AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನಕ್ಕೆ ಯುದ್ಧದ ಭೀತಿ, ಆಸ್ಪತ್ರೆಯಲ್ಲಿ ಪಿಎಂ ಶೆಹಬಾಜ್, ಭಾರತದ ನಿರ್ಧಾರದಿಂದ ಬರಿದಾದ ಚೆನಾಬ್ ನದಿ; ಇಂದಿನ ಬೆಳವಣಿಗೆಗಳಿವು

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಮೇ 2ರವರೆಗೆ ಇಸ್ಲಾಮಾಬಾದ್, ಲಾಹೋರ್‌ನಲ್ಲಿ ಹಾರಾಟ ನಿಷೇಧ ವಲಯ ಘೋಷಿಸಲಾಗಿದೆ ಎಂದು ಪಾಕಿಸ್ತಾನ ಘೋಷಿಸಿದೆ. ಭಾರತ ಸರ್ಕಾರವು ಪಾಕಿಸ್ತಾನಿ ಪ್ರಜೆಗಳಿಗೆ ಈ ಹಿಂದೆ ಲಭ್ಯವಿದ್ದ 16 ವೀಸಾ ವಿಭಾಗಗಳಲ್ಲಿ 14 ವಿಭಾಗಗಳನ್ನು ರದ್ದುಗೊಳಿಸಿದೆ. ಪಾಕಿಸ್ತಾನದ ಜೀವನದಿಗಳಲ್ಲಿ ಒಂದಾದ ಚೆನಾಬ್ ನದಿ ಒಣಗಿ ಹೋಗುವ ಸ್ಥಿತಿಯಲ್ಲಿದೆ. ಸಿಂಧೂ ನದಿ ಬಳಿಕ ಪಶ್ಚಿಮದ ಮೂರು ನದಿಗಳಾದ ಚೆನಾಬ್ ಹಾಗೂ ಝೀಲಂ ಸೇರಿದಂತೆ ಉಳಿದ ಎರಡು ನದಿಗಳದ್ದೂ ಇದೇ ಸ್ಥಿತಿ ಎನ್ನಲಾಗಿದೆ. ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಳ್ಳುವ ಸಾಧ್ಯತೆ ಮತ್ತು ನಿರೀಕ್ಷೆ ಇರುವುದರಿಂದ ಕಂಗಾಲಾಗಿರುವ ಪಾಕಿಸ್ತಾನ ಭಾರತದೊಂದಿಗಿನ ತನ್ನ ಗಡಿಯಲ್ಲಿ ತನ್ನ ಸೇನೆಯನ್ನು ಸಜ್ಜುಗೊಳಿಸಲು ಪ್ರಾರಂಭಿಸಿದೆ. ಇಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಏನೇನಾಯ್ತು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಸುಷ್ಮಾ ಚಕ್ರೆ
|

Updated on:Apr 30, 2025 | 9:28 PM

ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಳ್ಳುವ ಸಾಧ್ಯತೆ ಮತ್ತು ನಿರೀಕ್ಷೆ ಇರುವುದರಿಂದ ಕಂಗಾಲಾಗಿರುವ ಪಾಕಿಸ್ತಾನ ಭಾರತದೊಂದಿಗಿನ ತನ್ನ ಗಡಿಯಲ್ಲಿ ತನ್ನ ಸೇನೆಯನ್ನು ಸಜ್ಜುಗೊಳಿಸಲು ಪ್ರಾರಂಭಿಸಿದೆ. ಹಾಗೇ, ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆ ತನ್ನ ನೌಕಾಪಡೆಯನ್ನು ಸನ್ನದ್ಧವಾಗಿರಿಸಿದೆ ಎಂದು ಮೂಲಗಳು ತಿಳಿಸಿವೆ. ಕಳೆದ 6 ದಿನಗಳಲ್ಲಿ ನಿಯಂತ್ರಣ ರೇಖೆ (LoC) ಮತ್ತು ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ಇದು ಸಂಭವಿಸಿದೆ. ಯಾವುದೇ ಸಂಭಾವ್ಯ ಭಾರತೀಯ ಚಲನೆಯನ್ನು ನಿಭಾಯಿಸಲು ಸಾಧ್ಯವಾಗುವಂತೆ ಪಾಕಿಸ್ತಾನಿ ಸೇನೆಯು ತನ್ನ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳು ಸೇರಿದಂತೆ ನೌಕಾಪಡೆಯ ಹಡಗುಗಳನ್ನು ಸಮುದ್ರದಲ್ಲಿನ ಆಯಾ ಬಂದರುಗಳಲ್ಲಿ ಇರಿಸಿದೆ.

ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಳ್ಳುವ ಸಾಧ್ಯತೆ ಮತ್ತು ನಿರೀಕ್ಷೆ ಇರುವುದರಿಂದ ಕಂಗಾಲಾಗಿರುವ ಪಾಕಿಸ್ತಾನ ಭಾರತದೊಂದಿಗಿನ ತನ್ನ ಗಡಿಯಲ್ಲಿ ತನ್ನ ಸೇನೆಯನ್ನು ಸಜ್ಜುಗೊಳಿಸಲು ಪ್ರಾರಂಭಿಸಿದೆ. ಹಾಗೇ, ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆ ತನ್ನ ನೌಕಾಪಡೆಯನ್ನು ಸನ್ನದ್ಧವಾಗಿರಿಸಿದೆ ಎಂದು ಮೂಲಗಳು ತಿಳಿಸಿವೆ. ಕಳೆದ 6 ದಿನಗಳಲ್ಲಿ ನಿಯಂತ್ರಣ ರೇಖೆ (LoC) ಮತ್ತು ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ಇದು ಸಂಭವಿಸಿದೆ. ಯಾವುದೇ ಸಂಭಾವ್ಯ ಭಾರತೀಯ ಚಲನೆಯನ್ನು ನಿಭಾಯಿಸಲು ಸಾಧ್ಯವಾಗುವಂತೆ ಪಾಕಿಸ್ತಾನಿ ಸೇನೆಯು ತನ್ನ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳು ಸೇರಿದಂತೆ ನೌಕಾಪಡೆಯ ಹಡಗುಗಳನ್ನು ಸಮುದ್ರದಲ್ಲಿನ ಆಯಾ ಬಂದರುಗಳಲ್ಲಿ ಇರಿಸಿದೆ.

1 / 11
ಪಹಲ್ಗಾಮ್ ದಾಳಿಯ ಕುರಿತು ಪಾಕಿಸ್ತಾನದ ಪ್ರಧಾನಿ ಹಾಗೂ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕರೆ ಮಾಡಿದ್ದಾರೆ.  ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರಿಗೆ ಸಚಿವ ಜೈಶಂಕರ್ ಧನ್ಯವಾದ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಘೋರ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದಾರೆ. ಜಾಗತಿಕ ನಾಯಕರು ಈ ತೀವ್ರ ಕ್ರಮವನ್ನು ಖಂಡಿಸುತ್ತಿದ್ದಾರೆ. ಭಯೋತ್ಪಾದಕ ದಾಳಿಯ ಕುರಿತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಕೂಡ ಕರೆ ಮಾಡಿದ್ದಾರೆ. ಪಹಲ್ಗಾಮ್ ಘಟನೆಯ ಬಗ್ಗೆ ತಟಸ್ಥ ತನಿಖೆ ನಡೆಸುವಂತೆ ಒತ್ತಾಯಿಸಿರುವುದಾಗಿ ಶೆಹಬಾಜ್ ಷರೀಫ್ ಅವರು ಹೇಳಿದ್ದಾರೆ.

ಪಹಲ್ಗಾಮ್ ದಾಳಿಯ ಕುರಿತು ಪಾಕಿಸ್ತಾನದ ಪ್ರಧಾನಿ ಹಾಗೂ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕರೆ ಮಾಡಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರಿಗೆ ಸಚಿವ ಜೈಶಂಕರ್ ಧನ್ಯವಾದ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಘೋರ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದಾರೆ. ಜಾಗತಿಕ ನಾಯಕರು ಈ ತೀವ್ರ ಕ್ರಮವನ್ನು ಖಂಡಿಸುತ್ತಿದ್ದಾರೆ. ಭಯೋತ್ಪಾದಕ ದಾಳಿಯ ಕುರಿತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಕೂಡ ಕರೆ ಮಾಡಿದ್ದಾರೆ. ಪಹಲ್ಗಾಮ್ ಘಟನೆಯ ಬಗ್ಗೆ ತಟಸ್ಥ ತನಿಖೆ ನಡೆಸುವಂತೆ ಒತ್ತಾಯಿಸಿರುವುದಾಗಿ ಶೆಹಬಾಜ್ ಷರೀಫ್ ಅವರು ಹೇಳಿದ್ದಾರೆ.

2 / 11
ಮೇ 2ರವರೆಗೆ ಇಸ್ಲಾಮಾಬಾದ್, ಲಾಹೋರ್‌ನಲ್ಲಿ ಹಾರಾಟ ನಿಷೇಧ ವಲಯ ಘೋಷಿಸಲಾಗಿದೆ ಎಂದು ಪಾಕಿಸ್ತಾನ ಘೋಷಿಸಿದೆ. 26 ಪ್ರವಾಸಿಗರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆ ಪಾಕಿಸ್ತಾನವು ಲಾಹೋರ್‌ನ ಇಸ್ಲಾಮಾಬಾದ್‌ನಲ್ಲಿ ಹಾರಾಟ ನಿಷೇಧ ವಲಯವನ್ನು ಘೋಷಿಸಿದೆ. ಮೇ 2ರವರೆಗೆ ಇಸ್ಲಾಮಾಬಾದ್ ಮತ್ತು ಲಾಹೋರ್‌ಗೆ ವಾಯುಪಡೆ ನೋಟಿಸ್ ವಿಧಿಸಲಾಗಿದ್ದು, ಆ ವಾಯುಪ್ರದೇಶದಲ್ಲಿ ಯಾವುದೇ ವಿಮಾನಗಳು ಕಾರ್ಯನಿರ್ವಹಿಸಲು ಅನುಮತಿಸಲಾಗುವುದಿಲ್ಲ ಎಂದು ಸೂಚಿಸುತ್ತದೆ.

ಮೇ 2ರವರೆಗೆ ಇಸ್ಲಾಮಾಬಾದ್, ಲಾಹೋರ್‌ನಲ್ಲಿ ಹಾರಾಟ ನಿಷೇಧ ವಲಯ ಘೋಷಿಸಲಾಗಿದೆ ಎಂದು ಪಾಕಿಸ್ತಾನ ಘೋಷಿಸಿದೆ. 26 ಪ್ರವಾಸಿಗರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆ ಪಾಕಿಸ್ತಾನವು ಲಾಹೋರ್‌ನ ಇಸ್ಲಾಮಾಬಾದ್‌ನಲ್ಲಿ ಹಾರಾಟ ನಿಷೇಧ ವಲಯವನ್ನು ಘೋಷಿಸಿದೆ. ಮೇ 2ರವರೆಗೆ ಇಸ್ಲಾಮಾಬಾದ್ ಮತ್ತು ಲಾಹೋರ್‌ಗೆ ವಾಯುಪಡೆ ನೋಟಿಸ್ ವಿಧಿಸಲಾಗಿದ್ದು, ಆ ವಾಯುಪ್ರದೇಶದಲ್ಲಿ ಯಾವುದೇ ವಿಮಾನಗಳು ಕಾರ್ಯನಿರ್ವಹಿಸಲು ಅನುಮತಿಸಲಾಗುವುದಿಲ್ಲ ಎಂದು ಸೂಚಿಸುತ್ತದೆ.

3 / 11
ಮುಂದಿನ 24 ರಿಂದ 36 ಗಂಟೆಗಳಲ್ಲಿ ಭಾರತ ಮಿಲಿಟರಿ ದಾಳಿಯನ್ನು ಯೋಜಿಸುತ್ತಿದೆ ಎಂದು ಸೂಚಿಸುವ "ವಿಶ್ವಾಸಾರ್ಹ ಗುಪ್ತಚರ"ವನ್ನು ತನ್ನ ಸರ್ಕಾರ ಹೊಂದಿದೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಹೇಳಿಕೊಂಡಿದ್ದರಿಂದ ಇಸ್ಲಾಮಾಬಾದ್‌ನಲ್ಲಿ ಭೀತಿ ಆವರಿಸಿದೆ. ಭಾರತವು ಮುಂದಿನ 24-36 ಗಂಟೆಗಳಲ್ಲಿ ಪಾಕಿಸ್ತಾನದ ಮೇಲೆ ದಾಳಿ ನಡೆಸಬಹುದು ಎಂದು ಪಾಕ್ ಸಚಿವ ಅತ್ತಾವುಲ್ಲಾ ತರಾರ್ ಹೇಳಿದ್ದಾರೆ.ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ಅಮಾಯಕರು ಪ್ರಾಣ ಕಳೆದುಕೊಂಡಿದ್ದರು.

ಮುಂದಿನ 24 ರಿಂದ 36 ಗಂಟೆಗಳಲ್ಲಿ ಭಾರತ ಮಿಲಿಟರಿ ದಾಳಿಯನ್ನು ಯೋಜಿಸುತ್ತಿದೆ ಎಂದು ಸೂಚಿಸುವ "ವಿಶ್ವಾಸಾರ್ಹ ಗುಪ್ತಚರ"ವನ್ನು ತನ್ನ ಸರ್ಕಾರ ಹೊಂದಿದೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಹೇಳಿಕೊಂಡಿದ್ದರಿಂದ ಇಸ್ಲಾಮಾಬಾದ್‌ನಲ್ಲಿ ಭೀತಿ ಆವರಿಸಿದೆ. ಭಾರತವು ಮುಂದಿನ 24-36 ಗಂಟೆಗಳಲ್ಲಿ ಪಾಕಿಸ್ತಾನದ ಮೇಲೆ ದಾಳಿ ನಡೆಸಬಹುದು ಎಂದು ಪಾಕ್ ಸಚಿವ ಅತ್ತಾವುಲ್ಲಾ ತರಾರ್ ಹೇಳಿದ್ದಾರೆ.ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ಅಮಾಯಕರು ಪ್ರಾಣ ಕಳೆದುಕೊಂಡಿದ್ದರು.

4 / 11
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಘೋಷಿಸಲಾದ ಕ್ರಮವಾದ ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ಭಾರತ ಅಮಾನತುಗೊಳಿಸಿದ್ದರ ಪರಿಣಾಮವಾಗಿ ಭಾರತೀಯ ಸೇನೆಯ ಮಿಲಿಟರಿ ಗುಪ್ತಚರ ಅನುಭವಿ ಕರ್ನಲ್ ವಿನಾಯಕ್ ಭಟ್ (ನಿವೃತ್ತ) ಹಂಚಿಕೊಂಡ ಸ್ಯಾಟಲೈಟ್ ಫೋಟೋಗಳು ಪಾಕಿಸ್ತಾನದ ಸಿಂಧೂ ನದಿಯ ಉಪನದಿಗಳಾದ ಚೆನಾಬ್ ನದಿಯಲ್ಲಿರುವ ಮರಾಲಾ ಹೆಡ್‌ವರ್ಕ್ಸ್‌ನಲ್ಲಿ ನೀರಿನ ಹರಿವಿನಲ್ಲಿ ತೀವ್ರ ಇಳಿಕೆ ಕಂಡುಬಂದಿದೆ ಎಂದು ಬಹಿರಂಗಪಡಿಸಿವೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಘೋಷಿಸಲಾದ ಕ್ರಮವಾದ ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ಭಾರತ ಅಮಾನತುಗೊಳಿಸಿದ್ದರ ಪರಿಣಾಮವಾಗಿ ಭಾರತೀಯ ಸೇನೆಯ ಮಿಲಿಟರಿ ಗುಪ್ತಚರ ಅನುಭವಿ ಕರ್ನಲ್ ವಿನಾಯಕ್ ಭಟ್ (ನಿವೃತ್ತ) ಹಂಚಿಕೊಂಡ ಸ್ಯಾಟಲೈಟ್ ಫೋಟೋಗಳು ಪಾಕಿಸ್ತಾನದ ಸಿಂಧೂ ನದಿಯ ಉಪನದಿಗಳಾದ ಚೆನಾಬ್ ನದಿಯಲ್ಲಿರುವ ಮರಾಲಾ ಹೆಡ್‌ವರ್ಕ್ಸ್‌ನಲ್ಲಿ ನೀರಿನ ಹರಿವಿನಲ್ಲಿ ತೀವ್ರ ಇಳಿಕೆ ಕಂಡುಬಂದಿದೆ ಎಂದು ಬಹಿರಂಗಪಡಿಸಿವೆ.

5 / 11
ಪಾಕಿಸ್ತಾನದ ಜೀವನದಿಗಳಲ್ಲಿ ಒಂದಾದ ಚೆನಾಬ್ ನದಿ ಒಣಗಿ ಹೋಗುವ ಸ್ಥಿತಿಯಲ್ಲಿದೆ. ಸಿಂಧೂ ನದಿ ಬಳಿಕ ಪಶ್ಚಿಮದ ಮೂರು ನದಿಗಳಾದ ಚೆನಾಬ್ ಹಾಗೂ ಝೀಲಂ ಸೇರಿದಂತೆ ಉಳಿದ ಎರಡು ನದಿಗಳದ್ದೂ ಇದೇ ಸ್ಥಿತಿ ಎನ್ನಲಾಗಿದೆ. ಸದ್ಯ ಪಾಕಿಸ್ತಾನದ ಪಂಜಾಬ್‌ನ ಸಿಯಾಲ್‌ ಕೋಟ್ಪಾಕಿಸ್ತಾನದಲ್ಲಿ ಹರಿಯುವ ಚೆನಾಬ್ ನದಿ ಬತ್ತಿ ಹೋಗುತ್ತಿದೆ. ಸಿಂಧೂ ನದಿ ಒಪ್ಪಂದವನ್ನು ರದ್ದುಪಡಿಸಿದ ನಂತರ ಪಾಕಿಸ್ತಾನದಲ್ಲಿ ನೀರಿನ ಅಭಾವ ಹೆಚ್ಚಾಗಿದೆ.

ಪಾಕಿಸ್ತಾನದ ಜೀವನದಿಗಳಲ್ಲಿ ಒಂದಾದ ಚೆನಾಬ್ ನದಿ ಒಣಗಿ ಹೋಗುವ ಸ್ಥಿತಿಯಲ್ಲಿದೆ. ಸಿಂಧೂ ನದಿ ಬಳಿಕ ಪಶ್ಚಿಮದ ಮೂರು ನದಿಗಳಾದ ಚೆನಾಬ್ ಹಾಗೂ ಝೀಲಂ ಸೇರಿದಂತೆ ಉಳಿದ ಎರಡು ನದಿಗಳದ್ದೂ ಇದೇ ಸ್ಥಿತಿ ಎನ್ನಲಾಗಿದೆ. ಸದ್ಯ ಪಾಕಿಸ್ತಾನದ ಪಂಜಾಬ್‌ನ ಸಿಯಾಲ್‌ ಕೋಟ್ಪಾಕಿಸ್ತಾನದಲ್ಲಿ ಹರಿಯುವ ಚೆನಾಬ್ ನದಿ ಬತ್ತಿ ಹೋಗುತ್ತಿದೆ. ಸಿಂಧೂ ನದಿ ಒಪ್ಪಂದವನ್ನು ರದ್ದುಪಡಿಸಿದ ನಂತರ ಪಾಕಿಸ್ತಾನದಲ್ಲಿ ನೀರಿನ ಅಭಾವ ಹೆಚ್ಚಾಗಿದೆ.

6 / 11
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಸೇನಾ ಮುಖ್ಯಸ್ಥರು ಇಂದು ಭೇಟಿಯಾಗಿದ್ದಾರೆ. ಭೂಸೇನೆ, ವಾಯುಪಡೆ, ನೌಕಾಪಡೆ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಕೇಂದ್ರ ಸಚಿವ ಎಸ್‌.ಜೈಶಂಕರ್‌, ಎನ್‌ಎಸ್‌ಎ ಅಜಿತ್ ದೋವಲ್‌ ಉಪಸ್ಥಿತರಿದ್ದರು.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಸೇನಾ ಮುಖ್ಯಸ್ಥರು ಇಂದು ಭೇಟಿಯಾಗಿದ್ದಾರೆ. ಭೂಸೇನೆ, ವಾಯುಪಡೆ, ನೌಕಾಪಡೆ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಕೇಂದ್ರ ಸಚಿವ ಎಸ್‌.ಜೈಶಂಕರ್‌, ಎನ್‌ಎಸ್‌ಎ ಅಜಿತ್ ದೋವಲ್‌ ಉಪಸ್ಥಿತರಿದ್ದರು.

7 / 11
ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆಯಿಂದಾಗಿರುವ ಅಪ್ರಚೋದಿತ ಉಲ್ಲಂಘನೆಗಳ ವಿರುದ್ಧ ಭಾರತ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿ ಉದ್ದಕ್ಕೂ ಉದ್ವಿಗ್ನತೆ ಹೆಚ್ಚಿದೆ, ಅಲ್ಲಿ ಪಾಕಿಸ್ತಾನದ ಪದೇ ಪದೇ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಪಡೆಗಳು ಬಲವಾದ ಪ್ರತೀಕಾರದ ಪ್ರತಿಕ್ರಿಯೆಯನ್ನು ನೀಡಿವೆ. ಇದರ ನಂತರ, ಪಾಕಿಸ್ತಾನಿ ಸೈನಿಕರು ಹಲವಾರು ಪೋಸ್ಟ್‌ಗಳನ್ನು ತೆಗೆದುಹಾಕಿ, ಧ್ವಜಗಳನ್ನು ತೆಗೆದುಹಾಕಿದ ಬಗ್ಗೆ ವರದಿಯಾಗಿದೆ.

ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆಯಿಂದಾಗಿರುವ ಅಪ್ರಚೋದಿತ ಉಲ್ಲಂಘನೆಗಳ ವಿರುದ್ಧ ಭಾರತ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿ ಉದ್ದಕ್ಕೂ ಉದ್ವಿಗ್ನತೆ ಹೆಚ್ಚಿದೆ, ಅಲ್ಲಿ ಪಾಕಿಸ್ತಾನದ ಪದೇ ಪದೇ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಪಡೆಗಳು ಬಲವಾದ ಪ್ರತೀಕಾರದ ಪ್ರತಿಕ್ರಿಯೆಯನ್ನು ನೀಡಿವೆ. ಇದರ ನಂತರ, ಪಾಕಿಸ್ತಾನಿ ಸೈನಿಕರು ಹಲವಾರು ಪೋಸ್ಟ್‌ಗಳನ್ನು ತೆಗೆದುಹಾಕಿ, ಧ್ವಜಗಳನ್ನು ತೆಗೆದುಹಾಕಿದ ಬಗ್ಗೆ ವರದಿಯಾಗಿದೆ.

8 / 11
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಬರೆದ ಪತ್ರದಲ್ಲಿ, ಲೆಫ್ಟಿನೆಂಟ್ ಜನರಲ್ ಉಮರ್ ಅಹ್ಮದ್ ಬುಖಾರಿ ಅವರು ಕಳೆದ 72 ಗಂಟೆಗಳಲ್ಲಿ 250 ಅಧಿಕಾರಿಗಳು ಸೇರಿದಂತೆ 1,450 ಸೈನಿಕರು ರಾಜೀನಾಮೆ ನೀಡಿದ್ದಾರೆ. ಪಹಲ್ಗಾಮ್ ದಾಳಿಯ ನಂತರ, ಸುಮಾರು 5,000 ಸೈನಿಕರು ಮತ್ತು ಅಧಿಕಾರಿಗಳು ಪಾಕಿಸ್ತಾನಿ ಸೇನೆಯನ್ನು ತೊರೆದಿದ್ದಾರೆ. ರಾಜೀನಾಮೆಗಳಲ್ಲಿ 12 ನೇ ಕಾರ್ಪ್ಸ್ ಕ್ವೆಟ್ಟಾದಿಂದ 520, ಫೋರ್ಸ್ ಕಮಾಂಡ್ ಉತ್ತರ ಪ್ರದೇಶಗಳಿಂದ 380 ಮತ್ತು ಫಸ್ಟ್ ಕಾರ್ಪ್ಸ್ ಮಂಗ್ಲಾದಿಂದ 550 ಸೇರಿವೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಬರೆದ ಪತ್ರದಲ್ಲಿ, ಲೆಫ್ಟಿನೆಂಟ್ ಜನರಲ್ ಉಮರ್ ಅಹ್ಮದ್ ಬುಖಾರಿ ಅವರು ಕಳೆದ 72 ಗಂಟೆಗಳಲ್ಲಿ 250 ಅಧಿಕಾರಿಗಳು ಸೇರಿದಂತೆ 1,450 ಸೈನಿಕರು ರಾಜೀನಾಮೆ ನೀಡಿದ್ದಾರೆ. ಪಹಲ್ಗಾಮ್ ದಾಳಿಯ ನಂತರ, ಸುಮಾರು 5,000 ಸೈನಿಕರು ಮತ್ತು ಅಧಿಕಾರಿಗಳು ಪಾಕಿಸ್ತಾನಿ ಸೇನೆಯನ್ನು ತೊರೆದಿದ್ದಾರೆ. ರಾಜೀನಾಮೆಗಳಲ್ಲಿ 12 ನೇ ಕಾರ್ಪ್ಸ್ ಕ್ವೆಟ್ಟಾದಿಂದ 520, ಫೋರ್ಸ್ ಕಮಾಂಡ್ ಉತ್ತರ ಪ್ರದೇಶಗಳಿಂದ 380 ಮತ್ತು ಫಸ್ಟ್ ಕಾರ್ಪ್ಸ್ ಮಂಗ್ಲಾದಿಂದ 550 ಸೇರಿವೆ.

9 / 11
ಪಾಕಿಸ್ತಾನ ಪ್ರಧಾನಿ ಶೆಹಬಾಜ್​ ಷರೀಫ್ ಅವರಿ​ಗೆ ಅನಾರೋಗ್ಯ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಾಕಿಸ್ತಾನಕ್ಕೆ ಭಾರತವು ಒಂದೆರಡು ದಿನಗಳಲ್ಲಿ ದಾಳಿ ಮಾಡಬಹುದು ಎನ್ನುವ ಭಯ ಕಾಡುತ್ತಲೇ ಇದೆ. ಈ ಸಮಯದಲ್ಲಿ ಪಾಕ್ ಪ್ರಧಾನಿ ಆರೋಗ್ಯ ಕೆಟ್ಟಿರುವುದು ಇದಕ್ಕೂ ಸಂಬಂಧವಿದೆಯೇ? ಎನ್ನುವ ಅನುಮಾನ ಕಾಡಿದೆ. ಎಲ್‌ಒಸಿಯಲ್ಲಿನ ಉದ್ವಿಗ್ನ ವಾತಾವರಣವನ್ನು ನೋಡಿ ಪಾಕಿಸ್ತಾನಿ ಪ್ರಧಾನಿ ಭಯಭೀತರಾಗಿದ್ದಾರೆಂದು ತೋರುತ್ತದೆ. ಅವರ ರಹಸ್ಯ ದಾಖಲೆಗಳು ಸೋರಿಕೆಯಾಗಿವೆ.

ಪಾಕಿಸ್ತಾನ ಪ್ರಧಾನಿ ಶೆಹಬಾಜ್​ ಷರೀಫ್ ಅವರಿ​ಗೆ ಅನಾರೋಗ್ಯ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಾಕಿಸ್ತಾನಕ್ಕೆ ಭಾರತವು ಒಂದೆರಡು ದಿನಗಳಲ್ಲಿ ದಾಳಿ ಮಾಡಬಹುದು ಎನ್ನುವ ಭಯ ಕಾಡುತ್ತಲೇ ಇದೆ. ಈ ಸಮಯದಲ್ಲಿ ಪಾಕ್ ಪ್ರಧಾನಿ ಆರೋಗ್ಯ ಕೆಟ್ಟಿರುವುದು ಇದಕ್ಕೂ ಸಂಬಂಧವಿದೆಯೇ? ಎನ್ನುವ ಅನುಮಾನ ಕಾಡಿದೆ. ಎಲ್‌ಒಸಿಯಲ್ಲಿನ ಉದ್ವಿಗ್ನ ವಾತಾವರಣವನ್ನು ನೋಡಿ ಪಾಕಿಸ್ತಾನಿ ಪ್ರಧಾನಿ ಭಯಭೀತರಾಗಿದ್ದಾರೆಂದು ತೋರುತ್ತದೆ. ಅವರ ರಹಸ್ಯ ದಾಖಲೆಗಳು ಸೋರಿಕೆಯಾಗಿವೆ.

10 / 11
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ 26 ನಾಗರಿಕರ ಪ್ರಾಣವನ್ನು ಬಲಿ ಪಡೆದ ವಿನಾಶಕಾರಿ ಭಯೋತ್ಪಾದಕ ದಾಳಿಯ ನಂತರ, ಭಾರತ ಸರ್ಕಾರವು ಪಾಕಿಸ್ತಾನಿ ಪ್ರಜೆಗಳಿಗೆ ಈ ಹಿಂದೆ ಲಭ್ಯವಿದ್ದ 16 ವೀಸಾ ವಿಭಾಗಗಳಲ್ಲಿ 14 ವಿಭಾಗಗಳನ್ನು ರದ್ದುಗೊಳಿಸಿದೆ. ಉಗ್ರರ ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾಗಿದೆ ಎಂಬ ಆರೋಪದ ಮೇಲೆ ಹೆಚ್ಚುತ್ತಿರುವ ಪುರಾವೆಗಳ ಹಿನ್ನೆಲೆಯಲ್ಲಿ ಭಾರತದ ಕಠಿಣ ನಿಲುವಾಗಿ ಈ ಕ್ರಮವನ್ನು ನೋಡಲಾಗಿದೆ. ವಿದೇಶಾಂಗ ಸಚಿವಾಲಯವು ಉಳಿದ ಎರಡು ವೀಸಾ ಪ್ರಕಾರಗಳಲ್ಲಿ ಒಂದರ ಸ್ಥಿತಿಯನ್ನು ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ. ಇದು ಮತ್ತಷ್ಟು ರಾಜತಾಂತ್ರಿಕ ಬಿಗಿಗೊಳಿಸುವ ಸಾಧ್ಯತೆಯನ್ನು ಸೂಚಿಸುತ್ತದೆ. ಭಾರತದೊಳಗೆ ಅಕ್ರಮವಾಗಿ ವಾಸಿಸುವ ಪಾಕಿಸ್ತಾನಿ ಪ್ರಜೆಗಳ ವಿರುದ್ಧ ದೃಢ ಕ್ರಮ ಕೈಗೊಳ್ಳುವಂತೆ ದೇಶಾದ್ಯಂತ ಭದ್ರತಾ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ 26 ನಾಗರಿಕರ ಪ್ರಾಣವನ್ನು ಬಲಿ ಪಡೆದ ವಿನಾಶಕಾರಿ ಭಯೋತ್ಪಾದಕ ದಾಳಿಯ ನಂತರ, ಭಾರತ ಸರ್ಕಾರವು ಪಾಕಿಸ್ತಾನಿ ಪ್ರಜೆಗಳಿಗೆ ಈ ಹಿಂದೆ ಲಭ್ಯವಿದ್ದ 16 ವೀಸಾ ವಿಭಾಗಗಳಲ್ಲಿ 14 ವಿಭಾಗಗಳನ್ನು ರದ್ದುಗೊಳಿಸಿದೆ. ಉಗ್ರರ ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾಗಿದೆ ಎಂಬ ಆರೋಪದ ಮೇಲೆ ಹೆಚ್ಚುತ್ತಿರುವ ಪುರಾವೆಗಳ ಹಿನ್ನೆಲೆಯಲ್ಲಿ ಭಾರತದ ಕಠಿಣ ನಿಲುವಾಗಿ ಈ ಕ್ರಮವನ್ನು ನೋಡಲಾಗಿದೆ. ವಿದೇಶಾಂಗ ಸಚಿವಾಲಯವು ಉಳಿದ ಎರಡು ವೀಸಾ ಪ್ರಕಾರಗಳಲ್ಲಿ ಒಂದರ ಸ್ಥಿತಿಯನ್ನು ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ. ಇದು ಮತ್ತಷ್ಟು ರಾಜತಾಂತ್ರಿಕ ಬಿಗಿಗೊಳಿಸುವ ಸಾಧ್ಯತೆಯನ್ನು ಸೂಚಿಸುತ್ತದೆ. ಭಾರತದೊಳಗೆ ಅಕ್ರಮವಾಗಿ ವಾಸಿಸುವ ಪಾಕಿಸ್ತಾನಿ ಪ್ರಜೆಗಳ ವಿರುದ್ಧ ದೃಢ ಕ್ರಮ ಕೈಗೊಳ್ಳುವಂತೆ ದೇಶಾದ್ಯಂತ ಭದ್ರತಾ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

11 / 11

Published On - 9:13 pm, Wed, 30 April 25

Follow us
ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?