AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಈ ರೀತಿಯಾಗಿ ವೃತ್ತಿಜೀವನ ಆರಂಭಿಸಿದ ವಿಶ್ವದ 15ನೇ ಆಟಗಾರ ಸರಾಂಶ್ ಜೈನ್

Saransh Jain's Unique Test Debut: ಕುಲ್ದೀಪ್ ಬದಲಿಗೆ ಟೆಸ್ಟ್ ಪದಾರ್ಪಣೆ ಮಾಡಿದ ಸರಾಂಶ್ ಜೈನ್, ತಮ್ಮ ಮೊದಲ ಎಸೆತವನ್ನೇ ನೋ-ಬಾಲ್ ಎಸೆದು ಇತಿಹಾಸ ನಿರ್ಮಿಸಿದರು. ಕಪಿಲ್ ದೇವ್ ಪಟ್ಟಿಗೆ ಸೇರಿದ ಇವರು, ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಹಿರಿಯ ಭಾರತೀಯ ಆಟಗಾರ ಎನಿಸಿಕೊಂಡರು. 33ನೇ ವಯಸ್ಸಿನಲ್ಲಿ ಚೊಚ್ಚಲ ಪಂದ್ಯವನ್ನಾಡಿ, ಸಬಾ ಕರೀಮ್ ಅವರ 26 ವರ್ಷಗಳ ದಾಖಲೆಯನ್ನು ಮುರಿದು ಅನನ್ಯ ದಾಖಲೆಗೆ ಸೇರ್ಪಡೆಯಾಗಿದ್ದಾರೆ.

ಪೃಥ್ವಿಶಂಕರ
|

Updated on: Aug 25, 2026 | 5:05 PM

Share
ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್​ನಲ್ಲಿ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ಕುಲ್ದೀಪ್ ಯಾದವ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಎರಡನೇ ಟೆಸ್ಟ್​ನಲ್ಲಿ ಕುಲ್ದೀಪ್​ಗೆ ಆಡುವ ಅವಕಾಶ ಸಿಕ್ಕಿಲ್ಲ. ಅವರ ಬದಲಿಗೆ ಸರಾಂಶ್ ಜೈನ್​ಗೆ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನಾಡುವ ಅವಕಾಶ ನೀಡಲಾಗಿದೆ(PC-PTI).

ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್​ನಲ್ಲಿ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ಕುಲ್ದೀಪ್ ಯಾದವ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಎರಡನೇ ಟೆಸ್ಟ್​ನಲ್ಲಿ ಕುಲ್ದೀಪ್​ಗೆ ಆಡುವ ಅವಕಾಶ ಸಿಕ್ಕಿಲ್ಲ. ಅವರ ಬದಲಿಗೆ ಸರಾಂಶ್ ಜೈನ್​ಗೆ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನಾಡುವ ಅವಕಾಶ ನೀಡಲಾಗಿದೆ(PC-PTI).

1 / 5
ಈ ಪಂದ್ಯದಲ್ಲಿ ಮೊದಲು ಬ್ಯಾಂಟಿಗ್​ನಲ್ಲಿ ಬೌಂಡರಿ ಬಾರಿಸುವ ಮೂಲಕ ತನ್ನ ಅಂತರರಾಷ್ಟ್ರೀಯ ರನ್​ಗಳ ಖಾತೆ ತೆರೆದಿದ್ದ ಸರಾಂಶ್ ಜೈನ್ ಕೇವಲ 6 ರನ್ ಬಾರಿಸಿ ಔಟಾಗಿದ್ದರು. ಅದಾದ ಬಳಿಕ ಬೌಲಿಂಗ್‌ ಆರಂಭಿಸಿದ ಸರಾಂಶ್ ಜೈನ್ ತಮ್ಮ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ಎಸೆದ ಮೊದಲ ಚೆಂಡು ನೋ-ಬಾಲ್ ಆಗಿತ್ತು. ಈ ರೀತಿಯಾಗಿ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸಿದ ಆಯ್ದ ಆಟಗಾರರ ಪಟ್ಟಿಗೆ ಸರಾಂಶ್ ಜೈನ್ ಕೂಡ ಸೇರ್ಪಡೆಗೊಂಡರು(PC-PTI).

ಈ ಪಂದ್ಯದಲ್ಲಿ ಮೊದಲು ಬ್ಯಾಂಟಿಗ್​ನಲ್ಲಿ ಬೌಂಡರಿ ಬಾರಿಸುವ ಮೂಲಕ ತನ್ನ ಅಂತರರಾಷ್ಟ್ರೀಯ ರನ್​ಗಳ ಖಾತೆ ತೆರೆದಿದ್ದ ಸರಾಂಶ್ ಜೈನ್ ಕೇವಲ 6 ರನ್ ಬಾರಿಸಿ ಔಟಾಗಿದ್ದರು. ಅದಾದ ಬಳಿಕ ಬೌಲಿಂಗ್‌ ಆರಂಭಿಸಿದ ಸರಾಂಶ್ ಜೈನ್ ತಮ್ಮ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ಎಸೆದ ಮೊದಲ ಚೆಂಡು ನೋ-ಬಾಲ್ ಆಗಿತ್ತು. ಈ ರೀತಿಯಾಗಿ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸಿದ ಆಯ್ದ ಆಟಗಾರರ ಪಟ್ಟಿಗೆ ಸರಾಂಶ್ ಜೈನ್ ಕೂಡ ಸೇರ್ಪಡೆಗೊಂಡರು(PC-PTI).

2 / 5
ಅಂಕಿಅಂಶಗಳ ಪ್ರಕಾರ, ನೋ-ಬಾಲ್ ಮೂಲಕ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸಿದ ವಿಶ್ವದ 15 ನೇ ಆಟಗಾರ ಸರಾಂಶ್ ಜೈನ್. ಹಾಗೆಯೇ ನೋ-ಬಾಲ್ ಮೂಲಕ ಟೆಸ್ಟ್ ವೃತ್ತಿಜೀವನ ಆರಂಭಿಸಿದ ನಾಲ್ಕನೇ ಭಾರತೀಯ ಎಂಬ ದಾಖಲೆಯೂ ಸರಾಂಶ್ ಜೈನ್ ಪಾಲಾಗಿದೆ. ನೋ-ಬಾಲ್ ಮೂಲಕ ಟೆಸ್ಟ್ ವೃತ್ತಿಜೀವನ ಆರಂಭಿಸಿದ ಮೊದಲ ಭಾರತೀಯ ಸ್ಪಿನ್ನರ್ ಕೂಡ ಇವರು(PC-PTI).

ಅಂಕಿಅಂಶಗಳ ಪ್ರಕಾರ, ನೋ-ಬಾಲ್ ಮೂಲಕ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸಿದ ವಿಶ್ವದ 15 ನೇ ಆಟಗಾರ ಸರಾಂಶ್ ಜೈನ್. ಹಾಗೆಯೇ ನೋ-ಬಾಲ್ ಮೂಲಕ ಟೆಸ್ಟ್ ವೃತ್ತಿಜೀವನ ಆರಂಭಿಸಿದ ನಾಲ್ಕನೇ ಭಾರತೀಯ ಎಂಬ ದಾಖಲೆಯೂ ಸರಾಂಶ್ ಜೈನ್ ಪಾಲಾಗಿದೆ. ನೋ-ಬಾಲ್ ಮೂಲಕ ಟೆಸ್ಟ್ ವೃತ್ತಿಜೀವನ ಆರಂಭಿಸಿದ ಮೊದಲ ಭಾರತೀಯ ಸ್ಪಿನ್ನರ್ ಕೂಡ ಇವರು(PC-PTI).

3 / 5
ಸರಾಂಶ್ ಜೈನ್​ಗಿಂತ ಮೊದಲು, ನೋ-ಬಾಲ್ ಮೂಲಕ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸಿದ ಮೂವರು ಭಾರತೀಯ ಬೌಲರ್‌ಗಳಲ್ಲಿ ಕಪಿಲ್ ದೇವ್, ಇಶಾಂತ್ ಶರ್ಮಾ ಮತ್ತು ಟಿ. ನಟರಾಜನ್ ಸೇರಿದ್ದಾರೆ. ಇದೀಗ ಅವರ ಪಟ್ಟಿಗೆ ಸ್ಪಿನ್ನರ್ ಸರಾಂಶ್ ಜೈನ್ ಸೇರಿಕೊಂಡಿದ್ದಾರೆ(PC-PTI).

ಸರಾಂಶ್ ಜೈನ್​ಗಿಂತ ಮೊದಲು, ನೋ-ಬಾಲ್ ಮೂಲಕ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸಿದ ಮೂವರು ಭಾರತೀಯ ಬೌಲರ್‌ಗಳಲ್ಲಿ ಕಪಿಲ್ ದೇವ್, ಇಶಾಂತ್ ಶರ್ಮಾ ಮತ್ತು ಟಿ. ನಟರಾಜನ್ ಸೇರಿದ್ದಾರೆ. ಇದೀಗ ಅವರ ಪಟ್ಟಿಗೆ ಸ್ಪಿನ್ನರ್ ಸರಾಂಶ್ ಜೈನ್ ಸೇರಿಕೊಂಡಿದ್ದಾರೆ(PC-PTI).

4 / 5
ಭಾರತ ಪರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಸರಾಂಶ್ ಜೈನ್. ಈ ಮೂಲಕ ಸರಾಂಶ್, ಸಬಾ ಕರೀಮ್ ಅವರ 26 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಸಬಾ ಕರೀಮ್ 32 ವರ್ಷ, 11 ತಿಂಗಳು ಮತ್ತು 28 ದಿನಗಳಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರೆ, ಸರಾಂಶ್ ಜೈನ್ 33 ವರ್ಷ, 4 ತಿಂಗಳು ಮತ್ತು 24 ದಿನಗಳಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು(PC-PTI).

ಭಾರತ ಪರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಸರಾಂಶ್ ಜೈನ್. ಈ ಮೂಲಕ ಸರಾಂಶ್, ಸಬಾ ಕರೀಮ್ ಅವರ 26 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಸಬಾ ಕರೀಮ್ 32 ವರ್ಷ, 11 ತಿಂಗಳು ಮತ್ತು 28 ದಿನಗಳಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರೆ, ಸರಾಂಶ್ ಜೈನ್ 33 ವರ್ಷ, 4 ತಿಂಗಳು ಮತ್ತು 24 ದಿನಗಳಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು(PC-PTI).

5 / 5
Follow Us
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ?
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ?
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
ಎಬಿವಿಪಿ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಪೊಲೀಸರ ದರ್ಪ
ಎಬಿವಿಪಿ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಪೊಲೀಸರ ದರ್ಪ
ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!
ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್
ಟಾಕ್ಸಿಕ್ ರಿಲೀಸ್​ಗೂ ಮುನ್ನ ವಿಶೇಷ ಪೂಜೆ ಸಲ್ಲಿಸಲು ಧರ್ಮಸ್ಥಳಕ್ಕೆ ಬಂದ ಯಶ್
ಟಾಕ್ಸಿಕ್ ರಿಲೀಸ್​ಗೂ ಮುನ್ನ ವಿಶೇಷ ಪೂಜೆ ಸಲ್ಲಿಸಲು ಧರ್ಮಸ್ಥಳಕ್ಕೆ ಬಂದ ಯಶ್
ಕೆಪಿಎಸ್‌ಸಿ ಕಚೇರಿ ಮೇಲೆ ಮತ್ತೆ ಸಿಐಡಿ ದಾಳಿ
ಕೆಪಿಎಸ್‌ಸಿ ಕಚೇರಿ ಮೇಲೆ ಮತ್ತೆ ಸಿಐಡಿ ದಾಳಿ