- Kannada News Photo gallery Samantha kumbh 2023 Bhramhotsava 3rd day Anointing of 18 idols in Hyderabad details in kannada
Samantha kumbh 2023: ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ರಂಗಾರೆಡ್ಡಿ ಜಿಲ್ಲೆ, 18 ಮೂರ್ತಿಗಳಿಗೆ ಏಕಕಾಲದಲ್ಲಿ ನೆರವೇರಿದ ಅಭಿಷೇಕ
ಶ್ರೀ ರಾಮಾನುಜಾಚಾರ್ಯ-108 ದಿವ್ಯದೇಶ ಬ್ರಹ್ಮೋತ್ಸವದ ಅಂಗವಾಗಿ ಫೆ.4ರಂದು 18 ದಿವ್ಯದೇಶ ಮೂರ್ತಿಗಳಿಗೆ ಅಭಿಷೇಕ ನೆರವೇರಿತು. ಏಕಕಾಲದಲ್ಲಿ 18 ರೂಪಗಳಲ್ಲಿ ಅಭಿಷೇಕ ನಡೆದಿರುವುದು ಅಪರೂಪವಾಗಿದೆ.
Updated on:Feb 04, 2023 | 9:24 PM

ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಮುಚ್ಚಿಂತಲ್ನಲ್ಲಿ ನಡೆಯುತ್ತಿರುವ ಶ್ರೀ ರಾಮಾನುಜಾಚಾರ್ಯ-108 ದಿವ್ಯ ದೇಶ ಬ್ರಹ್ಮೋತ್ಸವದ ಮೂರನೇ ದಿನವಾದ ಇಂದು (ಫೆಬ್ರವರಿ 4) ಬೆಳಗ್ಗೆ 11 ಗಂಟೆಗೆ 18 ಮೂರ್ತಿಗಳಿಗೆ ಅಭಿಷೇಕ ಸೇವೆ ನಡೆಯಿತು.

ನಿನ್ನೆ (ಫೆ.3) ಗರುಡಸೇವೆ ನೆರವೇರಿಸಿದ 18 ದೈವಿಕ ಮೂರ್ತಿಗಳಿಗೆ ಶ್ರೀ ತ್ರಿದಂಡಿ ಶ್ರೀಮನ್ನಾರಾಯಣ ರಾಮಾನುಜ ಚಿನ್ನ ಜೀಯರ್ ಸ್ವಾಮೀಜಿ ನೇತೃತ್ವದಲ್ಲಿ ಅಭಿಷೇಕ ನೆರವೇರಿಸಲಾಯಿತು. ನಿನ್ನೆಯ ಯಾತ್ರೆಯ ಕಾರ್ಯ ಪೂರ್ಣಗೊಳ್ಳಲು ದೇವರಿಗೆ ಅಭಿಷೇಕ ಮತ್ತು ತಿರುಮಂಜನ ಮಾಡಲಾಗಿದೆ ಎಂದು ಚಿನ್ನ ಜೀಯರ್ ಸ್ವಾಮಿ ತಿಳಿಸಿದರು.

ಇನ್ನು ಇದೇ ವೇಳೆ ವಿಶೇಷ ಪೂಜೆ ಬಗ್ಗೆ ಮಾತನಾಡಿದ ಶ್ರೀ ತ್ರಿದಂಡಿ ಶ್ರೀಮನ್ನಾರಾಯಣ ರಾಮಾನುಜ ಚಿನ್ನ ಜೀಯರ್ ಸ್ವಾಮೀಜಿಯವರು ನಿನ್ನೆಯ ಯಾತ್ರೆಯ ಕಾರ್ಯ ಪೂರ್ಣಗೊಳ್ಳಲು ದೇವರಿಗೆ ತಿರುಮಂಜನ ಸೇವೆ ಮಾಡಲಾಗುತ್ತಿದೆ ಎಂದರು. ಈ ತಿರುಮಂಜನವನ್ನು ಪ್ರತ್ಯೇಕವಾಗಿ ನಡೆಸದೆ ಜಾಗತಿಕವಾಗಿ ನಡೆಸಲಾಗುತ್ತಿದೆ, ಸಾಮಾನ್ಯವಾಗಿ ಈ ಕಾರ್ಯಕ್ರಮ ನೋಡುವವರಿಗೆ ಹೊಸತನದಿಂದ ಕೂಡಿರುತ್ತದೆ ಎಂದರು.

ಒಂದೇ ಸ್ಥಳದಲ್ಲಿ ಶ್ರೀರಾಮಚಂದ್ರನ ಸಾನ್ನಿಧ್ಯ ಈವರೆಗೆ ಆಗಿರಲಿಲ್ಲ, ಏಕಕಾಲಕ್ಕೆ 18 ರೂಪಗಳಲ್ಲಿ ತಿರುಮಂಜನ ಮಾಡುವುದು ಅಪರೂಪ ಎಂದರು.

ಈ ಕ್ಷೇತ್ರದಲ್ಲಿ ಎಲ್ಲವೂ ನವನವೀನವಾಗಲಿದೆ. ತಿರುಮಂಜನದ ಅಂಗವಾಗಿ ಪೆರುಮಾಳ್ಗೆ ಮೊದಲು ಮೊಸರಿನಿಂದ ಸ್ನಾನ ಮಾಡಿಸಿ, ನಂತರ ಹಾಲು, ಎಣ್ಣೆ, ನೀರಿನಿಂದ ತಿರುಮಂಜನ ಮಾಡಲಾಯಿತು ಎಂದರು.

ಆಯುರ್ವೇದದಲ್ಲಿ ಪಂಚಕರ್ಮ ಮಾಡುವಾಗ ಹಾಲು, ಗಂಜಿ ಕೂಡ ಮಾಡುತ್ತೇವೆ ಎಂದು ಶ್ರೀ ತ್ರಿದಂಡಿ ಶ್ರೀಮನ್ನಾರಾಯಣ ರಾಮಾನುಜ ಚಿನ್ನ ಜೀಯರ್ ಸ್ವಾಮೀಜಿ ಹೇಳಿದರು. ವಿವಿಧ ರೀತಿಯ ಸ್ನಾನಗಳು ವಿಗ್ರಹಗಳಿಗೆ ಹೊಸ ಶಕ್ತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ನಿತ್ಯ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 5:45ಕ್ಕೆ ಶ್ರೀಗಳಿಗೆ ಸುಪ್ರಭಾತ ಸೇವೆ ನಡೆಯಿತು. ಬಳಿಕ ಚಿನ್ನಜೀಯರ್ ಅವರ ನೇತೃತ್ವದಲ್ಲಿ ಅಷ್ಟಾಕ್ಷರಿ ಪಠಣ ನಡೆಯಿತು.

ಭಕ್ತಾದಿಗಳೆಲ್ಲರೂ ಅರ್ಧ ಗಂಟೆ ಕಾಲ ಧ್ಯಾನ ಮಾಡಿದರು. ಅಷ್ಟಾಕ್ಷರಿ ಮಾಡುವ ಶಕ್ತಿಯನ್ನು ಭಗವಂತ ನಮಗೆ ಸದಾ ನೀಡಲಿ ಎಂದು ಚಿನ್ನಜಿಯಾರ್ ಹೇಳಿದರು.

ನಂತರ ಭಕ್ತರು ತೀರ್ಥ, ಪ್ರಸಾದ ಗೋಷ್ಠಿಯಲ್ಲಿ ಪಾಲ್ಗೊಂಡರು. ಚಿನ್ನಜೀಯರ್ ಸ್ವತಃ ಭಕ್ತರಿಗೆ ತೀರ್ಥವನ್ನು ನೀಡಿ ಆಶೀರ್ವದಿಸಿದರು.

ಬಳಿಕ ಸ್ವಾಮಿ ಗೋಪೂಜೆ ನೆರವೇರಿತು.

ಶ್ರೀ ರಾಮಾನುಜಾಚಾರ್ಯ ಸಮತಾ ಕುಂಭ-2023 ಬ್ರಹ್ಮೋತ್ಸವಕ್ಕೆ ಸಂಬಂಧಿಸಿದ ವಿಶೇಷ ಪೂಜೆಯ ಫೋಟೋಗಳು ಎಲ್ಲರನ್ನೂ ಆಕರ್ಷಿಸುತ್ತಿವೆ.

ಶ್ರೀ ರಾಮಾನುಜಾಚಾರ್ಯ ಸಮತಾ ಕುಂಭ-2023 ಬ್ರಹ್ಮೋತ್ಸವಕ್ಕೆ ಸಂಬಂಧಿಸಿದ ವಿಶೇಷ ಪೂಜೆಯ ಫೋಟೋಗಳು ಎಲ್ಲರನ್ನೂ ಆಕರ್ಷಿಸುತ್ತಿವೆ.

ಶ್ರೀ ರಾಮಾನುಜಾಚಾರ್ಯ ಸಮತಾ ಕುಂಭ-2023 ಬ್ರಹ್ಮೋತ್ಸವಕ್ಕೆ ಸಂಬಂಧಿಸಿದ ವಿಶೇಷ ಪೂಜೆಯ ಫೋಟೋಗಳು ಎಲ್ಲರನ್ನೂ ಆಕರ್ಷಿಸುತ್ತಿವೆ.

ಶ್ರೀ ರಾಮಾನುಜಾಚಾರ್ಯ ಸಮತಾ ಕುಂಭ-2023 ಬ್ರಹ್ಮೋತ್ಸವಕ್ಕೆ ಸಂಬಂಧಿಸಿದ ವಿಶೇಷ ಪೂಜೆಯ ಫೋಟೋಗಳು ಎಲ್ಲರನ್ನೂ ಆಕರ್ಷಿಸುತ್ತಿವೆ.

ಶ್ರೀ ರಾಮಾನುಜಾಚಾರ್ಯ ಸಮತಾ ಕುಂಭ-2023 ಬ್ರಹ್ಮೋತ್ಸವಕ್ಕೆ ಸಂಬಂಧಿಸಿದ ವಿಶೇಷ ಪೂಜೆಯ ಫೋಟೋಗಳು ಎಲ್ಲರನ್ನೂ ಆಕರ್ಷಿಸುತ್ತಿವೆ.
Published On - 9:23 pm, Sat, 4 February 23









