AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Market Updates: ಗಳಿಕೆಯ ಓಟ ಮುಂದುವರಿಸಿದ ಷೇರುಪೇಟೆ; ಹೆಚ್ಚು ಲಾಭ ಯಾರಿಗೆ?

ಷೇರುಪೇಟೆಗಳಲ್ಲಿ ಕಳೆದ ಎರಡು ವಾರಗಳ ಗಳಿಕೆಯ ಟ್ರೆಂಡ್​ ಸೋಮವಾರವೂ ಮುಂದುವರಿದಿದೆ.

Stock Market Updates: ಗಳಿಕೆಯ ಓಟ ಮುಂದುವರಿಸಿದ ಷೇರುಪೇಟೆ; ಹೆಚ್ಚು ಲಾಭ ಯಾರಿಗೆ?
ಬಿಎಸ್​ಇ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on: Oct 31, 2022 | 4:30 PM

Share

ಮುಂಬೈ: ಷೇರುಪೇಟೆಗಳಲ್ಲಿ (Stock Market) ಕಳೆದ ಎರಡು ವಾರಗಳ ಗಳಿಕೆಯ ಟ್ರೆಂಡ್​ ಸೋಮವಾರವೂ ಮುಂದುವರಿದಿದೆ. ಬಿಎಸ್​ಇ ಸೆನ್ಸೆಕ್ಸ್ (BSE Sensex) ಹಾಗೂ ಎನ್​ಎಸ್​ಇ ನಿಫ್ಟಿಗಳು (NSE Nifty) ನಿತ್ಯದ ವಹಿವಾಟಿನಲ್ಲಿ ಚೇತರಿಕೆ ದಾಖಲಿಸಿದ್ದು, ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ. ವಾಲ್​ಸ್ಟ್ರೀಟ್ ಮಾರುಕಟ್ಟೆಯಲ್ಲಿನ ವಹಿವಾಟು, ಕಚ್ಚಾ ತೈಲ ಬೆಲೆ ಇಳಿಕೆ, ಚೀನಾದ ಫ್ಯಾಕ್ಟರಿ ದತ್ತಾಂಶದಲ್ಲಿನ ಕುಸಿತ ದೇಶೀಯ ಮಾರುಕಟ್ಟೆಯಲ್ಲಿ ಪ್ರತಿಫಲಿಸಿತು.

ಅಮೆರಿಕದ ಷೇರುಗಳು ಟೆಕ್ ಷೇರುಗಳ ಮಾರಾಟದಿಂದ ಚೇತರಿಸಿಕೊಂಡಿರುವುದು, ಫೆಡರಲ್ ಬ್ಯಾಂಕ್ ಬಡ್ಡಿ ದರ ಹೆಚ್ಚಳದ ಸುಳಿವು, ಹಣದುಬ್ಬರಕ್ಕೆ ಸಂಬಂಧಿಸಿ ಆರ್​ಬಿಐ ಹಣಕಾಸು ನೀತಿ ಸಮಿತ ವಿಶೇಷ ಸಭೆ ಕರೆದಿರುವುದು ಮಾರುಕಟ್ಟೆ ವಹಿವಾಟಿನ ಮೇಲೆ ಪ್ರಭಾವ ಬೀರಿದೆ.

ಸೋಮವಾರದ ವಹಿವಾಟಿನಲ್ಲಿ ಕೊನೆಯಲ್ಲಿ 786.74 ಅಂಶ ಚೇತರಿಕೆಯೊಂದಿಗೆ ಸೆನ್ಸೆಕ್ಸ್ 60,746.59 ರಲ್ಲಿ ವಹಿವಾಟು ಕೊನೆಗೊಳಿಸಿತು. 225.40 ಅಂಶ ಗಳಿಕೆಯೊಂದಿಗೆ ನಿಫ್ಟಿ 18,012.20 ರಲ್ಲಿ ವಹಿವಾಟು ಮುಗಿಸಿತು. ನಿಫ್ಟಿ ಚೇತರಿಕೆಯು ಭರವಸೆ ಮೂಡಿಸಿರುವುದಲ್ಲದೆ, ಮುಂದಿನ ದಿನಗಳಲ್ಲಿಯೂ ಇದೇ ಟ್ರೆಂಡ್ ಮುಂದುವರಿಯುವ ಆಶಾವಾದ ಮೂಡಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅಲ್ಪಾವಧಿಗೆ ಇದೇ ಟ್ರೆಂಡ್ ಮುಂದುವರಿಯಲಿದ್ದು ಗರಿಷ್ಠ 18100/18300 ರಲ್ಲಿ ವಹಿವಾಟು ನಡೆಸಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ
Image
World Savings Day 2022: ವಿಶ್ವ ಉಳಿತಾಯ ದಿನ; ಮಹತ್ವ, ಇತಿಹಾಸ, ಧ್ಯೇಯದ ಬಗ್ಗೆ ಇಲ್ಲಿದೆ ವಿವರ
Image
ವೈರಸ್ ದಾಳಿ; ಎಸ್​​ಬಿಐ ಸೇರಿ 18 ಬ್ಯಾಂಕ್​ಗಳ ಗ್ರಾಹಕರ ದತ್ತಾಂಶ ಅಪಾಯದಲ್ಲಿ
Image
FD Rates: ಎಫ್​ಡಿ ಬಡ್ಡಿ ದರ ಹೆಚ್ಚಳ; ವಿವಿಧ ಬ್ಯಾಂಕ್​ಗಳ ಎಫ್​ಡಿ ದರ ವಿವರ ಇಲ್ಲಿದೆ
Image
LIC Saral Pension Plan: 1 ಲಕ್ಷ ರೂ. ವಾರ್ಷಿಕ ಪಿಂಚಣಿ ಪಡೆಯಲು ನೀವೆಷ್ಟು ಹೂಡಿಕೆ ಮಾಡಬೇಕು?

ಮುಂದುವರಿದ ಮಾರುತಿ ಓಟ

ಕಳೆದ ವಾರವಷ್ಟೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದ ಮಾರುತಿ ಸುಜುಕಿ ಇಂಡಿಯಾ ನಿವ್ವಳ ಲಾಭದಲ್ಲಿ ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚಳವಾಗಿದೆ ಎಂದು ತಿಳಿಸಿತ್ತು. ಇದರ ಬೆನ್ನಲ್ಲೇ ಕಂಪನಿಯ ಷೇರುಗಳು ಉತ್ತಮ ವಹಿವಾಟು ನಡೆಸಿದ್ದಲ್ಲದೆ, ಭಾರಿ ಗಳಿಕೆ ದಾಖಲಿಸಿದ್ದವು. ಅದೇ ಟ್ರೆಂಡ್ ಸೋಮವಾರವೂ ಮುಂದುವರಿದಿದೆ. ಉಳಿದಂತೆ, ಎಚ್​ಡಿಎಫ್​ಸಿ ಬ್ಯಾಂಕ್, ಸನ್​ ಫಾರ್ಮಾ, ರಿಲಯನ್ಸ್, ಆ್ಯಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫಿನ್​ಸರ್ವ್ ಹಾಗೂ ಬಜಾಜ್ ಫೈನಾನ್ಸ್ ಉತ್ತಮ ಗಳಿಕೆ ದಾಖಲಿಸಿವೆ.

ಇದನ್ನೂ ಓದಿ: Maruti Suzuki: ಮಾರುತಿ ಸುಜುಕಿ ನಿವ್ವಳ ಲಾಭ ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚಳ

ಅಪೋಲೊ ಹಾಸ್ಪಿಟಲ್, ಡಾ. ರೆಡ್ಡೀಸ್, ಎನ್​​ಟಿಪಿಸಿ ಹಾಗೂ ಇಂಡಸ್​ಇಂಡ್ ಬ್ಯಾಂಕ್ ಷೇರುಗಳು ಕುಸಿತ ಕಂಡಿವೆ.

ಮತ್ತೆ ಕುಸಿದ ರೂಪಾಯಿ

ದಿನದ ವಹಿವಾಟಿನ ಆರಂಭದಲ್ಲಿ ಚೇತರಿಕೆಯ ಸುಳಿವು ನೀಡಿದ್ದ ರೂಪಾಯಿ ಮೌಲ್ಯ, ಕೊನೆಯಲ್ಲಿ 31 ಪೈಸೆ ಕುಸಿದು ಅಮೆರಿಕನ್ ಡಾಲರ್ ವಿರುದ್ಧ 82.78 ರಲ್ಲಿ ವಹಿವಾಟು ಮುಗಿಸಿತು. 82.35ರಲ್ಲಿ ವಹಿವಾಟು ಆರಂಭಿಸಿದ್ದ ರೂಪಾಯಿ ಒಂದು ಹಂತದಲ್ಲಿ 82.80ರ ವರೆಗೂ ವೃದ್ಧಿ ಕಂಡಿತ್ತು.

ಯುರೋಪ್​ನಲ್ಲಿ ದಾಖಲೆಯ ಕುಸಿತ ಕಂಡ ಹಣದುಬ್ಬರ

ರಷ್ಯಾ-ಉಕ್ರೇನ್ ಯುದ್ಧ, ತೈಲ ಬೆಲೆ ಏರಿಕೆ ಸೇರಿದಂತೆ ಹಲವು ಕಾರಣಗಳಿಂದ ಯುರೋಪ್​ನಲ್ಲಿ ಹಣದುಬ್ಬರ ಪ್ರಮಾಣ ಗರಿಷ್ಠ ಮಟ್ಟ ತಲುಪಿದೆ. ಅಕ್ಟೋಬರ್​ನಲ್ಲಿ ಶೇಕಡಾ 10.7ರ ಹಣದುಬ್ಬರ ವರದಿಯಾಗಿದೆ ಎಂದು ಯುರೋಪ್ ಒಕ್ಕೂಟದ ಸಾಂಖ್ಯಿಕ ಏಜೆನ್ಸಿ ತಿಳಿಸಿದೆ. ಸೆಪ್ಟೆಂಬರ್​​ನಲ್ಲಿ ಹಣದುಬ್ಬರ ಶೇಕಡಾ 9.9ರಷ್ಟಿತ್ತು ಎಂದು ಏಜೆನ್ಸಿ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ