AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಅಳೆದದ್ದು ಭಾರತೀಯ, ಆದ್ರೆ ಹೆಸರು ಮಾತ್ರ ಬ್ರಿಟಿಷ್ ಅಧಿಕಾರಿದ್ದು

Mount Everest: ಜಗತ್ತಿನ ಅತ್ಯುನ್ನತ ಶಿಖರವನ್ನು ಮೊದಲು ಅಳೆದಿದ್ದು ಬ್ರಿಟಿಷ್‌ ಸರ್ವೇಯರ್‌ ಜಾರ್ಜ್ ಎವರೆಸ್ವ್‌ ಎಂದು ಹೇಳಲಾಗುತ್ತೆ. ಆದರೆ ಅದು ತಪ್ಪು. ಮೌಂಟ್ ಎವರೆಸ್ಟ್​ನ ಎತ್ತರವನ್ನು ಸರಿಯಾಗಿ ಹಳೆದು ಬಹಿರಂಗ ಪಡಿಸಿದ ವ್ಯಕ್ತಿ ಭಾರತೀಯ ಗಣಿತಶಾಸ್ತ್ರಜ್ಞ ರಾಧಾನಾಥ್‌ ಸಿಕ್ದರ್‌. ಇದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ವಿಷಯ. ಮೌಂಟ್ ಎವರೆಸ್ಟ್ ಅನ್ನು ಸಿಕ್ದರ್ ಪರ್ವತ ಅಥವಾ ರಾಧಾನಾಥ ಪರ್ವತ ಎನ್ನಬಹುದಿತ್ತು. ಆದರೆ ಈ ಸತ್ಯ ಇತಿಹಾಸ ಪುಟಗಳಲ್ಲೇ ಮರೆಯಾಗಿದೆ.

ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಅಳೆದದ್ದು ಭಾರತೀಯ, ಆದ್ರೆ ಹೆಸರು ಮಾತ್ರ ಬ್ರಿಟಿಷ್ ಅಧಿಕಾರಿದ್ದು
ಭಾರತೀಯ ಗಣಿತಶಾಸ್ತ್ರಜ್ಞ ರಾಧಾನಾಥ್‌ ಸಿಕ್ದರ್‌, ಮೌಂಟ್ ಎವರೆಸ್ಟ್
ಆಯೇಷಾ ಬಾನು
|

Updated on: Jun 15, 2024 | 10:25 AM

Share

ಮೌಂಟ್‌ ಎವರೆಸ್ಟ್ (Mount Everest).. ಇದು ಪ್ರಪಂಚದ ಅತ್ಯುನ್ನತ ಶಿಖರ. ಒಮ್ಮೆಯಾದರೂ ಈ ಶಿಖರವನ್ನು ಏರಬೇಕು ಎಂಬುವುದು ಬಹುತೇಕ ಸಾಹಸಿಗಳ ಕನಸಾಗಿರುತ್ತೆ. ಇದಕ್ಕಾಗಿ ವರ್ಷಾನುಗಟ್ಟಲೆ ದೇಹ ದಂಡಿಸಿ, ತಯಾರಿ ನಡೆಸುವುದೂ ಉಂಟು. ಅಷ್ಟೇ ಅಲ್ಲ ಈ ಪರ್ವತ ತಲೆಮಾರುಗಳಿಂದ ವಿಜ್ಞಾನಿಗಳನ್ನೂ ಆಕರ್ಷಿಸುತ್ತಿದೆ. ಒಂದಷ್ಟು ರಹಸ್ಯಗಳನ್ನು ತನ್ನೊಡಲಲ್ಲಿಟ್ಟುಕೊಂಡಿದೆ. ಈ ಪರ್ವತದಲ್ಲಿ ರಾತ್ರಿಯ ಸಮಯದಲ್ಲಿ ಪರ್ವತದ ಶಿಖರವನ್ನು ಸುತ್ತುವರೆದಿರುವ ಹಿಮನದಿಗಳಿಂದ ವಿಲಕ್ಷಣವಾದ ಶಬ್ದಗಳು ಕೇಳಿಬರುತ್ತದೆ ಎಂಬ ಮಾತಿದೆ. ಜೊತೆಗೆ ಪರ್ವತ ಏರುವಾಗ ಪರ್ವತಾರೋಹಿಗಳು ನಾಪತ್ತೆಯಾದ ಘಟನೆಗಳೂ ನಡೆದಿವೆ. ಇದೆಲ್ಲ ಒಂದು ಕಡೆಯಾದ್ರೆ ಮತ್ತೊಂದೆಡೆ ಈ ಪರ್ವತದ ಎತ್ತರವನ್ನು ಮೊಟ್ಟ ಮೊದಲ ಬಾರಿಗೆ ಅಳೆದದ್ದು ಭಾರತೀಯ (Radhanath Sikdar). ಆದ್ರೆ ಈ ಪರ್ವತಕ್ಕೆ ಹೆಸರು ಸಿಕ್ಕಿದ್ದು ಮಾತ್ರ ಓರ್ವ ಬ್ರಿಟಿಷ್ ಅಧಿಕಾರಿಯದ್ದು. ಪ್ರತಿ ವರ್ಷ ಮೇ 29 ರಂದು ಅಂತಾರಾಷ್ಟ್ರೀಯ ಎವರೆಸ್ಟ್ ದಿನವನ್ನು ಆಚರಿಸಲಾಗುತ್ತದೆ. 1953ರಲ್ಲಿ ಮೊಟ್ಟ ಮೊದಲ ಬಾರಿಗೆ ನ್ಯೂಜಿಲೆಂಡ್‌ನ ಸರ್ ಎಡ್ಮಂಡ್ ಹಿಲರಿ ಮತ್ತು ನೇಪಾಳದ ತೇನ್ಸಿಂಗ್ ನಾರ್ಗೆ ಶೆರ್ಪಾ ಅವರು ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ಅಲ್ಲಿ 15 ನಿಮಿಷಗಳ ಕಾಲ ಸಮಯ ಕಳೆದು ಸಾಧನೆ ಮಾಡಿದ್ದರು. ಅವರ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತೆ. ಆದರೆ ನಾವಿಲ್ಲಿ ಮುಖ್ಯವಾಗಿ ನೆನಪಿಸಿಕೊಳ್ಳಬೇಕಿರುವ ರಾಧಾನಾಥ್‌ ಸಿಕ್ದರ್‌ ಅವರನ್ನೇ ಮರೆತುಬಿಟ್ಟಿದ್ದೇವೆ. ಇತಿಹಾಸ ಕೂಡ ಭಾರತೀಯನ ಸಾಧನೆಯನ್ನು ಮರೆ ಮಾಚಿದೆ. ಭಾರತ ಅಳೆಯಲು ಮುಂದಾದ ಬ್ರಿಟಿಷರು ಅದು 1802. ಬ್ರಿಟಿಷರ ಆಳ್ವಿಕೆ ಸಮಯ. ಇಡೀ ಭಾರತವನ್ನು ಲೂಟಿ ಮಾಡಬೇಕೆಂಬ ಉದ್ದೇಶ ಹೊಂದಿದ್ದ ಬ್ರಿಟಿಷರು ಭಾರತದ ಅಧಿಕೃತ ನಕ್ಷೆ ತಯಾರಿಸಲು ಮುಂದಾಗುತ್ತಾರೆ. ಭಾರತದ ನಕ್ಷೆ...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ