AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಒಟಿಟಿಗೆ ಬಂದಿವೆ 2 ಕನ್ನಡ ಸಿನಿಮಾ, ಅದರ ಜೊತೆಗೆ ಇನ್ನೊಂದಿಷ್ಟು

This week OTT Release: ಪ್ರತಿ ವಾರದಂತೆ ಈ ವಾರವೂ ಸಹ ಕೆಲ ಸಿನಿಮಾಗಳು, ಹೊಸ ವೆಬ್ ಸರಣಿಗಳು ಒಟಿಟಿಗೆ ಬಂದಿವೆ. ಈ ವಾರ ಎರಡು ಕನ್ನಡ ಸಿನಿಮಾಗಳು ಒಟಿಟಿಗೆ ಬಂದಿವೆ. ಅದರ ಜೊತೆಗೆ ಚಿತ್ರಮಂದಿರಗಳಲ್ಲಿ ಹಿಟ್ ಎನಿಸಿಕೊಂಡ, ಒಳ್ಳೆಯ ಸಿನಿಮಾಗಳೆಂದು ವಿಮರ್ಶಕರಿಂದ ಕರೆಸಿಕೊಂಡ ಕೆಲ ಪರಭಾಷೆ ಸಿನಿಮಾಗಳು ಸಹ ಒಟಿಟಿಗೆ ಲಗ್ಗೆ ಇಟ್ಟಿವೆ. ಈ ವಾರ ಒಟಿಟಿಗೆ ಬಂದ ಸಿನಿಮಾಗಳ ಪಟ್ಟಿ ಇಲ್ಲಿದೆ...

ಮಂಜುನಾಥ ಸಿ.
|

Updated on: Jun 28, 2025 | 5:36 PM

Share
‘ಆಪ್ ಕೈಸೆ ಹೋ’ ಹೆಸರು ನೋಡಿ ಹಿಂದಿ ಸಿನಿಮಾ ಎಂದುಕೊಂಡರೆ ತಪ್ಪು. ಇದೊಂದು ಮಲಯಾಳಂ ಸಿನಿಮಾ. ಹಾಸ್ಯಪ್ರಧಾನ ಕೌಟುಂಬಿಕ ಕತೆ ಹೊಂದಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಆಗಿದೆ. ಇದೀಗ ಸನ್​ನೆಕ್ಸ್ಟ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

‘ಆಪ್ ಕೈಸೆ ಹೋ’ ಹೆಸರು ನೋಡಿ ಹಿಂದಿ ಸಿನಿಮಾ ಎಂದುಕೊಂಡರೆ ತಪ್ಪು. ಇದೊಂದು ಮಲಯಾಳಂ ಸಿನಿಮಾ. ಹಾಸ್ಯಪ್ರಧಾನ ಕೌಟುಂಬಿಕ ಕತೆ ಹೊಂದಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಆಗಿದೆ. ಇದೀಗ ಸನ್​ನೆಕ್ಸ್ಟ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

1 / 7
ಹಾಲಿವುಡ್​ನ ಕಾಮಿಡಿ-ಥ್ರಿಲ್ಲರ್ ವೆಬ್ ಸರಣಿ ‘ಮಾಂಕ್’ನ ರೀಮೇಕ್ ಆಗಿರುವ ‘ಮಿಸ್ತ್ರಿ’ ವೆಬ್ ಸರಣಿ ಜಿಯೋ ಹಾಟ್​ಸ್ಟಾರ್​​ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಓಸಿಡಿ ಇರುವ ಪತ್ತೆಧಾರನೊಬ್ಬ ಹೇಗೆ ಕೇಸುಗಳನ್ನು ತನ್ನ ಚಾಕಚಕ್ಯತೆಯಿಂದ ಪತ್ತೆ ಹಚ್ಚುತ್ತಾನೆ ಎಂಬುದೇ ಕತೆ.

ಹಾಲಿವುಡ್​ನ ಕಾಮಿಡಿ-ಥ್ರಿಲ್ಲರ್ ವೆಬ್ ಸರಣಿ ‘ಮಾಂಕ್’ನ ರೀಮೇಕ್ ಆಗಿರುವ ‘ಮಿಸ್ತ್ರಿ’ ವೆಬ್ ಸರಣಿ ಜಿಯೋ ಹಾಟ್​ಸ್ಟಾರ್​​ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಓಸಿಡಿ ಇರುವ ಪತ್ತೆಧಾರನೊಬ್ಬ ಹೇಗೆ ಕೇಸುಗಳನ್ನು ತನ್ನ ಚಾಕಚಕ್ಯತೆಯಿಂದ ಪತ್ತೆ ಹಚ್ಚುತ್ತಾನೆ ಎಂಬುದೇ ಕತೆ.

2 / 7
ಅಂಥಾಲಜಿ ಕ್ರೈಂ ಥ್ರಿಲ್ಲರ್ ಕತೆ ಹೊಂದಿರುವ ‘ನಿಮ್ಮ ವಸ್ತುಗಳಿಗೆ ನೀವೆ ಜವಾಬ್ದಾರರು’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಕೇಶವಮೂರ್ತಿ ನಿರ್ದೇಶನ ಮಾಡಿರುವ ಈ ಸಿನಿಮಾನಲ್ಲಿ ದಿಲೀಪ್ ರಾಜ್ ಸೇರಿದಂತೆ ಕೆಲ ಒಳ್ಳೆಯ ನಟ-ನಟಿಯರು ನಟಿಸಿದ್ದಾರೆ. ಸಿನಿಮಾ ಸನ್ ನೆಕ್ಸ್ಟ್ ಒಟಿಟಿಯಲ್ಲಿ ಸ್ಟ್ರೀಂ ಆಗುತ್ತಿದೆ.

ಅಂಥಾಲಜಿ ಕ್ರೈಂ ಥ್ರಿಲ್ಲರ್ ಕತೆ ಹೊಂದಿರುವ ‘ನಿಮ್ಮ ವಸ್ತುಗಳಿಗೆ ನೀವೆ ಜವಾಬ್ದಾರರು’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಕೇಶವಮೂರ್ತಿ ನಿರ್ದೇಶನ ಮಾಡಿರುವ ಈ ಸಿನಿಮಾನಲ್ಲಿ ದಿಲೀಪ್ ರಾಜ್ ಸೇರಿದಂತೆ ಕೆಲ ಒಳ್ಳೆಯ ನಟ-ನಟಿಯರು ನಟಿಸಿದ್ದಾರೆ. ಸಿನಿಮಾ ಸನ್ ನೆಕ್ಸ್ಟ್ ಒಟಿಟಿಯಲ್ಲಿ ಸ್ಟ್ರೀಂ ಆಗುತ್ತಿದೆ.

3 / 7
ಉತ್ತರ ಕರ್ನಾಟಕದ ಕೆಲ ಉದಯೋನ್ಮುಖರು ಸೇರಿ ನಿರ್ಮಿಸಿರುವ ‘ಪಪ್ಪಿ’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಗುಳೆ ಬರುವ ಕುಟುಂಬ. ಆ ಕುಟುಂಬದ ಬಾಲಕನಿಗೆ ಸಿಗುವ ನಾಯಿ. ಆ ನಾಯಿಯ ಹಿಂದಿನ ಕತೆ ಹೀಗೊಂದು ಆಸಕ್ತಿಕರ ಕತೆ ಸಿನಿಮಾನಲ್ಲಿದೆ. ಈ ಸಿನಿಮಾ ಪ್ರೈಂ ವಿಡಿಯೋನಲ್ಲಿ ಲಭ್ಯವಿದೆ.

ಉತ್ತರ ಕರ್ನಾಟಕದ ಕೆಲ ಉದಯೋನ್ಮುಖರು ಸೇರಿ ನಿರ್ಮಿಸಿರುವ ‘ಪಪ್ಪಿ’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಗುಳೆ ಬರುವ ಕುಟುಂಬ. ಆ ಕುಟುಂಬದ ಬಾಲಕನಿಗೆ ಸಿಗುವ ನಾಯಿ. ಆ ನಾಯಿಯ ಹಿಂದಿನ ಕತೆ ಹೀಗೊಂದು ಆಸಕ್ತಿಕರ ಕತೆ ಸಿನಿಮಾನಲ್ಲಿದೆ. ಈ ಸಿನಿಮಾ ಪ್ರೈಂ ವಿಡಿಯೋನಲ್ಲಿ ಲಭ್ಯವಿದೆ.

4 / 7
ಜಗತ್ತಿನಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ವೆಬ್ ಸರಣಿಗಳಲ್ಲಿ ಸ್ಕ್ವಿಡ್ ಗೇಮ್ಸ್ ಸಹ ಒಂದು. ಇದೀಗ ಇದೇ ವೆಬ್ ಸರಣಿಯ ಮೂರನೇ ಹಾಗೂ ಕೊನೆಯ ಸೀಸನ್ ಬಿಡುಗಡೆ ಆಗಿದೆ. ನೆಟ್​ಫ್ಲಿಕ್ಸ್​​ನಲ್ಲಿ ‘ಸ್ಕ್ವಿಡ್ ಗೇಮ್ಸ್ ಸೀಸನ್ 3’ ಇದೇ ವಾರದಿಂದ ಸ್ಟ್ರೀಮಿಂಗ್ ಆರಂಭಿಸಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ವೆಬ್ ಸರಣಿಗಳಲ್ಲಿ ಸ್ಕ್ವಿಡ್ ಗೇಮ್ಸ್ ಸಹ ಒಂದು. ಇದೀಗ ಇದೇ ವೆಬ್ ಸರಣಿಯ ಮೂರನೇ ಹಾಗೂ ಕೊನೆಯ ಸೀಸನ್ ಬಿಡುಗಡೆ ಆಗಿದೆ. ನೆಟ್​ಫ್ಲಿಕ್ಸ್​​ನಲ್ಲಿ ‘ಸ್ಕ್ವಿಡ್ ಗೇಮ್ಸ್ ಸೀಸನ್ 3’ ಇದೇ ವಾರದಿಂದ ಸ್ಟ್ರೀಮಿಂಗ್ ಆರಂಭಿಸಿದೆ.

5 / 7
ತೆಲುಗಿನಲ್ಲಿ ಇತ್ತೀಚೆಗೆ ವೆಬ್ ಸರಣಿಗಳು ಹಿಟ್ ಆಗುತ್ತಿವೆ. ಇದೀಗ ‘ವಿರಾಟಪಾಲೆಂ: ಪಿಸಿ ಮೀನಾ ರಿಪೋರ್ಟಿಂಗ್’ ಹೆಸರಿನ ವೆಬ್ ಸರಣಿ ಬಿಡುಗಡೆ ಆಗಿದೆ. ಹಾರರ್ ಮತ್ತು ಕ್ರೈಂ ಒಳಗೊಂಡಿರುವ ಈ ವೆಬ್ ಸರಣಿ ಜೀ5 ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ತೆಲುಗಿನಲ್ಲಿ ಇತ್ತೀಚೆಗೆ ವೆಬ್ ಸರಣಿಗಳು ಹಿಟ್ ಆಗುತ್ತಿವೆ. ಇದೀಗ ‘ವಿರಾಟಪಾಲೆಂ: ಪಿಸಿ ಮೀನಾ ರಿಪೋರ್ಟಿಂಗ್’ ಹೆಸರಿನ ವೆಬ್ ಸರಣಿ ಬಿಡುಗಡೆ ಆಗಿದೆ. ಹಾರರ್ ಮತ್ತು ಕ್ರೈಂ ಒಳಗೊಂಡಿರುವ ಈ ವೆಬ್ ಸರಣಿ ಜೀ5 ನಲ್ಲಿ ವೀಕ್ಷಣೆಗೆ ಲಭ್ಯವಿದೆ.

6 / 7
ಅಜಯ್ ದೇವಗನ್ ನಟನೆಯ ಬ್ಲಾಕ್ ಬಸ್ಟರ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ರೈಡ್’ ಈ ಸಿನಿಮಾದ ಎರಡನೇ ಭಾಗ ‘ರೈಡ್ 2’ ಕೆಲ ದಿನಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಯ್ತು. ರಿತೇಶ್ ದೇಶ್​ಮುಖ್, ಅಜಯ್ ದೇವಗನ್ ನಟನೆಯ ಈ ಸಿನಿಮಾ ನೆಟ್​ಫ್ಲಿಕ್ಸ್​​ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.

ಅಜಯ್ ದೇವಗನ್ ನಟನೆಯ ಬ್ಲಾಕ್ ಬಸ್ಟರ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ರೈಡ್’ ಈ ಸಿನಿಮಾದ ಎರಡನೇ ಭಾಗ ‘ರೈಡ್ 2’ ಕೆಲ ದಿನಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಯ್ತು. ರಿತೇಶ್ ದೇಶ್​ಮುಖ್, ಅಜಯ್ ದೇವಗನ್ ನಟನೆಯ ಈ ಸಿನಿಮಾ ನೆಟ್​ಫ್ಲಿಕ್ಸ್​​ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.

7 / 7
Follow Us
ಪುದುಚೇರಿಯಲ್ಲಿ ಸೀರೆಯುಟ್ಟು ಮತದಾರರನ್ನು ಸ್ವಾಗತಿಸಿದ ರೋಬೋಟ್ ನೀಲಾ
ಪುದುಚೇರಿಯಲ್ಲಿ ಸೀರೆಯುಟ್ಟು ಮತದಾರರನ್ನು ಸ್ವಾಗತಿಸಿದ ರೋಬೋಟ್ ನೀಲಾ
ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ: ತಪ್ಪಿದ ಭಾರಿ ಅನಾಹುತ
ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ: ತಪ್ಪಿದ ಭಾರಿ ಅನಾಹುತ
ವಿಜಯಪುರದಲ್ಲಿ ಮತ್ತೆ ಭೂಕಂಪನ ಅನುಭವ: ಆತಂಕಕ್ಕೊಳಗಾದ ಜನ
ವಿಜಯಪುರದಲ್ಲಿ ಮತ್ತೆ ಭೂಕಂಪನ ಅನುಭವ: ಆತಂಕಕ್ಕೊಳಗಾದ ಜನ
VIDEO: ನನ್ನಿಂದಾನೇ ಸೋತ್ವಿ... ಕಣ್ಣೀರಿಟ್ಟ ಮಿಲ್ಲರ್
VIDEO: ನನ್ನಿಂದಾನೇ ಸೋತ್ವಿ... ಕಣ್ಣೀರಿಟ್ಟ ಮಿಲ್ಲರ್
2009ರಿಂದ ನನ್ನ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದ ಎಂದ ಜಯರಾಂ ಕಾರ್ತಿಕ್
2009ರಿಂದ ನನ್ನ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದ ಎಂದ ಜಯರಾಂ ಕಾರ್ತಿಕ್
ಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿದ ಮತದಾರರು
ಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿದ ಮತದಾರರು
ವಿರುದ್ಧ ದಿಕ್ಕಿನಲ್ಲಿ ಬಂದು ಕಾರಿಗೆ ಡಿಕ್ಕಿ ಹೊಡೆದ ಕಲ್ಲಿದ್ದಲು ಟ್ರಕ್
ವಿರುದ್ಧ ದಿಕ್ಕಿನಲ್ಲಿ ಬಂದು ಕಾರಿಗೆ ಡಿಕ್ಕಿ ಹೊಡೆದ ಕಲ್ಲಿದ್ದಲು ಟ್ರಕ್
ಯಾವ ಸ್ಥಳಗಳಲ್ಲಿ ಏರು ಧ್ವನಿಯಲ್ಲಿ ಮಾತನಾಡುವುದು ಆಪತ್ತು ತರುತ್ತದೆ?
ಯಾವ ಸ್ಥಳಗಳಲ್ಲಿ ಏರು ಧ್ವನಿಯಲ್ಲಿ ಮಾತನಾಡುವುದು ಆಪತ್ತು ತರುತ್ತದೆ?
ಮಿಲ್ಲರ್ ಮಾಡಿದ ಒಂದು ತಪ್ಪಿನಿಂದಾಗಿ ಸೋತ ಡೆಲ್ಲಿ ಕ್ಯಾಪಿಟಲ್ಸ್
ಮಿಲ್ಲರ್ ಮಾಡಿದ ಒಂದು ತಪ್ಪಿನಿಂದಾಗಿ ಸೋತ ಡೆಲ್ಲಿ ಕ್ಯಾಪಿಟಲ್ಸ್
ಇಂದು ಈ ರಾಶಿಯವರಿಗೆ ವಸಂತ ಕಾಲ: ಎಲ್ಲವೂ ನೀವು ಹೇಳಿದಂತೆ ನಡೆಯುತ್ತದೆ
ಇಂದು ಈ ರಾಶಿಯವರಿಗೆ ವಸಂತ ಕಾಲ: ಎಲ್ಲವೂ ನೀವು ಹೇಳಿದಂತೆ ನಡೆಯುತ್ತದೆ