AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Explainer | ಆಂಧ್ರ ಸಾರಿಗೆ ನಿಗಮ ಸಿಬ್ಬಂದಿ ಈಗ ರಾಜ್ಯ ಸರ್ಕಾರಿ ನೌಕರರು: ಏನಿದು ‘ಆಂಧ್ರ ಮಾಡೆಲ್‘?

ರಾಜ್ಯದ ವಿವಿಧ ಸಾರಿಗೆ ನಿಗಮಗಳ ಸಿಬ್ಬಂದಿ ಪದೇಪದೇ ಜಪಿಸುವ ಮಂತ್ರ ‘ಆಂಧ್ರ ಮಾಡೆಲ್’. ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಹ ಸಾರಿಗೆ ನಿಗಮ ನೌಕರರ ಸಂಘದ ನಾಯಕರು ಮತ್ತು ಕೆಲ ಸಿಬ್ಬಂದಿಯನ್ನು ಆಂಧ್ರ ಪ್ರದೇಶಕ್ಕೆ ಕಳಿಸಿಕೊಡುವ ಭರವಸೆ ನೀಡಿದ್ದಾರೆ. ಏನಿದು ‘ಆಂಧ್ರ ಮಾಡೆಲ್’. ಇಲ್ಲಿದೆ ಮಾಹಿತಿ...

Explainer | ಆಂಧ್ರ ಸಾರಿಗೆ ನಿಗಮ ಸಿಬ್ಬಂದಿ ಈಗ ರಾಜ್ಯ ಸರ್ಕಾರಿ ನೌಕರರು: ಏನಿದು ‘ಆಂಧ್ರ ಮಾಡೆಲ್‘?
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 11, 2020 | 7:12 PM

ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲು ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ರಾಜ್ಯದಲ್ಲಿ ಮುಷ್ಕರ ನಡೆಸುತ್ತಿದ್ದಾರೆ. ಬೇಡಿಕೆ ಈಡೇರಿಸುವ ತನಕ ಮುಷ್ಕರ ಕೈ ಬಿಡುವುದಿಲ್ಲ ಎಂದು ನೌಕರರ ಸಂಘಟನೆಗಳ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ತಮ್ಮನ್ನು ರಾಜ್ಯ ಸರ್ಕಾರಿ ನೌಕರನ್ನಾಗಿ ಪರಿಗಣಿಸಬೇಕೆನ್ನುವ ರಾಜ್ಯದ ವಿವಿಧ ಸಾರಿಗೆ ನಿಗಮಗಳ ಸಿಬ್ಬಂದಿ ಪದೇಪದೇ ಜಪಿಸುವ ಮಂತ್ರ ‘ಆಂಧ್ರ ಮಾಡೆಲ್’. ಇದೀಗ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಹ ಸಾರಿಗೆ ನಿಗಮ ನೌಕರರ ಸಂಘದ ನಾಯಕರು ಮತ್ತು ಕೆಲ ಸಿಬ್ಬಂದಿಯನ್ನು ಆಂಧ್ರ ಪ್ರದೇಶಕ್ಕೆ ಕಳಿಸಿಕೊಡುವ ಭರವಸೆ ನೀಡಿದ್ದಾರೆ. ಏನಿದು ‘ಆಂಧ್ರ ಮಾಡೆಲ್’. ಇಲ್ಲಿದೆ ಮಾಹಿತಿ

ಏನಿದು ‘ಆಂಧ್ರ ಮಾಡೆಲ್?’ ಇದೇ ವರ್ಷ ಜನವರಿ 1ರಂದು ಆಂಧ್ರ ಪ್ರದೇಶ ರಸ್ತೆ ಸಾರಿಗೆ ನಿಗಮವನ್ನು (ಎಪಿಎಸ್​ಆರ್​ಟಿಸಿ) ರಾಜ್ಯ ಸರ್ಕಾರದೊಂದಿದೆ ವಿಲೀನಗೊಳಿಸಿ ಸರ್ಕಾರ ಆದೇಶ ಹೊರಡಿಸಿತು. ಇದನ್ನು ಅಲ್ಲಿನ ಮುಖ್ಯಮಂತ್ರಿ ವೈ.ಎಸ್.ಜಗನ್​ಮೋಹನ್ ರೆಡ್ಡಿ ಹೊಸ ವರ್ಷದ ಉಡುಗೊರೆ ಎಂದಿದ್ದರು. ಎಪಿಎಸ್​​ಆರ್​ಟಿಸಿಯನ್ನು ಸರ್ಕಾರದೊಂದಿಗೆ ವಿಲೀನಗೊಳಿಸುವುದನು ಆಡಳಿತಾರೂಢ ಪಕ್ಷ ವೈಎಸ್​ಆರ್ ಕಾಂಗ್ರೆಸ್ ನೀಡಿದ್ದ ​​ಚುನಾವಣಾ ಭರವಸೆಯೂ ಆಗಿತ್ತು. ಆಂಧ್ರ ಪ್ರದೇಶ ರಸ್ತೆ ಸಾರಿಗೆ ನಿಗಮ (ಸಿಬ್ಬಂದಿಗಳನ್ನು ಸರ್ಕಾರಿ ನೌಕರರನ್ನಾಗಿ ಮಾಡುವ)ಕಾಯ್ದೆ 2019ರ ಪ್ರಕಾರ, 5000 ಎಪಿಎಸ್​​ಆರ್​​ಟಿಸಿ ನೌಕರರಿಗೆ ಸರ್ಕಾರಿ ನೌಕರರ ಸ್ಥಾನಮಾನ ದೊರೆಯಿತು.

ನವಂಬರ್ 1, 2019 ರಂದು ಎಪಿಎಸ್​​ಆರ್​ಟಿಸಿ ಮಂಡಳಿಯು ಗೊತ್ತುವಳಿಯೊಂದನ್ನು ಜಾರಿ ಮಾಡಿತ್ತು. ಇದಾದ ನಂತರ ರಾಜ್ಯ ಸರ್ಕಾರವು ಸಾರ್ವಜನಿಕ ಸಾರಿಗೆ ಇಲಾಖೆ (ಪಿಟಿಡಿ) ಎಂಬ ಹೊಸ ಇಲಾಖೆ ರಚಿಸಿ ಸರ್ಕಾರದ ನಡಾವಳಿಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಿತ್ತು. ಈ ಪಿಟಿಡಿ ಸಹ ಜನವರಿ 1, 2020ರಂದು ಅಸ್ತಿತ್ವಕ್ಕೆ ಬಂತು.

ಇದನ್ನೂ ಓದಿ: ಸದ್ಯಕ್ಕಿಲ್ಲ ಬಸ್ | ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ಸಿಬ್ಬಂದಿ ತೀರ್ಮಾನ: ಕೋಡಿಹಳ್ಳಿ ಚಂದ್ರಶೇಖರ್

ಆಂಧ್ರ ಸಾರಿಗೆ ನಿಗಮದ (ಎಪಿಎಸ್​ಆರ್​ಟಿಸಿ) ಬಸ್​ಗಳು

ನಿಗಮವನ್ನು ಸರ್ಕಾರಕ್ಕೆ ವಿಲೀನಗೊಳಿಸಿದ್ದರಿಂದ ನೌಕರರಿಗೆ ಏನೆಲ್ಲಾ ಲಾಭವಾಯಿತು? 1. ಹಿಂದಿನ ಆರ್​ಟಿಸಿ ನಿಗಮದ ನೌಕರರೆಲ್ಲರೂ ಪಿಟಿಎ ಇಲಾಖೆಯ ನೌಕರರಾಗಿದ್ದಾರೆ. ಸರ್ಕಾರಿ ನೌಕರರಂತೆ ಇವರಿಗೂ ಸರ್ಕಾರಿ ಸಂಬಳ, ಸೌಲಭ್ಯಗಳು ಸಿಗುತ್ತಿವೆ. 2. ಎಪಿಎಸ್​ಆರ್​ಟಿಸಿ ನೌಕರರ ನಿವೃತ್ತಿ ವಯಸ್ಸು 58ರಿಂದ 60ಕ್ಕೆ ಏರಿಕೆಯಾಗಿದೆ 3. ಬಸ್ ದರ ಏರಿಕೆ ಪಾರದರ್ಶಕವಾಗಿರುತ್ತದೆ. ಬಸ್ ದರ ನಿಯಂತ್ರಣ ಪ್ರಾಧಿಕಾರವು ಇದನ್ನು ನಿರ್ಧರಿಸುತ್ತದೆ. ಹೀಗಾಗಿ ಸಾರ್ವಜನಿಕರಿಗೂ ಅನುಕೂಲ 4. ನಿಗಮದ ನಡಾವಳಿಗಳಲ್ಲಿ ನೌಕರರು ಅಥವಾ ಮಜ್ದೂರ್ ಎಂಬ ಹುದ್ದೆ ಇತ್ತು. ರಾಜ್ಯ ಸರ್ಕಾರಕ್ಕೆ ವಿಲೀನವಾದ ನಂತರ ಇದು ಪಬ್ಲಿಕ್ ಸರ್ವೆಂಟ್ (ಸರ್ಕಾರಿ ನೌಕರ) ಎಂದು ಬದಲಾಗಿದೆ. 5. ಈ ಹಿಂದೆ ನಿಗಮದ ನೌಕರರಿಗೆ ಅನ್ವಯವಾಗುತ್ತಿದ್ದ ದಿ ಇಂಡಸ್ಟ್ರಿಯಲ್ ಡಿಸ್​ಪ್ಯೂಟ್ ಆ್ಯಕ್ಟ್ 1947, ಟ್ರೇಡ್ ಯೂನಿಯನ್ ಆ್ಯಕ್ಟ್‌ 1926 ಮತ್ತು ಶಿಸ್ತು ಸಂಹಿತೆ (ಕೋಡ್ ಆಫ್ ಡಿಸಿಪ್ಲಿನ್) ಈಗ ಸರ್ಕಾರಿ ನೌಕರರಾಗಿರುವವರಿಗೆ ಅನ್ವಯವಾಗುವುದಿಲ್ಲ.

ಸರ್ಕಾರದ ವಿಧಿಸಿದ್ದ ಷರತ್ತುಗಳೇನು? ಸಾರಿಗೆ ನಿಗಮವನ್ನು ಸರ್ಕಾರಕ್ಕೆ ವಿಲೀನ ಮಾಡಿಕೊಳ್ಳುವಾಗ ರಾಜ್ಯ ಸರ್ಕಾರ ಕೆಲ ಷರತ್ತುಗಳನ್ನು ವಿಧಿಸಿತ್ತು. ಈ ಷರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ ನಿಗಮದ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲಾಗುವುದು ಎಂದು ಹೇಳಿತ್ತು. * ನೌಕರರು ಸರ್ಕಾರದ ನೀತಿಗಳ ಬಗ್ಗೆ ಮಾಧ್ಯಮಗಳಲ್ಲಿ ಟೀಕೆ ಮಾಡುವಂತಿಲ್ಲ * ನೌಕರರು ಸರ್ಕಾರಿ ಅಧಿಕಾರಿಗಳ ತೀರ್ಮಾನವನ್ನು ಸಾರ್ವಜನಿಕವಾಗಿ ಪ್ರಶ್ನಿಸುವಂತಿಲ್ಲ * ಸರ್ಕಾರದ ವಿರುದ್ಧ ಯಾವುದೇ ಮುಷ್ಕರ ಅಥವಾ ಪ್ರತಿಭಟನೆ ಮಾಡುವಂತಿಲ್ಲ

ಇದನ್ನೂ ಓದಿ: ಚರ್ಚಿಸೋಣ ಬನ್ನಿ, ಮುಷ್ಕರ ಕೈಬಿಡಿ: ಸಾರಿಗೆ ನೌಕರರಿಗೆ ಸಚಿವ ಸವದಿ ಮನವಿ

ಎಪಿಎಸ್​​ಆರ್​​ಟಿಸಿ ಬಲವೆಷ್ಟು?

ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು (ಎಪಿಎಸ್​​ಆರ್​​ಟಿಸಿ) ಅಲ್ಲಿನ ಸರ್ಕಾರ 4 ವಲಯ ವಲಯಗಳನ್ನಾಗಿ ವಿಂಗಡಿಸಿದೆ. 12 ಪ್ರಾದೇಶಿಕ ವ್ಯವಸ್ಥಾಪಕರಿದ್ದಾರೆ. ಒಟ್ಟು 11, 678 ಬಸ್​ಗಳಿವೆ (ಸರ್ಕಾರದ್ದು-8964, ಬಾಡಿಗೆಯದ್ದು 2714). 426 ಬಸ್ ನಿಲ್ದಾಣಗಳಿದ್ದು 126 ಬಸ್ ಡಿಪೊಗಳಿವೆ. 2019ರಲ್ಲಿ ಎಪಿಎಸ್​​ಆರ್​​ಟಿಸಿಯ ಒಟ್ಟು ಆದಾಯ ₹5,995 ಕೋಟಿ ಆಗಿದ್ದು, ಒಟ್ಟು ನಷ್ಟ ₹6,445 ಕೋಟಿ ಎಂದು ಅಂದಾಜಿಸಲಾಗಿದೆ.

ಸಾರಿಗೆ ನೌಕರರ ದಿಢೀರ್ ಮುಷ್ಕರದ ಬಗ್ಗೆ ಮಾಹಿತಿ ಇಲ್ಲ: ಅನಂತ ಸುಬ್ಬರಾವ್

Published On - 6:29 pm, Fri, 11 December 20

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ
ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಅಖ್ನೂರ್​ ಬಳಿ ಬರಿದಾದ ಚೆನಾಬ್ ನದಿ, ಖಾಲಿ ನದಿಯಲ್ಲಿ ಸ್ಥಳೀಯರ ಓಡಾಟ
ಅಖ್ನೂರ್​ ಬಳಿ ಬರಿದಾದ ಚೆನಾಬ್ ನದಿ, ಖಾಲಿ ನದಿಯಲ್ಲಿ ಸ್ಥಳೀಯರ ಓಡಾಟ
ಹರೀಶ್ ಪೂಂಜಾ ಸೀರಿಯಲ್ ಅಫೆಂಡರ್ ಹಾಗೆ ಗೋಚರಿಸಸುತ್ತಾರೆ: ದಿನೇಶ್ ಗುಂಡೂರಾವ್
ಹರೀಶ್ ಪೂಂಜಾ ಸೀರಿಯಲ್ ಅಫೆಂಡರ್ ಹಾಗೆ ಗೋಚರಿಸಸುತ್ತಾರೆ: ದಿನೇಶ್ ಗುಂಡೂರಾವ್