AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೊಮೆಟೊ ಹೊತ್ತು ಕೋಲಾರದಿಂದ ದೆಹಲಿಗೆ ಹೊರಟಿದ್ದ ಲಾರಿ ಪಲ್ಟಿ, ಕೆಂಪು ಸುಂದ್ರಿಗೆ ಪೊಲೀಸರಿಂದ ಬಿಗಿಬಂದೋಬಸ್ತ್

ಕಳೆದೊಂದು ತಿಂಗಳಿಂದ ಟೊಮೆಟೊ ದರ ರಾಕೆಟ್‌ ವೇಗದಲ್ಲಿ ಗಗನಕ್ಕೇರಿದೆ. ಇದು ರೈತರ ಪಾಲಿಗೆ ವರದಾನವಾಗಿದೆ. ಪ್ರತಿ ಸಲ ಟೊಮೆಟೊಗೆ ಸೂಕ್ತ ಬೆಲೆ ಇಲ್ಲದೇ ಟ್ರಾಕ್ಟರ್​ನಲ್ಲಿ ತುಂಬಿಕೊಂಡು ಬಂದು ರಸ್ತೆಗೆ ಸುರಿಯುತ್ತಿದ್ದ ರೈತರು, ಈ ಬಾರಿ ಟೆಮೆಟೋ ಬೆಳಯಲ್ಲಿ ಭರ್ಜರಿ ಲಾಭ ಕಾಣುತ್ತಿದ್ದಾರೆ. ಇನ್ನು ಚಿನ್ನದ ಬೆಲೆ ಬಂದಿದ್ದರಿಂದ ಟೆಮೆಟೊ ಖದೀಮರ ಹಾವಳಿ ಹಚ್ಚಾಗಿದೆ. ಇದರ ಮಧ್ಯೆ ಟೆಮೆಟೊ ತುಂಬಿಕೊಂಡು ಕೋಲಾರದಿಂದ ದೆಹಲಿಗೆ ತೆರಳುತ್ತಿದ್ದ ಲಾರಿ ಪಲ್ಟಿಯಾಗಿದೆ. ಬಿದ್ದಿರುವ ಟೆಮೆಟೊ ಲಾರಿಗೆ ಪೊಲೀಸರು ರಕ್ಷಣೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Jul 18, 2023 | 2:56 PM

Share
ಕೋಲಾರದಿಂದ ದೆಹಲಿಗೆ ತೆರಳುತ್ತಿದ್ದ ಟೊಮೆಟೊ ತುಂಬಿದ್ದ ಲಾರಿ, ತೆಲಂಗಾಣ ರಾಜ್ಯದ ಆದಿಲ್ ಬಾದ್ ಜಿಲ್ಲೆಯಲ್ಲಿ ಪಲ್ಟಿಯಾಗಿದೆ.

ಕೋಲಾರದಿಂದ ದೆಹಲಿಗೆ ತೆರಳುತ್ತಿದ್ದ ಟೊಮೆಟೊ ತುಂಬಿದ್ದ ಲಾರಿ, ತೆಲಂಗಾಣ ರಾಜ್ಯದ ಆದಿಲ್ ಬಾದ್ ಜಿಲ್ಲೆಯಲ್ಲಿ ಪಲ್ಟಿಯಾಗಿದೆ.

1 / 8
ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ತುಂಬಿಕೊಂಡು ದೆಹಲಿಗೆ ತೆರಳುತ್ತಿದ್ದ ಲಾರಿ,

ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ತುಂಬಿಕೊಂಡು ದೆಹಲಿಗೆ ತೆರಳುತ್ತಿದ್ದ ಲಾರಿ,

2 / 8
ತೆಲಂಗಾಣ ರಾಜ್ಯದ ಆದಿಲ್ ಬಾದ್ ಜಿಲ್ಲೆಯಲ್ಲಿ ಮುಗುಚಿ ಬಿದ್ದ ಲಾರಿ,

ತೆಲಂಗಾಣ ರಾಜ್ಯದ ಆದಿಲ್ ಬಾದ್ ಜಿಲ್ಲೆಯಲ್ಲಿ ಮುಗುಚಿ ಬಿದ್ದ ಲಾರಿ,

3 / 8
ಕೋಲಾರದಿಂದ ದೆಹಲಿಗೆ ತೆರಳುತ್ತಿದ್ದ ಟೆಮೆಟೊ ಹೊತ್ತ ಲಾರಿ ಪಲ್ಟಿಯಾಗಿದ್ದು, ಇದಕ್ಕೆ ಪೊಲೀಸರು ರಕ್ಷಣೆ ನೀಡಿದ್ದಾರೆ.

ಕೋಲಾರದಿಂದ ದೆಹಲಿಗೆ ತೆರಳುತ್ತಿದ್ದ ಟೆಮೆಟೊ ಹೊತ್ತ ಲಾರಿ ಪಲ್ಟಿಯಾಗಿದ್ದು, ಇದಕ್ಕೆ ಪೊಲೀಸರು ರಕ್ಷಣೆ ನೀಡಿದ್ದಾರೆ.

4 / 8
ಲಾರಿಗೆ ಪೊಲೀಸರು ರಕ್ಷಣೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ,

ಲಾರಿಗೆ ಪೊಲೀಸರು ರಕ್ಷಣೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ,

5 / 8
ಲಾರಿ ಮುಗುಚಿ ಬಿದ್ದಿದ್ದರಿಂದ ಟೊಮೆಟೊ ರಸ್ತೆತಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿವೆ.

ಲಾರಿ ಮುಗುಚಿ ಬಿದ್ದಿದ್ದರಿಂದ ಟೊಮೆಟೊ ರಸ್ತೆತಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿವೆ.

6 / 8
ಇನ್ನು ಕಳ್ಳರಿಂದ ರಕ್ಷಣೆ ನೀಡಲು ಮೂವರು ಪೊಲೀಸರನ್ನ ನಿಯೋಜಿಸಿದ ತೆಲಂಗಾಣ ಪೊಲೀಸರು.

ಇನ್ನು ಕಳ್ಳರಿಂದ ರಕ್ಷಣೆ ನೀಡಲು ಮೂವರು ಪೊಲೀಸರನ್ನ ನಿಯೋಜಿಸಿದ ತೆಲಂಗಾಣ ಪೊಲೀಸರು.

7 / 8
ಚಿನ್ನದ ಬೆಲೆ ಬಂದಿದ್ದರಿಂದ ಹೊಲದಲ್ಲಿರುವ ಟೊಮೆಟೊವನ್ನು ಕಳ್ಳರು ಬಿಡುತ್ತಿಲ್ಲ. ಹೀಗಾಗಿ ರೈತರು ಸಿಸಿಟಿವಿ ಇಟ್ಟಿರುವ ವರದಿಯಾಗಿದೆ.

ಚಿನ್ನದ ಬೆಲೆ ಬಂದಿದ್ದರಿಂದ ಹೊಲದಲ್ಲಿರುವ ಟೊಮೆಟೊವನ್ನು ಕಳ್ಳರು ಬಿಡುತ್ತಿಲ್ಲ. ಹೀಗಾಗಿ ರೈತರು ಸಿಸಿಟಿವಿ ಇಟ್ಟಿರುವ ವರದಿಯಾಗಿದೆ.

8 / 8
Rajendra Simha BL
Rajendra Simha BL

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More
Follow Us