವರ ಖರೀದಿಯಿಂದ ಆರ್​ಸಿಬಿ ತಂಡದ ಈ ಹಿಂದಿನ ಕೆಲ ನೂನ್ಯತೆಗಳನ್ನು ಸರಿಪಡಿಸಿಕೊಳ್ಳಬಹುದು. ((ಡೈಲಿಹಂಟ್​ನಲ್ಲಿ ಫೋಟೋ ಗ್ಯಾಲರಿ ಸ್ಟೋರಿಯಲ್ಲಿ ಸುದ್ದಿ ಸಾರಾಂಶ ಕಾಣಿಸುತ್ತಿಲ್ಲ. ಹಾಗಾಗಿ tv9kannada.com ಗೆ ಭೇಟಿ ನೀಡಿದ್ರೆ ಸಂಪೂರ್ಣ ಸುದ್ದಿ ಓದಬಹುದು)

TV9 Web
| Edited By: |

Updated on: Dec 14, 2021 | 8:54 PM

Share
ಐಪಿಎಲ್​ ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳು ಒಟ್ಟು 27 ಆಟಗಾರರನ್ನು ಉಳಿಸಿಕೊಂಡಿದೆ. ಈ ಪಟ್ಟಿಯಲ್ಲಿ ಆರ್​ಸಿಬಿ ರಿಟೈನ್ ಮಾಡಿಕೊಂಡಿರುವುದು ಕೇವಲ ಮೂವರು ಆಟಗಾರರನ್ನು ಮಾತ್ರ. ಅದರಂತೆ ಮುಂದಿನ ಸೀಸನ್​ನಲ್ಲಿ ಆರ್​ಸಿಬಿ ಪರ ಗ್ಲೆನ್ ಮ್ಯಾಕ್ಸ್​ವೆಲ್, ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಆಡುವುದು ಖಚಿತ.

ಐಪಿಎಲ್​ ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳು ಒಟ್ಟು 27 ಆಟಗಾರರನ್ನು ಉಳಿಸಿಕೊಂಡಿದೆ. ಈ ಪಟ್ಟಿಯಲ್ಲಿ ಆರ್​ಸಿಬಿ ರಿಟೈನ್ ಮಾಡಿಕೊಂಡಿರುವುದು ಕೇವಲ ಮೂವರು ಆಟಗಾರರನ್ನು ಮಾತ್ರ. ಅದರಂತೆ ಮುಂದಿನ ಸೀಸನ್​ನಲ್ಲಿ ಆರ್​ಸಿಬಿ ಪರ ಗ್ಲೆನ್ ಮ್ಯಾಕ್ಸ್​ವೆಲ್, ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಆಡುವುದು ಖಚಿತ.

1 / 8
ಆದರೆ ಈಗಾಗಲೇ ಬಿಡುಗಡೆ ಮಾಡಿರುವ ಯಾವ ಆಟಗಾರ ಮತ್ತೆ ಆರ್​ಸಿಬಿಗೆ ಸಿಗಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಖಚಿತತೆ ಇಲ್ಲ. ಹೀಗಾಗಿ ಆರ್​ಸಿಬಿ ಅತ್ಯುತ್ತಮ ಆಟಗಾರನನ್ನು ಮೆಗಾ ಹರಾಜಿನಲ್ಲಿ ಖರೀದಿಸಬೇಕಾಗುತ್ತದೆ. ಅದರಲ್ಲೂ ಮೆಗಾ ಹರಾಜಿನಲ್ಲಿ ಕೆಲ ಆಟಗಾರರಿದ್ದಾರೆ. ಅವರ ಖರೀದಿಯಿಂದ ಆರ್​ಸಿಬಿ ತಂಡದ ಈ ಹಿಂದಿನ ಕೆಲ ನೂನ್ಯತೆಗಳನ್ನು ಸರಿಪಡಿಸಿಕೊಳ್ಳಬಹುದು. ಅಂತಹ ಒಬ್ಬ ಆಟಗಾರ ಮನೀಷ್ ಪಾಂಡೆ. ಇಲ್ಲಿ ಮನೀಷ್ ಪಾಂಡೆಯೇ ಆರ್​ಸಿಬಿ ಯಾಕೆ ಬೇಕು ಎಂಬುದಕ್ಕೆ ನಾನಾ ಕಾರಣಗಳಿವೆ.

ಆದರೆ ಈಗಾಗಲೇ ಬಿಡುಗಡೆ ಮಾಡಿರುವ ಯಾವ ಆಟಗಾರ ಮತ್ತೆ ಆರ್​ಸಿಬಿಗೆ ಸಿಗಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಖಚಿತತೆ ಇಲ್ಲ. ಹೀಗಾಗಿ ಆರ್​ಸಿಬಿ ಅತ್ಯುತ್ತಮ ಆಟಗಾರನನ್ನು ಮೆಗಾ ಹರಾಜಿನಲ್ಲಿ ಖರೀದಿಸಬೇಕಾಗುತ್ತದೆ. ಅದರಲ್ಲೂ ಮೆಗಾ ಹರಾಜಿನಲ್ಲಿ ಕೆಲ ಆಟಗಾರರಿದ್ದಾರೆ. ಅವರ ಖರೀದಿಯಿಂದ ಆರ್​ಸಿಬಿ ತಂಡದ ಈ ಹಿಂದಿನ ಕೆಲ ನೂನ್ಯತೆಗಳನ್ನು ಸರಿಪಡಿಸಿಕೊಳ್ಳಬಹುದು. ಅಂತಹ ಒಬ್ಬ ಆಟಗಾರ ಮನೀಷ್ ಪಾಂಡೆ. ಇಲ್ಲಿ ಮನೀಷ್ ಪಾಂಡೆಯೇ ಆರ್​ಸಿಬಿ ಯಾಕೆ ಬೇಕು ಎಂಬುದಕ್ಕೆ ನಾನಾ ಕಾರಣಗಳಿವೆ.

2 / 8
 1- ಕರ್ನಾಟಕದ ಆಟಗಾರ: ಕಳೆದ ಎರಡು ಸೀಸನ್​ನಲ್ಲಿ ಆರ್​ಸಿಬಿ ಪರ ಆಡಿದ್ದು ಏಕೈಕ ಕನ್ನಡಿಗ ದೇವದತ್ ಪಡಿಕ್ಕಲ್. ಇದೀಗ ಪಡಿಕ್ಕಲ್ ಕೂಡ ಮೆಗಾ ಹರಾಜಿನಲ್ಲಿರುವ ಕಾರಣ ಅವರನ್ನು ಮತ್ತೆ ಖರೀದಿಸಲು ಸಾಧ್ಯವಾಗುತ್ತೊ ಗೊತ್ತಿಲ್ಲ. ಆದರೆ ಮನೀಷ್ ಪಾಂಡೆಯ ಖರೀದಿಯೊಂದಿಗೆ ಆರ್​ಸಿಬಿ ಓಪನಿಂಗ್ ಆಟಗಾರನ ಸಮಸ್ಯೆಯನ್ನು ನೀಗಿಸಬಹುದು. ಏಕೆಂದರೆ ಈ ಹಿಂದೆ ಪಾಂಡೆ ಆರ್​ಸಿಬಿ ಪರ ಆರಂಭಿಕನಾಗಿ ಆಡಿದ್ದರು. 2009 ರಲ್ಲಿ ಆರ್​ಸಿಬಿ ಪರ ಪಾಂಡೆ ಭರ್ಜರಿ ಪ್ರದರ್ಶನ ನೀಡಿದ್ದರು. ಆ ವರ್ಷ ಆರ್​ಸಿಬಿ ಫೈನಲ್​ಗೂ ಪ್ರವೇಶಿಸಿತ್ತು ಎಂಬುದು ವಿಶೇಷ. ಇನ್ನು ಸಂದರ್ಭಕ್ಕೆ ತಕ್ಕಂತೆ ಬ್ಯಾಟ್ ಬೀಸುವ ಮನೀಷ್ ಅತ್ಯುತ್ತಮ ಹಿಟ್ಟರ್ ಎಂಬುದಕ್ಕೆ ಕೆಕೆಆರ್, ಎಸ್​ಆರ್​ಹೆಚ್​ ಪರ ಆಡಿದ ಸ್ಪೋಟಕ ಇನಿಂಗ್ಸ್​ಗಳೇ ಸಾಕ್ಷಿ. ಹೀಗಾಗಿ ಕನ್ನಡಿಗ ಸ್ಥಾನವನ್ನು ಹಾಗೂ ಆರಂಭಿಕನ ಕೊರತೆಯನ್ನು ಪಾಂಡೆ ಮೂಲಕ ತುಂಬಬಹುದು.

1- ಕರ್ನಾಟಕದ ಆಟಗಾರ: ಕಳೆದ ಎರಡು ಸೀಸನ್​ನಲ್ಲಿ ಆರ್​ಸಿಬಿ ಪರ ಆಡಿದ್ದು ಏಕೈಕ ಕನ್ನಡಿಗ ದೇವದತ್ ಪಡಿಕ್ಕಲ್. ಇದೀಗ ಪಡಿಕ್ಕಲ್ ಕೂಡ ಮೆಗಾ ಹರಾಜಿನಲ್ಲಿರುವ ಕಾರಣ ಅವರನ್ನು ಮತ್ತೆ ಖರೀದಿಸಲು ಸಾಧ್ಯವಾಗುತ್ತೊ ಗೊತ್ತಿಲ್ಲ. ಆದರೆ ಮನೀಷ್ ಪಾಂಡೆಯ ಖರೀದಿಯೊಂದಿಗೆ ಆರ್​ಸಿಬಿ ಓಪನಿಂಗ್ ಆಟಗಾರನ ಸಮಸ್ಯೆಯನ್ನು ನೀಗಿಸಬಹುದು. ಏಕೆಂದರೆ ಈ ಹಿಂದೆ ಪಾಂಡೆ ಆರ್​ಸಿಬಿ ಪರ ಆರಂಭಿಕನಾಗಿ ಆಡಿದ್ದರು. 2009 ರಲ್ಲಿ ಆರ್​ಸಿಬಿ ಪರ ಪಾಂಡೆ ಭರ್ಜರಿ ಪ್ರದರ್ಶನ ನೀಡಿದ್ದರು. ಆ ವರ್ಷ ಆರ್​ಸಿಬಿ ಫೈನಲ್​ಗೂ ಪ್ರವೇಶಿಸಿತ್ತು ಎಂಬುದು ವಿಶೇಷ. ಇನ್ನು ಸಂದರ್ಭಕ್ಕೆ ತಕ್ಕಂತೆ ಬ್ಯಾಟ್ ಬೀಸುವ ಮನೀಷ್ ಅತ್ಯುತ್ತಮ ಹಿಟ್ಟರ್ ಎಂಬುದಕ್ಕೆ ಕೆಕೆಆರ್, ಎಸ್​ಆರ್​ಹೆಚ್​ ಪರ ಆಡಿದ ಸ್ಪೋಟಕ ಇನಿಂಗ್ಸ್​ಗಳೇ ಸಾಕ್ಷಿ. ಹೀಗಾಗಿ ಕನ್ನಡಿಗ ಸ್ಥಾನವನ್ನು ಹಾಗೂ ಆರಂಭಿಕನ ಕೊರತೆಯನ್ನು ಪಾಂಡೆ ಮೂಲಕ ತುಂಬಬಹುದು.

3 / 8
2- ಮಧ್ಯಮ ಕ್ರಮಾಂಕದ ಶಕ್ತಿ: ಮನೀಷ್ ಪಾಂಡೆ ಯಾವುದೇ ಕ್ರಮಾಂಕದಲ್ಲೂ ಬ್ಯಾಟ್ ಬೀಸಬಲ್ಲ ಆಟಗಾರ. ಇದೀಗ ಆರ್​ಸಿಬಿ ತಂಡದಿಂದ ಎಬಿ ಡಿವಿಲಿಯರ್ಸ್ ಹೊರನಡೆದಿದ್ದಾರೆ. ಒಂದು ವೇಳೆ ಆರ್​ಸಿಬಿ ಆರಂಭಿಕ ಆಟಗಾರನನ್ನು ಕಂಡುಕೊಂಡರೆ, ಮಧ್ಯಮ ಕ್ರಮಾಂಕದಲ್ಲೂ ಮನೀಷ್ ಪಾಂಡೆ ಅವರನ್ನು ಬಳಸಿಕೊಳ್ಳಬಹುದು. ಹೀಗಾಗಿ ಆರಂಭಿಕ ಅಥವಾ ಮಧ್ಯಮ ಕ್ರಮಾಂಕ..ಎರಡೂ ಆಯ್ಕೆಯನ್ನು ಮನೀಷ್ ಪಾಂಡೆ ಆಯ್ಕೆಯಿಂದ ಪಡೆಯಬಹುದು.

2- ಮಧ್ಯಮ ಕ್ರಮಾಂಕದ ಶಕ್ತಿ: ಮನೀಷ್ ಪಾಂಡೆ ಯಾವುದೇ ಕ್ರಮಾಂಕದಲ್ಲೂ ಬ್ಯಾಟ್ ಬೀಸಬಲ್ಲ ಆಟಗಾರ. ಇದೀಗ ಆರ್​ಸಿಬಿ ತಂಡದಿಂದ ಎಬಿ ಡಿವಿಲಿಯರ್ಸ್ ಹೊರನಡೆದಿದ್ದಾರೆ. ಒಂದು ವೇಳೆ ಆರ್​ಸಿಬಿ ಆರಂಭಿಕ ಆಟಗಾರನನ್ನು ಕಂಡುಕೊಂಡರೆ, ಮಧ್ಯಮ ಕ್ರಮಾಂಕದಲ್ಲೂ ಮನೀಷ್ ಪಾಂಡೆ ಅವರನ್ನು ಬಳಸಿಕೊಳ್ಳಬಹುದು. ಹೀಗಾಗಿ ಆರಂಭಿಕ ಅಥವಾ ಮಧ್ಯಮ ಕ್ರಮಾಂಕ..ಎರಡೂ ಆಯ್ಕೆಯನ್ನು ಮನೀಷ್ ಪಾಂಡೆ ಆಯ್ಕೆಯಿಂದ ಪಡೆಯಬಹುದು.

4 / 8
3- ಅತ್ಯುತ್ತಮ ಫೀಲ್ಡರ್: ಟಿ20 ಕ್ರಿಕೆಟ್​ನಲ್ಲಿ ಒಂದೊಂದು ರನ್ ಕೂಡ ಅಮೂಲ್ಯ. ಪ್ರಸ್ತುತ ಆರ್​ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅತ್ಯುತ್ತಮ ಫೀಲ್ಡರ್​ಗಳಾಗಿ ಗುರುತಿಸಿಕೊಂಡಿದ್ದಾರೆ. ಇತ್ತ ಮನೀಷ್ ಪಾಂಡೆ ಕೂಡ ಬೌಂಡರಿ ಲೈನ್​ನ ವೇಗದ ಸರದಾರ. ಮಿಂಚಿನ ಓಟದ ಮೂಲಕ ಬೌಂಡರಿ ಲೈನ್​ನಲ್ಲಿ ಅದ್ಭುತ ಫೀಲ್ಡಿಂಗ್ ಮಾಡುವ ಮನೀಷ್ ಪಾಂಡೆ ಸೇರಿದರೆ ಆರ್​ಸಿಬಿ ತಂಡದ ಫೀಲ್ಡಿಂಗ್ ಮತ್ತಷ್ಟು ಬಲಿಷ್ಠವಾಗಲಿದೆ.

3- ಅತ್ಯುತ್ತಮ ಫೀಲ್ಡರ್: ಟಿ20 ಕ್ರಿಕೆಟ್​ನಲ್ಲಿ ಒಂದೊಂದು ರನ್ ಕೂಡ ಅಮೂಲ್ಯ. ಪ್ರಸ್ತುತ ಆರ್​ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅತ್ಯುತ್ತಮ ಫೀಲ್ಡರ್​ಗಳಾಗಿ ಗುರುತಿಸಿಕೊಂಡಿದ್ದಾರೆ. ಇತ್ತ ಮನೀಷ್ ಪಾಂಡೆ ಕೂಡ ಬೌಂಡರಿ ಲೈನ್​ನ ವೇಗದ ಸರದಾರ. ಮಿಂಚಿನ ಓಟದ ಮೂಲಕ ಬೌಂಡರಿ ಲೈನ್​ನಲ್ಲಿ ಅದ್ಭುತ ಫೀಲ್ಡಿಂಗ್ ಮಾಡುವ ಮನೀಷ್ ಪಾಂಡೆ ಸೇರಿದರೆ ಆರ್​ಸಿಬಿ ತಂಡದ ಫೀಲ್ಡಿಂಗ್ ಮತ್ತಷ್ಟು ಬಲಿಷ್ಠವಾಗಲಿದೆ.

5 / 8
 4- ಕ್ಯಾಪ್ಟನ್: ಸದ್ಯದ ಆರ್​ಸಿಬಿ ತಂಡದ ಅತೀ ದೊಡ್ಡ ಚಿಂತೆ ಮುಂದಿನ ನಾಯಕ ಯಾರೆಂಬುದು. ಆದರೆ ಇತ್ತ ದೇಶೀಯ ಟಿ20 ಟೂರ್ನಿಯಲ್ಲಿ (ಸೈಯದ್ ಮುಷ್ತಾಕ್ ಅಲಿ ಟ್ರೋಫಿ) ಮನೀಷ್ ಪಾಂಡೆ ಕರ್ನಾಟಕವನ್ನು ಫೈನಲ್​ಗೆ ಕೊಂಡೊಯ್ದಿದ್ದರು. ಅಷ್ಟೇ ಅಲ್ಲದೆ ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ಪ್ರಿಕ್ವಾರ್ಟರ್​​ ಫೈನಲ್​ಗೆ ಪ್ರವೇಶಿಸಿದೆ. ಇನ್ನು ಪಾಂಡೆಯ ನಾಯಕತ್ವದಲ್ಲಿ ಕರ್ನಾಟಕ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದೆ. ಹೀಗಾಗಿ ಮನೀಷ್ ಪಾಂಡೆ ಆಯ್ಕೆಯಿಂದಾಗಿ ಆರ್​ಸಿಬಿ ನಾಯಕತ್ವ ಚಿಂತೆಯನ್ನು ಕೂಡ ದೂರ ಮಾಡಬಹುದು.

4- ಕ್ಯಾಪ್ಟನ್: ಸದ್ಯದ ಆರ್​ಸಿಬಿ ತಂಡದ ಅತೀ ದೊಡ್ಡ ಚಿಂತೆ ಮುಂದಿನ ನಾಯಕ ಯಾರೆಂಬುದು. ಆದರೆ ಇತ್ತ ದೇಶೀಯ ಟಿ20 ಟೂರ್ನಿಯಲ್ಲಿ (ಸೈಯದ್ ಮುಷ್ತಾಕ್ ಅಲಿ ಟ್ರೋಫಿ) ಮನೀಷ್ ಪಾಂಡೆ ಕರ್ನಾಟಕವನ್ನು ಫೈನಲ್​ಗೆ ಕೊಂಡೊಯ್ದಿದ್ದರು. ಅಷ್ಟೇ ಅಲ್ಲದೆ ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ಪ್ರಿಕ್ವಾರ್ಟರ್​​ ಫೈನಲ್​ಗೆ ಪ್ರವೇಶಿಸಿದೆ. ಇನ್ನು ಪಾಂಡೆಯ ನಾಯಕತ್ವದಲ್ಲಿ ಕರ್ನಾಟಕ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದೆ. ಹೀಗಾಗಿ ಮನೀಷ್ ಪಾಂಡೆ ಆಯ್ಕೆಯಿಂದಾಗಿ ಆರ್​ಸಿಬಿ ನಾಯಕತ್ವ ಚಿಂತೆಯನ್ನು ಕೂಡ ದೂರ ಮಾಡಬಹುದು.

6 / 8
ಒಟ್ಟಿನಲ್ಲಿ ಆರ್​ಸಿಬಿ ತಂಡಕ್ಕೆ ಮನೀಷ್ ಪಾಂಡೆ ಆಯ್ಕೆಯಾದರೆ ಒಂದೇ ಖರೀದಿಯಲ್ಲಿ ಹಲವು ಆಯ್ಕೆಗಳು ಸಿಗುವುದಂತು ಸತ್ಯ.

ಒಟ್ಟಿನಲ್ಲಿ ಆರ್​ಸಿಬಿ ತಂಡಕ್ಕೆ ಮನೀಷ್ ಪಾಂಡೆ ಆಯ್ಕೆಯಾದರೆ ಒಂದೇ ಖರೀದಿಯಲ್ಲಿ ಹಲವು ಆಯ್ಕೆಗಳು ಸಿಗುವುದಂತು ಸತ್ಯ.

7 / 8
ವಿರಾಟ್ ಕೊಹ್ಲಿ ಜೊತೆ ಮನೀಷ್ ಪಾಂಡೆ

ವಿರಾಟ್ ಕೊಹ್ಲಿ ಜೊತೆ ಮನೀಷ್ ಪಾಂಡೆ

8 / 8
Follow Us
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!