AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲ ರೈಟ್ ಆಫ್ ಆಗಿದೆ ಎಂದು ನಿರಾಳರಾಗಬೇಡಿ; ಬ್ಯಾಂಕ್​ಗಳು ಮತ್ತೆಯೂ ಮನೆ ಬಾಗಿಲಿಗೆ ಬರಬಹುದು!

ಸಾಲ ಮನ್ನಾ ಮತ್ತು ಸಾಲದ ರೈಟ್ ಆಫ್​ ಎಂಬುದು ಸರ್ಕಾರದ ಮಟ್ಟದಲ್ಲಿ ಕೈಗೊಳ್ಳುವ ಮಹತ್ವದ ತೀರ್ಮಾನಗಳಾಗಿವೆ. ಆದರೆ, ಇವೆರಡರ ನಡುವೆ ವ್ಯತ್ಯಾಸವಿದೆ. ಸಾಲ ಮನ್ನಾ ಮತ್ತು ಸಾಲದ ರೈಟ್ ಆಫ್ ನಡುವಣ ಪ್ರಮುಖ ವ್ಯತ್ಯಾಸವನ್ನು ಇಲ್ಲಿ ನೀಡಲಾಗಿದೆ.

TV9 Web
| Edited By: |

Updated on: Jan 09, 2023 | 6:12 PM

Share
Know Loan write off and how it is Different from loan waiver in Kannada

ಸಾಮಾನ್ಯವಾಗಿ ಚುನಾವಣೆ ಸಮೀಪಿಸಿದಾಗ ರಾಜಕಾರಣಿಗಳಿಂದ ಸಾಲ ಮನ್ನಾ ಭರವಸೆಗಳ ಮಹಾಪೂರವೇ ಹರಿದು ಬರುತ್ತದೆ. ಅದೇ ರೀತಿ, ಸಂಸತ್​ ಅಧಿವೇಶನಗಳ ಸಂದರ್ಭದಲ್ಲಿ ನಿರ್ದಿಷ್ಟ ಮೊತ್ತದ ಸಾಲವನ್ನು ರೈಟ್ ಆಫರ್ (ಬರ್ಖಾಸ್ತು) ಮಾಡಲಾಗಿದೆ ಎಂಬ ಮಾಹಿತಿಯನ್ನು ಸರ್ಕಾರ ನೀಡುವುದು ವರದಿಯಾಗುತ್ತಿರುತ್ತದೆ.

1 / 8
Know Loan write off and how it is Different from loan waiver in Kannada

ಕಳೆದ ಐದು ವರ್ಷಗಳಲ್ಲಿ 10,09,511 ಕೋಟಿ ರೂ. ಮೌಲ್ಯದ ಸಾಲವನ್ನು ದೇಶದ ಪ್ರಮುಖ ಬ್ಯಾಂಕ್​ಗಳು ರೈಟ್​ ಆಫ್ ಮಾಡಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಸಂಸತ್​​ ಅಧಿವೇಶನದಲ್ಲಿ ತಿಳಿಸಿದ್ದರು.

2 / 8
Know Loan write off and how it is Different from loan waiver in Kannada

ಆದರೆ, ಸಾಲ ಮನ್ನಾ ಮತ್ತು ಸಾಲದ ರೈಟ್​ ಆಫ್ ಮಾಡುವುದಕ್ಕೆ ವ್ಯತ್ಯಾಸವಿದೆ. ಸಾಲ ಮನ್ನಾ ಎಂದರೆ ಸಾಲ ಪಡೆದ ವ್ಯಕ್ತಿಯೊಬ್ಬ ಅದನ್ನು ಕಟ್ಟಬೇಕಾದ ಅಗತ್ಯವಿಲ್ಲ. ಮನ್ನಾ ಆದ ಸಾಲಕ್ಕೆ ಸಾಲಗಾರ ನಂತರ ಜವಾಬ್ದಾರನಾಗಿರುವುದಿಲ್ಲ. ಬ್ಯಾಂಕ್​ಗಳಿಗೆ ಅದು ಆರ್ಥಿಕ ಹೊರೆಯಾಗಿ ಪರಿಣಮಿಸುತ್ತದೆ.

3 / 8
Know Loan write off and how it is Different from loan waiver in Kannada

ಸಾಮಾನ್ಯವಾಗಿ ಕೃಷಿ ಸಾಲಗಳನ್ನು ಮನ್ನಾ ಮಾಡಿರುವ ಹಲವು ನಿದರ್ಶನಗಳು ನಮ್ಮ ಮುಂದಿವೆ. ಸರ್ಕಾರಗಳು ಈ ವಿಚಾರವಾಗಿ ನಿರ್ಧಾರ ಕೈಗೊಂಡು ನಂತರ ಬ್ಯಾಂಕ್​ಗಳಿಗೆ ಸೂಚನೆ ನೀಡುತ್ತವೆ. ಅದರಂತೆ ಬ್ಯಾಂಕ್​ಗಳು ತೀರ್ಮಾನ ಕೈಗೊಳ್ಳುತ್ತವೆ. ಕೃಷಿ ಸಾಲ ಮನ್ನಾದಂಥ ಸಂದರ್ಭಗಳಲ್ಲಿ ಹಲವು ಷರತ್ತುಗಳನ್ನು ವಿಧಿಸಿರುವುದನ್ನೂ ನೀವು ಗಮನಿಸಿರಬಹುದು.

4 / 8
Know Loan write off and how it is Different from loan waiver in Kannada

ದೇಶದಲ್ಲಿ ಉದ್ಯಮ ಚಟುವಟಿಕೆಗಳನ್ನು ಹೆಚ್ಚಿಸಲು, ಉದ್ಯೋಗಾವಕಾಶ ಸೃಷ್ಟಿ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಗಳು ಕಾರ್ಪೊರೇಟ್ ಸಾಲಗಳ ಮರು ಪಾವತಿಗೆ ವಿನಾಯಿತಿ ನೀಡಿದ ಅನೇಕ ನಿದರ್ಶನಗಳೂ ನಮ್ಮ ಮುಂದಿವೆ. ಆದರೆ ಸಾಲದ ರೈಟ್ ಆಫ್ ಎಂದರೆ ಈ ರೀತಿಯದ್ದಲ್ಲ.

5 / 8
Know Loan write off and how it is Different from loan waiver in Kannada

ಸಾಲದ ರೈಟ್ ಆಫ್​ ಎಂಬುದು ಬ್ಯಾಂಕ್​ಗಳ ಬ್ಯಾಲೆನ್ಸ್​​ಶೀಟ್​ ಅನ್ನು ಸುಸ್ಥಿತಿಯಲ್ಲಿಡುವ ಒಂದು ವಿಧಾನವಷ್ಟೆ. ಮರುಪಾವತಿಯಾಗದ ಸಾಲಗಳ ಹೊರೆಯಿಂದ ಬ್ಯಾಂಕ್​ ಬ್ಯಾಲೆನ್ಸ್​​ಶೀಟ್ ನಿರ್ವಹಣೆ ಕಷ್ಟಕರವಾಗಿ ಪರಿಣಮಿಸಿದಾಗ ಅವುಗಳ ಸುಗಮ ನಿರ್ವಹಣೆಗಾಗಿ ಬ್ಯಾಂಕ್​ಗಳು ಸಾಲವನ್ನು ರೈಟ್ ಆಫ್ ಮಾಡುತ್ತವೆ. ಅಂದರೆ ಬ್ಯಾಲೆನ್ಸ್​ಶೀಟ್​​ ಅನ್ನು ಕ್ಲಿಯರ್ ಮಾಡುತ್ತವೆ.

6 / 8
Know Loan write off and how it is Different from loan waiver in Kannada

ಬ್ಯಾಲೆನ್ಸ್ ಶೀಟ್ ಕ್ಲಿಯರ್ ಆದ ಮಾತ್ರಕ್ಕೆ ಸಾಲ ಪಡೆದ ವ್ಯಕ್ತಿಯಿಂದ ಅದನ್ನು ವಸೂಲಿ ಮಾಡಬಾರದು ಎಂದೇನೂ ಇಲ್ಲ. ಸಾಲದ ಮೊತ್ತ ಮರು ವಸೂಲಿ, ಅದಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ಮುಂದುವರಿಸಲು ಬ್ಯಾಂಕ್​ಗಳು ಸದಾ ಮುಕ್ತವಾಗಿರುತ್ತವೆ. ಬ್ಯಾಲೆನ್ಸ್​ ಶೀಟ್ ಕ್ಲಿಯರ್ ಮಾಡಿದ್ದರಿಂದ ಬ್ಯಾಂಕ್​ಗಳ ಅನುತ್ಪಾದಕ ಆಸ್ತಿಯ ಪ್ರಮಾಣದ ತೋರ್ಪಡಿಸುವಿಕೆಯಲ್ಲಿ ಮಾತ್ರ ವ್ಯತ್ಯಾಸವಾಗುತ್ತದೆ. ಇದಕ್ಕಾಗಿ ಬ್ಯಾಂಕ್​ಗಳು ಈ ಕ್ರಮ ಕೈಗೊಳ್ಳುತ್ತವೆ.

7 / 8
Know Loan write off and how it is Different from loan waiver in Kannada

ಸಾಲದ ರೈಟ್​ ಆಫ್​ನಿಂದ ಸಾಲಗಾರನಿಗೆ, ಜನಸಾಮಾನ್ಯರಿಗೆ ಯಾವುದೇ ಪ್ರಯೋಜನ ಇರುವುದಿಲ್ಲ. ಸಾಲ ಪಡೆದವರು ಅದನ್ನು ಮರು ಪಾವತಿಸುವ ಜವಾಬ್ದಾರಿಗೆ ಬದ್ಧರಾಗಿಯೇ ಇರಬೇಕಾಗುತ್ತದೆ. ಆದರೆ, ಸಾಲ ಮನ್ನಾದಲ್ಲಿ ಹೀಗಲ್ಲ. ಒಮ್ಮೆ ಮನ್ನಾ ಆಯ್ತೆಂದರೆ ಮತ್ತೆ ಮರು ಪಾವತಿಯ ಗೊಡವೆ ಇರುವುದಿಲ್ಲ.

8 / 8
Follow Us
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ