ಮಲ್ಲೇಶ್ವರಂನ ವೇಣುಗೋಪಾಲ ದೇವಸ್ಥಾನದಲ್ಲಿ ತೆಪ್ಪೋತ್ಸವ, ಅದ್ಧೂರಿ ಕೃಷ್ಣ ಜನ್ಮಾಷ್ಟಮಿ ಫೋಟೋಗಳು ಇಲ್ಲಿವೆ
ಇಂದು(ಆಗಸ್ಟ್ 22) ಮಲ್ಲೇಶ್ವರಂನ ವೇಣುಗೋಪಾಲ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನ ಆಯೋಜನೆ ಮಾಡಲಾಗಿತ್ತು. ಶ್ರೀ ಕೃಷ್ಣನಿಗೆ ವಿಜೃಂಭಣೆ ಪೂಜೆ ಮಾಡಿ ತೆಪ್ಪೋತ್ಸೋವ ನಡೆಸಲಾಯಿತು. ಅದರ ಸುಂದರ ಚಿತ್ರಗಳು ಇಲ್ಲಿವೆ.
Updated on:Aug 22, 2022 | 10:31 PM

ಇಂದು(ಆಗಸ್ಟ್ 22) ಮಲ್ಲೇಶ್ವರಂನ ವೇಣುಗೋಪಾಲ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನ ಆಯೋಜನೆ ಮಾಡಲಾಗಿತ್ತು. ಶ್ರೀ ಕೃಷ್ಣನಿಗೆ ವಿಜೃಂಭಣೆ ಪೂಜೆ ಮಾಡಿ ತೆಪ್ಪೋತ್ಸವ ನಡೆಸಲಾಯಿತು. ಅದರ ಸುಂದರ ಚಿತ್ರಗಳು ಇಲ್ಲಿವೆ.

ವೇಣುಗೋಪಾಲ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನ ಅದ್ಧೂರಿಯಾಗಿ ಮಾಡಲಾಗಿದೆ. ಈ ವೇಳೆ ಶ್ರೀ ಕೃಷ್ಣನ ತೆಪ್ಪೋತ್ಸವ ನೆರವೇರಿದ್ದು ಭಕ್ತರು ಈ ಸುಂದರ ವೈಭವವನ್ನು ಕಣ್ತುಂಬಿಕೊಂಡು ಪುನೀತರಾಗಿದ್ದಾರೆ.

ಇನ್ನು ಮಲ್ಲೇಶ್ವರದ ಶ್ರೀ ವೇಣುಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಸಚಿವ ಅಶ್ವಥ್ ನಾರಾಯಣ್ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದ್ರು.

ತೆಪ್ಪೋತ್ಸವದಲ್ಲಿ ಸಚಿವ ಅಶ್ವಥ್ ನಾರಾಯಣ್ ಭಾಗಿಯಾಗಿ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಮಾಡಿದ ಅವರು ಇಂದು ನೆಚ್ಚಿಬ ದೈವ ಶ್ರೀ ಕೃಷ್ಣ ತೆಪ್ಪೋತ್ಸೋವನ್ನ ವಿಜೃಂಭಣೆಯಿಂದ ಮಾಡಬೇಕು ಎನ್ನುವುದು ಭಕ್ತರ ಆಸೆಯಾಗಿತ್ತು. ಅದರ ಪೂರಕವಾಗಿ ಕಲ್ಯಾಣಿ ನಿರ್ಮಾಣ ಮಾಡಿ ಇಂದು ತೆಪ್ಪೋತ್ಸೋವ ಮಾಡಿರುವುದು ಕಂದು ಪುಣ್ಯ ಕಾರ್ಯ.

ಸಮಸ್ತ ಭಕ್ತದಿಗಳಿಗೆ ಹಾಗೂ ದೇವಸ್ಥಾನದ ಮುಖ್ಯ ಅರ್ಚಕರಿಗೆ ಹೃದಯ ಪೂರ್ವಕ ವಂದನೆಯನ್ನ ತಿಳಿಸುತ್ತೇನೆ. ಇದು ತುಂಬ ಅದ್ಬುತವಾದ ಕಾರ್ಯ ಆಗಿದ್ದು, ಯಾವುದೋ ಕಾಲದಲ್ಲಿದ್ದೀವಿ ಎನ್ನುವಂತೆ ಭಾಸವಾಗುತ್ತಿದೆ. ನಿಜಕ್ಕೂ ಶ್ಲಾಘನೀಯ. ನಾಡಿನ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ತಿಳಿಸಿದ್ರು.

ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು ಜನ್ಮಾಷ್ಟಮಿ, ಇದನ್ನು ಕೃಷ್ಣ ಜನ್ಮಾಷ್ಟಮಿ, ಗೋಕುಲಾಷ್ಟಮಿ, ಕೃಷ್ಣಾಷ್ಟಮಿ ಅಥವಾ ಶ್ರೀಜಯಂತಿ ಎಂದೂ ಕರೆಯಲಾಗುತ್ತದೆ, ಇದು ಕೃಷ್ಣನ ಜನ್ಮದಿನವನ್ನು ಸೂಚಿಸುತ್ತದೆ.

ಕೃಷ್ಣ ಜನ್ಮಾಷ್ಟಮಿಯನ್ನು ಭಾರತದಲ್ಲಿ ಭಾದ್ರಪದ (ಜುಲೈ-ಆಗಸ್ಟ್) ಮಾಸದ ಎಂಟನೇ ದಿನದಂದು ಗುರುತಿಸಲಾಗುತ್ತದೆ.
Published On - 10:28 pm, Mon, 22 August 22

TV9 Kannada
Read More




